<p><strong>ನವದೆಹಲಿ</strong>: ಆಮ್ ಆದ್ಮಿ ಪಕ್ಷದ ಏಳು ಮಂದಿ ರಾಜ್ಯಸಭಾ ಸಂಸದರು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ (ಬಿಜೆಪಿ) ಸೇರಿದ್ದಾರೆ. ಇವರ ಸೇರ್ಪಡೆಯನ್ನು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸೋಮವಾರ ಅಧಿಕೃತವಾಗಿ ಅಂಗೀಕರಿಸಿದ್ದಾರೆ.</p><p>ಈ ಹೊಸ ಸೇರ್ಪಡೆಯೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 113ಕ್ಕೆ ಏರಿಕೆಯಾಗಿದೆ. ಮೇಲ್ಮನೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸದಸ್ಯರ ಸಂಖ್ಯೆ ಕೇವಲ ಮೂರಕ್ಕೆ ಇಳಿದಿದೆ.</p><p>ರಾಘವ್ ಛಡ್ಡಾ, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಪಾಠಕ್, ವಿಕ್ರಮ್ಜಿತ್ ಸಾಹ್ನಿ, ಸ್ವಾತಿ ಮಾಲಿವಾಲ್ ಮತ್ತು ರಾಜೀಂದರ್ ಗುಪ್ತಾ ಅವರು ಬಿಜೆಪಿಗೆ ಸೇರ್ಪಡೆಗೊಂಡ ಸಂಸದರಾಗಿದ್ದಾರೆ.</p>.KKR ವಿರುದ್ಧ ಸೂಪರ್ ಓವರ್ ಸೋತ LSG: ‘ನಮಗೆ ವಿರಾಮ ಬೇಕು’ ಎಂದ ನಾಯಕ ರಿಷಬ್ ಪಂತ್.ನಾನು ತಪ್ಪಾಗಿರಬಹುದು, ಆದರೆ ಏಳು ಜನ ತಪ್ಪಾಗಲು ಸಾಧ್ಯವಿಲ್ಲ: ಚಡ್ಡಾ ತಿರುಗೇಟು. <p><strong>ರಿಜಿಜು ಪ್ರತಿಕ್ರಿಯೆ</strong></p><p>ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಎನ್ಡಿಎ ಮೈತ್ರಿಗೆ ಸಂಸದರನ್ನು ಸ್ವಾಗತಿಸುತ್ತೇನೆ. ಅವರು 'ತುಕ್ಡೆ-ತುಕ್ಡೆ ಇಂಡಿ ಒಕ್ಕೂಟ'ಕ್ಕೆ ಗುಡ್ಬೈ ಹೇಳಿದ್ದಾರೆ. ಈ ಸಂಸದರು ಎಂದಿಗೂ ಅಸಂಸದೀಯ ನಡವಳಿಕೆ ತೋರಿಲ್ಲ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. </p><p><strong>ಎಎಪಿ ಆಕ್ಷೇಪ</strong></p><p>ಈ ಸೇರ್ಪಡೆಯನ್ನು 'ಅಸಂವಿಧಾನಿಕ' ಎಂದು ಕರೆದಿರುವ ಎಎಪಿ, ಪಕ್ಷಾಂತರಗೊಂಡ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಸಭಾಪತಿಗಳಿಗೆ ಅರ್ಜಿ ಸಲ್ಲಿಸಿದೆ. ಎಎಪಿ ಸಂಸದ ಸಂಜಯ್ ಸಿಂಗ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅನರ್ಹತೆ ಪ್ರಕ್ರಿಯೆಗೆ ಒತ್ತಾಯಿಸಿದ್ದಾರೆ.</p>.ಹೊರ್ಮುಜ್ ಮುಕ್ತ, ಯುದ್ಧ ಅಂತ್ಯಕ್ಕೆ ಇರಾನ್ನ 3 ಹಂತದ ಪ್ರಸ್ತಾವನೆಯಲ್ಲಿ ಏನಿದೆ?.ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಮುಂದೆ ವಿಚಾರಣೆಗೆ ಹಾಜರಾಗಲ್ಲ: ಕೇಜ್ರಿವಾಲ್.ಯುದ್ಧ ಕೊನೆಗೊಳಿಸಲು ಪಾಕ್ ಮೂಲಕ ಅಮೆರಿಕಕ್ಕೆ ಇರಾನ್ ಪ್ರಸ್ತಾವನೆ.ದಲಿತರಿಗೆ ಚೊಂಬು ಕೊಟ್ಟ ಸರ್ಕಾರ: ವಿರೋಧ ಪಕ್ಷದ ನಾಯಕ ಆರ್.