<p><strong>ಇಂದೋರ್: </strong>ಭೋಜಶಾಲೆಯನ್ನು ಹಿಂದೂ ದೇವಾಲಯ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ ನಂತರ, ಆ ದೇವಾಲಯದ ಮೂಲ ವಾಗ್ದೇವಿ (ಸರಸ್ವತಿ) ಪ್ರತಿಮೆಯನ್ನು ಲಂಡನ್ ಮ್ಯೂಸಿಯಂನಿಂದ ಭಾರತಕ್ಕೆ ತರಬೇಕೆಂಬ ಒತ್ತಾಯ ಕೇಳಿಬಂದಿದೆ.</p>.<p>ಲಂಡನ್ನ ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲಿರುವ ವಾಗ್ದೇವಿ ವಿಗ್ರಹವು ಕೊಹಿನೂರು ವಜ್ರಕ್ಕಿಂತ ಮುಖ್ಯವಾದದು. ಆ ಮೂಲ ವಿಗ್ರಹವನ್ನು ತಂದು, ಭೋಜಶಾಲಾದಲ್ಲಿ ಮರುಸ್ಥಾಪಿಸುವಂತೆ ಹಿಂದೂ ಸಮುದಾಯದ ಅರ್ಜಿದಾರರು ಒತ್ತಾಯಿಸಿದ್ದಾರೆ.</p>.<p>ಅರ್ಜಿದಾರರಲ್ಲಿ ಒಬ್ಬರಾದ ಕುಲದೀಪ್ ತಿವಾರಿ, ‘ಲಂಡನ್ನಿಂದ ವಿಗ್ರಹವನ್ನು ಹಿಂದಿರುಗಿಸುವಂತೆ ಕೋರಿ ಕೇಂದ್ರ, ಎಎಸ್ಐ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ಹೊಸ ಮನವಿಗಳನ್ನು ಸಲ್ಲಿಸಲಾಗಿದೆ’ ಎಂದು ಮಂಗಳವಾರ ತಿಳಿಸಿದರು.</p>.<p>ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿ ದೇವಾಲಯವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಮೇ 15ರಂದು ತೀರ್ಪು ನೀಡಿತು. ಅದೇ ಸಮಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಶುಕ್ರವಾರ ನಮಾಜ್ ಸಲ್ಲಿಸಲು ಅವಕಾಶ ನೀಡಿದ್ದ ಎಎಸ್ಐ ಆದೇಶವನ್ನು ರದ್ದುಗೊಳಿಸಿತು.</p>.<p>ಕೋರ್ಟ್ ತೀರ್ಪಿನ ನಂತರ, ಹಿಂದೂ ಸಮುದಾಯದ ಸದಸ್ಯರು ಎಎಸ್ಐ -ಸಂರಕ್ಷಿತ ಸ್ಮಾರಕದಲ್ಲಿ ಸರಸ್ವತಿ ವಿಗ್ರಹದ ಪ್ರತಿಕೃತಿಯನ್ನು ಸ್ಥಾಪಿಸಿ, ನಂತರ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂದೋರ್: </strong>ಭೋಜಶಾಲೆಯನ್ನು ಹಿಂದೂ ದೇವಾಲಯ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ ನಂತರ, ಆ ದೇವಾಲಯದ ಮೂಲ ವಾಗ್ದೇವಿ (ಸರಸ್ವತಿ) ಪ್ರತಿಮೆಯನ್ನು ಲಂಡನ್ ಮ್ಯೂಸಿಯಂನಿಂದ ಭಾರತಕ್ಕೆ ತರಬೇಕೆಂಬ ಒತ್ತಾಯ ಕೇಳಿಬಂದಿದೆ.</p>.<p>ಲಂಡನ್ನ ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲಿರುವ ವಾಗ್ದೇವಿ ವಿಗ್ರಹವು ಕೊಹಿನೂರು ವಜ್ರಕ್ಕಿಂತ ಮುಖ್ಯವಾದದು. ಆ ಮೂಲ ವಿಗ್ರಹವನ್ನು ತಂದು, ಭೋಜಶಾಲಾದಲ್ಲಿ ಮರುಸ್ಥಾಪಿಸುವಂತೆ ಹಿಂದೂ ಸಮುದಾಯದ ಅರ್ಜಿದಾರರು ಒತ್ತಾಯಿಸಿದ್ದಾರೆ.</p>.<p>ಅರ್ಜಿದಾರರಲ್ಲಿ ಒಬ್ಬರಾದ ಕುಲದೀಪ್ ತಿವಾರಿ, ‘ಲಂಡನ್ನಿಂದ ವಿಗ್ರಹವನ್ನು ಹಿಂದಿರುಗಿಸುವಂತೆ ಕೋರಿ ಕೇಂದ್ರ, ಎಎಸ್ಐ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ಹೊಸ ಮನವಿಗಳನ್ನು ಸಲ್ಲಿಸಲಾಗಿದೆ’ ಎಂದು ಮಂಗಳವಾರ ತಿಳಿಸಿದರು.</p>.<p>ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿ ದೇವಾಲಯವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಮೇ 15ರಂದು ತೀರ್ಪು ನೀಡಿತು. ಅದೇ ಸಮಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಶುಕ್ರವಾರ ನಮಾಜ್ ಸಲ್ಲಿಸಲು ಅವಕಾಶ ನೀಡಿದ್ದ ಎಎಸ್ಐ ಆದೇಶವನ್ನು ರದ್ದುಗೊಳಿಸಿತು.</p>.<p>ಕೋರ್ಟ್ ತೀರ್ಪಿನ ನಂತರ, ಹಿಂದೂ ಸಮುದಾಯದ ಸದಸ್ಯರು ಎಎಸ್ಐ -ಸಂರಕ್ಷಿತ ಸ್ಮಾರಕದಲ್ಲಿ ಸರಸ್ವತಿ ವಿಗ್ರಹದ ಪ್ರತಿಕೃತಿಯನ್ನು ಸ್ಥಾಪಿಸಿ, ನಂತರ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>