<p><strong>ನವದೆಹಲಿ:</strong> 2026–27ರ ಖಾರಿಫ್ ಮಾರುಕಟ್ಟೆ ಋತುವಿಗಾಗಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. </p>.<p>ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. </p>.<p>ಭತ್ತದ ಎಂಎಸ್ಪಿಯನ್ನು ಕ್ವಿಂಟಲ್ಗೆ ₹72 ಹೆಚ್ಚಿಸಲಾಗಿದೆ. ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಹತ್ತಿ ಎಂಎಸ್ಪಿ ಗಣನೀಯ ಏರಿಕೆ ಆಗಿದೆ. </p>.<p>ಕಳೆದ ವರ್ಷಕ್ಕೆ ಹೋಲಿಸಿದರೆ ಎಂಎಸ್ಪಿಯಲ್ಲಿ ಅತ್ಯಧಿಕ ಹೆಚ್ಚಳವನ್ನು ಸೂರ್ಯಕಾಂತಿ ಬೀಜಕ್ಕೆ (ಕ್ವಿಂಟಲ್ಗೆ ₹622), ಹತ್ತಿ (ಕ್ವಿಂಟಲ್ಗೆ ₹557), ಹುಚ್ಚೆಳ್ಳು (ಕ್ವಿಂಟಲ್ಗೆ ₹515) ಮತ್ತು ಎಳ್ಳಿಗೆ (ಕ್ವಿಂಟಲ್ಗೆ ₹500) ಶಿಫಾರಸು ಮಾಡಲಾಗಿದೆ. ಬೆಳೆ ವೈವಿಧ್ಯೀಕರಣ ಉತ್ತೇಜಿಸಲು ಮತ್ತು ಆಮದು ಅವಲಂಬನೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. </p>.<p>ರೈತರಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಎಲ್ಲ 14 ಬೆಳೆಗಳಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಹೆಚ್ಚಿನ ಎಂಎಸ್ಪಿ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.</p>.<p><strong>ಸಂಪುಟದ ಇತರ ತೀರ್ಮಾನಗಳು</strong></p><p>*ಗುಜರಾತ್ನ ಅಹಮದಾಬಾದ್ ಮತ್ತು ಧೋಲೆರಾ ನಡುವೆ ₹20,667 ಕೋಟಿ ಅಂದಾಜು ವೆಚ್ಚದಲ್ಲಿ 134 ಕಿ.ಮೀ. ಉದ್ದದ ಸೆಮಿ ಹೈ-ಸ್ಪೀಡ್ ಡಬಲ್ ರೈಲು ಮಾರ್ಗದ ನಿರ್ಮಾಣಕ್ಕೆ ಒಪ್ಪಿಗೆ. ಈ ಯೋಜನೆಯು ಸ್ವದೇಶಿ ತಂತ್ರಜ್ಞಾನದೊಂದಿಗೆ ಯೋಜಿಸಲಾದ ಭಾರತೀಯ ರೈಲ್ವೆಯ ಮೊದಲ ಸೆಮಿ ಹೈ-ಸ್ಪೀಡ್ ಕಾರಿಡಾರ್ ಆಗಿರಲಿದೆ. ಈ ಮಾರ್ಗವು 2030–31ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. </p><p>*ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಾಗ್ಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಮತ್ತು ಆಧುನೀಕರಿಸಲು ಅನುಮೋದನೆ. </p>.<p><strong>ಕಲ್ಲಿದ್ದಲು ಅನಿಲೀಕರಣಕ್ಕೆ ₹37,500 ಕೋಟಿ</strong></p><p>ಮೇಲ್ಮೈ ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳನ್ನು ಉತ್ತೇಜಿಸಲು ₹37,500 ಕೋಟಿಯ ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.