<p><strong>ನವದೆಹಲಿ: </strong>'ಇಂಡಿಯಾ' ಮೈತ್ರಿಕೂಟ ಶೀಘ್ರದಲ್ಲೇ ಪತನಗೊಳ್ಳಲಿದೆ, ಅದಕ್ಕೆ ರಾಹುಲ್ ಗಾಂಧಿಯೇ ಹೊಣೆಯಾಗಲಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. </p><p>ರಾಹುಲ್ ಅಸಮರ್ಥ ನಾಯಕರಾಗಿದ್ದು, ಇದರಿಂದಾಗಿ ಇಂಡಿಯಾ ಒಕ್ಕೂಟ ಅವನತಿಯ ಅಂಚಿನಲ್ಲಿದೆ ಎಂದು ಹೇಳಿದೆ. </p><p>ಚುನಾವಣೆಯಲ್ಲಿ ಮತ ಕಳ್ಳತನ ಆರೋಪ ಮಾಡಿರುವ ರಾಹುಲ್ ಗಾಂಧಿ ವಿರುದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ವಾಗ್ದಾಳಿ ನಡೆಸಿದ್ದಾರೆ. </p><p>'ಲೋಕಸಭೆಯಲ್ಲಿ ಬಿಜೆಪಿಯ 240 ಸಂಸದರಲ್ಲಿ ಪ್ರತಿ ಆರನೇ ಸಂಸದರು ಮತ ಕಳ್ಳತನದ ಮೂಲಕ ಗೆದ್ದಿದ್ದಾರೆ. ಅವರನ್ನು ಗುರುತಿಸುವುದು ಕಷ್ಟವೇನಲ್ಲ. ಬಿಜೆಪಿಯ ಭಾಷೆಯಲ್ಲಿ ಹೇಳುವುದಾದರೆ ನುಸುಳುಕೋರರು. ಹರಿಯಾಣದಲ್ಲಿ ನುಸುಳುಕೋರರ ಸರ್ಕಾರವಿದೆ' ಎಂದು ರಾಹುಲ್ ಆರೋಪಿಸಿದ್ದರು. </p><p>ಇದಕ್ಕೆ ತಿರುಗೇಟು ನೀಡಿರುವ ಸಂಬಿತ್, 'ಹರಿಯಾಣದ ಜನರು ಬಿಜೆಪಿ ಸರ್ಕಾರಕ್ಕೆ ನೀಡಿದ ಜನಾದೇಶವನ್ನು ರಾಹುಲ್ ಅವಮಾನಿಸಿದ್ದಾರೆ' ಎಂದು ಹೇಳಿದ್ದಾರೆ. </p><p>'ಹರಿಯಾಣದ ಜನರು ಮತ ಚಲಾಯಿಸಿ ಶಾಸಕರನ್ನು ಹಾಗೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ. ಹಾಗಿರುವಾಗ ನುಸುಳುಕೋರರು ಎಂದು ಕರೆಯುವುದು ಎಷ್ಟು ಸರಿ' ಎಂದು ಪ್ರಶ್ನಿಸಿದ್ದಾರೆ. </p><p>'ರಾಹುಲ್ ಗಾಂಧಿ ಅಸಮರ್ಥ ನಾಯಕರಾಗಿದ್ದು, ಇದರಿಂದಾಗಿ ಇಡೀ ಪಕ್ಷವೇ ಹಿನ್ನಡೆ ಅನುಭವಿಸುತ್ತಿದೆ. ಕೆಲವೇ ವಾರಗಳಲ್ಲಿ ಇಂಡಿಯಾ ಮೈತ್ರಿಯು ನಾಶವಾಗಲಿದೆ' ಎಂದು ಹೇಳಿದ್ದಾರೆ. </p><p>'ರಾಹುಲ್ ನಾಯಕತ್ವದಿಂದಾಗಿ ಕಾಂಗ್ರೆಸ್ ಪಕ್ಷವನ್ನಷ್ಟೇ ಅಲ್ಲದೆ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ದುರ್ಬಲಗೊಳಿಸಿದೆ' ಎಂದು ಆರೋಪಿಸಿದ್ದಾರೆ. </p>.ತಮಿಳುನಾಡು: ಟಿವಿಕೆ ಸರ್ಕಾರ ರಚನೆಗೆ ರಾಜ್ಯಪಾಲರೆದುರು ಹಕ್ಕು ಮಂಡಿಸಿದ ವಿಜಯ್ .