<p><strong>ಭೂಪಾಲ್:</strong> ‘ಸೊಸೆಯು ಮಾದಕ ವಸ್ತುವಿನ ವ್ಯಸನಿಯಾಗಿದ್ದಳು ಮತ್ತು ಆಕೆ ಮನೋವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು’ ಎಂದು ನಿವೃತ್ತ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ಅವರು ತಮ್ಮ ಮಗನ ಜಾಮೀನು ಅರ್ಜಿಯಲ್ಲಿ ಹೇಳಿದ್ದಾರೆ. ಈ ಜಾಮೀನು ಅರ್ಜಿಯನ್ನು ನ್ಯಾಯಾಲಯವೊಂದು ಸೋಮವಾರ ತಿರಸ್ಕರಿಸಿದೆ.</p>.<p>ತ್ವಿಶಾ ಎಂಬುವರು ತನ್ನ ಗಂಡನ ಮನೆಯಲ್ಲಿ ಮೇ 12ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈಕೆಯ ಕುಟುಂಬಸ್ಥರು, ‘ನಮ್ಮ ಮಗಳ ಮೇಲೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ಇದಕ್ಕಾಗಿಯೇ ಆಕೆಯನ್ನು ಕೊಲೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ. ತ್ವಿಶಾ ಅವರು ‘ಮಿಸ್ ಪುಣೆ’ ಕಿರೀಟ ಗಳಿಸಿದ್ದರು. ಜೊತೆಗೆ, ತೆಲುಗಿನ ಸಿನಿಮಾವೊಂದಲ್ಲಿಯೂ ನಟಿಸಿದ್ದರು.</p>.<p>ತ್ವಿಶಾ ಅವರ ಪತಿ, ವಕೀಲ ಸರ್ಮರ್ಥ ಸಿಂಗ್ ಅವರು ತಲೆಮರೆಸಿಕೊಂಡಿದ್ದಾರೆ. ಗಿರಿಬಾಲಾ ಅವರಿಗೆ ಸ್ಥಳೀಯ ನ್ಯಾಯಾಲಯವು ಈಗಾಗಲೇ ನಿರೀಕ್ಷಣಾ ಜಾಮೀನು ನೀಡಿದೆ. ಈ ಪ್ರಕರಣದ ಸಂಬಂಧ ಮಧ್ಯ ಪ್ರದೇಶ ಸರ್ಕಾರವು ಎಸ್ಐಟಿ ರಚಿಸಿದ್ದು, ಸಮರ್ಥ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. </p>.<p><strong>ಅರ್ಜಿಯಲ್ಲೇನಿದೆ?:</strong> ‘ಆಕೆ ಮಾದಕ ವಸ್ತುವಿನ ವ್ಯಸನಿಯಾಗಿದ್ದಳು. ಮಾದಕ ವಸ್ತು ಸಿಗದಿದ್ದಾಗಲೆಲ್ಲ ಆಕೆಯ ಕೈಗಳು ನಡುಗುತ್ತಿದ್ದವು ಮತ್ತು ಕೆರಳುತ್ತಿದ್ದಳು. ಇದಕ್ಕಾಗಿ ಆಕೆ ಮನೋವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಪಡೆದುಕೊಳ್ಳುತ್ತಿದ್ದಳು’ ಎಂದು ಗಿರಿಬಾಲಾ ಅವರು ತಮ್ಮ ಮಗನಿಗೆ ಜಾಮೀನು ಕೋರಿರುವ ಅರ್ಜಿಯಲ್ಲಿ ಹೇಳಿದ್ದಾರೆ.</p>.<p>‘ಏಪ್ರಿಲ್ 17ರಂದು ಆಕೆ ದೆಹಲಿಗೆ ತೆರಳಿದ್ದಳು. ಆ ಬಳಿಕ 12 ತಾಸುಗಳವರೆಗೆ ನಮಗೆ ಸಂಪರ್ಕಕ್ಕೆ ಸಿಗಲಿಲ್ಲ. ಮಾರನೇ ದಿನ ಆಕೆ ತನ್ನ ಪೋಷಕರ ಮನೆ ತಲುಪಿದ್ದಳು. ಆಕೆ ಗರ್ಭಿಣಿಯಾದ ಬಳಿಕ, ಅತ್ತೆ–ಮಾವನ ವಿಷಯದಲ್ಲಿ ವರ್ತನೆ ಬದಲಾಗಿತ್ತು. ಆಕೆ ಸಾಯುವ ದಿನ ಪತಿ ಆಕೆಯನ್ನು ಬ್ಯೂಟಿ ಪಾರ್ಲರ್ಗೆ ಕರೆದುಕೊಂಡು ಹೋಗಿದ್ದ’ ಎಂದು ಹೇಳಲಾಗಿದೆ.