<p><strong>ಜಮ್ಮು:</strong> ಪ್ರಸಿದ್ಧ ಅಮರನಾಥ ಯಾತ್ರೆಗೆ ಅಂತಿಮ ಹಂತದ ತಯಾರಿ ನಡೆದಿದ್ದು, ಸೋಮವಾರದಿಂದ ಯಾತ್ರಾರ್ಥಿಗಳ ನೇರ ನೋಂದಣಿಗಾಗಿ ಜಮ್ಮುವಿನ ಸರಸ್ವತಿ ಧಾಮ್ನಲ್ಲಿ ಟೋಕನ್ ವಿತರಣೆ ಆರಂಭಗೊಂಡಿದೆ.</p>.<p>ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಾವಲು ವಾಹನಗಳು ಸುರಕ್ಷತೆ ಮತ್ತು ಸುಗಮ ಸಂಚಾರದ ಪೂರ್ವ ತಾಲೀಮು ನಡೆಸಿದ ನಂತರ ಯಾತ್ರಾರ್ಥಿಗಳ ನೋಂದಣಿಗೆ ಟೋಕನ್ ಕೇಂದ್ರ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>3,880 ಮೀಟರ್ ಎತ್ತರದ ಗುಹಾ ದೇವಾಲಯ ಅಮರನಾಥ ಕ್ಷೇತ್ರಕ್ಕೆ ಜುಲೈ 3ರಿಂದ 38 ದಿನಗಳ ಯಾತ್ರೆ ಆರಂಭವಾಗಲಿದೆ. ಅನಂತನಾಗ್ ಜಿಲ್ಲೆಯ ನುನ್ವಾನ್–ಪಹಲ್ಗಾಮ್ ನಡುವಿನ 48 ಕಿಲೋ ಮೀಟರ್ ಮಾರ್ಗ ಮತ್ತು ಗಂದೇರ್ಬಾಲ್ ಜಿಲ್ಲೆಯ 18 ಕಿ.ಮೀ ದೂರದ ಬಲ್ತಾಲ್ ಈ ಎರಡು ಮಾರ್ಗಗಳಲ್ಲಿ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ.</p>.<p>ಮಳೆಯ ನಡುವೆಯೂ ಭಕ್ತರಲ್ಲಿ ಉತ್ಸಾಹ ಮನೆ ಮಾಡಿದೆ. ಜುಲೈ 2ರಂದೇ ಯಾತ್ರಾರ್ಥಿಗಳ ಮೊದಲ ತಂಡ ಕಾಶ್ಮೀರದಿಂದ ಜಮ್ಮು ಭಾಗದ ಭಾಗ್ವತಿ ನಗರ ಸೇನಾ ಶಿಬಿರಕ್ಕೆ ತೆರಳಲಿದೆ. </p>.<p>ಟೋಕನ್ ಪಡೆದವರು ಮಂಗಳವಾರ ವೈಷ್ಣೋದೇವಿ ಧಾಮ, ಪಂಚಾಯತ್ ಭವನ್ ಮತ್ತು ಮಹಾಜನ್ ಸಭಾ ಈ ಮೂರು ಕೇಂದ್ರಗಳಲ್ಲಿ ನೇರ ನೋಂದಣಿ ಮಾಡಿಸಿ ಯಾತ್ರೆ ಆರಂಭಿಸಬಹುದು. ದಿನಕ್ಕೆ ಕನಿಷ್ಠ 2,000 ಯಾತ್ರಾರ್ಥಿಗಳ ನೋಂದಣಿಗೆ ಅವಕಾಶ ಇರಲಿದೆ ಎಂದು ದಕ್ಷಿಣ ಜಮ್ಮು ಉಪ ವಿಭಾಗ ದಂಡಾಧಿಕಾರಿ ಮನು ಹನ್ಸಾ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು:</strong> ಪ್ರಸಿದ್ಧ ಅಮರನಾಥ ಯಾತ್ರೆಗೆ ಅಂತಿಮ ಹಂತದ ತಯಾರಿ ನಡೆದಿದ್ದು, ಸೋಮವಾರದಿಂದ ಯಾತ್ರಾರ್ಥಿಗಳ ನೇರ ನೋಂದಣಿಗಾಗಿ ಜಮ್ಮುವಿನ ಸರಸ್ವತಿ ಧಾಮ್ನಲ್ಲಿ ಟೋಕನ್ ವಿತರಣೆ ಆರಂಭಗೊಂಡಿದೆ.</p>.<p>ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಾವಲು ವಾಹನಗಳು ಸುರಕ್ಷತೆ ಮತ್ತು ಸುಗಮ ಸಂಚಾರದ ಪೂರ್ವ ತಾಲೀಮು ನಡೆಸಿದ ನಂತರ ಯಾತ್ರಾರ್ಥಿಗಳ ನೋಂದಣಿಗೆ ಟೋಕನ್ ಕೇಂದ್ರ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>3,880 ಮೀಟರ್ ಎತ್ತರದ ಗುಹಾ ದೇವಾಲಯ ಅಮರನಾಥ ಕ್ಷೇತ್ರಕ್ಕೆ ಜುಲೈ 3ರಿಂದ 38 ದಿನಗಳ ಯಾತ್ರೆ ಆರಂಭವಾಗಲಿದೆ. ಅನಂತನಾಗ್ ಜಿಲ್ಲೆಯ ನುನ್ವಾನ್–ಪಹಲ್ಗಾಮ್ ನಡುವಿನ 48 ಕಿಲೋ ಮೀಟರ್ ಮಾರ್ಗ ಮತ್ತು ಗಂದೇರ್ಬಾಲ್ ಜಿಲ್ಲೆಯ 18 ಕಿ.ಮೀ ದೂರದ ಬಲ್ತಾಲ್ ಈ ಎರಡು ಮಾರ್ಗಗಳಲ್ಲಿ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ.</p>.<p>ಮಳೆಯ ನಡುವೆಯೂ ಭಕ್ತರಲ್ಲಿ ಉತ್ಸಾಹ ಮನೆ ಮಾಡಿದೆ. ಜುಲೈ 2ರಂದೇ ಯಾತ್ರಾರ್ಥಿಗಳ ಮೊದಲ ತಂಡ ಕಾಶ್ಮೀರದಿಂದ ಜಮ್ಮು ಭಾಗದ ಭಾಗ್ವತಿ ನಗರ ಸೇನಾ ಶಿಬಿರಕ್ಕೆ ತೆರಳಲಿದೆ. </p>.<p>ಟೋಕನ್ ಪಡೆದವರು ಮಂಗಳವಾರ ವೈಷ್ಣೋದೇವಿ ಧಾಮ, ಪಂಚಾಯತ್ ಭವನ್ ಮತ್ತು ಮಹಾಜನ್ ಸಭಾ ಈ ಮೂರು ಕೇಂದ್ರಗಳಲ್ಲಿ ನೇರ ನೋಂದಣಿ ಮಾಡಿಸಿ ಯಾತ್ರೆ ಆರಂಭಿಸಬಹುದು. ದಿನಕ್ಕೆ ಕನಿಷ್ಠ 2,000 ಯಾತ್ರಾರ್ಥಿಗಳ ನೋಂದಣಿಗೆ ಅವಕಾಶ ಇರಲಿದೆ ಎಂದು ದಕ್ಷಿಣ ಜಮ್ಮು ಉಪ ವಿಭಾಗ ದಂಡಾಧಿಕಾರಿ ಮನು ಹನ್ಸಾ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>