<p><strong>ಚೆನ್ನೈ:</strong> ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಹೀನಾಯ ಸೋಲು ಅನುಭವಿಸಿರುವ ಎಐಎಡಿಎಂಕೆಯಲ್ಲಿ ಈಗ ಬಂಡಾಯದ ಕಿಚ್ಚು ಹೊತ್ತಿಕೊಂಡಿದೆ. ಪಕ್ಷದ ಈ ದುಸ್ಥಿತಿಗೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರೇ ಕಾರಣ ಎಂದು ಹಿರಿಯ ನಾಯಕರು ಮತ್ತು ಮಾಜಿ ಸಚಿವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ.</p><p>ಎಐಎಡಿಎಂಕೆ ಪ್ರಭಾವಿ ನಾಯಕ ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದ ಬಣವು ಪಳನಿಸ್ವಾಮಿ ಅವರನ್ನು ಮೂಲೆಗುಂಪು ಮಾಡಲು ತಂತ್ರ ರೂಪಿಸಿದೆ. ಬಹುತೇಕ ಶಾಸಕರ ಬೆಂಬಲ ಈ ಬಣಕ್ಕಿದೆ ಎಂದು ಹೇಳಲಾಗುತ್ತಿದ್ದು, ಇವರೆಲ್ಲರೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.</p><p><strong>ಪಳನಿಸ್ವಾಮಿ ವಿರುದ್ಧ ಕೇಳಿಬಂದ ಗಂಭೀರ ಆರೋಪ</strong></p><p>ಪಳನಿಸ್ವಾಮಿ ಅವರು ಪಕ್ಷದ ಮೂಲ ಸಿದ್ಧಾಂತಕ್ಕೆ ದ್ರೋಹ ಬಗೆದಿದ್ದಾರೆ ಎಂದು ಬಂಡಾಯ ಬಣ ಆರೋಪಿಸಿದೆ. ಮಂಗಳವಾರ ಮಾತನಾಡಿದ ಷಣ್ಮುಗಂ, ‘ಶತ್ರು ಪಕ್ಷ ಡಿಎಂಕೆ ಬೆಂಬಲದೊಂದಿಗೆ ತಾವು ಮುಖ್ಯಮಂತ್ರಿಯಾಗುವುದಾಗಿ ಪಳನಿಸ್ವಾಮಿ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದು ನಮಗೆ ಆಘಾತ ತಂದಿದೆ’ ಎಂದಿದ್ದಾರೆ. ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ, ಡಿಎಂಕೆ ಜೊತೆ ಸೇರಿ ಸರ್ಕಾರ ರಚಿಸಲು ಪಳನಿಸ್ವಾಮಿ ಬಣವು ಈ ಹಿಂದೆ ಮಾತುಕತೆ ನಡೆಸಿತ್ತು ಎಂಬ ವರದಿಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.</p><p>ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಡಿಎಂಕೆ 59 ಮತ್ತು ಎಐಎಡಿಎಂಕೆ 47 ಸ್ಥಾನಗಳನ್ನು ಪಡೆದಿತ್ತು.</p><p>ಸದ್ಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಎಸ್.ಪಿ. ವೇಲುಮಣಿ ಅವರು, ‘ಪಕ್ಷವು ಅಪ್ರಸ್ತುತವಾಗುವುದನ್ನು ತಡೆಯಲು ಮತ್ತು ಮತ್ತೊಂದು ಒಡಕನ್ನು ತಪ್ಪಿಸಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಸಮರ್ಥಿಸಿಕೊಂಡಿದ್ದಾರೆ. </p><p>ಎಂ.ಜಿ. ರಾಮಚಂದ್ರನ್ ಅವರ ನಿಧನದ ನಂತರ ಜಾನಕಿ ರಾಮಚಂದ್ರನ್ ಮತ್ತು ಜಯಲಲಿತಾ ಬಣಗಳ ನಡುವಿನ ಸಂಘರ್ಷದಿಂದ ಹಿಡಿದು, ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ನಡುವಿನ ಅಧಿಕಾರ ಸಮರದವರೆಗೆ ಈ ಪಕ್ಷವು ಸುದೀರ್ಘವಾದ ಒಡಕು ಮತ್ತು ವಿಲೀನದ ಇತಿಹಾಸವನ್ನು ಹೊಂದಿದೆ. ಈಗ ವಿಜಯ್ ಅವರ ರಾಜಕೀಯ ಪ್ರವೇಶದ ನಂತರ ಎಐಎಡಿಎಂಕೆ ಅಸ್ತಿತ್ವಕ್ಕೇ ಧಕ್ಕೆ ಬಂದಿರುವುದು ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಹೀನಾಯ ಸೋಲು ಅನುಭವಿಸಿರುವ ಎಐಎಡಿಎಂಕೆಯಲ್ಲಿ ಈಗ ಬಂಡಾಯದ ಕಿಚ್ಚು ಹೊತ್ತಿಕೊಂಡಿದೆ. ಪಕ್ಷದ ಈ ದುಸ್ಥಿತಿಗೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರೇ ಕಾರಣ ಎಂದು ಹಿರಿಯ ನಾಯಕರು ಮತ್ತು ಮಾಜಿ ಸಚಿವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ.</p><p>ಎಐಎಡಿಎಂಕೆ ಪ್ರಭಾವಿ ನಾಯಕ ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದ ಬಣವು ಪಳನಿಸ್ವಾಮಿ ಅವರನ್ನು ಮೂಲೆಗುಂಪು ಮಾಡಲು ತಂತ್ರ ರೂಪಿಸಿದೆ. ಬಹುತೇಕ ಶಾಸಕರ ಬೆಂಬಲ ಈ ಬಣಕ್ಕಿದೆ ಎಂದು ಹೇಳಲಾಗುತ್ತಿದ್ದು, ಇವರೆಲ್ಲರೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.</p><p><strong>ಪಳನಿಸ್ವಾಮಿ ವಿರುದ್ಧ ಕೇಳಿಬಂದ ಗಂಭೀರ ಆರೋಪ</strong></p><p>ಪಳನಿಸ್ವಾಮಿ ಅವರು ಪಕ್ಷದ ಮೂಲ ಸಿದ್ಧಾಂತಕ್ಕೆ ದ್ರೋಹ ಬಗೆದಿದ್ದಾರೆ ಎಂದು ಬಂಡಾಯ ಬಣ ಆರೋಪಿಸಿದೆ. ಮಂಗಳವಾರ ಮಾತನಾಡಿದ ಷಣ್ಮುಗಂ, ‘ಶತ್ರು ಪಕ್ಷ ಡಿಎಂಕೆ ಬೆಂಬಲದೊಂದಿಗೆ ತಾವು ಮುಖ್ಯಮಂತ್ರಿಯಾಗುವುದಾಗಿ ಪಳನಿಸ್ವಾಮಿ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದು ನಮಗೆ ಆಘಾತ ತಂದಿದೆ’ ಎಂದಿದ್ದಾರೆ. ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ, ಡಿಎಂಕೆ ಜೊತೆ ಸೇರಿ ಸರ್ಕಾರ ರಚಿಸಲು ಪಳನಿಸ್ವಾಮಿ ಬಣವು ಈ ಹಿಂದೆ ಮಾತುಕತೆ ನಡೆಸಿತ್ತು ಎಂಬ ವರದಿಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.</p><p>ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಡಿಎಂಕೆ 59 ಮತ್ತು ಎಐಎಡಿಎಂಕೆ 47 ಸ್ಥಾನಗಳನ್ನು ಪಡೆದಿತ್ತು.</p><p>ಸದ್ಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಎಸ್.ಪಿ. ವೇಲುಮಣಿ ಅವರು, ‘ಪಕ್ಷವು ಅಪ್ರಸ್ತುತವಾಗುವುದನ್ನು ತಡೆಯಲು ಮತ್ತು ಮತ್ತೊಂದು ಒಡಕನ್ನು ತಪ್ಪಿಸಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಸಮರ್ಥಿಸಿಕೊಂಡಿದ್ದಾರೆ. </p><p>ಎಂ.ಜಿ. ರಾಮಚಂದ್ರನ್ ಅವರ ನಿಧನದ ನಂತರ ಜಾನಕಿ ರಾಮಚಂದ್ರನ್ ಮತ್ತು ಜಯಲಲಿತಾ ಬಣಗಳ ನಡುವಿನ ಸಂಘರ್ಷದಿಂದ ಹಿಡಿದು, ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ನಡುವಿನ ಅಧಿಕಾರ ಸಮರದವರೆಗೆ ಈ ಪಕ್ಷವು ಸುದೀರ್ಘವಾದ ಒಡಕು ಮತ್ತು ವಿಲೀನದ ಇತಿಹಾಸವನ್ನು ಹೊಂದಿದೆ. ಈಗ ವಿಜಯ್ ಅವರ ರಾಜಕೀಯ ಪ್ರವೇಶದ ನಂತರ ಎಐಎಡಿಎಂಕೆ ಅಸ್ತಿತ್ವಕ್ಕೇ ಧಕ್ಕೆ ಬಂದಿರುವುದು ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>