<p><strong>ನವದೆಹಲಿ:</strong> ಉದ್ದಿಮೆಗಳ ಅಗತ್ಯಗಳಿಗೆ ತಕ್ಕಂತೆ ತಾಂತ್ರಿಕ ಶಿಕ್ಷಣ ಕ್ಷೇತ್ರವನ್ನು ಅಣಿಗೊಳಿಸುವ ಉದ್ದೇಶದಿಂದ ದೇಶದಲ್ಲಿನ ಕೃತಕ ಬುದ್ಧಿಮತ್ತೆ (ಎ.ಐ) ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಪುನರ್ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ.</p>.<p>‘ಉಪನ್ಯಾಸದ ಮೂಲಕ ಬೋಧನೆ ಮಾಡುವ ಸಾಂಪ್ರದಾಯಿಕ ಪದ್ಧತಿ ಕೈಬಿಟ್ಟು ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುವಂತಹ ಶಿಕ್ಷಣ ವ್ಯವಸ್ಥೆಯನ್ನು ಆರಂಭಿಸಬೇಕು. ಇಂತಹ ಬೋಧನೆ–ಕಲಿಕಾ ಪ್ರಕ್ರಿಯೆಯನ್ನು ಎಂಜಿನಿಯರಿಂಗ್ನ ಮೊದಲ ಸೆಮಿಸ್ಟರ್ನಿಂದಲೇ ಆರಂಭಿಸಬೇಕು’ ಎಂದು ಎ.ಐ ಪಠ್ಯಕ್ರಮ ಕುರಿತ ಕಾರ್ಯಪಡೆಯೊಂದು ಶಿಫಾರಸು ಮಾಡಿದೆ.</p>.<p>ಕಾರ್ಯಪಡೆಯ ಶಿಫಾರಸುಗಳ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು.</p>.<p>ಪ್ರಸ್ತುತ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶೇ25–ಶೇ30ರಷ್ಟು ಪ್ರಾಯೋಗಿಕ ಕಲಿಕೆ ಕೈಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಪದವಿ ಹಾಗೂ ನಿರ್ದಿಷ್ಟ ವಿಷಯದಲ್ಲಿ ಅವರು ಕೈಗೊಳ್ಳುವ ವಿಶೇಷ ಅಧ್ಯಯನ ಆಧರಿಸಿ ಇದನ್ನು ಶೇ40– ಶೇ75ಕ್ಕೆ ಹೆಚ್ಚಿಸಬೇಕು ಎಂದು ಕಾರ್ಯಪಡೆ ಪ್ರಸ್ತಾವಿಸಿದೆ.</p>.<p>ಎ.ಐ ಅಭಿವೃದ್ದಿ, ಜನರೇಟಿವ್ ಎ.ಐ, ಮಷಿನ್ ಲರ್ನಿಂಗ್ ಆಪರೇಷನ್ಸ್(ಎಂಎಲ್ಒಪಿಎಸ್) ನಂತಹ ಅತ್ಯಾಧುನಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಉದ್ದೇಶದಿಂದ ಈ ಬದಲಾವಣೆಗಳು ಅಗತ್ಯ ಎಂದು ಹೇಳಿದೆ.</p>.<p>ನಾಸ್ಕಾಮ್ ಅಧ್ಯಕ್ಷ ರಾಜೇಶ್ ನಂಬಿಯಾರ್, ವಿಪ್ರೊದ ಸಿಒಒ ಸಂಜೀವ್ ಜೈನ್, ಟಿಸಿಎಸ್ ಹಾಗೂ ವಿಪ್ರೊದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಉದ್ದಿಮೆಗಳ ಅಗತ್ಯಗಳಿಗೆ ತಕ್ಕಂತೆ ತಾಂತ್ರಿಕ ಶಿಕ್ಷಣ ಕ್ಷೇತ್ರವನ್ನು ಅಣಿಗೊಳಿಸುವ ಉದ್ದೇಶದಿಂದ ದೇಶದಲ್ಲಿನ ಕೃತಕ ಬುದ್ಧಿಮತ್ತೆ (ಎ.ಐ) ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಪುನರ್ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ.</p>.<p>‘ಉಪನ್ಯಾಸದ ಮೂಲಕ ಬೋಧನೆ ಮಾಡುವ ಸಾಂಪ್ರದಾಯಿಕ ಪದ್ಧತಿ ಕೈಬಿಟ್ಟು ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುವಂತಹ ಶಿಕ್ಷಣ ವ್ಯವಸ್ಥೆಯನ್ನು ಆರಂಭಿಸಬೇಕು. ಇಂತಹ ಬೋಧನೆ–ಕಲಿಕಾ ಪ್ರಕ್ರಿಯೆಯನ್ನು ಎಂಜಿನಿಯರಿಂಗ್ನ ಮೊದಲ ಸೆಮಿಸ್ಟರ್ನಿಂದಲೇ ಆರಂಭಿಸಬೇಕು’ ಎಂದು ಎ.ಐ ಪಠ್ಯಕ್ರಮ ಕುರಿತ ಕಾರ್ಯಪಡೆಯೊಂದು ಶಿಫಾರಸು ಮಾಡಿದೆ.</p>.<p>ಕಾರ್ಯಪಡೆಯ ಶಿಫಾರಸುಗಳ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು.</p>.<p>ಪ್ರಸ್ತುತ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶೇ25–ಶೇ30ರಷ್ಟು ಪ್ರಾಯೋಗಿಕ ಕಲಿಕೆ ಕೈಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಪದವಿ ಹಾಗೂ ನಿರ್ದಿಷ್ಟ ವಿಷಯದಲ್ಲಿ ಅವರು ಕೈಗೊಳ್ಳುವ ವಿಶೇಷ ಅಧ್ಯಯನ ಆಧರಿಸಿ ಇದನ್ನು ಶೇ40– ಶೇ75ಕ್ಕೆ ಹೆಚ್ಚಿಸಬೇಕು ಎಂದು ಕಾರ್ಯಪಡೆ ಪ್ರಸ್ತಾವಿಸಿದೆ.</p>.<p>ಎ.ಐ ಅಭಿವೃದ್ದಿ, ಜನರೇಟಿವ್ ಎ.ಐ, ಮಷಿನ್ ಲರ್ನಿಂಗ್ ಆಪರೇಷನ್ಸ್(ಎಂಎಲ್ಒಪಿಎಸ್) ನಂತಹ ಅತ್ಯಾಧುನಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಉದ್ದೇಶದಿಂದ ಈ ಬದಲಾವಣೆಗಳು ಅಗತ್ಯ ಎಂದು ಹೇಳಿದೆ.</p>.<p>ನಾಸ್ಕಾಮ್ ಅಧ್ಯಕ್ಷ ರಾಜೇಶ್ ನಂಬಿಯಾರ್, ವಿಪ್ರೊದ ಸಿಒಒ ಸಂಜೀವ್ ಜೈನ್, ಟಿಸಿಎಸ್ ಹಾಗೂ ವಿಪ್ರೊದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>