ಈ ಘಟನೆಯು ಭಾನುವಾರ ಸಂಜೆ ನಡೆದಿದೆ. ಶಿವಂ ಕುಮಾರ್ ಎಂಬ ಮಗು ಆಟವಾಡುವ ವೇಳೆ ಬಾವಿಗೆ ಬಿದ್ದಿದೆ. ಮಗು ಬೀಳುತ್ತಿರುವುದನ್ನು ಕಂಡ ಕಾಜಲ್ ಕುಮಾರಿ ಭುಯಿಯಾನ್ ಒಂದು ಕ್ಷಣವೂ ತಡಮಾಡದೇ ತಾನೂ ಬಾವಿಗೆ ಹಾರಿದ್ದಾಳೆ. ಮಗುವನ್ನು ಒಂದು ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ಬಾವಿಗೆ ಅಳವಡಿಸಿದ್ದ ಪೈಪನ್ನು ಹಿಡಿದು ಇಬ್ಬರೂ ಮುಳುಗದಂತೆ ನಿಭಾಯಿಸಿದ್ದಾಳೆ. ಬಳಿಕ ನೆರವಿಗಾಗಿ ಕೂಗಿದ್ದಾಳೆ. ಆಕೆಯ ಧ್ವನಿ ಕೇಳಿ ಗ್ರಾಮಸ್ಥರು ನೆರವಿಗೆ ಧಾವಿಸುವವರೆಗೂ ಆಕೆ ಪೈಪ್ ಹಿಡಿದೇ ಹೋರಾಟ ನಡೆಸಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.