ಸಮೀಪದ ಉಕ್ಕಡಗಾತ್ರಿಯಲ್ಲಿ ಭಾನುವಾರ ಜಿಲ್ಲಾ ಮಟ್ಟದ ಜನಪದ ಕಲಾ ಉತ್ಸವದಲ್ಲಿ ಉಪನ್ಯಾಸ ನೀಡಿದರು. ಜನಪದ ಕಲೆ, ಗೀತೆಗಳು ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದವರಿಂದ ರಚಿತವಾಗಿಲ್ಲ. ಗ್ರಾಮೀಣ ಪ್ರದೇಶದ ಅವಿದ್ಯಾವಂತರಿಂದ ರೂಪಿತವಾಗಿದೆ. ಹುಟ್ಟು, ಸಾವು, ಹಬ್ಬ, ಮಳೆ, ಬೆಳೆ, ಒಕ್ಕಲು ಮಾಡುವುದು, ದೇವತಾ ಉತ್ಸವ ಸೇರಿ ಎಲ್ಲ ಕಡೆ ಜನಪದ ಕಲೆ ಪಸರಿಸಿದೆ. ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ಹೆಚ್ಚಾಗಿದ್ದು, ದೇಸಿ ಕಲೆ ಕಮರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.