<p><strong>ಲಖನೌ</strong>: ದೇಶದ ಸಮಸ್ಯೆಗಳಿಗೆ ಇರಾನ್-ಇಸ್ರೇಲ್ ಸಂಘರ್ಷ ಕಾರಣ ಎಂಬುದಾಗಿ ಬಿಜೆಪಿ ದೂಷಿಸುತ್ತಿದೆ, ಆದರೆ ಇದು ಬಿಜೆಪಿ ಸರ್ಕಾರದ ವೈಫಲ್ಯವೇ ಹೊರತು ಯುದ್ಧದ ಪರಿಣಾಮವಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ ಆರೋಪಿಸಿದ್ದಾರೆ.</p><p>ಕಾನ್ಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಪರಿಣಾಮದ ಕುರಿತು ಪ್ರತಿಕ್ರಿಯಿಸಿದ ಅವರು, ಕೈಗಾರಿಕೆಗಳ ಸ್ಥಿತಿಗೆ ಬಿಜೆಪಿ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದಿದ್ದಾರೆ.</p><p>ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿಯೇ ಗಂಗಾ ನದಿಯನ್ನು ಶುದ್ಧೀಕರಿಸಲಾಗುತ್ತಿಲ್ಲವೇ?, ರೈತರ ಸಮಸ್ಯೆಗಳನ್ನು ಬೇರೆಡೆ ಸೆಳೆಯಲು ಸಂಬಂಧವಿಲ್ಲದ ವಿಷಯಗಳನ್ನು ಎಳೆದು ತರುತ್ತಿದೆ ಎಂದು ಬಿಜೆಪಿ ವಿರುದ್ಧ ಯಾದವ್ ವ್ಯಂಗ್ಯವಾಡಿದ್ದಾರೆ.</p>.ಮಗನ ಜೊತೆಗಿನ ಮೊದಲ ಫೋಟೊ ಹಂಚಿಕೊಂಡ ನಟಿ ಸೋನಮ್ ಕಪೂರ್.ವಿಜಯ್ ರಾಜಕೀಯ ಪ್ರವೇಶಕ್ಕೆ ವ್ಯಂಗ್ಯ? ಗೊಂದಲ ಸೃಷ್ಟಿಸಿದ ‘ಟಿಎನ್ 2026’ ಟೀಸರ್. <p>ರಸಗೊಬ್ಬರ ಕೊರತೆಯನ್ನು ಉಲ್ಲೇಖಿಸಿದ ಅವರು, ರಸಗೊಬ್ಬರಗಳು ಮೊದಲೇ ಲಭ್ಯವಿರಲಿಲ್ಲ. ಆದರೆ ಈಗ ಇರಾನ್-ಇಸ್ರೇಲ್ ಸಂಘರ್ಷಕ್ಕೆದಿಂದ ಕೊರತೆ ಉಂಟಾಗಿದೆ ಎನ್ನಲಾಗಿದೆ ಎಂದು ದೂರಿದ್ದಾರೆ.</p><p>ಮತದಾನ ಪದ್ಧತಿ ಕುರಿತು ಪ್ರತಿಕ್ರಿಯಿಸಿರುವ ಅವರು, ಜರ್ಮನಿಯಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಬಳಕೆಯನ್ನು ಸಂವಿಧಾನಬಾಹಿರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಇವಿಎಂಗಳು ಮತ್ತು ವಿವಿಪಿಎಟಿ ವ್ಯವಸ್ಥೆಗಳ ಮೇಲಿನ ನಿರಂತರ ಅವಲಂಬನೆಯನ್ನು ಪ್ರಶ್ನಿಸಿದರು.</p><p>ಬ್ಯಾಲೆಟ್ ಮತದಾನಕ್ಕೆ ಮರಳುವ ಪರವಾಗಿ ತಮ್ಮ ಪಕ್ಷದ ನಿಲುವನ್ನು ಯಾದವ್ ಪುನರುಚ್ಚರಿಸಿದರು.</p>.ಅಸ್ಸಾಂನಲ್ಲಿ BJPಗೆ ಅವಕಾಶ ಕೊಡಿ, ಬುಡಕಟ್ಟು ಕಲ್ಯಾಣಕ್ಕೆ ಒತ್ತು ನೀಡುತ್ತೇವೆ: ಶಾ.ಭಾಲ್ಕಿ: ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಪೊಲೀಸ್ ಕಾನ್ಸ್ಟೆಬಲ್ ಕಾರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ದೇಶದ ಸಮಸ್ಯೆಗಳಿಗೆ ಇರಾನ್-ಇಸ್ರೇಲ್ ಸಂಘರ್ಷ ಕಾರಣ ಎಂಬುದಾಗಿ ಬಿಜೆಪಿ ದೂಷಿಸುತ್ತಿದೆ, ಆದರೆ ಇದು ಬಿಜೆಪಿ ಸರ್ಕಾರದ ವೈಫಲ್ಯವೇ ಹೊರತು ಯುದ್ಧದ ಪರಿಣಾಮವಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ ಆರೋಪಿಸಿದ್ದಾರೆ.</p><p>ಕಾನ್ಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಪರಿಣಾಮದ ಕುರಿತು ಪ್ರತಿಕ್ರಿಯಿಸಿದ ಅವರು, ಕೈಗಾರಿಕೆಗಳ ಸ್ಥಿತಿಗೆ ಬಿಜೆಪಿ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದಿದ್ದಾರೆ.</p><p>ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿಯೇ ಗಂಗಾ ನದಿಯನ್ನು ಶುದ್ಧೀಕರಿಸಲಾಗುತ್ತಿಲ್ಲವೇ?, ರೈತರ ಸಮಸ್ಯೆಗಳನ್ನು ಬೇರೆಡೆ ಸೆಳೆಯಲು ಸಂಬಂಧವಿಲ್ಲದ ವಿಷಯಗಳನ್ನು ಎಳೆದು ತರುತ್ತಿದೆ ಎಂದು ಬಿಜೆಪಿ ವಿರುದ್ಧ ಯಾದವ್ ವ್ಯಂಗ್ಯವಾಡಿದ್ದಾರೆ.</p>.ಮಗನ ಜೊತೆಗಿನ ಮೊದಲ ಫೋಟೊ ಹಂಚಿಕೊಂಡ ನಟಿ ಸೋನಮ್ ಕಪೂರ್.ವಿಜಯ್ ರಾಜಕೀಯ ಪ್ರವೇಶಕ್ಕೆ ವ್ಯಂಗ್ಯ? ಗೊಂದಲ ಸೃಷ್ಟಿಸಿದ ‘ಟಿಎನ್ 2026’ ಟೀಸರ್. <p>ರಸಗೊಬ್ಬರ ಕೊರತೆಯನ್ನು ಉಲ್ಲೇಖಿಸಿದ ಅವರು, ರಸಗೊಬ್ಬರಗಳು ಮೊದಲೇ ಲಭ್ಯವಿರಲಿಲ್ಲ. ಆದರೆ ಈಗ ಇರಾನ್-ಇಸ್ರೇಲ್ ಸಂಘರ್ಷಕ್ಕೆದಿಂದ ಕೊರತೆ ಉಂಟಾಗಿದೆ ಎನ್ನಲಾಗಿದೆ ಎಂದು ದೂರಿದ್ದಾರೆ.</p><p>ಮತದಾನ ಪದ್ಧತಿ ಕುರಿತು ಪ್ರತಿಕ್ರಿಯಿಸಿರುವ ಅವರು, ಜರ್ಮನಿಯಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಬಳಕೆಯನ್ನು ಸಂವಿಧಾನಬಾಹಿರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಇವಿಎಂಗಳು ಮತ್ತು ವಿವಿಪಿಎಟಿ ವ್ಯವಸ್ಥೆಗಳ ಮೇಲಿನ ನಿರಂತರ ಅವಲಂಬನೆಯನ್ನು ಪ್ರಶ್ನಿಸಿದರು.</p><p>ಬ್ಯಾಲೆಟ್ ಮತದಾನಕ್ಕೆ ಮರಳುವ ಪರವಾಗಿ ತಮ್ಮ ಪಕ್ಷದ ನಿಲುವನ್ನು ಯಾದವ್ ಪುನರುಚ್ಚರಿಸಿದರು.</p>.ಅಸ್ಸಾಂನಲ್ಲಿ BJPಗೆ ಅವಕಾಶ ಕೊಡಿ, ಬುಡಕಟ್ಟು ಕಲ್ಯಾಣಕ್ಕೆ ಒತ್ತು ನೀಡುತ್ತೇವೆ: ಶಾ.ಭಾಲ್ಕಿ: ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಪೊಲೀಸ್ ಕಾನ್ಸ್ಟೆಬಲ್ ಕಾರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>