<p><strong>ಬೆಂಗಳೂರು:</strong> ಸಿದ್ದರಾಮಯ್ಯನವರು ದಿಢೀರನೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಹೈಕಮಾಂಡ್ ನಿರ್ದೇಶನದ ಮೇರೆಗೆ ಲೋಕಭವನಕ್ಕೆ ತೆರಳಿದ ಸಿದ್ದರಾಮಯ್ಯನವರು ರಾಜೀನಾಮೆ ಸಲ್ಲಿಸಿದ್ದಾರೆ.</p><p>2005ರಿಂದ 2026ರ ಅವಧಿಯಲ್ಲಿ ದೇಶದಲ್ಲಿ ಅನೇಕ ಮುಖ್ಯಮಂತ್ರಿಗಳು ಬೇರೆ ಬೇರೆ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದರಲ್ಲಿ, ಅತೀ ಹೆಚ್ಚು ಮುಖ್ಯಮಂತ್ರಿಗಳು ರಾಜೀನಾಮೆ ಸಲ್ಲಿಸಿರುವುದು ಕರ್ನಾಟಕದಲ್ಲೇ ಎಂಬುದು ವಿಶೇಷ.</p>.<p><strong>ಕರ್ನಾಟಕ</strong></p><p>2005 ರಿಂದ 2026ರ ಅವಧಿಯಲ್ಲಿ ಕರ್ನಾಟಕವು ಅನೇಕ ಮುಖ್ಯಮಂತ್ರಿಗಳನ್ನು ಕಂಡಿದೆ. ಅದರಲ್ಲಿ ಕಾಂಗ್ರೆಸ್ನ ಧರಂ ಸಿಂಗ್ (2004–2006) ಅವಧಿಯಲ್ಲಿ ಅಧಿಕಾರ ನಿಭಾಯಿಸಿದ್ದಾರೆ. ಅವರು ಜೆಡಿಎಸ್ ಬೆಂಬಲದೊಂದಿಗೆ ಸಿಎಂ ಆಗಿದ್ದರು. ಆದರೆ, ಜೆಡಿಎಸ್ ತನ್ನ ಬೆಂಬಲ ಹಿಂಪಡೆದು ಬಿಜೆಪಿ ಜೊತೆ ಕೈಜೋಡಿಸಿದ್ದರ ಪರಿಣಾಮ ಸಿಂಗ್ ಅವರ ಸರ್ಕಾರ ಪತನವಾಯಿತು.</p><p>ಎಚ್.ಡಿ. ಕುಮಾರಸ್ವಾಮಿ ಅವರು 2006 ರಿಂದ 2007ರ ಅವಧಿಯಲ್ಲಿ, ಕಾಂಗ್ರೆಸ್ ಮೈತ್ರಿ ಮುರಿದುಕೊಂಡು 20 ತಿಂಗಳ ಸೂತ್ರದ ಅನ್ವಯ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುತ್ತಾರೆ. ಆದರೆ, ಮೈತ್ರಿಯಲ್ಲಿ ಭಿನ್ನಮತ ಉಂಟಾಗಿ, ಬಿಜೆಪಿ ತನ್ನ ಬೆಂಬಲ ಹಿಂಪಡೆದಿದ್ದರಿಂದ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಳಿಕ ರಾಜ್ಯವು ರಾಷ್ಟ್ರಪತಿ ಆಡಳಿತಕ್ಕೆ ಒಳಗಾಯಿತು.</p><p>ಬಿ.ಎಸ್. ಯಡಿಯೂರಪ್ಪ<strong> </strong>ಅವರು 2007 ನವೆಂಬರ್ 12 ರಿಂದ ನವೆಂಬರ್ 19 ಅಲ್ಪ ಅವಧಿಗೆ ಮುಖ್ಯಮಂತ್ರಿಯಾಗುತ್ತಾರೆ. ಈ ಅವಧಿಯಲ್ಲಿ ಅವರಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರಿಂದ, ರಾಜ್ಯವು ರಾಷ್ಟ್ರಪತಿ ಆಳ್ವಿಕೆಗೆ ಒಳಗಾಯಿತು. ಬಳಿಕ, ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುತ್ತದೆ. ಆಗ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಯಡಿಯೂರಪ್ಪನವರು, 2008 ಮೇ 30ರಿಂದ 2011ರ ಆಗಸ್ಟ್ 4ರವರೆಗೆ ಸಿಎಂ ಆಗಿರುತ್ತಾರೆ.</p><p>ಭ್ರಷ್ಟಾಚಾರದ ಆರೋಪದಲ್ಲಿ ಯಡಿಯೂರಪ್ಪನವರು ಜೈಲು ಸೇರಿದಾಗ, ಡಿ.