<p><strong>ನವದೆಹಲಿ: </strong>ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ತಪ್ಪಿತಸ್ಥನನ್ನು ಸಿಬಿಐ ಬುಧವಾರ ಬಂಧಿಸಿದೆ.</p><p>ಬ್ಯಾಂಕ್ ಆಫ್ ಇಂಡಿಯಾಗೆ ₹ 5.69 ಲಕ್ಷ ವಂಚಿಸಿದ್ದ ಪ್ರಕರಣ ಸಂಬಂಧ 1985ರಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸತೀಶ್ ಕುಮಾರ್ ಆನಂದ್ ಎಂಬಾತನನ್ನು ತನಿಖಾಧಿಕಾರಿಗಳು ನಾಲ್ಕು ದಶಕಗಳ ನಂತರ ಬಂಧಿಸಿದ್ದಾರೆ ಎಂದು ಸಿಬಿಐ ತಿಳಿಸಿದೆ.</p><p>ತಪ್ಪಿತಸ್ಥನನ್ನು ಉತ್ತರ ದೆಹಲಿಯ ರೋಹಿಣಿಯಲ್ಲಿ ಬಂಧಿಸಲಾಗಿದ್ದು, ಡೆಹ್ರಾಡೂನ್ಗೆ ಕರೆತರಲಾಗಿದೆ. ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತನಿಖಾ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.</p><p>1977ರಲ್ಲಿ ವಂಚನೆ ನಡೆದಿತ್ತು. ಕ್ರಿಮಿನಲ್ ಪಿತೂರಿ ನಡೆಸಿದ್ದ ಆನಂದ್, ನಕಲಿ ರಶೀದಿಗಳು, ದಾಖಲೆಗಳ ಆಧಾರದಲ್ಲಿ ಸಾಲ ಪಡೆದಿದ್ದ. ಅದರಿಂದ ಬ್ಯಾಂಕ್ಗೆ ನಷ್ಟ ಉಂಟಾದರೆ, ಆನಂದ್ ₹ 5.69 ಲಕ್ಷ ಲಾಭ ಮಾಡಿಕೊಂಡಿದ್ದ.</p><p>ಈ ಸಂಬಂಧ ಆನಂದ್, ಆಗಿನ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಮತ್ತೊಬ್ಬ ಆರೋಪಿ ಅಶೋಕ್ ಕುಮಾರ್ ಎಂಬವರ ವಿರುದ್ಧ 1978ರ ಮೇ 5ರಂದು ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ತನಿಖೆ ಬಳಿಕ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.</p><p>ಅದರಂತೆ ಸಿಬಿಐ ನ್ಯಾಯಾಲಯವು 1985ರ ಜೂನ್ 19ರಂದು ತೀರ್ಪು ನೀಡಿತ್ತು. ವ್ಯವಸ್ಥಾಪಕರನ್ನು ಪ್ರಕರಣದಿಂದ ಖುಲಾಸೆಗೊಳಿಸಿ, ಆನಂದ್ ಹಾಗೂ ಕುಮಾರ್ಗೆ ತಲಾ ₹ 15,000 ದಂಡ ಹಾಗೂ 5 ವರ್ಷ ಶಿಕ್ಷೆ ವಿಧಿಸಿತ್ತು.</p><p>ಆದರೆ, ಆನಂದ್ ದೋಷಿ ಎಂದು ಸಾಬೀತಾದಾಗಿನಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು 2009ರ ನವೆಂಬರ್ 30ರಂದು ಆತನನ್ನು 'ಘೋಷಿತ ಅಪರಾಧಿ' ಎಂದು ಘೋಷಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ತಪ್ಪಿತಸ್ಥನನ್ನು ಸಿಬಿಐ ಬುಧವಾರ ಬಂಧಿಸಿದೆ.</p><p>ಬ್ಯಾಂಕ್ ಆಫ್ ಇಂಡಿಯಾಗೆ ₹ 5.69 ಲಕ್ಷ ವಂಚಿಸಿದ್ದ ಪ್ರಕರಣ ಸಂಬಂಧ 1985ರಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸತೀಶ್ ಕುಮಾರ್ ಆನಂದ್ ಎಂಬಾತನನ್ನು ತನಿಖಾಧಿಕಾರಿಗಳು ನಾಲ್ಕು ದಶಕಗಳ ನಂತರ ಬಂಧಿಸಿದ್ದಾರೆ ಎಂದು ಸಿಬಿಐ ತಿಳಿಸಿದೆ.</p><p>ತಪ್ಪಿತಸ್ಥನನ್ನು ಉತ್ತರ ದೆಹಲಿಯ ರೋಹಿಣಿಯಲ್ಲಿ ಬಂಧಿಸಲಾಗಿದ್ದು, ಡೆಹ್ರಾಡೂನ್ಗೆ ಕರೆತರಲಾಗಿದೆ. ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತನಿಖಾ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.</p><p>1977ರಲ್ಲಿ ವಂಚನೆ ನಡೆದಿತ್ತು. ಕ್ರಿಮಿನಲ್ ಪಿತೂರಿ ನಡೆಸಿದ್ದ ಆನಂದ್, ನಕಲಿ ರಶೀದಿಗಳು, ದಾಖಲೆಗಳ ಆಧಾರದಲ್ಲಿ ಸಾಲ ಪಡೆದಿದ್ದ. ಅದರಿಂದ ಬ್ಯಾಂಕ್ಗೆ ನಷ್ಟ ಉಂಟಾದರೆ, ಆನಂದ್ ₹ 5.69 ಲಕ್ಷ ಲಾಭ ಮಾಡಿಕೊಂಡಿದ್ದ.</p><p>ಈ ಸಂಬಂಧ ಆನಂದ್, ಆಗಿನ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಮತ್ತೊಬ್ಬ ಆರೋಪಿ ಅಶೋಕ್ ಕುಮಾರ್ ಎಂಬವರ ವಿರುದ್ಧ 1978ರ ಮೇ 5ರಂದು ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ತನಿಖೆ ಬಳಿಕ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.</p><p>ಅದರಂತೆ ಸಿಬಿಐ ನ್ಯಾಯಾಲಯವು 1985ರ ಜೂನ್ 19ರಂದು ತೀರ್ಪು ನೀಡಿತ್ತು. ವ್ಯವಸ್ಥಾಪಕರನ್ನು ಪ್ರಕರಣದಿಂದ ಖುಲಾಸೆಗೊಳಿಸಿ, ಆನಂದ್ ಹಾಗೂ ಕುಮಾರ್ಗೆ ತಲಾ ₹ 15,000 ದಂಡ ಹಾಗೂ 5 ವರ್ಷ ಶಿಕ್ಷೆ ವಿಧಿಸಿತ್ತು.</p><p>ಆದರೆ, ಆನಂದ್ ದೋಷಿ ಎಂದು ಸಾಬೀತಾದಾಗಿನಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು 2009ರ ನವೆಂಬರ್ 30ರಂದು ಆತನನ್ನು 'ಘೋಷಿತ ಅಪರಾಧಿ' ಎಂದು ಘೋಷಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>