<p>ಇಂದೋರ್(ಪಿಟಿಐ): ‘ಧಾರ್ನಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣವು ಸರಸ್ವತಿ ದೇವಾಲಯ’ ಎಂದು ಮಧ್ಯಪ್ರದೇಶ ಹೈಕೋರ್ಟ್ ಘೋಷಿಸಿದೆ.</p>.<p>ಇದೇ ವೇಳೆ ಕಮಾಲ್ ಮೌಲಾ ಮಸೀದಿ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ಜಮೀನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸುವಂತೆ ಮುಸ್ಲಿಂ ಸಮುದಾಯದವರಿಗೆ ನ್ಯಾಯಾಲಯವು ಸಲಹೆ ನೀಡಿದೆ.</p>.<p>ಭೋಜಶಾಲಾ ದೇವಸ್ಥಾನ-ಕಮಾಲ್ಮೌಲಾ ಮಸೀದಿ ಸಂಕೀರ್ಣ ವಿವಾದಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ, ಭೋಜಶಾಲಾದಲ್ಲಿ ಸಂಸ್ಕೃತ ಬೋಧನಾ ಕೇಂದ್ರ ಮತ್ತು ಸರಸ್ವತಿ ದೇವಿಯ ದೇವಾಲಯದ ಕುರುಹುಗಳಿವೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠವು ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿತು.</p>.<p>ಏನಿದು ವಿವಾದ: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ ಸಂಕೀರ್ಣವನ್ನು ಹಿಂದೂ ಸಮುದಾಯ ದವರು ವಾಗ್ದೇವಿ (ಸರಸ್ವತಿ ದೇವತೆ)ಇರುವ ದೇವಾಲಯ ಎಂದು ವಾದಿಸಿದರೆ, ಮುಸ್ಲಿಂ ಸಮುದಾಯ ದವರು ಈ ಸ್ಮಾರಕವನ್ನು ಕಮಾಲ್ ಮೌಲಾ ಮಸೀದಿ ಎಂದು ವಾದಿಸಿದ್ದರು. ಜೈನ ಸಮುದಾಯದ ಅರ್ಜಿದಾರರೊಬ್ಬರು, ವಿವಾದಿತ ಸಂಕೀರ್ಣವು ಮಧ್ಯಕಾಲೀನ ಜೈನ ದೇವಾಲಯ ಮತ್ತು ಗುರುಕುಲ ಎಂದು ವಾದ ಮುಂದಿಟ್ಟಿದ್ದರು.</p>.<p>ಭೋಜಶಾಲಾ ಸಂಕೀರ್ಣದ ವಿವಾದ ಭುಗಿಲೆದ್ದ ನಂತರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) 2003ರ ಏಪ್ರಿಲ್ 7ರಂದು ಆದೇಶ ಹೊರಡಿಸಿ, ಪ್ರತಿ ಮಂಗಳವಾರ ಹಿಂದೂಗಳು ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರು ನಮಾಜ್ ಮಾಡಲು ಅನುಮತಿ ನೀಡಿತ್ತು.</p>.<p>ಹಿಂದೂ ಸಮುದಾಯದವರು ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿ, ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ವಿಶೇಷ ಹಕ್ಕುಗಳನ್ನು ನೀಡುವಂತೆ ಕೋರಿದ್ದರು.</p>.<p>ಹೈಕೋರ್ಟ್ನ ಇಂದೋರ್ ಪೀಠದ ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ್ ಅವಸ್ಥಿ ಅವರು ಇದೇ ವರ್ಷದ ಏಪ್ರಿಲ್ 6ರಂದು ಪ್ರಕರಣಕ್ಕೆ ಸಂಬಂಧಿಸಿದ ಐದು ಅರ್ಜಿಗಳು ಮತ್ತು ಒಂದು ರಿಟ್ ಮೇಲ್ಮನವಿಯ ವಿಚಾರಣೆ ಪ್ರಾರಂಭಿಸಿದ್ದರು.</p>.<p>ವಿಭಿನ್ನ ಧಾರ್ಮಿಕ ನಂಬಿಕೆಗಳು, ಐತಿಹಾಸಿಕ ಹಕ್ಕು ಮಂಡನೆ, ಕಾನೂನು ಅಂಶಗಳು ಮತ್ತು ವಿವಾದಿತ ಸ್ಮಾರಕಕ್ಕೆ ಸಂಬಂಧಿಸಿದ ಸಾವಿರಾರು ದಾಖಲೆಗಳ ಆಧಾರದಲ್ಲಿ ಎಲ್ಲಾ ಕಡೆಯವರ ವಾದಗಳನ್ನು ಆಲಿಸಿದ ನಂತರ, ನ್ಯಾಯಪೀಠವು ಮೇ 12ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.