ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕ ಬಳಕೆಯಿಂದ ಆಗುತ್ತಿರುವ ಶಬ್ದಮಾಲಿನ್ಯದ ಕಿರಿಕಿರಿ ಬಗ್ಗೆ ಹಿರಿಯ ಸಾಹಿತಿ ಹಂಪ ನಾಗರಾಜಯ್ಯನವರು ಧ್ವನಿಯೆತ್ತಿದ್ದಾರೆ. ಇನ್ನೂ ಹಲವು ಚಿಂತಕರು ಇದೇ ರೀತಿ ಹೇಳಿಕೆ ನೀಡಿದ್ದಾರೆ. ಇವರ ಚಿಂತನೆ ನಿಜಕ್ಕೂ ಚಿಂತನಾರ್ಹ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ನಮ್ಮ ಸಮಾಜ ಯೋಚಿಸಬೇಕು.