<p><strong>ರಾಯವರಂ</strong>: ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಸಮೀಪ ಗುರುವಾರ ಬೆಳಿಗ್ಗೆ ಹರಿಕೃಷ್ಣ ಟ್ರಾವೆಲ್ಸ್ಗೆ ಸೇರಿದ ಬಸ್ ಟಿಪ್ಪರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ 14 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. 28 ಮಂದಿ ಗಾಯಗೊಂಡಿದ್ದಾರೆ.</p><p>ಸಾವಿಗೀಡಾದವರಲ್ಲಿ ಐದು ತಿಂಗಳ ಶಿಶು ಮತ್ತು ಮಹಿಳೆಯರು ಸೇರಿದ್ದಾರೆ. ಕೆಲವರು ಬಸ್ ಒಳಗೆ ಜೀವಂತವಾಗಿ ಸುಟ್ಟು ಹೋದರೆ, ಮತ್ತೆ ಕೆಲವರು ಪ್ರಾಣ ಉಳಿಸಿಕೊಳ್ಳುವ ಪ್ರಯತ್ನದಲ್ಲಿ<br>ಕಿಟಕಿಗಳ ನಡುವೆ ಸಿಲುಕಿ ಬೆಂಕಿಗೆ<br>ಆಹುತಿಯಾಗಿದ್ದಾರೆ.</p><p>ತೆಲಂಗಾಣದ ಜಗಿತ್ಯಾಲದಿಂದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಲಿಗಿರಿಗೆ ಹೊರಟಿದ್ದ ‘ಸೀಟರ್–ಕಮ್–ಸ್ಲೀಪರ್’‘ ನಾನ್–ಎಸಿ ಬಸ್ ರಾಯವರಂ ಬಳಿ ಬೆಳಿಗ್ಗೆ 5.30ರಿಂದ 6 ಗಂಟೆ ನಡುವೆ ಅಪಘಾತ ಸಂಭವಿಸಿದೆ. ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ಗೆ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಟಿಪ್ಪರ್ನ ಡೀಸೆಲ್ ಟ್ಯಾಂಕ್ಗೆ ಹಾನಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಎಲ್ಲೆಡೆ ವ್ಯಾಪಿಸಿದೆ. ದಟ್ಟ ಹೊಗೆಯಿಂದಾಗಿ ಕೆಲ ಪ್ರಯಾಣಿಕರು ಹೊರಬರುವ ಮುನ್ನವೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಎಲ್ಲ ಪ್ರಯಾಣಿಕರು ಜಗಿತ್ಯಾಲ, ನೆಲ್ಲೂರು ಹಾಗೂ ಮಾರ್ಕಾಪುರಂ ಜಿಲ್ಲೆಗೆ ಸೇರಿದ್ದಾರೆ.</p><p>ಸ್ಥಳಕ್ಕೆ ಬಂದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿದವು.</p><p>‘ಬಸ್ನಲ್ಲಿ 41 ಪ್ರಯಾಣಿಕರಿದ್ದರು. ಗಾಯಾಳುಗಳನ್ನು ಮಾರ್ಕಾಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ. ಹರಿಕೃಷ್ಣ ಟ್ರಾವೆಲ್ಸ್ನ ಮಾಲೀಕರು ಕನಿಗಿರಿಗೆ ಸೇರಿದವರು. ಈ ಬಸ್ 2026ರ ಡಿಸೆಂಬರ್ವರೆಗೆ ಪರವಾನಗಿ, ವಿಮೆ ಹೊಂದಿದೆ’ ಎಂದು ಗೃಹ ಸಚಿವೆ ವೆಂಗಲಪುಡಿ ಅನಿತಾ ತಿಳಿಸಿದ್ದಾರೆ.</p><p>‘ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಜಿಲ್ಲಾಧಿಕಾರಿ ಪಿ. ರಾಜಾಬಾಬು ತಿಳಿಸಿದ್ದಾರೆ.</p>.<div><div class="bigfact-title">ತನಿಖೆಗೆ ಆದೇಶ</div><div class="bigfact-description">ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹಿರಿಯ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಟೆಲಿಕಾನ್ಫರೆನ್ಸ್ ನಡೆಸಿದ್ದಾರೆ. ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಬೇಕು. ಅಪಘಾತದ ಕುರಿತು ತನಿಖೆ ನಡೆಸಬೇಕು ಎಂದು ನಿರ್ದೇಶನ ನೀಡಿದ್ದಾರೆ.