</p>.<p>‘ನಾವು ವರದಕ್ಷಿಣೆ ಕಿರುಕುಳ ನೀಡಿದ್ದೇವೆ ಎಂಬುದೆಲ್ಲಾ ಸುಳ್ಳು. ಆಕೆಗೆ ಅಗತ್ಯವಿದ್ದಾಗಲೆಲ್ಲ ಹಣ ನೀಡಿದ್ದೇವೆ. ₹5 ಸಾವಿರಿಂದ ₹50 ಸಾವಿರದವರೆಗೂ ಹಣ ನೀಡಿದ್ದೇವೆ’ ಎಂದು ಹೇಳಲಾಗಿದೆ. </p>.<p>2024ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಇಬ್ಬರ ಪರಿಚಯವಾಗಿತ್ತು. 2025ರ ಡಿಸೆಂಬರ್ನಲ್ಲಿ ಇಬ್ಬರು ಮದುವೆಯಾಗಿದ್ದರು.</p>.<div><blockquote>ತ್ವಿಶಾ ಮಾದಕ ವಸ್ತುವಿನ ವ್ಯಸನಿಯಾಗಿದ್ದಳು ಎಂದು ಜಾಮೀನು ಅರ್ಜಿಯಲ್ಲಿ ಹೇಳಲಾಗಿದೆ. ಆದರೆ, ನಾವು ಎಫ್ಐಆರ್ನಲ್ಲಿ ಏನಿದೆಯೋ ಅದರ ಬಗ್ಗೆಯೇ ತನಿಖೆ ನಡೆಸುತ್ತಿದ್ದೇವೆ </blockquote><span class="attribution">ರಜನೀಶ್ ಕಶ್ಯಪ್, ಎಸ್ಐಟಿ ತಂಡದ ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೂಪಾಲ್:</strong> ‘ಸೊಸೆಯು ಮಾದಕ ವಸ್ತುವಿನ ವ್ಯಸನಿಯಾಗಿದ್ದಳು ಮತ್ತು ಆಕೆ ಮನೋವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು’ ಎಂದು ನಿವೃತ್ತ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ಅವರು ತಮ್ಮ ಮಗನ ಜಾಮೀನು ಅರ್ಜಿಯಲ್ಲಿ ಹೇಳಿದ್ದಾರೆ. ಈ ಜಾಮೀನು ಅರ್ಜಿಯನ್ನು ನ್ಯಾಯಾಲಯವೊಂದು ಸೋಮವಾರ ತಿರಸ್ಕರಿಸಿದೆ.</p>.<p>ತ್ವಿಶಾ ಎಂಬುವರು ತನ್ನ ಗಂಡನ ಮನೆಯಲ್ಲಿ ಮೇ 12ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈಕೆಯ ಕುಟುಂಬಸ್ಥರು, ‘ನಮ್ಮ ಮಗಳ ಮೇಲೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ಇದಕ್ಕಾಗಿಯೇ ಆಕೆಯನ್ನು ಕೊಲೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ. ತ್ವಿಶಾ ಅವರು ‘ಮಿಸ್ ಪುಣೆ’ ಕಿರೀಟ ಗಳಿಸಿದ್ದರು. ಜೊತೆಗೆ, ತೆಲುಗಿನ ಸಿನಿಮಾವೊಂದಲ್ಲಿಯೂ ನಟಿಸಿದ್ದರು.</p>.