ಕಳಸದಿಂದ ಕುದುರೆಮುಖ ಹೆದ್ದಾರಿಯಲ್ಲಿ ಹೊಸಮಕ್ಕಿ ಬಳಿ ಹಳ್ಳವೊಂದು ಭದ್ರಾ ನದಿ ಸೇರುವಲ್ಲಿ ಹೆದ್ದಾರಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಆ ಸೇತುವೆಯ ಎರಡೂ ಬದಿ ಆಗಿನ ಕುದುರೆಮುಖ ಸಂಸ್ಥೆ ಕಬ್ಬಿಣದ ತಡೆಗೋಡೆ ನಿರ್ಮಿಸಿತ್ತು. ಗುರುವಾರದ ಕುದುರೆಮುಖದಲ್ಲಿ ಸುರಿದ 12 ಇಂಚು ಮಳೆಗೆ ಈ ಹಳ್ಳದಲ್ಲಿ ಭಾರಿ ಗಾತ್ರದ ಮರದ ದಿಮ್ಮಿ ತೇಲಿಬಂದು ತಡೆಗೋಡೆಯನ್ನೇ ಮುರಿದಿದೆ. ಈಗಲೂ ಆ ದಿಮ್ಮಿಗಳು ಸೇತುವೆಯ ಬುಡದಲ್ಲೇ ಬಿದ್ದಿವೆ. ಸೇತುವೆಗೆ ಬಳಸಿದ ದೊಡ್ಡ ಗಾತ್ರದ ಸಿಮೆಂಟ್ ಪೈಪ್ಗಳಿಗೆ ಹಾನಿಯಾಗಿದೆ.