ಹಲವಾರು ಕಡೆ ಕೃಷಿಕರು ಬೆಳೆದ ಭತ್ತದ ಗದ್ದೆ, ಅಡಿಕೆ ಮತ್ತು ತೆಂಗಿನ ತೋಟಕ್ಕೆ ನೀರು ನುಗ್ಗಿದೆ. ಗುರುವಾರ ಬೆಳಗಿನ ಜಾವ ಮನೆ ಮುಂದಿನ ಕೃಷಿ ಭೂಮಿಯಲ್ಲಿ ಸಮುದ್ರದಂತಹ ವಾತಾವರಣ ಎಲ್ಲ ಕಡೆಗೆ ಕಂಡು ಬರುತ್ತಿತ್ತು. ತಾಲ್ಲೂಕಿನಲ್ಲಿ ಹರಿಯುವ ಪಲ್ಗುಣಿ, ನೇತ್ರಾವತಿ, ಸೋಮಾವತಿ ನದಿಗಳು ಸೇರಿದಂತೆ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಅಪಾಯದ ಮಟ್ಟದಲ್ಲಿ ಇದ್ದದ್ದು ಕಂಡು ಬರುತ್ತಿತ್ತು. ಅನೇಕ ಕಡೆಗಳಲ್ಲಿ ನದಿಗಳಿಗೆ ಸೇತುವೆ ಮೇಲ್ಭಾಗದಲ್ಲಿ ನೀರು ಹರಿದು ಹೋಗಿದೆ.