ವಿ. ಸದಾನಂದ ಗೌಡ ಅವರು ಆಗಸ್ಟ್ 2011ರಿಂದ 2012ರ ಅವಧಿಯಲ್ಲಿ 11 ತಿಂಗಳು ಸಿಎಂ ಸ್ಥಾನ ಅಲಂಕರಿಸುತ್ತಾರೆ.</p><p>ಕಾರಣಾಂತರಗಳಿಂದ 2013ರ ವಿಧಾನಸಭಾ ಚುನಾವಣೆಗೂ ಮುನ್ನ ನಾಯಕತ್ವ ಬದಲಿಸಲು ಮುಂದಾದ ಬಿಜೆಪಿ ಹೈಕಮಾಂಡ್ ಮುಂದಿನ 10 ತಿಂಗಳುಗಳ ಕಾಲ ಜಗದೀಶ್ ಶೆಟ್ಟರ್ ಅವರಿಗೆ ಸಿಎಂ ಪಟ್ಟು ಕಟ್ಟುತ್ತಾರೆ. </p><p>2018ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಇದ್ದಾಗ ಅತೀ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರ ಹಿಡಿಯುತ್ತದೆ. ಈ ವೇಳೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಬಹುಮತ ಸಾಬೀತುಪಡಿಸಲು ವಿಫಲವಾಗಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಅವರು<strong> </strong>2018ರ ಮೇ 17ರಿಂದ ಮೇ 23ರ ವರೆಗೆ ಸಿಎಂ ಆಗಿರುತ್ತಾರೆ.</p><p>ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೇರಿ ಮೈತ್ರಿ ಸರ್ಕಾರ ರಚಿಸುತ್ತಾರೆ. ಈ ಹಂತದಲ್ಲಿ, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಾರೆ. ಅವರು 2018ರ ಮೇ 23ರಿಂದ 2019ರ ಜುಲೈ 23 ಅವಧಿಯಲ್ಲಿ ಸಿಎಂ ಆಗಿದ್ದರು. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಕೆಲವು ಶಾಸಕರು ಬಿಜೆಪಿ ಜೊತೆ ಕೈಜೋಡಿಸಿದ್ದರ ಪರಿಣಾಮ ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು.</p><p>ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿ.ಎಸ್. ಯಡಿಯೂರಪ್ಪನವರು 2019ರ ಜುಲೈ 26ರಿಂದ 2021ರ ಜುಲೈ 26ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಾರೆ. ಈ ಅವಧಿಯಲ್ಲಿ, ಬಿಜೆಪಿ ಹೈಕಮಾಂಡ್ 2023ರ ಚುನಾವಣೆಯಲ್ಲಿ ಹೊಸ ನಾಯಕತ್ವದ ಜೊತೆ ಹೋಗಲು ನಿರ್ಧರಿಸಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುತ್ತಾರೆ.</p><p>2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುತ್ತಾರೆ. ಸದ್ಯ, ಅವರು ಈಗಾಗಲೇ 3 ವರ್ಷಗಳ ಅವಧಿ ಪೂರ್ಣಗೊಳಿಸಿದ್ದು, 2026ರ ಮೇ 28ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.