</div></div>.<p><strong><ins>ಮೃತರ ಕುಟುಂಬಗಳಿಗೆ ತಲಾ ₹7 ಲಕ್ಷ ಪರಿಹಾರ</ins></strong></p><p>ಆಂಧ್ರಪ್ರದೇಶ ಸರ್ಕಾರವು ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ ₹5 ಪರಿಹಾರ ಘೋಷಿಸಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.</p><p><strong>ಅಪಘಾತಕ್ಕೆ ಬಸ್ನ ತಾಂತ್ರಿಕ ದೋಷ ಕಾರಣ?</strong></p><p>ಅಪಘಾತಕ್ಕೂ ಒಂದು ಗಂಟೆ ಮೊದಲು ಬಸ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಎನ್ನಲಾಗಿದೆ.</p><p>‘ತೆಲಂಗಾಣದ ಜಗಿತ್ಯಾಲದಿಂದ ಬುಧವಾರ ಸಂಜೆ ಹೊರಟ ಬಸ್ ತಾಂತ್ರಿಕ ದೋಷದಿಂದಾಗಿ ಯೆರ್ರಗೊಂಡಪಾಲಂನಲ್ಲಿ ನಿಂತಿತ್ತು. ವಾಹನದ ಸೆನ್ಸಾರ್ಗಳು ಜಾಮ್ ಆಗಿದ್ದವು. ಅದನ್ನು ಸರಿಪಡಿಸಲು ಚಾಲಕ ಪ್ರಯತ್ನಿಸಿದರು. ಒಂದು ಗಂಟೆಯ ಬಳಿಕ ಚಾಲಕ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರು. ರಾಯವರಂ ಬಳಿ ಘಾಟ್ ರಸ್ತೆಯಲ್ಲಿ ಬಸ್ ಏರುತ್ತಿದ್ದಾಗ ಸ್ಟೀರಿಂಗ್ ವೀಲ್ ಲಾಕ್ ಆಗಿ ಬಸ್ ಬಲಗಡೆಗೆ ತಿರುಗಿ ವಿರುದ್ಧ ದಿಕ್ಕಿನಲ್ಲಿ ಸಾಗತೊಡಗಿತು. ಜಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು’ ಎಂದು ಬಸ್ ಕ್ಲೀನರ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯವರಂ</strong>: ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಸಮೀಪ ಗುರುವಾರ ಬೆಳಿಗ್ಗೆ ಹರಿಕೃಷ್ಣ ಟ್ರಾವೆಲ್ಸ್ಗೆ ಸೇರಿದ ಬಸ್ ಟಿಪ್ಪರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ 14 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. 28 ಮಂದಿ ಗಾಯಗೊಂಡಿದ್ದಾರೆ.</p><p>ಸಾವಿಗೀಡಾದವರಲ್ಲಿ ಐದು ತಿಂಗಳ ಶಿಶು ಮತ್ತು ಮಹಿಳೆಯರು ಸೇರಿದ್ದಾರೆ. ಕೆಲವರು ಬಸ್ ಒಳಗೆ ಜೀವಂತವಾಗಿ ಸುಟ್ಟು ಹೋದರೆ, ಮತ್ತೆ ಕೆಲವರು ಪ್ರಾಣ ಉಳಿಸಿಕೊಳ್ಳುವ ಪ್ರಯತ್ನದಲ್ಲಿ<br>ಕಿಟಕಿಗಳ ನಡುವೆ ಸಿಲುಕಿ ಬೆಂಕಿಗೆ<br>ಆಹುತಿಯಾಗಿದ್ದಾರೆ.</p><p>ತೆಲಂಗಾಣದ ಜಗಿತ್ಯಾಲದಿಂದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಲಿಗಿರಿಗೆ ಹೊರಟಿದ್ದ ‘ಸೀಟರ್–ಕಮ್–ಸ್ಲೀಪರ್’‘ ನಾನ್–ಎಸಿ ಬಸ್ ರಾಯವರಂ ಬಳಿ ಬೆಳಿಗ್ಗೆ 5.30ರಿಂದ 6 ಗಂಟೆ ನಡುವೆ ಅಪಘಾತ ಸಂಭವಿಸಿದೆ. ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ಗೆ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಟಿಪ್ಪರ್ನ ಡೀಸೆಲ್ ಟ್ಯಾಂಕ್ಗೆ ಹಾನಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಎಲ್ಲೆಡೆ ವ್ಯಾಪಿಸಿದೆ. ದಟ್ಟ ಹೊಗೆಯಿಂದಾಗಿ ಕೆಲ ಪ್ರಯಾಣಿಕರು ಹೊರಬರುವ ಮುನ್ನವೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಎಲ್ಲ ಪ್ರಯಾಣಿಕರು ಜಗಿತ್ಯಾಲ, ನೆಲ್ಲೂರು ಹಾಗೂ ಮಾರ್ಕಾಪುರಂ ಜಿಲ್ಲೆಗೆ ಸೇರಿದ್ದಾರೆ.