<p><strong>ನವದೆಹಲಿ:</strong> ಕಳೆದ ಆರು ದಿನಗಳಲ್ಲಿ 55 ರಾಜತಾಂತ್ರಿಕ ಅಧಿಕಾರಿಗಳು ಮತ್ತು ಅವರ ಸಂಬಂಧಿಕರು, ಸಿಬ್ಬಂದಿ ಹಾಗೂ ಪಾಕಿಸ್ತಾನ ವೀಸಾ ಹೊಂದಿದ್ದ 8 ಮಂದಿ ಭಾರತೀಯರು ಸೇರಿ ಒಟ್ಟು 786 ಪಾಕಿಸ್ತಾನದ ಪ್ರಜೆಗಳು ಭಾರತ ತೊರೆದಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.</p><p>ಇದೇ ವೇಳೆ ಏ.24ರಿಂದ, 25 ರಾಜತಾಂತ್ರಿಕ ಅಧಿಕಾರಿಗಳು, ದೀರ್ಘಾವಧಿ ಭಾರತದ ವೀಸಾ ಹೊಂದಿರುವ 151 ಪಾಕಿಸ್ತಾನಿ ಪ್ರಜೆಗಳು ಸೇರಿ ಒಟ್ಟು 1,465 ಭಾರತೀಯರು ಪಂಜಾಬ್ನಲ್ಲಿನ ಅಂತರರಾಷ್ಟ್ರೀಯ ಗಡಿ ದಾಟಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.</p><p>ಏ.22 ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನದ ನಂಟಿರುವ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಅಮಾಯಕರು ಉಸಿರು ಚೆಲ್ಲಿದ್ದರು. ಘಟನೆಯ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನ ನಾಗರಿಕರಿಗೆ ‘ಭಾರತದಿಂದ ತೊಲಗಿ’ ಎಂದಿತ್ತು. </p><p>ಸಾರ್ಕ್ ವೀಸಾ ಹೊಂದಿದ್ದವರಿಗೆ ಏ.25, ವೈದ್ಯಕೀಯ ಚಿಕಿತ್ಸೆಗಾಗಿ ವೀಸಾ ಪಡೆದು ಬಂದಿದ್ದವರಿಗೆ ಏ.29 ಹಾಗೂ ಉದ್ಯಮ, ಪತ್ರಕರ್ತರು, ಪ್ರವಾಸಿಗರು, ವಿದ್ಯಾರ್ಥಿಗಳು ಸೇರಿ 12 ರೀತಿಯ ವೀಸಾ ಪಡೆದಿದ್ದವರಿಗೆ ದೇಶ ತೊರೆಯಲು ಏ.27ರವರೆಗೆ ಕಾಲಾವಕಾಶ ನೀಡಲಾಗಿತ್ತು.</p><p>ಭಾರತ ಕೂಡ ಇಸ್ಲಾಮಾಬಾದ್ನಲ್ಲಿನ ಭಾರತ ಹೈಕೈಮಿಷನ್ ಅನ್ನು ವಾಪಸ್ ಕರೆಸಿಕೊಂಡಿದೆ. ಆದರೆ ದೀರ್ಘಾವಧಿ ವೀಸಾ, ಅಧಿಕೃತ ವೀಸಾ ಇರುವವರನ್ನು ಈ ಪ್ರಕ್ರಿಯೆಯಿಂದ ಹೊರಗುಳಿಸಲಾಗಿದೆ.</p>.<p>ನವದೆಹಲಿಯ ಪಾಕ್ ಹೈಕಮಿಷನ್ ಕಚೇರಿಯಲ್ಲಿರುವ ಸೇನಾ, ನೌಕಾಪಡೆ ಮತ್ತು ವಾಯುಪಡೆ ಸಲಹೆಗಾರರಿಗೆ ಒಂದು ವಾರದ ಒಳಗಾಗಿ ದೇಶ ತೊರೆಯುವಂತೆ ಏ.23ರಂದು ಸೂಚಿಸಲಾಗಿತ್ತು. ಇವರ ಐವರು ಸಹಾಯಕ ಸಿಬ್ಬಂದಿಗೂ ಇದೇ ಸೂಚನೆ ನೀಡಲಾಗಿತ್ತು.</p><p>ಆದರೆ ದೀರ್ಘಾವಧಿಯ, ರಾಜತಾಂತ್ರಿಕ ಅಥವಾ ಅಧಿಕೃತ ವೀಸಾಗಳನ್ನು ಹೊಂದಿರುವವರಿಗೆ ‘ಭಾರತ ಬಿಟ್ಟು ತೊಲಗಿ’ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಭಾರತವು ಇಸ್ಲಾಮಾಬಾದ್ನಲ್ಲಿರುವ ಪಾಕ್ ಹೈಕಮಿಷನ್ ಕಚೇರಿಯ ತನ್ನ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದೆ.