ಮತ್ತಿಗೋಡು ಶಿಬಿರದಲ್ಲಿ 31 ಆನೆಗಳಿವೆ. ಇವುಗಳಿಗೆ ಬೆಳಿಗ್ಗೆ ಮತ್ತು ಸಂಜೆ ಆಹಾರ ನೀಡಿ ಬಳಿಕ ಮೇಯಲು ಕಾಡಿಗೆ ಬಿಡಲಾಗುತ್ತದೆ. ಶಿಬಿರದ ಎರಡು ಬದಿಯಲ್ಲಿ ಕಾಡಿದ್ದು ಮಧ್ಯದಲ್ಲಿ ಹೆದ್ದಾರಿ ಇದೆ. ಆನೆಗಳು ಕಾಲಿಗೆ ಕಟ್ಟಿದ ಚೈನು ಎಳೆದುಕೊಂಡು ರಸ್ತೆಯನ್ನು ನಿಧಾನವಾಗಿ ದಾಟುತ್ತವೆ. ಈ ಸಂದರ್ಭದಲ್ಲಿ ಕೆಲವು ವಾಹನ ಚಾಲಕರು ಆನೆ ದಾಟುವವರೆಗೂ ನಿಂತಿದ್ದು ಬಳಿಕ ಮುಂದೆ ಚಲಿಸುತ್ತಾರೆ. ಆದರೆ, ಕೆಲವರು ಕಾಯುವುದೇ ಇಲ್ಲ. ಆನೆಗೆ ಮತ್ತು ಮಾವುತರಿಗೆ ಶಾಪ ಹಾಕುತ್ತಾ ಗೊಣಗಾಡುತ್ತಾರೆ. ಇಂತಹ ಆತುರ ಹಾಗೂ ನಿರ್ಲಕ್ಷ್ಯ ತೋರುವ ಚಾಲಕರಿಂದಲೇ ಇಂತಹ ಅವಘಡ ನಡೆದಿರುವುದು ಎಂದು ಆರೋಪಿಸುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.