</p>.<p>ವಿಚಾರಣೆಯ ಸಮಯದಲ್ಲಿ, ಹಿಂದೂ, ಮುಸ್ಲಿಂ ಮತ್ತು ಜೈನ ಸಮುದಾಯಗಳ ಅರ್ಜಿದಾರರು ಸುದೀರ್ಘ ವಾದಗಳನ್ನು ಮಂಡಿಸಿದ್ದರು. ಸ್ಮಾರಕದಲ್ಲಿ ತಮ್ಮ ಸಮುದಾಯಗಳಿಗೆ ವಿಶೇಷ ಪೂಜಾ ಹಕ್ಕುಗಳನ್ನು ನೀಡುವಂತೆ ಕೋರಿದ್ದರು.</p>.<p>‘ಎಎಸ್ಐ ಸಮೀಕ್ಷಾ ವರದಿಯು ‘ಪಕ್ಷಪಾತ’ ದಿಂದ ಕೂಡಿದೆ ಮತ್ತು ಹಿಂದೂ ಅರ್ಜಿದಾರರ ಹಕ್ಕುಗಳನ್ನು ಬೆಂಬಲಿಸುವಂತಿದೆ’ ಎಂದು ಮುಸ್ಲಿಂ ಸಮುದಾಯದವರು ನ್ಯಾಯಾಲಯದಲ್ಲಿ ವಾದಿಸಿದ್ದರು. ಈ ವಾದವನ್ನು ತಳ್ಳಿ ಹಾಕಿದ್ದ ಎಎಸ್ಐ, ‘ಮುಸ್ಲಿಂ ಸಮುದಾಯದ ಮೂವರು ಸೇರಿದಂತೆ ತಜ್ಞರ ಸಹಾಯದಿಂದ ವೈಜ್ಞಾನಿಕವಾಗಿ ಸಮೀಕ್ಷಾ ಪ್ರಕ್ರಿಯೆ ಯನ್ನು ನಡೆಸಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.</p>.<p>ಭೋಜಶಾಲಾ ದೇವಸ್ಥಾನ-ಕಮಾಲ್ ಮೌಲಾ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಹೈಕೋರ್ಟ್ 2024ರ ಮಾರ್ಚ್ 11ರಂದು ಎಎಸ್ಐಗೆ ಆದೇಶಿಸಿತ್ತು. ಆ ವರ್ಷದ ಮಾರ್ಚ್ 22 ರಂದು ಎಎಸ್ಐ ಸಮೀಕ್ಷೆ ಪ್ರಾರಂಭಿಸಿತ್ತು. 98 ದಿನಗಳ ಸಮೀಕ್ಷೆಯ ನಂತರ ಜುಲೈ 15ರಂದು ಹೈಕೋರ್ಟ್ಗೆ ತನ್ನ ವರದಿಯನ್ನು ಸಲ್ಲಿಸಿತ್ತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-51-117959635</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂದೋರ್(ಪಿಟಿಐ): ‘ಧಾರ್ನಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣವು ಸರಸ್ವತಿ ದೇವಾಲಯ’ ಎಂದು ಮಧ್ಯಪ್ರದೇಶ ಹೈಕೋರ್ಟ್ ಘೋಷಿಸಿದೆ.</p>.<p>ಇದೇ ವೇಳೆ ಕಮಾಲ್ ಮೌಲಾ ಮಸೀದಿ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ಜಮೀನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸುವಂತೆ ಮುಸ್ಲಿಂ ಸಮುದಾಯದವರಿಗೆ ನ್ಯಾಯಾಲಯವು ಸಲಹೆ ನೀಡಿದೆ.</p>.<p>ಭೋಜಶಾಲಾ ದೇವಸ್ಥಾನ-ಕಮಾಲ್ಮೌಲಾ ಮಸೀದಿ ಸಂಕೀರ್ಣ ವಿವಾದಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ, ಭೋಜಶಾಲಾದಲ್ಲಿ ಸಂಸ್ಕೃತ ಬೋಧನಾ ಕೇಂದ್ರ ಮತ್ತು ಸರಸ್ವತಿ ದೇವಿಯ ದೇವಾಲಯದ ಕುರುಹುಗಳಿವೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠವು ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿತು.</p>.<p>ಏನಿದು ವಿವಾದ: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ ಸಂಕೀರ್ಣವನ್ನು ಹಿಂದೂ ಸಮುದಾಯ ದವರು ವಾಗ್ದೇವಿ (ಸರಸ್ವತಿ ದೇವತೆ)ಇರುವ ದೇವಾಲಯ ಎಂದು ವಾದಿಸಿದರೆ, ಮುಸ್ಲಿಂ ಸಮುದಾಯ ದವರು ಈ ಸ್ಮಾರಕವನ್ನು ಕಮಾಲ್ ಮೌಲಾ ಮಸೀದಿ ಎಂದು ವಾದಿಸಿದ್ದರು. ಜೈನ ಸಮುದಾಯದ ಅರ್ಜಿದಾರರೊಬ್ಬರು, ವಿವಾದಿತ ಸಂಕೀರ್ಣವು ಮಧ್ಯಕಾಲೀನ ಜೈನ ದೇವಾಲಯ ಮತ್ತು ಗುರುಕುಲ ಎಂದು ವಾದ ಮುಂದಿಟ್ಟಿದ್ದರು.