<p>ತ್ವಿಶಾ ಅವರ ಪತಿ, ವಕೀಲ ಸರ್ಮರ್ಥ ಸಿಂಗ್ ಅವರು ತಲೆಮರೆಸಿಕೊಂಡಿದ್ದಾರೆ. ಗಿರಿಬಾಲಾ ಅವರಿಗೆ ಸ್ಥಳೀಯ ನ್ಯಾಯಾಲಯವು ಈಗಾಗಲೇ ನಿರೀಕ್ಷಣಾ ಜಾಮೀನು ನೀಡಿದೆ. ಈ ಪ್ರಕರಣದ ಸಂಬಂಧ ಮಧ್ಯ ಪ್ರದೇಶ ಸರ್ಕಾರವು ಎಸ್ಐಟಿ ರಚಿಸಿದ್ದು, ಸಮರ್ಥ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. </p>.<p><strong>ಅರ್ಜಿಯಲ್ಲೇನಿದೆ?:</strong> ‘ಆಕೆ ಮಾದಕ ವಸ್ತುವಿನ ವ್ಯಸನಿಯಾಗಿದ್ದಳು. ಮಾದಕ ವಸ್ತು ಸಿಗದಿದ್ದಾಗಲೆಲ್ಲ ಆಕೆಯ ಕೈಗಳು ನಡುಗುತ್ತಿದ್ದವು ಮತ್ತು ಕೆರಳುತ್ತಿದ್ದಳು. ಇದಕ್ಕಾಗಿ ಆಕೆ ಮನೋವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಪಡೆದುಕೊಳ್ಳುತ್ತಿದ್ದಳು’ ಎಂದು ಗಿರಿಬಾಲಾ ಅವರು ತಮ್ಮ ಮಗನಿಗೆ ಜಾಮೀನು ಕೋರಿರುವ ಅರ್ಜಿಯಲ್ಲಿ ಹೇಳಿದ್ದಾರೆ.</p>.<p>‘ಏಪ್ರಿಲ್ 17ರಂದು ಆಕೆ ದೆಹಲಿಗೆ ತೆರಳಿದ್ದಳು. ಆ ಬಳಿಕ 12 ತಾಸುಗಳವರೆಗೆ ನಮಗೆ ಸಂಪರ್ಕಕ್ಕೆ ಸಿಗಲಿಲ್ಲ. ಮಾರನೇ ದಿನ ಆಕೆ ತನ್ನ ಪೋಷಕರ ಮನೆ ತಲುಪಿದ್ದಳು. ಆಕೆ ಗರ್ಭಿಣಿಯಾದ ಬಳಿಕ, ಅತ್ತೆ–ಮಾವನ ವಿಷಯದಲ್ಲಿ ವರ್ತನೆ ಬದಲಾಗಿತ್ತು. ಆಕೆ ಸಾಯುವ ದಿನ ಪತಿ ಆಕೆಯನ್ನು ಬ್ಯೂಟಿ ಪಾರ್ಲರ್ಗೆ ಕರೆದುಕೊಂಡು ಹೋಗಿದ್ದ’ ಎಂದು ಹೇಳಲಾಗಿದೆ.</p>.<p>‘ನಾವು ವರದಕ್ಷಿಣೆ ಕಿರುಕುಳ ನೀಡಿದ್ದೇವೆ ಎಂಬುದೆಲ್ಲಾ ಸುಳ್ಳು. ಆಕೆಗೆ ಅಗತ್ಯವಿದ್ದಾಗಲೆಲ್ಲ ಹಣ ನೀಡಿದ್ದೇವೆ. ₹5 ಸಾವಿರಿಂದ ₹50 ಸಾವಿರದವರೆಗೂ ಹಣ ನೀಡಿದ್ದೇವೆ’ ಎಂದು ಹೇಳಲಾಗಿದೆ. </p>.<p>2024ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಇಬ್ಬರ ಪರಿಚಯವಾಗಿತ್ತು. 2025ರ ಡಿಸೆಂಬರ್ನಲ್ಲಿ ಇಬ್ಬರು ಮದುವೆಯಾಗಿದ್ದರು.</p>.<div><blockquote>ತ್ವಿಶಾ ಮಾದಕ ವಸ್ತುವಿನ ವ್ಯಸನಿಯಾಗಿದ್ದಳು ಎಂದು ಜಾಮೀನು ಅರ್ಜಿಯಲ್ಲಿ ಹೇಳಲಾಗಿದೆ. ಆದರೆ, ನಾವು ಎಫ್ಐಆರ್ನಲ್ಲಿ ಏನಿದೆಯೋ ಅದರ ಬಗ್ಗೆಯೇ ತನಿಖೆ ನಡೆಸುತ್ತಿದ್ದೇವೆ </blockquote><span class="attribution">ರಜನೀಶ್ ಕಶ್ಯಪ್, ಎಸ್ಐಟಿ ತಂಡದ ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>