</p><p>ಕೆಲವು ಪಾಕಿಸ್ತಾನಿ ಪ್ರಜೆಗಳು ವಿಮಾನಗಳ ಮೂಲಕವೂ ಭಾರತವನ್ನು ತೊರೆದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ– ಪಾಕಿಸ್ತಾನ ನಡುವೆ ನೇರ ವಿಮಾನ ಸಂಚಾರ ಇಲ್ಲದ ಕಾರಣ ಅವರು ಮೂರನೇ ದೇಶದ ಮೂಲಕ ತೆರಳಿರಬಹುದು ಎಂದಿದ್ದಾರೆ.</p><p>ಕೇಂದ್ರ ಗೃಹ ಸಚಿವ ಅಮಿತ್ ಶಾ ಏ.25ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, ನಿಗದಿತ ಗಡುವು ಮೀರಿದ ಬಳಿಕ ಪಾಕಿಸ್ತಾನದ ಯಾವುದೇ ಪ್ರಜೆ ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು.</p><p><strong>ವಿವಿಧ ದಿನಗಳಲ್ಲಿ ಪಾಕ್ಗೆ ತೆರಳಿದವರು</strong> </p><p>ಏ.24;28</p><p>ಏ.25;191 </p><p>ಏ.26;81 </p><p>ಏ.27;237 </p><p>ಏ.28;145 </p><p>ಏ.29;94</p>.24-36 ತಾಸಿನೊಳಗೆ ಭಾರತದಿಂದ ದಾಳಿ; ತಕ್ಕ ಪರಿಣಾಮ ಎದುರಿಸಬೇಕಾದೀತು: ಪಾಕಿಸ್ತಾನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕಳೆದ ಆರು ದಿನಗಳಲ್ಲಿ 55 ರಾಜತಾಂತ್ರಿಕ ಅಧಿಕಾರಿಗಳು ಮತ್ತು ಅವರ ಸಂಬಂಧಿಕರು, ಸಿಬ್ಬಂದಿ ಹಾಗೂ ಪಾಕಿಸ್ತಾನ ವೀಸಾ ಹೊಂದಿದ್ದ 8 ಮಂದಿ ಭಾರತೀಯರು ಸೇರಿ ಒಟ್ಟು 786 ಪಾಕಿಸ್ತಾನದ ಪ್ರಜೆಗಳು ಭಾರತ ತೊರೆದಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.</p><p>ಇದೇ ವೇಳೆ ಏ.24ರಿಂದ, 25 ರಾಜತಾಂತ್ರಿಕ ಅಧಿಕಾರಿಗಳು, ದೀರ್ಘಾವಧಿ ಭಾರತದ ವೀಸಾ ಹೊಂದಿರುವ 151 ಪಾಕಿಸ್ತಾನಿ ಪ್ರಜೆಗಳು ಸೇರಿ ಒಟ್ಟು 1,465 ಭಾರತೀಯರು ಪಂಜಾಬ್ನಲ್ಲಿನ ಅಂತರರಾಷ್ಟ್ರೀಯ ಗಡಿ ದಾಟಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.</p><p>ಏ.22 ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನದ ನಂಟಿರುವ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಅಮಾಯಕರು ಉಸಿರು ಚೆಲ್ಲಿದ್ದರು. ಘಟನೆಯ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನ ನಾಗರಿಕರಿಗೆ ‘ಭಾರತದಿಂದ ತೊಲಗಿ’ ಎಂದಿತ್ತು. </p><p>ಸಾರ್ಕ್ ವೀಸಾ ಹೊಂದಿದ್ದವರಿಗೆ ಏ.25, ವೈದ್ಯಕೀಯ ಚಿಕಿತ್ಸೆಗಾಗಿ ವೀಸಾ ಪಡೆದು ಬಂದಿದ್ದವರಿಗೆ ಏ.29 ಹಾಗೂ ಉದ್ಯಮ, ಪತ್ರಕರ್ತರು, ಪ್ರವಾಸಿಗರು, ವಿದ್ಯಾರ್ಥಿಗಳು ಸೇರಿ 12 ರೀತಿಯ ವೀಸಾ ಪಡೆದಿದ್ದವರಿಗೆ ದೇಶ ತೊರೆಯಲು ಏ.27ರವರೆಗೆ ಕಾಲಾವಕಾಶ ನೀಡಲಾಗಿತ್ತು.