ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ಭಟ್ಟ ಮಾತನಾಡಿ, ‘ಪ್ರೌಢಶಾಲೆ ಮಟ್ಟದಲ್ಲಿ ವಾಣಿಜ್ಯ ವಿಷಯ ಶಿಕ್ಷಕರೇ ಇರುತ್ತಿರಲಿಲ್ಲ. ಯಾಕೆಂದರೆ ಅವರಿಗೆ ಕಲಿಸಲು ಹಿಂದೆ ಬಿ.ಇಡಿ ತರಗತಿಯಲ್ಲಿ ಅವಕಾಶವಿರಲಿಲ್ಲ. ಇದು ಹೊಸ ಶಿಕ್ಷಣ ನೀತಿಯ ಲೋಪವಾಗಿದೆ. ಇಂದು ವಾಣಿಜ್ಯಶಾಸ್ತ್ರದ ಜಾತ್ರೆಯೇ ನಡೆಯುತ್ತಿದ್ದು, ಸದ್ಯದ ಅಗತ್ಯಕ್ಕೆ ತಕ್ಕಂತೆ ಎನ್ಸಿಇಆರ್ಟಿ ಮಾದರಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾಗಿದೆ’ ಎಂದು ಹೇಳಿದರು