</p>.<p>ಭೋಜಶಾಲಾ ಸಂಕೀರ್ಣದ ವಿವಾದ ಭುಗಿಲೆದ್ದ ನಂತರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) 2003ರ ಏಪ್ರಿಲ್ 7ರಂದು ಆದೇಶ ಹೊರಡಿಸಿ, ಪ್ರತಿ ಮಂಗಳವಾರ ಹಿಂದೂಗಳು ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರು ನಮಾಜ್ ಮಾಡಲು ಅನುಮತಿ ನೀಡಿತ್ತು.</p>.<p>ಹಿಂದೂ ಸಮುದಾಯದವರು ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿ, ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ವಿಶೇಷ ಹಕ್ಕುಗಳನ್ನು ನೀಡುವಂತೆ ಕೋರಿದ್ದರು.</p>.<p>ಹೈಕೋರ್ಟ್ನ ಇಂದೋರ್ ಪೀಠದ ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ್ ಅವಸ್ಥಿ ಅವರು ಇದೇ ವರ್ಷದ ಏಪ್ರಿಲ್ 6ರಂದು ಪ್ರಕರಣಕ್ಕೆ ಸಂಬಂಧಿಸಿದ ಐದು ಅರ್ಜಿಗಳು ಮತ್ತು ಒಂದು ರಿಟ್ ಮೇಲ್ಮನವಿಯ ವಿಚಾರಣೆ ಪ್ರಾರಂಭಿಸಿದ್ದರು.</p>.<p>ವಿಭಿನ್ನ ಧಾರ್ಮಿಕ ನಂಬಿಕೆಗಳು, ಐತಿಹಾಸಿಕ ಹಕ್ಕು ಮಂಡನೆ, ಕಾನೂನು ಅಂಶಗಳು ಮತ್ತು ವಿವಾದಿತ ಸ್ಮಾರಕಕ್ಕೆ ಸಂಬಂಧಿಸಿದ ಸಾವಿರಾರು ದಾಖಲೆಗಳ ಆಧಾರದಲ್ಲಿ ಎಲ್ಲಾ ಕಡೆಯವರ ವಾದಗಳನ್ನು ಆಲಿಸಿದ ನಂತರ, ನ್ಯಾಯಪೀಠವು ಮೇ 12ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.</p>.<p>ವಿಚಾರಣೆಯ ಸಮಯದಲ್ಲಿ, ಹಿಂದೂ, ಮುಸ್ಲಿಂ ಮತ್ತು ಜೈನ ಸಮುದಾಯಗಳ ಅರ್ಜಿದಾರರು ಸುದೀರ್ಘ ವಾದಗಳನ್ನು ಮಂಡಿಸಿದ್ದರು. ಸ್ಮಾರಕದಲ್ಲಿ ತಮ್ಮ ಸಮುದಾಯಗಳಿಗೆ ವಿಶೇಷ ಪೂಜಾ ಹಕ್ಕುಗಳನ್ನು ನೀಡುವಂತೆ ಕೋರಿದ್ದರು.</p>.<p>‘ಎಎಸ್ಐ ಸಮೀಕ್ಷಾ ವರದಿಯು ‘ಪಕ್ಷಪಾತ’ ದಿಂದ ಕೂಡಿದೆ ಮತ್ತು ಹಿಂದೂ ಅರ್ಜಿದಾರರ ಹಕ್ಕುಗಳನ್ನು ಬೆಂಬಲಿಸುವಂತಿದೆ’ ಎಂದು ಮುಸ್ಲಿಂ ಸಮುದಾಯದವರು ನ್ಯಾಯಾಲಯದಲ್ಲಿ ವಾದಿಸಿದ್ದರು. ಈ ವಾದವನ್ನು ತಳ್ಳಿ ಹಾಕಿದ್ದ ಎಎಸ್ಐ, ‘ಮುಸ್ಲಿಂ ಸಮುದಾಯದ ಮೂವರು ಸೇರಿದಂತೆ ತಜ್ಞರ ಸಹಾಯದಿಂದ ವೈಜ್ಞಾನಿಕವಾಗಿ ಸಮೀಕ್ಷಾ ಪ್ರಕ್ರಿಯೆ ಯನ್ನು ನಡೆಸಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.</p>.<p>ಭೋಜಶಾಲಾ ದೇವಸ್ಥಾನ-ಕಮಾಲ್ ಮೌಲಾ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಹೈಕೋರ್ಟ್ 2024ರ ಮಾರ್ಚ್ 11ರಂದು ಎಎಸ್ಐಗೆ ಆದೇಶಿಸಿತ್ತು. ಆ ವರ್ಷದ ಮಾರ್ಚ್ 22 ರಂದು ಎಎಸ್ಐ ಸಮೀಕ್ಷೆ ಪ್ರಾರಂಭಿಸಿತ್ತು. 98 ದಿನಗಳ ಸಮೀಕ್ಷೆಯ ನಂತರ ಜುಲೈ 15ರಂದು ಹೈಕೋರ್ಟ್ಗೆ ತನ್ನ ವರದಿಯನ್ನು ಸಲ್ಲಿಸಿತ್ತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-51-117959635</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>