<p><strong>ಸೇಲಂ:</strong> ‘ಎಐಎಡಿಎಂಕೆ ವಿಭಜಿಸಲು ಡಿಎಂಕೆ ಹುನ್ನಾರ ನಡೆಸಿತ್ತು’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮಂಗಳವಾರ ಆರೋಪಿಸಿದರು.</p>.<p>ವಿಧಾನಸಭಾ ಚುನಾವಣೆಯ ಪ್ರಚಾರದ ಅಂತಿಮ ದಿನದಂದು ತಮ್ಮ ತವರು, ಸೇಲಂ ಜಿಲ್ಲೆಯಲ್ಲಿ ಮಾತನಾಡಿದ ಅವರು ‘ಆಡಳಿತಾರೂಢ ಡಿಎಂಕೆಯ ತಂತ್ರಗಾರಿಕೆಯನ್ನು ವಿಫಲಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ’ ಎಂದು ಹೇಳಿದರು.</p>.<p>‘ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ (2016–21) ಎಷ್ಟು ಸಮಸ್ಯೆ ಎದುರಿಸಿದ್ದೆ ಎಂಬುದು ನನಗಷ್ಟೇ ಗೊತ್ತು. ಸ್ಟಾಲಿನ್ ನಮ್ಮ ಪಕ್ಷವನ್ನು ವಿಭಜಿಸಲು ಭಾರಿ ತಂತ್ರಗಾರಿಕೆ ನಡೆಸಿದರು. ಆದರೆ ನಾವು ಅದನ್ನು ನುಚ್ಚುನೂರು ಮಾಡಿದೆವು’ ಎಂದರು.</p>.<p><strong>10 ಭರವಸೆ ಸೇರ್ಪಡೆ:</strong></p>.<p>ಎಐಎಡಿಎಂಕೆಯ ಚುನಾವಣಾ ಪ್ರಣಾಳಿಕೆಗೆ ಹೆಚ್ಚುವರಿಯಾಗಿ 10 ಕಲ್ಯಾಣ ಕ್ರಮಗಳು ಮಂಗಳವಾರ ಸೇರ್ಪಡೆಯಾದವು. ಇದರಿಂದಾಗಿ ಭರವಸೆಗಳ ಸಂಖ್ಯೆ 297ರಿಂದ 307ಕ್ಕೆ ಹೆಚ್ಚಿತು.</p>.<p>ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ತಡೆಗಟ್ಟಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 24X7 ಮೇಲ್ವಿಚಾರಣಾ ಕೊಠಡಿ ಆರಂಭಿಸಲಾಗುವುದು ಎಂಬುದು ನೂತನ ಭರವಸೆ.</p>.<p>10 ಲಕ್ಷ ನಿರುದ್ಯೋಗಿಗಳಿಗೆ ದ್ವಿಚಕ್ರ ವಾಹನ ಖರೀದಿಸಲು ₹10 ಸಾವಿರ ಸಹಾಯಧನ, ಮಾವಿಗೆ ಕನಿಷ್ಠ ಬೆಂಬಲ ಬೆಲೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ಆರಂಭಿಸಲು ಬಯಸುವ ಯುವಕರಿಗೆ 30 ದಿನಗಳಲ್ಲಿ ಪರವಾನಗಿ ನೀಡಲಿಕ್ಕಾಗಿ ಏಕಗವಾಕ್ಷಿ ಯೋಜನೆ ಸೇರ್ಪಡೆಯಾಗಿವೆ.</p>.<p>ತಾಳೆ ಮರಗಳಿಂದ ಹಾಗೂ ಕಟ್ಟಡಗಳಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಕ್ರಮವಾಗಿ ₹20 ಲಕ್ಷ, ₹25 ಲಕ್ಷ ಪರಿಹಾರ ನೀಡಲಾಗುವುದು ಎಂದು ಎಐಎಡಿಎಂಕೆ ಭರವಸೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇಲಂ:</strong> ‘ಎಐಎಡಿಎಂಕೆ ವಿಭಜಿಸಲು ಡಿಎಂಕೆ ಹುನ್ನಾರ ನಡೆಸಿತ್ತು’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮಂಗಳವಾರ ಆರೋಪಿಸಿದರು.