ತಮಿಳುನಾಡು, ಕೇರಳದಲ್ಲಿ ಸರ್ಕಾರ ರಚನೆ ಕಸರತ್ತು ಶುರು: ಕೆಳಗಿಳಿಯಲು ಒಲ್ಲದ ಮಮತಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>'ಇಂಡಿಯಾ' ಮೈತ್ರಿಕೂಟ ಶೀಘ್ರದಲ್ಲೇ ಪತನಗೊಳ್ಳಲಿದೆ, ಅದಕ್ಕೆ ರಾಹುಲ್ ಗಾಂಧಿಯೇ ಹೊಣೆಯಾಗಲಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. </p><p>ರಾಹುಲ್ ಅಸಮರ್ಥ ನಾಯಕರಾಗಿದ್ದು, ಇದರಿಂದಾಗಿ ಇಂಡಿಯಾ ಒಕ್ಕೂಟ ಅವನತಿಯ ಅಂಚಿನಲ್ಲಿದೆ ಎಂದು ಹೇಳಿದೆ. </p><p>ಚುನಾವಣೆಯಲ್ಲಿ ಮತ ಕಳ್ಳತನ ಆರೋಪ ಮಾಡಿರುವ ರಾಹುಲ್ ಗಾಂಧಿ ವಿರುದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ವಾಗ್ದಾಳಿ ನಡೆಸಿದ್ದಾರೆ. </p><p>'ಲೋಕಸಭೆಯಲ್ಲಿ ಬಿಜೆಪಿಯ 240 ಸಂಸದರಲ್ಲಿ ಪ್ರತಿ ಆರನೇ ಸಂಸದರು ಮತ ಕಳ್ಳತನದ ಮೂಲಕ ಗೆದ್ದಿದ್ದಾರೆ. ಅವರನ್ನು ಗುರುತಿಸುವುದು ಕಷ್ಟವೇನಲ್ಲ. ಬಿಜೆಪಿಯ ಭಾಷೆಯಲ್ಲಿ ಹೇಳುವುದಾದರೆ ನುಸುಳುಕೋರರು. ಹರಿಯಾಣದಲ್ಲಿ ನುಸುಳುಕೋರರ ಸರ್ಕಾರವಿದೆ' ಎಂದು ರಾಹುಲ್ ಆರೋಪಿಸಿದ್ದರು. </p><p>ಇದಕ್ಕೆ ತಿರುಗೇಟು ನೀಡಿರುವ ಸಂಬಿತ್, 'ಹರಿಯಾಣದ ಜನರು ಬಿಜೆಪಿ ಸರ್ಕಾರಕ್ಕೆ ನೀಡಿದ ಜನಾದೇಶವನ್ನು ರಾಹುಲ್ ಅವಮಾನಿಸಿದ್ದಾರೆ' ಎಂದು ಹೇಳಿದ್ದಾರೆ. </p><p>'ಹರಿಯಾಣದ ಜನರು ಮತ ಚಲಾಯಿಸಿ ಶಾಸಕರನ್ನು ಹಾಗೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ. ಹಾಗಿರುವಾಗ ನುಸುಳುಕೋರರು ಎಂದು ಕರೆಯುವುದು ಎಷ್ಟು ಸರಿ' ಎಂದು ಪ್ರಶ್ನಿಸಿದ್ದಾರೆ. </p><p>'ರಾಹುಲ್ ಗಾಂಧಿ ಅಸಮರ್ಥ ನಾಯಕರಾಗಿದ್ದು, ಇದರಿಂದಾಗಿ ಇಡೀ ಪಕ್ಷವೇ ಹಿನ್ನಡೆ ಅನುಭವಿಸುತ್ತಿದೆ. ಕೆಲವೇ ವಾರಗಳಲ್ಲಿ ಇಂಡಿಯಾ ಮೈತ್ರಿಯು ನಾಶವಾಗಲಿದೆ' ಎಂದು ಹೇಳಿದ್ದಾರೆ. </p><p>'ರಾಹುಲ್ ನಾಯಕತ್ವದಿಂದಾಗಿ ಕಾಂಗ್ರೆಸ್ ಪಕ್ಷವನ್ನಷ್ಟೇ ಅಲ್ಲದೆ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ದುರ್ಬಲಗೊಳಿಸಿದೆ' ಎಂದು ಆರೋಪಿಸಿದ್ದಾರೆ. </p>.ತಮಿಳುನಾಡು: ಟಿವಿಕೆ ಸರ್ಕಾರ ರಚನೆಗೆ ರಾಜ್ಯಪಾಲರೆದುರು ಹಕ್ಕು ಮಂಡಿಸಿದ ವಿಜಯ್ .ತಮಿಳುನಾಡು, ಕೇರಳದಲ್ಲಿ ಸರ್ಕಾರ ರಚನೆ ಕಸರತ್ತು ಶುರು: ಕೆಳಗಿಳಿಯಲು ಒಲ್ಲದ ಮಮತಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>