</p><p>ಈ ಉಪಕ್ರಮವು ಆಮದು ಮಾಡಿಕೊಂಡ ಎಲ್ಎನ್ಜಿ, ಯೂರಿಯಾ, ಮೆಥನಾಲ್ ಮತ್ತು ಇತರ ಪ್ರಮುಖ ಉತ್ಪನ್ನಗಳ ಮೇಲಿನ ಭಾರತದ ಭಾರೀ ಅವಲಂಬನೆ ಕಡಿಮೆ ಮಾಡುವ ಮತ್ತು ದೇಶದ ಇಂಧನ ಸುರಕ್ಷತೆ ಬಲಪಡಿಸುವ ಗುರಿ ಹೊಂದಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಈ ಯೋಜನೆಯು 7.5 ಕೋಟಿ ಟನ್ ಕಲ್ಲಿದ್ದಲಿನ ಅನಿಲೀಕರಣಕ್ಕೆ ಉತ್ತೇಜನ ನೀಡುತ್ತದೆ. ಸುಮಾರು ₹3 ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದರು. </p><p>ಸ್ಥಾವರ (ಪ್ಲಾಂಟ್) ಮತ್ತು ಯಂತ್ರೋಪಕರಣಗಳ ವೆಚ್ಚದ<br>ಗರಿಷ್ಠ ಶೇ 20 ರಷ್ಟು ಆರ್ಥಿಕ ಪ್ರೋತ್ಸಾಹ ಒದಗಿಸಲಾಗುತ್ತದೆ.<br>ಯಾವುದೇ ಒಂದು ಯೋಜನೆಗೆ ನೀಡಲಾಗುವ ಹಣಕಾಸಿನ<br>ಪ್ರೋತ್ಸಾಹಧನವನ್ನು ₹5,000 ಕೋಟಿಗೆ ಸೀಮಿತ ಗೊಳಿಸಲಾಗಿದೆ. ಯಾವುದೇ ಒಂದು ಉತ್ಪನ್ನಕ್ಕೆ (ಸಿಂಥೆಟಿಕ್ ನೈಸರ್ಗಿಕ ಅನಿಲ ಮತ್ತು ಯೂರಿಯಾ ಹೊರತುಪಡಿಸಿ) ಗರಿಷ್ಠ ₹9,000 ಕೋಟಿಗೆ ಮತ್ತು ಯಾವುದೇ ಒಂದು ಘಟಕ ಸಮೂಹಕ್ಕೆ ಗರಿಷ್ಠ ₹12,000 ಕೋಟಿ ಪ್ರೋತ್ಸಾಹಧನ ನೀಡಲಾಗುತ್ತದೆ. ಯೋಜನೆಗೆ ಅನುಗುಣವಾಗಿ ನಾಲ್ಕು ಸಮಾನ ಕಂತುಗಳಲ್ಲಿ ಪ್ರೋತ್ಸಾಹಧನದ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 2026–27ರ ಖಾರಿಫ್ ಮಾರುಕಟ್ಟೆ ಋತುವಿಗಾಗಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. </p>.<p>ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. </p>.<p>ಭತ್ತದ ಎಂಎಸ್ಪಿಯನ್ನು ಕ್ವಿಂಟಲ್ಗೆ ₹72 ಹೆಚ್ಚಿಸಲಾಗಿದೆ. ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಹತ್ತಿ ಎಂಎಸ್ಪಿ ಗಣನೀಯ ಏರಿಕೆ ಆಗಿದೆ. </p>.<p>ಕಳೆದ ವರ್ಷಕ್ಕೆ ಹೋಲಿಸಿದರೆ ಎಂಎಸ್ಪಿಯಲ್ಲಿ ಅತ್ಯಧಿಕ ಹೆಚ್ಚಳವನ್ನು ಸೂರ್ಯಕಾಂತಿ ಬೀಜಕ್ಕೆ (ಕ್ವಿಂಟಲ್ಗೆ ₹622), ಹತ್ತಿ (ಕ್ವಿಂಟಲ್ಗೆ ₹557), ಹುಚ್ಚೆಳ್ಳು (ಕ್ವಿಂಟಲ್ಗೆ ₹515) ಮತ್ತು ಎಳ್ಳಿಗೆ (ಕ್ವಿಂಟಲ್ಗೆ ₹500) ಶಿಫಾರಸು ಮಾಡಲಾಗಿದೆ. ಬೆಳೆ ವೈವಿಧ್ಯೀಕರಣ ಉತ್ತೇಜಿಸಲು ಮತ್ತು ಆಮದು ಅವಲಂಬನೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. </p>.<p>ರೈತರಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಎಲ್ಲ 14 ಬೆಳೆಗಳಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಹೆಚ್ಚಿನ ಎಂಎಸ್ಪಿ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.