‘ದೇವಸ್ಥಾನದಲ್ಲಿ ಆವರಣದಲ್ಲಿ ಪ್ರತಿ ಮಂಗಳವಾರ ಮತ್ತು ಭಾನುವಾರ ವಿಶೇಷ ಪೂಜೆ ನಡೆಯುತ್ತದೆ. ಆ ಸಂದರ್ಭದಲ್ಲಿ ಭಕ್ತರು ಇಲ್ಲಿಯೇ ಬಾಡೂಟ ಸಿದ್ಧಪಡಿಸಿ, ನೂರಾರು ಭಕ್ತರಿಗೆ ಉಣಬಡಿಸುತ್ತಾರೆ. ಈ ವೇಳೆ ಇಲ್ಲಿಗೆ ಬರುವ ಮಹಿಳೆಯರು, ವೃದ್ಧರು, ಮಕ್ಕಳು ಶೌಚಗೃಹಕ್ಕೆ ಹೋಗಬೇಕಾದರೆ ಇಲ್ಲಿಗೇ ಬರಬೇಕಿದೆ. ಆದರೆ ಈಗ ಈ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಬಯಲು ಶೌಚಾಲಯವನ್ನೇ ಅವಲಂಬಿಸಬೇಕಿದೆ’ ಎನ್ನುತ್ತಾರೆ ಮದ್ದೂರಮ್ಮ ದೇಗುಲ ಯುವಕರ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಯಶವಂತ್.