<p><strong>ಕೋಲ್ಕತ್ತ:</strong> ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಪರ ಪ್ರಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀವ್ರಗೊಳಿಸಿದ್ದು, ಟಿಎಂಸಿ ಸರ್ಕಾರದ ವಿರುದ್ಧ ಶನಿವಾರ ಚಾರ್ಜ್ಶೀಟ್ ಬಿಡುಗಡೆ ಮಾಡಿದ್ದಾರೆ.</p>.ಟಿಎಂಸಿ ಪ್ರಣಾಳಿಕೆ: 10 ಭರವಸೆ ಜೊತೆಗೆ ಮಹಿಳೆಯರ ಮಾಸಿಕ ನೆರವು ₹500ಕ್ಕೆ ಹೆಚ್ಚಳ.<p>ಕೋಲ್ಕತ್ತದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಎಂಸಿಯ 15 ವರ್ಷಗಳ ಆಡಳಿತದಿಂದಾಗಿ ರಾಜ್ಯವು, ಒಳನುಸುಳಿವಿಕೆ, ತುಷ್ಠೀಕರಣ ರಾಜಕಾರಣ ಹಾಗೂ ಗಡಿ ಅಭದ್ರತೆಯ ಪ್ರಮುಖ ಕಾರಿಡರ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.</p><p>‘ಬಂಗಾಳ ಚುನಾವಣೆಯೂ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮುಖ್ಯವಾದುದು. ದೇಶದ ಭದ್ರತೆಗೂ ಬಂಗಾಳ ಚುನಾವಣೆಗೂ ನಂಟಿದೆ’ ಎಂದು ಹೇಳಿದ್ದಾರೆ.</p><p>ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಸ್ಸಾಂನಲ್ಲಿ ಒಳನುಸುಳುವಿಕೆ ಅಂತ್ಯವಾಗಿದೆ. ಇದೀಗ ಒಳನುಸುಳಲು ಇರುವ ಏಕೈಕ ಮಾರ್ಗ ಪಶ್ಚಿಮ ಬಂಗಾಳ ಮಾತ್ರ ಎಂದು ಶಾ ಹೇಳಿದ್ದಾರೆ.</p>.ಪ.ಬಂಗಾಳ ಚುನಾವಣೆ: DGP ಪಾಂಡೆ, ಕೋಲ್ಕತ್ತ ಪೊಲೀಸ್ ಆಯುಕ್ತರ ತೆರವುಗೊಳಿಸಿದ EC.<p>ಕೇಂದ್ರ ಸರ್ಕಾರ ಪದೇ ಪದೇ ಮನವಿ ಮಾಡಿಕೊಂಡರೂ, ಗಡಿ ಬೇಲಿ ಹಾಕಲು ಮಮತಾ ಬ್ಯಾನರ್ಜಿ ಸರ್ಕಾರ ಭೂಮಿ ನೀಡಿಲ್ಲ ಎಂದು ಆರೋಪಿಸಿದ ಶಾ, ಅವರ ನಡೆ ರಾಜಕೀಯ ಪ್ರೇರಿತವಾಗಿತ್ತು ಎಂದಿದ್ದಾರೆ.</p><p>ಒಳನುಸುಳುಕೋರರ ಮತ ಬ್ಯಾಂಕ್ ಸೃಷ್ಠಿ ಮಾಡಲು ಮಮತಾ ಭೂಮಿ ನೀಡಲಿಲ್ಲ ಎಂದು ಶಾ ದೂರಿದ್ದಾರೆ.</p> .<h2>ಶಾ ಹೇಳಿದ್ದು...