ಬಾದಾಮಿ ಪಟ್ಟಣದ ಗುತ್ತಿಗೆದಾರ ಶಂಕರಗೌಡ ಕೆಳಗಿನಮನಿ ಮೊದಲು ಆಫರ್ ಕೊಟ್ಟಿದ್ದಾರೆ. ಅಲ್ಲಿನ ಜಯನಗರದಲ್ಲಿರುವ ಶಂಕರಗೌಡ ಅವರ ಸುಸಜ್ಜಿತ ಮನೆ ಎರಡು ಬೆಡ್ರೂಂ, ಡೈನಿಂಗ್ ಹಾಲ್, ಕಚೇರಿ, ಪೂಜಾ ಕೊಠಡಿ ಹಾಗೂ ಕಾರ್ಪಾರ್ಕಿಂಗ್ ಸೌಲಭ್ಯ ಹೊಂದಿದೆ. ಜೊತೆಗೆ 186x150 ಅಳತೆಯ ವಿಶಾಲವಾದ ಹೊರಾಂಗಣವೂ ಇದೆ. ಜೂನ್ 11ರಂದು ಬಾದಾಮಿಗೆ ಬಂದಿದ್ದ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ಈ ಮನೆ ನೋಡಿಕೊಂಡು ಹೋಗಿದ್ದಾರೆ.