</p>.<p>ವಿಧಾನಸಭಾ ಚುನಾವಣೆಯ ಪ್ರಚಾರದ ಅಂತಿಮ ದಿನದಂದು ತಮ್ಮ ತವರು, ಸೇಲಂ ಜಿಲ್ಲೆಯಲ್ಲಿ ಮಾತನಾಡಿದ ಅವರು ‘ಆಡಳಿತಾರೂಢ ಡಿಎಂಕೆಯ ತಂತ್ರಗಾರಿಕೆಯನ್ನು ವಿಫಲಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ’ ಎಂದು ಹೇಳಿದರು.</p>.<p>‘ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ (2016–21) ಎಷ್ಟು ಸಮಸ್ಯೆ ಎದುರಿಸಿದ್ದೆ ಎಂಬುದು ನನಗಷ್ಟೇ ಗೊತ್ತು. ಸ್ಟಾಲಿನ್ ನಮ್ಮ ಪಕ್ಷವನ್ನು ವಿಭಜಿಸಲು ಭಾರಿ ತಂತ್ರಗಾರಿಕೆ ನಡೆಸಿದರು. ಆದರೆ ನಾವು ಅದನ್ನು ನುಚ್ಚುನೂರು ಮಾಡಿದೆವು’ ಎಂದರು.</p>.<p><strong>10 ಭರವಸೆ ಸೇರ್ಪಡೆ:</strong></p>.<p>ಎಐಎಡಿಎಂಕೆಯ ಚುನಾವಣಾ ಪ್ರಣಾಳಿಕೆಗೆ ಹೆಚ್ಚುವರಿಯಾಗಿ 10 ಕಲ್ಯಾಣ ಕ್ರಮಗಳು ಮಂಗಳವಾರ ಸೇರ್ಪಡೆಯಾದವು. ಇದರಿಂದಾಗಿ ಭರವಸೆಗಳ ಸಂಖ್ಯೆ 297ರಿಂದ 307ಕ್ಕೆ ಹೆಚ್ಚಿತು.</p>.<p>ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ತಡೆಗಟ್ಟಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 24X7 ಮೇಲ್ವಿಚಾರಣಾ ಕೊಠಡಿ ಆರಂಭಿಸಲಾಗುವುದು ಎಂಬುದು ನೂತನ ಭರವಸೆ.</p>.<p>10 ಲಕ್ಷ ನಿರುದ್ಯೋಗಿಗಳಿಗೆ ದ್ವಿಚಕ್ರ ವಾಹನ ಖರೀದಿಸಲು ₹10 ಸಾವಿರ ಸಹಾಯಧನ, ಮಾವಿಗೆ ಕನಿಷ್ಠ ಬೆಂಬಲ ಬೆಲೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ಆರಂಭಿಸಲು ಬಯಸುವ ಯುವಕರಿಗೆ 30 ದಿನಗಳಲ್ಲಿ ಪರವಾನಗಿ ನೀಡಲಿಕ್ಕಾಗಿ ಏಕಗವಾಕ್ಷಿ ಯೋಜನೆ ಸೇರ್ಪಡೆಯಾಗಿವೆ.</p>.<p>ತಾಳೆ ಮರಗಳಿಂದ ಹಾಗೂ ಕಟ್ಟಡಗಳಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಕ್ರಮವಾಗಿ ₹20 ಲಕ್ಷ, ₹25 ಲಕ್ಷ ಪರಿಹಾರ ನೀಡಲಾಗುವುದು ಎಂದು ಎಐಎಡಿಎಂಕೆ ಭರವಸೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>