</h2><p>l ಟಿಎಂಸಿ ಸರ್ಕಾರದ ಓಲೈಕೆ ರಾಜಕಾರಣ, ಭ್ರಷ್ಟಾಚಾರ ಮತ್ತು ರಾಜಕೀಯ ಹಿಂಸೆಯ ಕಾರಣದಿಂದ ಒಳನುಸುಳುಕೋರರಿಗೆ ಪಶ್ಚಿಮ ಬಂಗಾಳವು ದೇಶದ ಪ್ರಮುಖ ಕಾರಿಡಾರ್ ಆಗಿದೆ</p><p>l ಮಮತಾ ಅವರು ಯಾವಾಗಲೂ ತಾನು ಸಂತ್ರಸ್ತರು ಎಂದೇ ಗುರುತಿಸಿಕೊಳ್ಳುತ್ತಾರೆ. ಒಮ್ಮೆ ಗಾಯವಾಯಿತು ಎನ್ನುತ್ತಾರೆ. ಮತ್ತೊಮ್ಮೆ ಚುನಾವಣಾ ಆಯೋಗವನ್ನು ದೂರುತ್ತಾರೆ</p><p>l ಎಸ್ಐಆರ್ ಪ್ರಕ್ರಿಯೆಯು ದೇಶದ ಇತರೆ ರಾಜ್ಯಗಳಲ್ಲಿಯೂ ನಡೆದಿದೆ. ಆದರೆ, ಇಲ್ಲಿ ಮಾತ್ರವೇ ದೊಡ್ಡ ವಿವಾದ ಸೃಷ್ಟಿಸಲಾಗಿದೆ. ಯಾಕೆಂದರೆ, ಮಮತಾ ಅವರಿಗೆ ತಮ್ಮ ಮತ ಬ್ಯಾಂಕ್ ಅನ್ನು ಉಳಿಸಿಕೊಳ್ಳಬೇಕಾಗಿದೆ</p><p>* ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕ ಬಂದ ಮೇಲೆ ಒಳನುಸುಳುವಿಕೆಯು ಕೊನೆಗಾಣುತ್ತಿದೆ. ಆದ್ದರಿಂದ ಒಳನುಸುಳುಕೋರರಿಗೆ ಭಾರತದ ಪ್ರವೇಶಿಸುವ ಪಶ್ಚಿಮ ಬಂಗಾಳದ ಒಂದೇ ಕೊನೆಯ ಆಸರೆಯಾಗಿ ಉಳಿದುಕೊಂಡಿದೆ</p>.ಪಶ್ಚಿಮ ಬಂಗಾಳ: ಮತದಾರರ ಪಟ್ಟಿಯಲ್ಲಿಲ್ಲ ನಿವೃತ್ತ ನ್ಯಾಯಾಧೀಶ ಹೆಸರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಪರ ಪ್ರಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀವ್ರಗೊಳಿಸಿದ್ದು, ಟಿಎಂಸಿ ಸರ್ಕಾರದ ವಿರುದ್ಧ ಶನಿವಾರ ಚಾರ್ಜ್ಶೀಟ್ ಬಿಡುಗಡೆ ಮಾಡಿದ್ದಾರೆ.</p>.ಟಿಎಂಸಿ ಪ್ರಣಾಳಿಕೆ: 10 ಭರವಸೆ ಜೊತೆಗೆ ಮಹಿಳೆಯರ ಮಾಸಿಕ ನೆರವು ₹500ಕ್ಕೆ ಹೆಚ್ಚಳ.<p>ಕೋಲ್ಕತ್ತದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಎಂಸಿಯ 15 ವರ್ಷಗಳ ಆಡಳಿತದಿಂದಾಗಿ ರಾಜ್ಯವು, ಒಳನುಸುಳಿವಿಕೆ, ತುಷ್ಠೀಕರಣ ರಾಜಕಾರಣ ಹಾಗೂ ಗಡಿ ಅಭದ್ರತೆಯ ಪ್ರಮುಖ ಕಾರಿಡರ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.</p><p>‘ಬಂಗಾಳ ಚುನಾವಣೆಯೂ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮುಖ್ಯವಾದುದು. ದೇಶದ ಭದ್ರತೆಗೂ ಬಂಗಾಳ ಚುನಾವಣೆಗೂ ನಂಟಿದೆ’ ಎಂದು ಹೇಳಿದ್ದಾರೆ.</p><p>ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಸ್ಸಾಂನಲ್ಲಿ ಒಳನುಸುಳುವಿಕೆ ಅಂತ್ಯವಾಗಿದೆ. ಇದೀಗ ಒಳನುಸುಳಲು ಇರುವ ಏಕೈಕ ಮಾರ್ಗ ಪಶ್ಚಿಮ ಬಂಗಾಳ ಮಾತ್ರ ಎಂದು ಶಾ ಹೇಳಿದ್ದಾರೆ.</p>.ಪ.ಬಂಗಾಳ ಚುನಾವಣೆ: DGP ಪಾಂಡೆ, ಕೋಲ್ಕತ್ತ ಪೊಲೀಸ್ ಆಯುಕ್ತರ ತೆರವುಗೊಳಿಸಿದ EC.<p>ಕೇಂದ್ರ ಸರ್ಕಾರ ಪದೇ ಪದೇ ಮನವಿ ಮಾಡಿಕೊಂಡರೂ, ಗಡಿ ಬೇಲಿ ಹಾಕಲು ಮಮತಾ ಬ್ಯಾನರ್ಜಿ ಸರ್ಕಾರ ಭೂಮಿ ನೀಡಿಲ್ಲ ಎಂದು ಆರೋಪಿಸಿದ ಶಾ, ಅವರ ನಡೆ ರಾಜಕೀಯ ಪ್ರೇರಿತವಾಗಿತ್ತು ಎಂದಿದ್ದಾರೆ.</p><p>ಒಳನುಸುಳುಕೋರರ ಮತ ಬ್ಯಾಂಕ್ ಸೃಷ್ಠಿ ಮಾಡಲು ಮಮತಾ ಭೂಮಿ ನೀಡಲಿಲ್ಲ ಎಂದು ಶಾ ದೂರಿದ್ದಾರೆ.</p> .<h2>ಶಾ ಹೇಳಿದ್ದು...</h2><p>l ಟಿಎಂಸಿ ಸರ್ಕಾರದ ಓಲೈಕೆ ರಾಜಕಾರಣ, ಭ್ರಷ್ಟಾಚಾರ ಮತ್ತು ರಾಜಕೀಯ ಹಿಂಸೆಯ ಕಾರಣದಿಂದ ಒಳನುಸುಳುಕೋರರಿಗೆ ಪಶ್ಚಿಮ ಬಂಗಾಳವು ದೇಶದ ಪ್ರಮುಖ ಕಾರಿಡಾರ್ ಆಗಿದೆ</p><p>l ಮಮತಾ ಅವರು ಯಾವಾಗಲೂ ತಾನು ಸಂತ್ರಸ್ತರು ಎಂದೇ ಗುರುತಿಸಿಕೊಳ್ಳುತ್ತಾರೆ. ಒಮ್ಮೆ ಗಾಯವಾಯಿತು ಎನ್ನುತ್ತಾರೆ. ಮತ್ತೊಮ್ಮೆ ಚುನಾವಣಾ ಆಯೋಗವನ್ನು ದೂರುತ್ತಾರೆ</p><p>l ಎಸ್ಐಆರ್ ಪ್ರಕ್ರಿಯೆಯು ದೇಶದ ಇತರೆ ರಾಜ್ಯಗಳಲ್ಲಿಯೂ ನಡೆದಿದೆ. ಆದರೆ, ಇಲ್ಲಿ ಮಾತ್ರವೇ ದೊಡ್ಡ ವಿವಾದ ಸೃಷ್ಟಿಸಲಾಗಿದೆ. ಯಾಕೆಂದರೆ, ಮಮತಾ ಅವರಿಗೆ ತಮ್ಮ ಮತ ಬ್ಯಾಂಕ್ ಅನ್ನು ಉಳಿಸಿಕೊಳ್ಳಬೇಕಾಗಿದೆ</p><p>* ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕ ಬಂದ ಮೇಲೆ ಒಳನುಸುಳುವಿಕೆಯು ಕೊನೆಗಾಣುತ್ತಿದೆ. ಆದ್ದರಿಂದ ಒಳನುಸುಳುಕೋರರಿಗೆ ಭಾರತದ ಪ್ರವೇಶಿಸುವ ಪಶ್ಚಿಮ ಬಂಗಾಳದ ಒಂದೇ ಕೊನೆಯ ಆಸರೆಯಾಗಿ ಉಳಿದುಕೊಂಡಿದೆ</p>.ಪಶ್ಚಿಮ ಬಂಗಾಳ: ಮತದಾರರ ಪಟ್ಟಿಯಲ್ಲಿಲ್ಲ ನಿವೃತ್ತ ನ್ಯಾಯಾಧೀಶ ಹೆಸರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>