<p><strong>ಚೆನ್ನೈ:</strong> ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದರು.</p>.<p>ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರ್ರಾಜನ್ ಅವರ ನೇತೃತ್ವದ 13 ಸದಸ್ಯರನ್ನೊಳಗೊಂಡ ಸಮಿತಿ ಸಿದ್ದಪಡಿಸಿರುವ ಈ ಪ್ರಣಾಳಿಕೆಯಲ್ಲಿ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ, ಸಾಮಾಜಿಕ ನ್ಯಾಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ರೈತರ ಕಲ್ಯಾಣ ಸೇರಿದಂತೆ 12 ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಮತಗಳನ್ನು ಸೆಳೆಯಲು ಮಹಿಳೆಯರು, ರೈತರು ಮತ್ತು ಯುವಜನತೆ ಗುರಿಯಾಗಿಸಿಕೊಂಡು ಮಹತ್ವದ ಭರವಸೆಗಳನ್ನು ಘೋಷಿಸಲಾಗಿದೆ.</p>.<p>ತಮಿಳರ ಹೊಸ ವರ್ಷಾಚರಣೆ ದಿನದಂದೇ ಬಿಡುಗಡೆಯಾದ ಪ್ರಣಾಳಿಕೆಯಲ್ಲಿ, ಸುಬ್ರಹ್ಮಣ್ಯ ಸ್ವಾಮಿ (ಮುರುಗ) ದೇವರನ್ನು ಗೌರವಿಸಲು ’ಥೈಪೂಸಂ’ ಅನ್ನು ರಾಜ್ಯದ ಹಬ್ಬವೆಂದು ಘೋಷಿಸಲಾಗುವುದು. ತಿರುಪ್ಪರನ್ಕುಂಡ್ರಂ ಬೆಟ್ಟದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸುವ ಸಂಪ್ರದಾಯವನ್ನು ಪುನರಾರಂಭಿಸಿ, ಆಚರಣೆಯನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಲಾಗಿದೆ.</p>.<p>ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ನಡ್ಡಾ, ‘ತಮಿಳುನಾಡಿನ ಜನರು ಡಿಎಂಕೆ ಆಳ್ವಿಯಿಂದ ಬೇಸರಗೊಂಡಿದ್ದಾರೆ. ಕುಟುಂಬ ಆಡಳಿತವನ್ನು ಕೊನೆಗಾಣಿಸಲು ಬಯಸುತ್ತಿದ್ದಾರೆ’ ಎಂದು ಹೇಳಿದರು. ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದಲ್ಲಿ ರಾಜ್ಯವನ್ನು ‘ಸಾಂಸ್ಕೃತಿಕ ರಾಜಧಾನಿ‘ಯಿಂದ ‘ಅಪರಾಧ ರಾಜಧಾನಿ‘ ಯನ್ನಾಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.</p>.<h2>ಪ್ರಮುಖ ಘೋಷಣೆಗಳು</h2><h2></h2><ul><li><p>ಮನೆ ಯಜಮಾನಿಗೆ ಮಾಸಿಕ ₹2,000 ಆರ್ಥಿಕ ನೆರವು ಮತ್ತು ಪ್ರತಿ ಕುಟುಂಬಕ್ಕೆ ₹10,000 ಅನುದಾನ</p></li><li><p>ಪ್ರತಿ ಮನೆಗೆ ವಾರ್ಷಿಕ 3 ಎಲ್ಪಿಜಿ ಸಿಲಿಂಡರ್ ಉಚಿತ (ಪೊಂಗಲ್ ಸುಗ್ಗಿಯ ಹಬ್ಬ, ತಮಿಳು ಹೊಸ ವರ್ಷ ಮತ್ತು ದೀಪಾವಳಿಯ ಸಮಯದಲ್ಲಿ ತಲಾ ಒಂದೊಂದು)</p></li><li><p>ಇ-ಸ್ಕೂಟರ್ ಖರೀದಿಗೆ ಮಹಿಳೆಯರಿಗೆ ₹25,000 ಸಬ್ಸಿಡಿ </p></li><li><p>ಲೈಂಗಿಕ ಅಪರಾಧಗಳು ಸೇರಿದಂತೆ ಘೋರ ಪ್ರಕರಣಗಳಿಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ</p></li><li><p>ಮಹಿಳೆ ನೇತೃತ್ವದ ಸಹಕಾರ ಸಂಘಗಳು, ಸ್ವಸಹಾಯ ಸಂಘಗಳು, ಎಂಎಸ್ಎಂಇಗಳಿಗೆ ₹50 ಲಕ್ಷದವರೆಗೆ ಸಾಲ</p></li><li><p>ಪಶುಸಂಗೋಪನೆ, ಜಾನುವಾರು ಸಾಕಣೆ, ಸೀಗಡಿ ಸಾಕಾಣಿಕೆ, ಜೇನು ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಮತ್ತಿತರ ಚಟುವಟಿಕೆಗಳಿಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಒಂದು ಬಾರಿ ₹50,000 ಅನುದಾನ </p></li><li><p>ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ₹10 ಲಕ್ಷ ಬಡ್ಡಿರಹಿತ ಸಾಲ. ನಿರುದ್ಯೋಗದಿಂದಾಗಿ ಇಎಂಐ ಪಾವತಿಸಲು ಸಾಧ್ಯವಾಗದವರಿಗೆ ಶಿಕ್ಷಣ ಸಾಲ ಮನ್ನಾ </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದರು.</p>.<p>ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರ್ರಾಜನ್ ಅವರ ನೇತೃತ್ವದ 13 ಸದಸ್ಯರನ್ನೊಳಗೊಂಡ ಸಮಿತಿ ಸಿದ್ದಪಡಿಸಿರುವ ಈ ಪ್ರಣಾಳಿಕೆಯಲ್ಲಿ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ, ಸಾಮಾಜಿಕ ನ್ಯಾಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ರೈತರ ಕಲ್ಯಾಣ ಸೇರಿದಂತೆ 12 ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಮತಗಳನ್ನು ಸೆಳೆಯಲು ಮಹಿಳೆಯರು, ರೈತರು ಮತ್ತು ಯುವಜನತೆ ಗುರಿಯಾಗಿಸಿಕೊಂಡು ಮಹತ್ವದ ಭರವಸೆಗಳನ್ನು ಘೋಷಿಸಲಾಗಿದೆ.</p>.<p>ತಮಿಳರ ಹೊಸ ವರ್ಷಾಚರಣೆ ದಿನದಂದೇ ಬಿಡುಗಡೆಯಾದ ಪ್ರಣಾಳಿಕೆಯಲ್ಲಿ, ಸುಬ್ರಹ್ಮಣ್ಯ ಸ್ವಾಮಿ (ಮುರುಗ) ದೇವರನ್ನು ಗೌರವಿಸಲು ’ಥೈಪೂಸಂ’ ಅನ್ನು ರಾಜ್ಯದ ಹಬ್ಬವೆಂದು ಘೋಷಿಸಲಾಗುವುದು. ತಿರುಪ್ಪರನ್ಕುಂಡ್ರಂ ಬೆಟ್ಟದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸುವ ಸಂಪ್ರದಾಯವನ್ನು ಪುನರಾರಂಭಿಸಿ, ಆಚರಣೆಯನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಲಾಗಿದೆ.</p>.<p>ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ನಡ್ಡಾ, ‘ತಮಿಳುನಾಡಿನ ಜನರು ಡಿಎಂಕೆ ಆಳ್ವಿಯಿಂದ ಬೇಸರಗೊಂಡಿದ್ದಾರೆ. ಕುಟುಂಬ ಆಡಳಿತವನ್ನು ಕೊನೆಗಾಣಿಸಲು ಬಯಸುತ್ತಿದ್ದಾರೆ’ ಎಂದು ಹೇಳಿದರು. ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದಲ್ಲಿ ರಾಜ್ಯವನ್ನು ‘ಸಾಂಸ್ಕೃತಿಕ ರಾಜಧಾನಿ‘ಯಿಂದ ‘ಅಪರಾಧ ರಾಜಧಾನಿ‘ ಯನ್ನಾಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.</p>.<h2>ಪ್ರಮುಖ ಘೋಷಣೆಗಳು</h2><h2></h2><ul><li><p>ಮನೆ ಯಜಮಾನಿಗೆ ಮಾಸಿಕ ₹2,000 ಆರ್ಥಿಕ ನೆರವು ಮತ್ತು ಪ್ರತಿ ಕುಟುಂಬಕ್ಕೆ ₹10,000 ಅನುದಾನ</p></li><li><p>ಪ್ರತಿ ಮನೆಗೆ ವಾರ್ಷಿಕ 3 ಎಲ್ಪಿಜಿ ಸಿಲಿಂಡರ್ ಉಚಿತ (ಪೊಂಗಲ್ ಸುಗ್ಗಿಯ ಹಬ್ಬ, ತಮಿಳು ಹೊಸ ವರ್ಷ ಮತ್ತು ದೀಪಾವಳಿಯ ಸಮಯದಲ್ಲಿ ತಲಾ ಒಂದೊಂದು)</p></li><li><p>ಇ-ಸ್ಕೂಟರ್ ಖರೀದಿಗೆ ಮಹಿಳೆಯರಿಗೆ ₹25,000 ಸಬ್ಸಿಡಿ </p></li><li><p>ಲೈಂಗಿಕ ಅಪರಾಧಗಳು ಸೇರಿದಂತೆ ಘೋರ ಪ್ರಕರಣಗಳಿಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ</p></li><li><p>ಮಹಿಳೆ ನೇತೃತ್ವದ ಸಹಕಾರ ಸಂಘಗಳು, ಸ್ವಸಹಾಯ ಸಂಘಗಳು, ಎಂಎಸ್ಎಂಇಗಳಿಗೆ ₹50 ಲಕ್ಷದವರೆಗೆ ಸಾಲ</p></li><li><p>ಪಶುಸಂಗೋಪನೆ, ಜಾನುವಾರು ಸಾಕಣೆ, ಸೀಗಡಿ ಸಾಕಾಣಿಕೆ, ಜೇನು ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಮತ್ತಿತರ ಚಟುವಟಿಕೆಗಳಿಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಒಂದು ಬಾರಿ ₹50,000 ಅನುದಾನ </p></li><li><p>ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ₹10 ಲಕ್ಷ ಬಡ್ಡಿರಹಿತ ಸಾಲ. ನಿರುದ್ಯೋಗದಿಂದಾಗಿ ಇಎಂಐ ಪಾವತಿಸಲು ಸಾಧ್ಯವಾಗದವರಿಗೆ ಶಿಕ್ಷಣ ಸಾಲ ಮನ್ನಾ </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>