ಭಾನುವಾರ, 7 ಡಿಸೆಂಬರ್ 2025
×
ADVERTISEMENT
ADVERTISEMENT

ನಗದು ಪತ್ತೆ ‍ಪ್ರಕರಣ | ನ್ಯಾ.ವರ್ಮಾ ತಪ್ಪಿತಸ್ಥ: ವಿಚಾರಣಾ ಸಮಿತಿ

Published : 19 ಜೂನ್ 2025, 16:25 IST
Last Updated : 19 ಜೂನ್ 2025, 16:25 IST
ಫಾಲೋ ಮಾಡಿ
Comments
ಜನರ ವಿಶ್ವಾಸಕ್ಕೆ ಧಕ್ಕೆ ಸಲ್ಲದು
‘ನ್ಯಾಯಾಂಗ ವ್ಯವಸ್ಥೆಯಲ್ಲಿನ ಉನ್ನತಾಧಿಕಾರಿಯ ಬಗ್ಗೆ ಸಾಮಾನ್ಯ ಜನರ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಅಂಥ ವ್ಯಕ್ತಿಗಳು ಪ್ರಾಮಾಣಿಕರಾಗಿರಲೇಬೇಕು. ಅದು ಮೂಲಭೂತ ಮಾನದಂಡವೂ ಹೌದು. ನ್ಯಾಯಾಂಗದ ಎಲ್ಲಾ ಹಂತದ ಅಧಿಕಾರಿಗಳೂ ಪ್ರಾಮಾಣಿಕರಾಗಿರಲೇಬೇಕು. ಜನರ ವಿಶ್ವಾಸದ ಆಧಾರದಲ್ಲೇ ನ್ಯಾಯಾಂಗದ ಅಸ್ತಿತ್ವವಿದ್ದು ನ್ಯಾಯಮೂರ್ತಿಗಳ ವರ್ತನೆಗಳನ್ನೇ ಆ ವಿಶ್ವಾಸ ಆಧರಿಸಿರುತ್ತದೆ. ನ್ಯಾಯಾಲಯದ ಒಳಗೆ ಮಾತ್ರವಲ್ಲದೆ ಹೊರಗೂ ಆ ನಡವಳಿಕೆ ಮುಖ್ಯ. ಪ್ರಾಮಾಣಿಕತೆಯಲ್ಲಿ ಕೊರತೆಯಾದರೆ ಅದು ಜನರ ವಿಶ್ವಾಸಕ್ಕೆ ಕುಂದು ಉಂಟುಮಾಡುತ್ತದೆ. ಅಂಥ ಪ್ರಕರಣಗಳನ್ನು ಕಟ್ಟುನಿಟ್ಟಾಗಿಯೇ ನಿರ್ವಹಿಸಲಾಗುವುದು’ ಎಂದು ವರ್ಮಾ ಅವರನ್ನು ಸೇವೆಯಿಂದ ವಜಾಗೊಳಿಸಲು ಶಿಫಾರಸು ಮಾಡುವಾಗ ಸಮಿತಿ ಅಭಿಪ್ರಾಯಪಟ್ಟಿದೆ. 
ಸಮಿತಿ ವರದಿ ಹೇಳಿದ್ದೇನು? 
1997ರಲ್ಲಿ ಸುಪ್ರೀಂ ಕೋರ್ಟ್‌ ಅಳವಡಿಸಿಕೊಂಡ ‘ನ್ಯಾಯಾಂಗ ಮೌಲ್ಯಗಳನ್ನು’ ವರದಿಯಲ್ಲಿ ಉಲ್ಲೇಖಿಸಲಾಗಿದೆ. * ನ್ಯಾಯಮೂರ್ತಿಗಳು ಪ್ರಾಮಾಣಿಕರಾಗಿರಬೇಕು ಪ್ರತಿಯೊಬ್ಬರ ಸದ್ಗುಣವನ್ನು ಪ್ರಾಮಾಣಿಕತೆ ಆಧಾರದಲ್ಲೇ ಅಳೆಯಲಾಗುತ್ತದೆ * ನಾಗರಿಕ ಸೇವಾ ಹುದ್ದೆಯಲ್ಲಿರುವ ವ್ಯಕ್ತಿಯ ಪ್ರಾಮಾಣಿಕತೆಗಿಂತಲೂ ನ್ಯಾಯಮೂರ್ತಿಗಳ ಪ್ರಮಾಣಿಕತೆಯನ್ನು ಪರೀಕ್ಷಿಸುವ ಮಾಪಕ ತೀಕ್ಷ್ಣವಾಗಿರುತ್ತದೆ *ಪ್ರಾಮಾಣಿಕತೆಯು ಪ್ರಧಾನವೂ ಪ್ರಸ್ತುತವೂ ಅಪೇಕ್ಷಿತವೂ ಆಗಿರಲೇಬೇಕು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT