ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗೆ ಚಪ್ಪಲಿ ನೀಡಿದ ಸಚಿವ!

Last Updated 15 ಜೂನ್ 2018, 19:30 IST
ಅಕ್ಷರ ಗಾತ್ರ

ಸಿಂದಗಿ (ವಿಜಯಪುರ ಜಿಲ್ಲೆ):  ವಿಧಾನಸಭಾ ಚುನಾವಣೆಯಲ್ಲಿ ಎಂ.ಸಿ. ಮನಗೂಳಿ ಅವರು ಗೆದ್ದರೆ ಮಾತ್ರ ಚಪ್ಪಲಿ ಹಾಕುವುದಾಗಿ ಶಪಥ ಮಾಡಿದ್ದ ಅಭಿಮಾನಿಯೊಬ್ಬರಿಗೆ, ತೋಟಗಾರಿಕಾ ಸಚಿವ ಮನಗೂಳಿ ಅವರು ಹೊಸ ಚಪ್ಪಲಿ ಕೊಡಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ತಾಲ್ಲೂಕಿನ ಬ್ಯಾಕೋಡ ಗ್ರಾಮದ ಬಸವಪ್ರಭಯ್ಯ ಮಠ, ‘ಮನಗೂಳಿ ಗೆದ್ದರೆ ಚಪ್ಪಲಿ ಧರಿಸುವೆ; ಇಲ್ಲದಿದ್ದರೆ ಬರಿಗಾಲಿನಲ್ಲೇ ನಡೆದಾಡುವೆ’ ಎಂದು ಶಪಥ ಮಾಡಿದ್ದರು. ಚುನಾವಣೆಗೆ 2 ತಿಂಗಳು ಮೊದಲೇ ಚಪ್ಪಲಿ ತ್ಯಜಿಸಿದ್ದರು.

ಗ್ರಾಮದಲ್ಲಿ ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಮಠ ಅವರಿಗೆ ಸ್ವತಃ ಸಚಿವರೇ ಚಪ್ಪಲಿ ನೀಡಿದಾಗ, ‘ಇದು ಮನಗೂಳಿ ಅವರು ಜನರ ಮೇಲೆ ಇಟ್ಟಿರುವ ಅಭಿಮಾನ ತೋರಿಸುತ್ತದೆ‘ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT