<p><strong>ಶ್ರೀವಿಜಯಪುರಂ</strong>: ಅಂಡಮಾನ್ ದ್ವೀಪಗಳ ಬಳಿ ಸಮುದ್ರ ಸೌತೆಗಳು ಹಾಗೂ ಇತರ ಅಪರೂಪದ ಕಡಲ ಜೀವಿಗಳನ್ನು ಕಳ್ಳಬೇಟೆಯಾಡುತ್ತಿದ್ದ ಮ್ಯಾನ್ಮಾರ್ನ 11 ಜನರನ್ನು ನಿಕೋಬಾರ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.</p><p>ಏಪ್ರಿಲ್ 4 ರಂದು ಅಕ್ರಮವಾಗಿ ಭಾರತದ ಕಡಲ ಪ್ರದೇಶ ಪ್ರವೇಶಿಸಿದ್ದ ಈ ಬೇಟೆಗಾರರ ಮಾಹಿತಿ ಪೊಲೀಸರಿಗೆ ದೊರಕಿತ್ತು. ಬಹಳ ದಿನಗಳಿಂದ ಪೊಲೀಸರು ಇವರನ್ನು ಹುಡುಕುತ್ತಿದ್ದರು.</p><p>ಇವರ ಪತ್ತೆಗೆ ‘ಆಪರೇಷನ್ ಸೀ ಸೆಂಟಿನಲ್’ ಆರಂಭಿಸಿದ ಅಂಡಮಾನ್ ಪೊಲೀಸರು, ನಾನ್ಕೌರಿ ರಿಮೋಟ್ ದ್ವೀಪಗಳ ಬಳಿ ತೀವ್ರ ಕಾರ್ಯಾಚರಣೆ ಆರಂಭಿಸಿದ್ದರು. ಇದಕ್ಕಾಗಿ ಸೇನಾ ಸಿಬ್ಬಂದಿಯ ಸಹಾಯವನ್ನು ಪೊಲೀಸರು ಪಡೆದಿದ್ದರು.</p><p>ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿದ ಕಳ್ಳಬೇಟೆಗಾರರು ಗುಂಡಿನ ಚಕಮಕಿ ನಡೆಸಿ ನಾನ್ಕೌರಿಯ ಕಾಕನಾ ದ್ವೀಪದ ದುರ್ಗಮ ಕಾಡನ್ನು ಪ್ರವೇಶಿಸಿದ್ದರು. ಇವರನ್ನು ಬೆನ್ನಟ್ಟಿದ ಪೊಲೀಸರು ಮೂರು ದಿನ ಹಗಲು ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಈ ರೋಚಕ ಕಾರ್ಯಾಚರಣೆ ಬಗ್ಗೆ ನಿಕೋಬಾರ್ ಎಸ್.ಪಿ ಹರಗೋವಿಂದರ್ ಸಿಂಗ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.</p><p>ಭಾರತದ ಕಡಲ ಪ್ರದೇಶದಲ್ಲಿ ಈ ಕಳ್ಳಬೇಟೆಗಾರರು ಹೆಕ್ಕಿ ತೆಗೆದಿದ್ದ 800 ಕೆ.ಜಿ ಸಮುದ್ರ ಸೌತೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.</p><p>ಸಮುದ್ರ ಸೌತೆಗಳು ಕಡಲ ಜೀವಿಗಳಾಗಿದ್ದು ಸೌತೆಕಾಯಿಗಳನ್ನು ಹೋಲುತ್ತವೆ. ಇವುಗಳಲ್ಲಿಯ ಔಷಧಿ ಗುಣ ಹಾಗೂ ಪ್ರೋಟಿನ್ಯುಕ್ತ ರುಚಿಯಿಂದ ಚೀನಾ, ಮ್ಯಾನ್ಮಾರ್ ಸೇರಿದಂತೆ ಮುಂತಾದ ಏಷ್ಯಾ ದೇಶಗಳಲ್ಲಿ ಬೇಡಿಕೆಯ ಖಾದ್ಯವಾಗಿದೆ.</p><p>ಹೀಗಾಗಿ ಇವುಗಳ ಕಳ್ಳಬೇಟೆಯೂ ವ್ಯಾಪಕವಾಗಿರುವುದರಿಂದ ಭಾರತವು, ಈ ಜೀವಿಗಳನ್ನು ಅಳಿವಿನಂಚಿನಲ್ಲಿರುವ ಕಡಲ ಜೀವಿಗಳು ಎಂದು ಘೋಷಿಸಿದೆ. ಸಮುದ್ರ ಸೌತೆಗಳು ಸಮುದ್ರವನ್ನು ಸ್ವಚ್ಛವಾಗಿಡಲು ಪ್ರಮುಖಪಾತ್ರವಹಿಸುತ್ತವೆ.</p>.'ಸಿಂಧೂರ'ಕ್ಕೆ ಬೆಚ್ಚಿದ ಬಳಿಕವೂ ಭಾರತದತ್ತ ಡ್ರೋನ್ ಹಾರಿಸುತ್ತಿರುವುದೇಕೆ ಪಾಕ್?.ಸಂಗತ: ಶಿಸ್ತಿನ ಇಲಾಖೆಗೆ ಹೃದಯವಂತಿಕೆಯೂ ಅಗತ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀವಿಜಯಪುರಂ</strong>: ಅಂಡಮಾನ್ ದ್ವೀಪಗಳ ಬಳಿ ಸಮುದ್ರ ಸೌತೆಗಳು ಹಾಗೂ ಇತರ ಅಪರೂಪದ ಕಡಲ ಜೀವಿಗಳನ್ನು ಕಳ್ಳಬೇಟೆಯಾಡುತ್ತಿದ್ದ ಮ್ಯಾನ್ಮಾರ್ನ 11 ಜನರನ್ನು ನಿಕೋಬಾರ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.</p><p>ಏಪ್ರಿಲ್ 4 ರಂದು ಅಕ್ರಮವಾಗಿ ಭಾರತದ ಕಡಲ ಪ್ರದೇಶ ಪ್ರವೇಶಿಸಿದ್ದ ಈ ಬೇಟೆಗಾರರ ಮಾಹಿತಿ ಪೊಲೀಸರಿಗೆ ದೊರಕಿತ್ತು. ಬಹಳ ದಿನಗಳಿಂದ ಪೊಲೀಸರು ಇವರನ್ನು ಹುಡುಕುತ್ತಿದ್ದರು.</p><p>ಇವರ ಪತ್ತೆಗೆ ‘ಆಪರೇಷನ್ ಸೀ ಸೆಂಟಿನಲ್’ ಆರಂಭಿಸಿದ ಅಂಡಮಾನ್ ಪೊಲೀಸರು, ನಾನ್ಕೌರಿ ರಿಮೋಟ್ ದ್ವೀಪಗಳ ಬಳಿ ತೀವ್ರ ಕಾರ್ಯಾಚರಣೆ ಆರಂಭಿಸಿದ್ದರು. ಇದಕ್ಕಾಗಿ ಸೇನಾ ಸಿಬ್ಬಂದಿಯ ಸಹಾಯವನ್ನು ಪೊಲೀಸರು ಪಡೆದಿದ್ದರು.</p><p>ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿದ ಕಳ್ಳಬೇಟೆಗಾರರು ಗುಂಡಿನ ಚಕಮಕಿ ನಡೆಸಿ ನಾನ್ಕೌರಿಯ ಕಾಕನಾ ದ್ವೀಪದ ದುರ್ಗಮ ಕಾಡನ್ನು ಪ್ರವೇಶಿಸಿದ್ದರು. ಇವರನ್ನು ಬೆನ್ನಟ್ಟಿದ ಪೊಲೀಸರು ಮೂರು ದಿನ ಹಗಲು ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಈ ರೋಚಕ ಕಾರ್ಯಾಚರಣೆ ಬಗ್ಗೆ ನಿಕೋಬಾರ್ ಎಸ್.ಪಿ ಹರಗೋವಿಂದರ್ ಸಿಂಗ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.</p><p>ಭಾರತದ ಕಡಲ ಪ್ರದೇಶದಲ್ಲಿ ಈ ಕಳ್ಳಬೇಟೆಗಾರರು ಹೆಕ್ಕಿ ತೆಗೆದಿದ್ದ 800 ಕೆ.ಜಿ ಸಮುದ್ರ ಸೌತೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.</p><p>ಸಮುದ್ರ ಸೌತೆಗಳು ಕಡಲ ಜೀವಿಗಳಾಗಿದ್ದು ಸೌತೆಕಾಯಿಗಳನ್ನು ಹೋಲುತ್ತವೆ. ಇವುಗಳಲ್ಲಿಯ ಔಷಧಿ ಗುಣ ಹಾಗೂ ಪ್ರೋಟಿನ್ಯುಕ್ತ ರುಚಿಯಿಂದ ಚೀನಾ, ಮ್ಯಾನ್ಮಾರ್ ಸೇರಿದಂತೆ ಮುಂತಾದ ಏಷ್ಯಾ ದೇಶಗಳಲ್ಲಿ ಬೇಡಿಕೆಯ ಖಾದ್ಯವಾಗಿದೆ.</p><p>ಹೀಗಾಗಿ ಇವುಗಳ ಕಳ್ಳಬೇಟೆಯೂ ವ್ಯಾಪಕವಾಗಿರುವುದರಿಂದ ಭಾರತವು, ಈ ಜೀವಿಗಳನ್ನು ಅಳಿವಿನಂಚಿನಲ್ಲಿರುವ ಕಡಲ ಜೀವಿಗಳು ಎಂದು ಘೋಷಿಸಿದೆ. ಸಮುದ್ರ ಸೌತೆಗಳು ಸಮುದ್ರವನ್ನು ಸ್ವಚ್ಛವಾಗಿಡಲು ಪ್ರಮುಖಪಾತ್ರವಹಿಸುತ್ತವೆ.</p>.'ಸಿಂಧೂರ'ಕ್ಕೆ ಬೆಚ್ಚಿದ ಬಳಿಕವೂ ಭಾರತದತ್ತ ಡ್ರೋನ್ ಹಾರಿಸುತ್ತಿರುವುದೇಕೆ ಪಾಕ್?.ಸಂಗತ: ಶಿಸ್ತಿನ ಇಲಾಖೆಗೆ ಹೃದಯವಂತಿಕೆಯೂ ಅಗತ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>