</p><p>ಭಾರತ ಕೂಡ ಇಸ್ಲಾಮಾಬಾದ್ನಲ್ಲಿನ ಭಾರತ ಹೈಕೈಮಿಷನ್ ಅನ್ನು ವಾಪಸ್ ಕರೆಸಿಕೊಂಡಿದೆ. ಆದರೆ ದೀರ್ಘಾವಧಿ ವೀಸಾ, ಅಧಿಕೃತ ವೀಸಾ ಇರುವವರನ್ನು ಈ ಪ್ರಕ್ರಿಯೆಯಿಂದ ಹೊರಗುಳಿಸಲಾಗಿದೆ.</p>.<p>ನವದೆಹಲಿಯ ಪಾಕ್ ಹೈಕಮಿಷನ್ ಕಚೇರಿಯಲ್ಲಿರುವ ಸೇನಾ, ನೌಕಾಪಡೆ ಮತ್ತು ವಾಯುಪಡೆ ಸಲಹೆಗಾರರಿಗೆ ಒಂದು ವಾರದ ಒಳಗಾಗಿ ದೇಶ ತೊರೆಯುವಂತೆ ಏ.23ರಂದು ಸೂಚಿಸಲಾಗಿತ್ತು. ಇವರ ಐವರು ಸಹಾಯಕ ಸಿಬ್ಬಂದಿಗೂ ಇದೇ ಸೂಚನೆ ನೀಡಲಾಗಿತ್ತು.</p><p>ಆದರೆ ದೀರ್ಘಾವಧಿಯ, ರಾಜತಾಂತ್ರಿಕ ಅಥವಾ ಅಧಿಕೃತ ವೀಸಾಗಳನ್ನು ಹೊಂದಿರುವವರಿಗೆ ‘ಭಾರತ ಬಿಟ್ಟು ತೊಲಗಿ’ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಭಾರತವು ಇಸ್ಲಾಮಾಬಾದ್ನಲ್ಲಿರುವ ಪಾಕ್ ಹೈಕಮಿಷನ್ ಕಚೇರಿಯ ತನ್ನ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದೆ.</p><p>ಕೆಲವು ಪಾಕಿಸ್ತಾನಿ ಪ್ರಜೆಗಳು ವಿಮಾನಗಳ ಮೂಲಕವೂ ಭಾರತವನ್ನು ತೊರೆದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ– ಪಾಕಿಸ್ತಾನ ನಡುವೆ ನೇರ ವಿಮಾನ ಸಂಚಾರ ಇಲ್ಲದ ಕಾರಣ ಅವರು ಮೂರನೇ ದೇಶದ ಮೂಲಕ ತೆರಳಿರಬಹುದು ಎಂದಿದ್ದಾರೆ.</p><p>ಕೇಂದ್ರ ಗೃಹ ಸಚಿವ ಅಮಿತ್ ಶಾ ಏ.25ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, ನಿಗದಿತ ಗಡುವು ಮೀರಿದ ಬಳಿಕ ಪಾಕಿಸ್ತಾನದ ಯಾವುದೇ ಪ್ರಜೆ ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು.</p><p><strong>ವಿವಿಧ ದಿನಗಳಲ್ಲಿ ಪಾಕ್ಗೆ ತೆರಳಿದವರು</strong> </p><p>ಏ.24;28</p><p>ಏ.25;191 </p><p>ಏ.26;81 </p><p>ಏ.27;237 </p><p>ಏ.28;145 </p><p>ಏ.29;94</p>.24-36 ತಾಸಿನೊಳಗೆ ಭಾರತದಿಂದ ದಾಳಿ; ತಕ್ಕ ಪರಿಣಾಮ ಎದುರಿಸಬೇಕಾದೀತು: ಪಾಕಿಸ್ತಾನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>