<p><strong>ರಾಯವರಂ:</strong> ಧಗಧಗನೆ ಹೊತ್ತಿ ಉರಿಯುತ್ತಿದ್ದ ಬಸ್, ಅದರೊಳಗೆ ಆವರಿಸಿದ್ದ ದಟ್ಟಹೊಗೆ, ಬೆಂಕಿ ಹಾಗೂ ಉಸಿರುಗಟ್ಟಿಸುವ ಹೊಗೆಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದ ಪ್ರಯಾಣಿಕರು, ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲೇ ಜೀವ ಕಳೆದುಕೊಂಡ ಪ್ರಯಾಣಿಕರು.</p>.<p>ರಾಯವರಂ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದ ಬಸ್ ಅಗ್ನಿ ಅವಘಡದ ದಾರುಣ ದೃಶ್ಯಗಳಿವು.</p>.<p>ಸುಟ್ಟು ಕರಕಲಾಗಿದ್ದ ಅನೇಕ ಶವಗಳು ರಸ್ತೆಯಲ್ಲಿ ಬಿದ್ದಿದ್ದವು. ನಂತರ, ಅವುಗಳನ್ನು ಆಂಬುಲೆನ್ಸ್ಗಳೊಳಗೆ ಇರಿಸಲಾಯಿತು. ಒಂದು ಶವದ ಪಕ್ಕೆಲುಬು ಕೂಡ ಗೋಚರಿಸಿದ್ದು, ಬೆಂಕಿಯ ತೀವ್ರತೆಯನ್ನು ಸೂಚಿಸುತ್ತಿತ್ತು.</p>.<p>‘ನಾವು ಮೂವರು ಬಸ್ನಲ್ಲಿ ಹಿಂದಿನಿಂದ ಐದನೇ ಸಾಲಿನಲ್ಲಿ ಕುಳಿತು ನಿದ್ದೆ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆ ಆಸನಗಳಿಂದ ಬಿದ್ದೆವು. ನಮ್ಮೊಂದಿಗಿದ್ದ ಹುಡುಗ, ‘ಚಿಕ್ಕಮ್ಮ ನಾವು ಸಾಯುತ್ತೇವೆ’ ಎಂದ. ಆ ಬಳಿಕ, ಆತ ಏನಾದ ಎಂಬುದು ಗೊತ್ತಾಗಲಿಲ್ಲ’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ತಾವು ಅನುಭವಿಸಿದ ಭಯಾನಕ ಕ್ಷಣಗಳನ್ನು ವಿವರಿಸಿದರು.</p>.<p>‘ಬಸ್ನೊಳಗೆ ದಟ್ಟ ಹೊಗೆ ಆವರಿಸಿದ್ದರಿಂದ ಉಸಿರಾಡಲು ಕಷ್ಟವಾಯಿತು. ಎಲ್ಲೆಡೆ ಕತ್ತಲೆ ಆವರಿಸಿತ್ತು. ಬೆಂಕಿಯನ್ನು ಕಂಡಾಕ್ಷಣ ಬಸ್ನಿಂದ ಹೊರಗೆ ಜಿಗಿದೆ’ ಎಂದು ಬಸ್ನ ಮೊದಲ ಆಸನದಲ್ಲಿ ಕುಳಿತಿದ್ದ ಯುವಕನೊಬ್ಬ ತಿಳಿಸಿದ.</p>.<p>‘ನಾನು ಫೋನ್ ನೋಡುತ್ತಿದ್ದೆ. ಅಪಘಾತದ ಸಮಯದಲ್ಲಿ ತುರ್ತು ನಿರ್ಗಮನ ಬಾಗಿಲು ತೆರೆದು ಒಬ್ಬ ಮಹಿಳೆಯು ಹೊರಗೆ ಹೋಗಲು ಸಹಾಯ ಮಾಡಿದೆ’ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯವರಂ:</strong> ಧಗಧಗನೆ ಹೊತ್ತಿ ಉರಿಯುತ್ತಿದ್ದ ಬಸ್, ಅದರೊಳಗೆ ಆವರಿಸಿದ್ದ ದಟ್ಟಹೊಗೆ, ಬೆಂಕಿ ಹಾಗೂ ಉಸಿರುಗಟ್ಟಿಸುವ ಹೊಗೆಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದ ಪ್ರಯಾಣಿಕರು, ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲೇ ಜೀವ ಕಳೆದುಕೊಂಡ ಪ್ರಯಾಣಿಕರು.</p>.<p>ರಾಯವರಂ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದ ಬಸ್ ಅಗ್ನಿ ಅವಘಡದ ದಾರುಣ ದೃಶ್ಯಗಳಿವು.</p>.<p>ಸುಟ್ಟು ಕರಕಲಾಗಿದ್ದ ಅನೇಕ ಶವಗಳು ರಸ್ತೆಯಲ್ಲಿ ಬಿದ್ದಿದ್ದವು. ನಂತರ, ಅವುಗಳನ್ನು ಆಂಬುಲೆನ್ಸ್ಗಳೊಳಗೆ ಇರಿಸಲಾಯಿತು. ಒಂದು ಶವದ ಪಕ್ಕೆಲುಬು ಕೂಡ ಗೋಚರಿಸಿದ್ದು, ಬೆಂಕಿಯ ತೀವ್ರತೆಯನ್ನು ಸೂಚಿಸುತ್ತಿತ್ತು.</p>.<p>‘ನಾವು ಮೂವರು ಬಸ್ನಲ್ಲಿ ಹಿಂದಿನಿಂದ ಐದನೇ ಸಾಲಿನಲ್ಲಿ ಕುಳಿತು ನಿದ್ದೆ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆ ಆಸನಗಳಿಂದ ಬಿದ್ದೆವು. ನಮ್ಮೊಂದಿಗಿದ್ದ ಹುಡುಗ, ‘ಚಿಕ್ಕಮ್ಮ ನಾವು ಸಾಯುತ್ತೇವೆ’ ಎಂದ. ಆ ಬಳಿಕ, ಆತ ಏನಾದ ಎಂಬುದು ಗೊತ್ತಾಗಲಿಲ್ಲ’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ತಾವು ಅನುಭವಿಸಿದ ಭಯಾನಕ ಕ್ಷಣಗಳನ್ನು ವಿವರಿಸಿದರು.</p>.<p>‘ಬಸ್ನೊಳಗೆ ದಟ್ಟ ಹೊಗೆ ಆವರಿಸಿದ್ದರಿಂದ ಉಸಿರಾಡಲು ಕಷ್ಟವಾಯಿತು. ಎಲ್ಲೆಡೆ ಕತ್ತಲೆ ಆವರಿಸಿತ್ತು. ಬೆಂಕಿಯನ್ನು ಕಂಡಾಕ್ಷಣ ಬಸ್ನಿಂದ ಹೊರಗೆ ಜಿಗಿದೆ’ ಎಂದು ಬಸ್ನ ಮೊದಲ ಆಸನದಲ್ಲಿ ಕುಳಿತಿದ್ದ ಯುವಕನೊಬ್ಬ ತಿಳಿಸಿದ.</p>.<p>‘ನಾನು ಫೋನ್ ನೋಡುತ್ತಿದ್ದೆ. ಅಪಘಾತದ ಸಮಯದಲ್ಲಿ ತುರ್ತು ನಿರ್ಗಮನ ಬಾಗಿಲು ತೆರೆದು ಒಬ್ಬ ಮಹಿಳೆಯು ಹೊರಗೆ ಹೋಗಲು ಸಹಾಯ ಮಾಡಿದೆ’ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>