<p>ನವದೆಹಲಿ: ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ (ವರ್ಕ್ ಫ್ರಂ ಹೋಮ್) ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಸರ್ಕಾರಿ ಕಚೇರಿಗಳಿಗೆ ಗುರುವಾರ ಆದೇಶ ಹೊರಡಿಸಿದ್ದಾರೆ. </p>.<p>ಸಚಿವರು ಮತ್ತು ಅಧಿಕಾರಿಗಳು ಮೆಟ್ರೊ ರೈಲಿನಲ್ಲಿಯೇ ಸೋಮವಾರ ಪ್ರಯಾಣಿಸಬೇಕು. ನಾಗರಿಕರು ಪ್ರತಿ ವಾರವೂ ಸ್ವಯಂ ಪ್ರೇರಿತವಾಗಿ ‘ವಾಹನರಹಿತ ದಿನ’ವೆಂದು ಪರಿಗಣಿಸಬೇಕು ಎಂದೂ ರೇಖಾ ಸೂಚಿಸಿದ್ದಾರೆ. </p>.<p>ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮನವಿ ಮಾಡಿರುವುದನ್ನು ಪರಿಗಣಿಸಿ ‘ಮೇರಾ ಭಾರತ್, ಮೇರಾ ಯೋಗದಾನ್’ ಎಂಬ ಉಪಕ್ರಮದಡಿ ಹಲವು ಕ್ರಮಗಳನ್ನು ರೂಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ರೇಖಾ ಹೇಳಿದ್ದಾರೆ. </p>.<p>ರೇಖಾ ಅವರು ತಮ್ಮ ಬೆಂಗಾವಲು ವಾಹನಗಳ ಪೈಕಿ ಶೇ 60ರಷ್ಟು ವಾಹನಗಳನ್ನು ಕಡಿತಗೊಳಿಸಿದ್ದಾರೆ. </p>.<p>ಸಿ.ಎಂ ರೇಖಾ ಗುಪ್ತಾ ಕೈಗೊಂಡಿರುವ ಕ್ರಮಗಳು</p> <p> * ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳ ಉದ್ಯೋಗಿಗಳು ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಖಾಸಗಿ ವಲಯಕ್ಕೂ ಈ ಕ್ರಮವನ್ನು ಅನುಸರಿಸಲು ವಿನಂತಿಸಲಾಗುವುದು * ಎಲ್ಲಾ ಸಚಿವರು ಅಧಿಕಾರಿಗಳು ಹಾಗೂ ಸ್ವತಃ ತಾವೂ ಸೋಮವಾರ ಮೆಟ್ರೊದಲ್ಲಿ ಪ್ರಯಾಣಿಸುವುದಾಗಿ ರೇಖಾ ಹೇಳಿದ್ದಾರೆ * ನಾಗರಿಕರು ಪ್ರತಿ ವಾರವೂ ಸ್ವಯಂ ಪ್ರೇರಿತವಾಗಿ ‘ವಾಹನ ರಹಿತ ದಿನ’ವನ್ನಾಗಿ ಅನುಸರಿಸಲು ಪ್ರೋತ್ಸಾಹಿಸಲಾಗುವುದು * ಸಚಿವರ ಎಲ್ಲಾ ಅಧಿಕೃತ ವಿದೇಶ ಪ್ರವಾಸಗಳನ್ನು ಒಂದು ವರ್ಷದವರೆಗೆ ಸ್ಥಗಿತಗೊಳಿಸಲಾಗಿದೆ. ಮುಂದಿನ ಮೂರು ತಿಂಗಳು ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ * ದೆಹಲಿಯ ಸರ್ಕಾರಿ ಅಧಿಕಾರಿಗಳ ತಿಂಗಳ ಪೆಟ್ರೊಲ್ ಡೀಸೆಲ್ ಕೋಟಾದಲ್ಲಿ ಶೇ 20ರಷ್ಟು ಕಡಿತ ಮಾಡಲಾಗುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ (ವರ್ಕ್ ಫ್ರಂ ಹೋಮ್) ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಸರ್ಕಾರಿ ಕಚೇರಿಗಳಿಗೆ ಗುರುವಾರ ಆದೇಶ ಹೊರಡಿಸಿದ್ದಾರೆ. </p>.