ಶಾಲೆಯ ಮುಖ್ಯ ಶಿಕ್ಷಕರ ಮಧುಕರ ನಾಯ್ಕ, ‘ಶಾಲೆಯ ನ್ಯಾಯ ನಿರ್ಣಯ ಸಮಿತಿಯವರು ಬುಧವಾರದೊಳಗೆ ಗುಜರಿ ಸಾಮಗ್ರಿ ಸ್ಥಳಾಂತರ ಮಾಡುವಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿದ್ದಾರೆ. ಗುರುವಾರ ಶಾಲಾಭಿವೃದ್ಧಿ ಸಮಿತಿ, ಪಂಚಾಯ್ತಿ ಪದಾಧಿಕಾರಿಗಳು, ನ್ಯಾಯ ನಿರ್ಣಯ ಸಮಿತಿಯವರು ಮತ್ತೊಮ್ಮೆ ಸಭೆ ಸೇರಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.