ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಎಲ್ಲಾ ರೀತಿಯ ಸಾಲವನ್ನು ಕೂಡಲೇ ಮನ್ನಾ ಮಾಡಿ ಹೊಸ ಸಾಲ ವಿತರಣೆಗೆ ಕ್ರಮ ಕೈಗೊಳ್ಳಬೇಕು. ತಂಬಾಕು ಬೆಳೆಗಾರರಿಗೆ ಪರವಾನಗಿ ನವೀಕರಣಕ್ಕಾಗಿ ನಿಗದಿಪಡಿಸಿರುವ ₹ 4,500 ಶುಲ್ಕ ರದ್ದುಪಡಿಸಬೇಕು. ಜಿಲ್ಲೆಯ ಆಲೂಗೆಡ್ಡೆ, ತರಕಾರಿ ಸೇರಿದಂತೆ ಎಲ್ಲ ಬೆಲೆಗಳು ಅಧಿಕ ಮಳೆಯಿಂದ ನಾಶ ಹೊಂದಿದ್ದು, ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.