<p><strong>ನವದೆಹಲಿ</strong>: ಸರ್ಕಾರಿ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಯ ಕೆಲಸದ ಅನುಭವವನ್ನು ಗುರುತಿಸಲು ನಿರಾಕರಿಸುವುದು ಸಮಾನತೆ ಮತ್ತು ಸಾಮಾಜಿಕ ನ್ಯಾಯ ತತ್ತ್ವಕ್ಕೆ ವಿರುದ್ಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>‘ಸಾಮಾಜಿಕ ನ್ಯಾಯ’ವು ದೇಶದ ಸಂವಿಧಾನದ ಉದ್ದಕ್ಕೂ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಶಕ್ತಿವಂತರು ಹಾಗೂ ಶಕ್ತಿ ಇಲ್ಲದವರ ನಡುವೆ ಸಂಘರ್ಷ ಉಂಟಾದಾಗ ನ್ಯಾಯಾಲಯಗಳು ದುರ್ಬಲ ಮತ್ತು ಬಡ ವರ್ಗಗಳ ಪರವಾಗಿ ನಿಲ್ಲಬೇಕು ಎಂಬುದನ್ನು ಇದು ಹೇಳುತ್ತದೆ ಎಂದು ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.</p>.<p>ಮೋನಿಕಾ ಎನ್ನುವವರಿಗೆ 0.5ರಷ್ಟು ಅಂಕ ನೀಡಿ, ಅವರನ್ನು ಗುಮಾಸ್ತ ಹುದ್ದೆಗೆ ನೇಮಕಾತಿಗೆ ಪರಿಗಣಿಸಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಏಕಸದಸ್ಯ ಪೀಠ ಆದೇಶ ನೀಡಿತ್ತು. ಇದನ್ನು ವಿಭಾಗೀಯ ಪೀಠವು ಎತ್ತಿಹಿಡಿದಿತ್ತು. ವಿಭಾಗೀಯ ಪೀಠದ ಆದೇಶವನ್ನು ಹರಿಯಾಣದ ‘ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾಲಯ’ವು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.</p>.<p>ಮಹಿಳಾ ಅಭ್ಯರ್ಥಿಯನ್ನು ಈ ಹಿಂದೆ ಹೊರಗುತ್ತಿಗೆ ನಿಯಮಗಳ ಅಡಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು, ಅವರನ್ನು ಕಾಯಂ ಆಧಾರದಲ್ಲಿ ನೇಮಕ ಮಾಡಿಕೊಂಡಿರಲಿಲ್ಲ, ಮಂಜೂರಾದ ಹುದ್ದೆಗೆ ಕೂಡ ಅವರನ್ನು ನೇಮಕ ಮಾಡಿಕೊಂಡಿರಲಿಲ್ಲ, ಅವರ ಕೆಲಸದ ಅನುಭವವನ್ನು ಮಂಜೂರಾದ ಹುದ್ದೆಯಲ್ಲಿನ ಕೆಲಸದ ಅನುಭವದ ಜೊತೆ ಹೋಲಿಸಲು ಆಗದು ಎಂದು ವಿಶ್ವವಿದ್ಯಾಲಯವು ಹೇಳಿತ್ತು.</p>.<p>ವ್ಯಕ್ತಿಯೊಬ್ಬರು ಮಂಜೂರಾದ ಹುದ್ದೆಯಲ್ಲಿ ಕೆಲಸ ಮಾಡಿಲ್ಲ, ಅವರು ಹೊರಗುತ್ತಿಗೆ ಏಜೆನ್ಸಿಯೊಂದರ ಮೂಲಕ ಕೆಲಸ ಮಾಡುತ್ತಿದ್ದರು ಎಂಬ ಕಾರಣಕ್ಕೆ ಅವರ ಅನುಭವಕ್ಕೆ ಅಂಕ ನೀಡಲು ನಿರಾಕರಿಸುವುದು ದುರ್ಬಲರಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸುವ ಹಾಗೂ ಸಮಾನತೆಯನ್ನು ಖಾತರಿಪಡಿಸುವ ಸಾಂವಿಧಾನಿಕ ಹೊಣೆಗೆ ವಿರುದ್ಧ ಎಂದು ಶುಕ್ರವಾರ ನೀಡಿರುವ ತೀರ್ಪಿನಲ್ಲಿ ಪೀಠ ಸ್ಪಷ್ಪಪಡಿಸಿದೆ.</p>.<p>ಅರ್ಹ ಅಭ್ಯರ್ಥಿಗಳಲ್ಲಿ ಅನುಭವ ಹೊಂದಿರುವವರು ಹಾಗೂ ಇತರ ಮಾನದಂಡಗಳಿಗೆ ಅನುಗುಣವಾಗಿ ಸೂಕ್ತರು ಯಾರು ಎಂಬುದನ್ನು ಕಂಡುಕೊಳ್ಳುವುದು ಆಯ್ಕೆ ಪ್ರಕ್ರಿಯೆಯಲ್ಲಿ ಆದ್ಯತೆ ಪಡೆಯಬೇಕು. ಸೂಕ್ತ ಅಭ್ಯರ್ಥಿಗಳ ಪೈಕಿ ಹೆಚ್ಚು ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಪೀಠವು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸರ್ಕಾರಿ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಯ ಕೆಲಸದ ಅನುಭವವನ್ನು ಗುರುತಿಸಲು ನಿರಾಕರಿಸುವುದು ಸಮಾನತೆ ಮತ್ತು ಸಾಮಾಜಿಕ ನ್ಯಾಯ ತತ್ತ್ವಕ್ಕೆ ವಿರುದ್ಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>‘ಸಾಮಾಜಿಕ ನ್ಯಾಯ’ವು ದೇಶದ ಸಂವಿಧಾನದ ಉದ್ದಕ್ಕೂ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಶಕ್ತಿವಂತರು ಹಾಗೂ ಶಕ್ತಿ ಇಲ್ಲದವರ ನಡುವೆ ಸಂಘರ್ಷ ಉಂಟಾದಾಗ ನ್ಯಾಯಾಲಯಗಳು ದುರ್ಬಲ ಮತ್ತು ಬಡ ವರ್ಗಗಳ ಪರವಾಗಿ ನಿಲ್ಲಬೇಕು ಎಂಬುದನ್ನು ಇದು ಹೇಳುತ್ತದೆ ಎಂದು ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.</p>.<p>ಮೋನಿಕಾ ಎನ್ನುವವರಿಗೆ 0.5ರಷ್ಟು ಅಂಕ ನೀಡಿ, ಅವರನ್ನು ಗುಮಾಸ್ತ ಹುದ್ದೆಗೆ ನೇಮಕಾತಿಗೆ ಪರಿಗಣಿಸಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಏಕಸದಸ್ಯ ಪೀಠ ಆದೇಶ ನೀಡಿತ್ತು. ಇದನ್ನು ವಿಭಾಗೀಯ ಪೀಠವು ಎತ್ತಿಹಿಡಿದಿತ್ತು. ವಿಭಾಗೀಯ ಪೀಠದ ಆದೇಶವನ್ನು ಹರಿಯಾಣದ ‘ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾಲಯ’ವು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.</p>.<p>ಮಹಿಳಾ ಅಭ್ಯರ್ಥಿಯನ್ನು ಈ ಹಿಂದೆ ಹೊರಗುತ್ತಿಗೆ ನಿಯಮಗಳ ಅಡಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು, ಅವರನ್ನು ಕಾಯಂ ಆಧಾರದಲ್ಲಿ ನೇಮಕ ಮಾಡಿಕೊಂಡಿರಲಿಲ್ಲ, ಮಂಜೂರಾದ ಹುದ್ದೆಗೆ ಕೂಡ ಅವರನ್ನು ನೇಮಕ ಮಾಡಿಕೊಂಡಿರಲಿಲ್ಲ, ಅವರ ಕೆಲಸದ ಅನುಭವವನ್ನು ಮಂಜೂರಾದ ಹುದ್ದೆಯಲ್ಲಿನ ಕೆಲಸದ ಅನುಭವದ ಜೊತೆ ಹೋಲಿಸಲು ಆಗದು ಎಂದು ವಿಶ್ವವಿದ್ಯಾಲಯವು ಹೇಳಿತ್ತು.</p>.<p>ವ್ಯಕ್ತಿಯೊಬ್ಬರು ಮಂಜೂರಾದ ಹುದ್ದೆಯಲ್ಲಿ ಕೆಲಸ ಮಾಡಿಲ್ಲ, ಅವರು ಹೊರಗುತ್ತಿಗೆ ಏಜೆನ್ಸಿಯೊಂದರ ಮೂಲಕ ಕೆಲಸ ಮಾಡುತ್ತಿದ್ದರು ಎಂಬ ಕಾರಣಕ್ಕೆ ಅವರ ಅನುಭವಕ್ಕೆ ಅಂಕ ನೀಡಲು ನಿರಾಕರಿಸುವುದು ದುರ್ಬಲರಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸುವ ಹಾಗೂ ಸಮಾನತೆಯನ್ನು ಖಾತರಿಪಡಿಸುವ ಸಾಂವಿಧಾನಿಕ ಹೊಣೆಗೆ ವಿರುದ್ಧ ಎಂದು ಶುಕ್ರವಾರ ನೀಡಿರುವ ತೀರ್ಪಿನಲ್ಲಿ ಪೀಠ ಸ್ಪಷ್ಪಪಡಿಸಿದೆ.</p>.<p>ಅರ್ಹ ಅಭ್ಯರ್ಥಿಗಳಲ್ಲಿ ಅನುಭವ ಹೊಂದಿರುವವರು ಹಾಗೂ ಇತರ ಮಾನದಂಡಗಳಿಗೆ ಅನುಗುಣವಾಗಿ ಸೂಕ್ತರು ಯಾರು ಎಂಬುದನ್ನು ಕಂಡುಕೊಳ್ಳುವುದು ಆಯ್ಕೆ ಪ್ರಕ್ರಿಯೆಯಲ್ಲಿ ಆದ್ಯತೆ ಪಡೆಯಬೇಕು. ಸೂಕ್ತ ಅಭ್ಯರ್ಥಿಗಳ ಪೈಕಿ ಹೆಚ್ಚು ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಪೀಠವು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>