<p><strong>ನವದೆಹಲಿ</strong>: ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನೇಮಕವಾಗಿರುವ ನಿತಿನ್ ನವೀನ್ ಅವರು ನಾಲ್ಕು ರಾಜ್ಯಗಳ ತಮ್ಮ ಪಕ್ಷಕ್ಕೆ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಿದ್ದಾರೆ.</p><p>ದೆಹಲಿ ಬಿಜೆಪಿಗೆ ಕೇಂದ್ರ ಸಚಿವ ಹಾಗೂ ದೆಹಲಿ ಪಶ್ಚಿಮ ಸಂಸದ ಹರ್ಷ ಮಲ್ಹೋತ್ರಾ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ವಿರೇಂದ್ರ ಸಚ್ದೇವ್ ಅವರ ಸ್ಥಾನವನ್ನು ಬದಲಾಯಿಸಲಾಗಿದೆ.</p><p>ಹರಿಯಾಣ ಬಿಜೆಪಿ ಹೊಣೆಯನ್ನು ಮಹಿಳೆಗೆ ವಹಿಸಲಾಗಿದೆ. ಹರಿಯಾಣದ ಉದಯೋನ್ಮುಖ ಬಿಜೆಪಿ ನಾಯಕಿ ಅರ್ಚನಾ ಗುಪ್ತಾ ಅವರಿಗೆ ರಾಜ್ಯಾಧ್ಯಕ್ಷರಾಗುವ ಅವಕಾಶ ಸಿಕ್ಕಿದೆ.</p><p>2024 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸರ್ದಾರ್ ಕೇವಲ್ ಸಿಂಗ್ ದಿಲ್ಲೋನ್ ಅವರಿಗೆ ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಅವಕಾಶ ಸಿಕ್ಕಿದೆ. ಜಾಟ್ ಮತಗಳ ಮೇಲೆ ಕಣ್ಣಿಟ್ಟು ನಿತಿನ್ ನವೀನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.</p><p>ತ್ರಿಪುರಾ ರಾಜ್ಯಕ್ಕೆ ಅಶೋಕ್ ದೇವರಾಯ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಬಿಜೆಪಿ ನೇಮಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನೇಮಕವಾಗಿರುವ ನಿತಿನ್ ನವೀನ್ ಅವರು ನಾಲ್ಕು ರಾಜ್ಯಗಳ ತಮ್ಮ ಪಕ್ಷಕ್ಕೆ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಿದ್ದಾರೆ.</p><p>ದೆಹಲಿ ಬಿಜೆಪಿಗೆ ಕೇಂದ್ರ ಸಚಿವ ಹಾಗೂ ದೆಹಲಿ ಪಶ್ಚಿಮ ಸಂಸದ ಹರ್ಷ ಮಲ್ಹೋತ್ರಾ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ವಿರೇಂದ್ರ ಸಚ್ದೇವ್ ಅವರ ಸ್ಥಾನವನ್ನು ಬದಲಾಯಿಸಲಾಗಿದೆ.</p><p>ಹರಿಯಾಣ ಬಿಜೆಪಿ ಹೊಣೆಯನ್ನು ಮಹಿಳೆಗೆ ವಹಿಸಲಾಗಿದೆ. ಹರಿಯಾಣದ ಉದಯೋನ್ಮುಖ ಬಿಜೆಪಿ ನಾಯಕಿ ಅರ್ಚನಾ ಗುಪ್ತಾ ಅವರಿಗೆ ರಾಜ್ಯಾಧ್ಯಕ್ಷರಾಗುವ ಅವಕಾಶ ಸಿಕ್ಕಿದೆ.</p><p>2024 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸರ್ದಾರ್ ಕೇವಲ್ ಸಿಂಗ್ ದಿಲ್ಲೋನ್ ಅವರಿಗೆ ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಅವಕಾಶ ಸಿಕ್ಕಿದೆ. ಜಾಟ್ ಮತಗಳ ಮೇಲೆ ಕಣ್ಣಿಟ್ಟು ನಿತಿನ್ ನವೀನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.</p><p>ತ್ರಿಪುರಾ ರಾಜ್ಯಕ್ಕೆ ಅಶೋಕ್ ದೇವರಾಯ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಬಿಜೆಪಿ ನೇಮಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>