‘ಸದ್ಯ ಜಮೀನಿನಲ್ಲಿ ತೇವಾಂಶ ಕುಸಿಯುತ್ತಿದೆ. ತಾಲ್ಲೂಕಿನ ಪಟಪಳ್ಳಿ, ಯಂಪಳ್ಳಿ, ಶಿಕಾರ ಮೋತಕಪಳ್ಳಿ, ತಿರುಮಲಾಪುರ, ಚಂದ್ರಂಪಳ್ಳಿ, ಐನೋಳ್ಳಿ ಮೊದಲಾದ ಕಡೆಗಳಲ್ಲಿ ರೈತರು ಬಿತ್ತನೆ ಸ್ಥಗಿತಗೊಳಿಸಿದ್ದಾರೆ. ಇನ್ನು ಕೆಲವೆಡೆ ರೈತರು ದೇವರ ಮೇಲೆ ಭಾರ ಹಾಕಿ ಅರೆ ಮನಸ್ಸಿನಿಂದಲೇ ಬಿತ್ತನೆಯಲ್ಲಿ ತೊಡಗಿದ್ದಾರೆ’ ಎಂದು ಯುವ ರೈತ ರಾಜು ಪಾಟೀಲ ಪಟಪಳ್ಳಿ ತಿಳಿಸಿದ್ದಾರೆ.