ಅಶೋಕ ಕಿಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಆಮ್ ಆದ್ಮಿ ಪಕ್ಷದ ಏಳು ಮಂದಿ ರಾಜ್ಯಸಭಾ ಸಂಸದರು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ (ಬಿಜೆಪಿ) ಸೇರಿದ್ದಾರೆ. ಇವರ ಸೇರ್ಪಡೆಯನ್ನು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸೋಮವಾರ ಅಧಿಕೃತವಾಗಿ ಅಂಗೀಕರಿಸಿದ್ದಾರೆ.</p><p>ಈ ಹೊಸ ಸೇರ್ಪಡೆಯೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 113ಕ್ಕೆ ಏರಿಕೆಯಾಗಿದೆ. ಮೇಲ್ಮನೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸದಸ್ಯರ ಸಂಖ್ಯೆ ಕೇವಲ ಮೂರಕ್ಕೆ ಇಳಿದಿದೆ.</p><p>ರಾಘವ್ ಛಡ್ಡಾ, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಪಾಠಕ್, ವಿಕ್ರಮ್ಜಿತ್ ಸಾಹ್ನಿ, ಸ್ವಾತಿ ಮಾಲಿವಾಲ್ ಮತ್ತು ರಾಜೀಂದರ್ ಗುಪ್ತಾ ಅವರು ಬಿಜೆಪಿಗೆ ಸೇರ್ಪಡೆಗೊಂಡ ಸಂಸದರಾಗಿದ್ದಾರೆ.</p>.KKR ವಿರುದ್ಧ ಸೂಪರ್ ಓವರ್ ಸೋತ LSG: ‘ನಮಗೆ ವಿರಾಮ ಬೇಕು’ ಎಂದ ನಾಯಕ ರಿಷಬ್ ಪಂತ್.ನಾನು ತಪ್ಪಾಗಿರಬಹುದು, ಆದರೆ ಏಳು ಜನ ತಪ್ಪಾಗಲು ಸಾಧ್ಯವಿಲ್ಲ: ಚಡ್ಡಾ ತಿರುಗೇಟು. <p><strong>ರಿಜಿಜು ಪ್ರತಿಕ್ರಿಯೆ</strong></p><p>ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಎನ್ಡಿಎ ಮೈತ್ರಿಗೆ ಸಂಸದರನ್ನು ಸ್ವಾಗತಿಸುತ್ತೇನೆ. ಅವರು 'ತುಕ್ಡೆ-ತುಕ್ಡೆ ಇಂಡಿ ಒಕ್ಕೂಟ'ಕ್ಕೆ ಗುಡ್ಬೈ ಹೇಳಿದ್ದಾರೆ. ಈ ಸಂಸದರು ಎಂದಿಗೂ ಅಸಂಸದೀಯ ನಡವಳಿಕೆ ತೋರಿಲ್ಲ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. </p><p><strong>ಎಎಪಿ ಆಕ್ಷೇಪ</strong></p><p>ಈ ಸೇರ್ಪಡೆಯನ್ನು 'ಅಸಂವಿಧಾನಿಕ' ಎಂದು ಕರೆದಿರುವ ಎಎಪಿ, ಪಕ್ಷಾಂತರಗೊಂಡ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಸಭಾಪತಿಗಳಿಗೆ ಅರ್ಜಿ ಸಲ್ಲಿಸಿದೆ. ಎಎಪಿ ಸಂಸದ ಸಂಜಯ್ ಸಿಂಗ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅನರ್ಹತೆ ಪ್ರಕ್ರಿಯೆಗೆ ಒತ್ತಾಯಿಸಿದ್ದಾರೆ.</p>.ಹೊರ್ಮುಜ್ ಮುಕ್ತ, ಯುದ್ಧ ಅಂತ್ಯಕ್ಕೆ ಇರಾನ್ನ 3 ಹಂತದ ಪ್ರಸ್ತಾವನೆಯಲ್ಲಿ ಏನಿದೆ?.ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಮುಂದೆ ವಿಚಾರಣೆಗೆ ಹಾಜರಾಗಲ್ಲ: ಕೇಜ್ರಿವಾಲ್.ಯುದ್ಧ ಕೊನೆಗೊಳಿಸಲು ಪಾಕ್ ಮೂಲಕ ಅಮೆರಿಕಕ್ಕೆ ಇರಾನ್ ಪ್ರಸ್ತಾವನೆ.ದಲಿತರಿಗೆ ಚೊಂಬು ಕೊಟ್ಟ ಸರ್ಕಾರ: ವಿರೋಧ ಪಕ್ಷದ ನಾಯಕ ಆರ್.ಅಶೋಕ ಕಿಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>