‘ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಆ ವರ್ಗದ ಹಕ್ಕುಗಳು ಮತ್ತು ಸ್ಥಾನಮಾನಕ್ಕಾಗಿ 45 ವರ್ಷಗಳ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಶ್ರಮಿಸಿದ್ದೇವೆ. ಪಕ್ಷದ ಬಲವರ್ಧನೆಗೆ ದುಡಿದಿದ್ದೇನೆ. ನಿಮ್ಮ ಮೇಲೆ ಆಪಾದನೆಗಳು ಬಂದಾಗಲೂ ಪ್ರಾಣ ಒತ್ತೆ ಇಟ್ಟು ನೇರವಾಗಿ ಮತ್ತು ಮಾಧ್ಯಮಗಳಲ್ಲಿ ಸಮರ್ಥನೆ ಮಾಡಿಕೊಂಡಿದ್ದೇನೆ. ನನ್ನ ಮನೆಯ ಮೇಲೂ ದಾಳಿ ನಡೆದರೂ ನಿಷ್ಠೆ ಬದಲಿಸಲಿಲ್ಲ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.