</p>.<p><strong>ಸಂಪುಟದ ಇತರ ತೀರ್ಮಾನಗಳು</strong></p><p>*ಗುಜರಾತ್ನ ಅಹಮದಾಬಾದ್ ಮತ್ತು ಧೋಲೆರಾ ನಡುವೆ ₹20,667 ಕೋಟಿ ಅಂದಾಜು ವೆಚ್ಚದಲ್ಲಿ 134 ಕಿ.ಮೀ. ಉದ್ದದ ಸೆಮಿ ಹೈ-ಸ್ಪೀಡ್ ಡಬಲ್ ರೈಲು ಮಾರ್ಗದ ನಿರ್ಮಾಣಕ್ಕೆ ಒಪ್ಪಿಗೆ. ಈ ಯೋಜನೆಯು ಸ್ವದೇಶಿ ತಂತ್ರಜ್ಞಾನದೊಂದಿಗೆ ಯೋಜಿಸಲಾದ ಭಾರತೀಯ ರೈಲ್ವೆಯ ಮೊದಲ ಸೆಮಿ ಹೈ-ಸ್ಪೀಡ್ ಕಾರಿಡಾರ್ ಆಗಿರಲಿದೆ. ಈ ಮಾರ್ಗವು 2030–31ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. </p><p>*ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಾಗ್ಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಮತ್ತು ಆಧುನೀಕರಿಸಲು ಅನುಮೋದನೆ. </p>.<p><strong>ಕಲ್ಲಿದ್ದಲು ಅನಿಲೀಕರಣಕ್ಕೆ ₹37,500 ಕೋಟಿ</strong></p><p>ಮೇಲ್ಮೈ ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳನ್ನು ಉತ್ತೇಜಿಸಲು ₹37,500 ಕೋಟಿಯ ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.</p><p>ಈ ಉಪಕ್ರಮವು ಆಮದು ಮಾಡಿಕೊಂಡ ಎಲ್ಎನ್ಜಿ, ಯೂರಿಯಾ, ಮೆಥನಾಲ್ ಮತ್ತು ಇತರ ಪ್ರಮುಖ ಉತ್ಪನ್ನಗಳ ಮೇಲಿನ ಭಾರತದ ಭಾರೀ ಅವಲಂಬನೆ ಕಡಿಮೆ ಮಾಡುವ ಮತ್ತು ದೇಶದ ಇಂಧನ ಸುರಕ್ಷತೆ ಬಲಪಡಿಸುವ ಗುರಿ ಹೊಂದಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಈ ಯೋಜನೆಯು 7.5 ಕೋಟಿ ಟನ್ ಕಲ್ಲಿದ್ದಲಿನ ಅನಿಲೀಕರಣಕ್ಕೆ ಉತ್ತೇಜನ ನೀಡುತ್ತದೆ. ಸುಮಾರು ₹3 ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದರು. </p><p>ಸ್ಥಾವರ (ಪ್ಲಾಂಟ್) ಮತ್ತು ಯಂತ್ರೋಪಕರಣಗಳ ವೆಚ್ಚದ<br>ಗರಿಷ್ಠ ಶೇ 20 ರಷ್ಟು ಆರ್ಥಿಕ ಪ್ರೋತ್ಸಾಹ ಒದಗಿಸಲಾಗುತ್ತದೆ.<br>ಯಾವುದೇ ಒಂದು ಯೋಜನೆಗೆ ನೀಡಲಾಗುವ ಹಣಕಾಸಿನ<br>ಪ್ರೋತ್ಸಾಹಧನವನ್ನು ₹5,000 ಕೋಟಿಗೆ ಸೀಮಿತ ಗೊಳಿಸಲಾಗಿದೆ. ಯಾವುದೇ ಒಂದು ಉತ್ಪನ್ನಕ್ಕೆ (ಸಿಂಥೆಟಿಕ್ ನೈಸರ್ಗಿಕ ಅನಿಲ ಮತ್ತು ಯೂರಿಯಾ ಹೊರತುಪಡಿಸಿ) ಗರಿಷ್ಠ ₹9,000 ಕೋಟಿಗೆ ಮತ್ತು ಯಾವುದೇ ಒಂದು ಘಟಕ ಸಮೂಹಕ್ಕೆ ಗರಿಷ್ಠ ₹12,000 ಕೋಟಿ ಪ್ರೋತ್ಸಾಹಧನ ನೀಡಲಾಗುತ್ತದೆ. ಯೋಜನೆಗೆ ಅನುಗುಣವಾಗಿ ನಾಲ್ಕು ಸಮಾನ ಕಂತುಗಳಲ್ಲಿ ಪ್ರೋತ್ಸಾಹಧನದ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>