<p><strong>ನವದೆಹಲಿ:</strong> ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ₹114.98 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ರಿಲಯನ್ಸ್ ಟೆಲಿಕಾಂನ ಇಬ್ಬರು ಮಾಜಿ ನಿರ್ದೇಶಕರ ನಿವಾಸ ಮತ್ತು ಕಂಪನಿಯ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿದೆ.</p>.<p>‘ರಿಲಯನ್ಸ್ ಟೆಲಿಕಾಂನಲ್ಲಿ ನಿರ್ದೇಶಕರಾಗಿದ್ದ ಸತೀಶ್ ಸೇಠ್, ಗೌತಮ್ ಬಿ ದೋಶಿ ಸೇರಿದಂತೆ ಹಲವರ ವಿರುದ್ಧ ವಂಚನೆ ಮತ್ತು ಒಳಸಂಚು ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಅಡಿ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ’ ಎಂದು ಸಿಬಿಐ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>₹114.98 ಕೋಟಿ ನಷ್ಟ ಉಂಟು ಮಾಡಿರುವ ಕುರಿತು ಎಸ್ಬಿಐ ದೂರು ನೀಡಿತ್ತು. ರಿಲಯನ್ಸ್ ಟೆಲಿಕಾಂ ಲಿಮಿಟೆಡ್ಗೆ ₹ 735 ಕೋಟಿ ಅವಧಿ ಸಾಲ (ಟರ್ಮ್ ಲೋನ್) ನೀಡಿದ್ದ 11 ಬ್ಯಾಂಕ್ಗಳ ಒಕ್ಕೂಟದಲ್ಲಿ ಎಸ್ಬಿಐ ಕೂಡಾ ಒಂದಾಗಿತ್ತು ಎಂದು ಸಿಬಿಐ ತಿಳಿಸಿದೆ.</p>.<p>‘ಸತೀಶ್ ಸೇಠ್ ಮತ್ತು ಗೌತಮ್ ಬಿ.ದೋಶಿ ಅವರ ಮುಂಬೈನಲ್ಲಿರುವ ನಿವಾಸಗಳು ಮತ್ತು ರಿಲಯನ್ಸ್ ಟೆಲಿಕಾಂನ ನೋಂದಾಯಿತ ಕಚೇರಿಯಲ್ಲಿ ಪರಿಶೀಲನೆ ನಡೆಸಿ, ಸಾಲ ಮಂಜೂರಾತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ₹114.98 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ರಿಲಯನ್ಸ್ ಟೆಲಿಕಾಂನ ಇಬ್ಬರು ಮಾಜಿ ನಿರ್ದೇಶಕರ ನಿವಾಸ ಮತ್ತು ಕಂಪನಿಯ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿದೆ.</p>.<p>‘ರಿಲಯನ್ಸ್ ಟೆಲಿಕಾಂನಲ್ಲಿ ನಿರ್ದೇಶಕರಾಗಿದ್ದ ಸತೀಶ್ ಸೇಠ್, ಗೌತಮ್ ಬಿ ದೋಶಿ ಸೇರಿದಂತೆ ಹಲವರ ವಿರುದ್ಧ ವಂಚನೆ ಮತ್ತು ಒಳಸಂಚು ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಅಡಿ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ’ ಎಂದು ಸಿಬಿಐ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>₹114.98 ಕೋಟಿ ನಷ್ಟ ಉಂಟು ಮಾಡಿರುವ ಕುರಿತು ಎಸ್ಬಿಐ ದೂರು ನೀಡಿತ್ತು. ರಿಲಯನ್ಸ್ ಟೆಲಿಕಾಂ ಲಿಮಿಟೆಡ್ಗೆ ₹ 735 ಕೋಟಿ ಅವಧಿ ಸಾಲ (ಟರ್ಮ್ ಲೋನ್) ನೀಡಿದ್ದ 11 ಬ್ಯಾಂಕ್ಗಳ ಒಕ್ಕೂಟದಲ್ಲಿ ಎಸ್ಬಿಐ ಕೂಡಾ ಒಂದಾಗಿತ್ತು ಎಂದು ಸಿಬಿಐ ತಿಳಿಸಿದೆ.</p>.<p>‘ಸತೀಶ್ ಸೇಠ್ ಮತ್ತು ಗೌತಮ್ ಬಿ.ದೋಶಿ ಅವರ ಮುಂಬೈನಲ್ಲಿರುವ ನಿವಾಸಗಳು ಮತ್ತು ರಿಲಯನ್ಸ್ ಟೆಲಿಕಾಂನ ನೋಂದಾಯಿತ ಕಚೇರಿಯಲ್ಲಿ ಪರಿಶೀಲನೆ ನಡೆಸಿ, ಸಾಲ ಮಂಜೂರಾತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>