</p><p>ಸ್ಥಳಕ್ಕೆ ಬಂದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿದವು.</p><p>‘ಬಸ್ನಲ್ಲಿ 41 ಪ್ರಯಾಣಿಕರಿದ್ದರು. ಗಾಯಾಳುಗಳನ್ನು ಮಾರ್ಕಾಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ. ಹರಿಕೃಷ್ಣ ಟ್ರಾವೆಲ್ಸ್ನ ಮಾಲೀಕರು ಕನಿಗಿರಿಗೆ ಸೇರಿದವರು. ಈ ಬಸ್ 2026ರ ಡಿಸೆಂಬರ್ವರೆಗೆ ಪರವಾನಗಿ, ವಿಮೆ ಹೊಂದಿದೆ’ ಎಂದು ಗೃಹ ಸಚಿವೆ ವೆಂಗಲಪುಡಿ ಅನಿತಾ ತಿಳಿಸಿದ್ದಾರೆ.</p><p>‘ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಜಿಲ್ಲಾಧಿಕಾರಿ ಪಿ. ರಾಜಾಬಾಬು ತಿಳಿಸಿದ್ದಾರೆ.</p>.<div><div class="bigfact-title">ತನಿಖೆಗೆ ಆದೇಶ</div><div class="bigfact-description">ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹಿರಿಯ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಟೆಲಿಕಾನ್ಫರೆನ್ಸ್ ನಡೆಸಿದ್ದಾರೆ. ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಬೇಕು. ಅಪಘಾತದ ಕುರಿತು ತನಿಖೆ ನಡೆಸಬೇಕು ಎಂದು ನಿರ್ದೇಶನ ನೀಡಿದ್ದಾರೆ.</div></div>.<p><strong><ins>ಮೃತರ ಕುಟುಂಬಗಳಿಗೆ ತಲಾ ₹7 ಲಕ್ಷ ಪರಿಹಾರ</ins></strong></p><p>ಆಂಧ್ರಪ್ರದೇಶ ಸರ್ಕಾರವು ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ ₹5 ಪರಿಹಾರ ಘೋಷಿಸಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.</p><p><strong>ಅಪಘಾತಕ್ಕೆ ಬಸ್ನ ತಾಂತ್ರಿಕ ದೋಷ ಕಾರಣ?</strong></p><p>ಅಪಘಾತಕ್ಕೂ ಒಂದು ಗಂಟೆ ಮೊದಲು ಬಸ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಎನ್ನಲಾಗಿದೆ.</p><p>‘ತೆಲಂಗಾಣದ ಜಗಿತ್ಯಾಲದಿಂದ ಬುಧವಾರ ಸಂಜೆ ಹೊರಟ ಬಸ್ ತಾಂತ್ರಿಕ ದೋಷದಿಂದಾಗಿ ಯೆರ್ರಗೊಂಡಪಾಲಂನಲ್ಲಿ ನಿಂತಿತ್ತು. ವಾಹನದ ಸೆನ್ಸಾರ್ಗಳು ಜಾಮ್ ಆಗಿದ್ದವು. ಅದನ್ನು ಸರಿಪಡಿಸಲು ಚಾಲಕ ಪ್ರಯತ್ನಿಸಿದರು. ಒಂದು ಗಂಟೆಯ ಬಳಿಕ ಚಾಲಕ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರು. ರಾಯವರಂ ಬಳಿ ಘಾಟ್ ರಸ್ತೆಯಲ್ಲಿ ಬಸ್ ಏರುತ್ತಿದ್ದಾಗ ಸ್ಟೀರಿಂಗ್ ವೀಲ್ ಲಾಕ್ ಆಗಿ ಬಸ್ ಬಲಗಡೆಗೆ ತಿರುಗಿ ವಿರುದ್ಧ ದಿಕ್ಕಿನಲ್ಲಿ ಸಾಗತೊಡಗಿತು. ಜಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು’ ಎಂದು ಬಸ್ ಕ್ಲೀನರ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>