<p>ಸಚಿವರು ಮತ್ತು ಅಧಿಕಾರಿಗಳು ಮೆಟ್ರೊ ರೈಲಿನಲ್ಲಿಯೇ ಸೋಮವಾರ ಪ್ರಯಾಣಿಸಬೇಕು. ನಾಗರಿಕರು ಪ್ರತಿ ವಾರವೂ ಸ್ವಯಂ ಪ್ರೇರಿತವಾಗಿ ‘ವಾಹನರಹಿತ ದಿನ’ವೆಂದು ಪರಿಗಣಿಸಬೇಕು ಎಂದೂ ರೇಖಾ ಸೂಚಿಸಿದ್ದಾರೆ. </p>.<p>ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮನವಿ ಮಾಡಿರುವುದನ್ನು ಪರಿಗಣಿಸಿ ‘ಮೇರಾ ಭಾರತ್, ಮೇರಾ ಯೋಗದಾನ್’ ಎಂಬ ಉಪಕ್ರಮದಡಿ ಹಲವು ಕ್ರಮಗಳನ್ನು ರೂಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ರೇಖಾ ಹೇಳಿದ್ದಾರೆ. </p>.<p>ರೇಖಾ ಅವರು ತಮ್ಮ ಬೆಂಗಾವಲು ವಾಹನಗಳ ಪೈಕಿ ಶೇ 60ರಷ್ಟು ವಾಹನಗಳನ್ನು ಕಡಿತಗೊಳಿಸಿದ್ದಾರೆ. </p>.<p>ಸಿ.ಎಂ ರೇಖಾ ಗುಪ್ತಾ ಕೈಗೊಂಡಿರುವ ಕ್ರಮಗಳು</p> <p> * ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳ ಉದ್ಯೋಗಿಗಳು ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಖಾಸಗಿ ವಲಯಕ್ಕೂ ಈ ಕ್ರಮವನ್ನು ಅನುಸರಿಸಲು ವಿನಂತಿಸಲಾಗುವುದು * ಎಲ್ಲಾ ಸಚಿವರು ಅಧಿಕಾರಿಗಳು ಹಾಗೂ ಸ್ವತಃ ತಾವೂ ಸೋಮವಾರ ಮೆಟ್ರೊದಲ್ಲಿ ಪ್ರಯಾಣಿಸುವುದಾಗಿ ರೇಖಾ ಹೇಳಿದ್ದಾರೆ * ನಾಗರಿಕರು ಪ್ರತಿ ವಾರವೂ ಸ್ವಯಂ ಪ್ರೇರಿತವಾಗಿ ‘ವಾಹನ ರಹಿತ ದಿನ’ವನ್ನಾಗಿ ಅನುಸರಿಸಲು ಪ್ರೋತ್ಸಾಹಿಸಲಾಗುವುದು * ಸಚಿವರ ಎಲ್ಲಾ ಅಧಿಕೃತ ವಿದೇಶ ಪ್ರವಾಸಗಳನ್ನು ಒಂದು ವರ್ಷದವರೆಗೆ ಸ್ಥಗಿತಗೊಳಿಸಲಾಗಿದೆ. ಮುಂದಿನ ಮೂರು ತಿಂಗಳು ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ * ದೆಹಲಿಯ ಸರ್ಕಾರಿ ಅಧಿಕಾರಿಗಳ ತಿಂಗಳ ಪೆಟ್ರೊಲ್ ಡೀಸೆಲ್ ಕೋಟಾದಲ್ಲಿ ಶೇ 20ರಷ್ಟು ಕಡಿತ ಮಾಡಲಾಗುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>