ಆದರೆ ಇದರ ಟೆಂಡರ್ ಕಾರ್ಯಗಳು ನಡೆದರೂ ಕಾಮಗಾರಿ ಆರಂಭಿಸಲು ಗುತ್ತಿಗೆದಾರ ಮುಂದಾಗಲಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಹಿತಿ ನೀಡಿದೆ. ರಸ್ತೆ ದುರಸ್ತಿಗೆ ಕಾದಿರಿಸಿದ ಅನುದಾನ ಕಡಿಮೆ ಎಂಬ ಕಾರಣಕ್ಕೆ ಗುತ್ತಿಗೆದಾರ ಹಿಂಜರಿಯುತ್ತಿರುವುದಾಗಿ ಹೇಳಲಾಗಿದೆ. ಇದೀಗ ಮಳೆಗಾಲ ಆರಂಭಗೊಂಡಿದ್ದು, ಇಲ್ಲಿನ ಜನರು ಈ ಹದಗೆಟ್ಟ ರಸ್ತೆಗೆ ಮತ್ತೆ ಶರಣಾಗಬೇಕಾಗಿದೆ. ನೀರು ರಸ್ತೆಯಲ್ಲೇ ಹರಿಯುವ ಕಾರಣ ಇದರ ಮೂಲಕ ಸಂಚಾರ ಮತ್ತಷ್ಟು ಸಮಸ್ಯೆಯಾಗುತ್ತಿದೆ. ಈ ರಸ್ತೆಯು ಪರಿಶಿಷ್ಟ ಜಾತಿ ಕಾಲನಿಯನ್ನು ಸಂಪರ್ಕಿಸುತ್ತದೆ. ಈ ಪ್ರದೇಶದ ಸುಮಾರು 75ರಷ್ಟು ಮನೆಗಳಿಗೆ ಈ ರಸ್ತೆಯೇ ಏಕೈಕ ಸಂಚಾರ ವ್ಯವಸ್ಥೆ.