</p><p>ಸಿದ್ದರಾಮಯ್ಯನವರು, ಇದಕ್ಕೂ ಮೊದಲು 2013ರಿಂದ 2018ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರು. ಅದರ ಜೊತೆ ಈಗಿನ 3 ವರ್ಷ ಸೇರಿ, ಕರ್ನಾಟಕದಲ್ಲಿ ಸುಧೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿರುವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು ಒಟ್ಟಾರೆ 8 ವರ್ಷಗಳ ಕಾಲ ಸಿಎಂ ಆಗಿದ್ದಾರೆ.</p>.<h3>ತಮಿಳುನಾಡು</h3><p>ಒ. ಪನ್ನೀರ್ಸೆಲ್ವಂ ಅವರು ಎರಡು ಬಾರಿ ಅವಧಿಗೂ ಮುನ್ನ ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ನೀಡಿದ್ದಾರೆ. 2014–2015ರಲ್ಲಿ ಅಂದಿನ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರು ನ್ಯಾಯಾಲಯದ ಪ್ರಕರಣವೊಂದರಲ್ಲಿ ದೋಷಿ ಎಂದು ಸಾಬೀತಾದಾಗ ಒ. ಪನ್ನೀರ್ಸೆಲ್ವಂ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ನಂತರ 2015ರಲ್ಲಿ ಜಯಲಲಿತಾ ಅವರು ಪ್ರಕರಣ ಖುಲಾಸೆಗೊಂಡಾಗ ಪನ್ನೀರ್ ಸೆಲ್ವಂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.</p><p>ಡಿಸೆಂಬರ್ 2016 ರಲ್ಲಿ ಜಯಲಲಿತಾ ಅವರ ನಿಧನದ ಬಳಿಕ ಒ. ಪನ್ನೀರ್ಸೆಲ್ವಂ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಆದರೆ ಪಕ್ಷದೊಳಗಿನ ರಾಜಕೀಯ ಬಿಕ್ಕಟ್ಟು ಹಾಗೂ ವಿ. ಕೆ. ಶಶಿಕಲಾ ಅವರ ಒತ್ತಡದಿಂದಾಗಿ 2017 ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p><p>ಜಯಲಲಿತಾ ಅವರು 2011ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ 2014ರ ಸೆಪ್ಟೆಂಬರ್ನಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರು ಆರೋಪದಲ್ಲಿ ಅವರು ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಆಗ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.</p>.<h3>ಆಂಧ್ರ ಪ್ರದೇಶ</h3><p>2009ರ ಮೇ ತಿಂಗಳಿನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ 2ನೇ ಅವಧಿಗೆ ವೈ. ಎಸ್. ರಾಜಶೇಖರ್ ರೆಡ್ಡಿ ಆಯ್ಕೆಯಾಗಿದ್ದರು. ಆದರೆ 2009ರ ಸೆಪ್ಟೆಂಬರ್ 2ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. </p><p>ವೈ.ಎಸ್.ಆರ್ ನಿಧನದ ಬಳಿಕ ಮಧ್ಯಂತರವಾಗಿ ಕೊನಿಜೇಟಿ ರೋಸಯ್ಯ ಮುಖ್ಯಮಂತ್ರಿಯಾದರು. ರಾಜಕೀಯ ಬಿಕ್ಕಟ್ಟು ಮತ್ತು ಆನಾರೋಗ್ಯದಿಂದಾಗಿ 2010ರ ನವೆಂಬರ್ 24 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p><p>2010ರ ನವೆಂಬರ್ 25 ರಂದು ನಲ್ಲಾರಿ ಕಿರಣ್ ಕುಮಾರ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ಫೀಕರಿಸಿದರು. ಆಂಧ್ರಪ್ರದೇಶ ವಿಭಜನೆ (ತೆಲಂಗಾಣ ರಚನೆ) ಪ್ರಕ್ರಿಯೆಯನ್ನು ವಿರೋಧಿಸಿ 2014ರ ಮಾರ್ಚ್ 1 ರಂದು ತಮ್ಮ ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ನೀಡಿದ್ದರು.</p>.<h3>ಕೇರಳ</h3><p>ಎ. ಕೆ. ಆಂಟನಿ ಅವರು 2001ರ ಮೇ 17 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2004 ರ ಲೋಕಸಭಾ ಚುನಾವಣೆಯಲ್ಲಿ ಅವರ ನೇತೃತ್ವದ ಕಾಂಗ್ರೆಸ್ ಮೈತ್ರಿಕೂಟವು ರಾಜ್ಯದಲ್ಲಿ ಭಾರಿ ಹಿನ್ನಡೆ ಅನುಭವಿಸಿತು. ಈ ಸೋಲಿನ ನೈತಿಕ ಹೊಣೆ ಹೊತ್ತು 2004ರ ಆಗಸ್ಟ್ 29ರಂದು ರಾಜೀನಾಮೆ ನೀಡಿದ್ದರು, ನಂತರ ಉಮ್ಮನ್ ಚಾಂಡಿ ಮುಖ್ಯಮಂತ್ರಿಯಾದರು.</p>.<h3>ಮಹಾರಾಷ್ಟ್ರ</h3><p>ವಿಲಾಸ್ರಾವ್ ದೇಶ್ಮುಖ್ ಅವರು 2004ರಲ್ಲಿ ಮುಖ್ಯಮಂತ್ರಿಯಾದರು. ಆದರೆ 2008 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಹೊಣಗಾರಿಕೆ ಹೊತ್ತು, 1 ವರ್ಷ ಬಾಕಿ ಇರುವಾಗಲೇ 2008 ಡಿಸೆಂಬರ್ನಲ್ಲಿ ರಾಜೀನಾಮೆ ನೀಡಿದ್ದರು.</p><p>ಅಶೋಕ್ ಚವ್ಹಾಣ್ ಅವರು 2008ರಲ್ಲಿ ಅಧಿಕಾರ ಸ್ವೀಕರಿಸಿದರು. 2009 ರಲ್ಲಿ ಪುನಃ ಅಧಿಕಾರಕ್ಕೆ ಬಂದ ಅವರು ‘ಆದರ್ಶ್ ಹೌಸಿಂಗ್ ಸೊಸೈಟಿ’ ಹಗರಣದಲ್ಲಿ ಭಾಗಿಯಾಗಿರುವ ಆರೋಪದಡಿ 2010ರ ನವೆಂಬರ್ನಲ್ಲಿ 2 ವರ್ಷಗಳಲ್ಲಿ ರಾಜೀನಾಮೆ ನೀಡಿದರು.</p><p>2010 ರಲ್ಲಿ ಪೃಥ್ವಿರಾಜ್ ಚವ್ಹಾಣ್ ಮುಖ್ಯಮಂತ್ರಿಯಾದರು. ಆದರೆ 2014 ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ಮುನ್ನ ಎನ್ಸಿಪಿ ಮೈತ್ರಿ ಪಕ್ಷ ಬಹುಮತ ಹಿಂಪಡೆದಿದ್ದರಿಂದ 4 ವರ್ಷಗಳ ಅವಧಿಯಲ್ಲಿಯೇ ರಾಜೀನಾಮೆ ನೀಡಬೇಕಾಯಿತು.</p><p>ದೇವೇಂದ್ರ ಫಡ್ನವಿಸ್ ಅವರು 2019ರಲ್ಲಿ ಅಜಿತ್ ಪವಾರ್ ಅವರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಆದರೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಕೇವಲ 3 ದಿನಗಳಲ್ಲಿ ರಾಜೀನಾಮೆ ನೀಡಿದ್ದರು.</p><p>ಉದ್ಧವ್ ಠಾಕ್ರೆ ಅವರು ಎಂವಿಎ ಪಕ್ಷದ ಮೈತ್ರಿಕೂಟದ ಬೆಂಬಲದೊಂದಿಗೆ 2019ರಲ್ಲಿ ಮುಖ್ಯಮಂತ್ರಿಯಾದರು. ಆದರೆ ಜೂನ್ 2022 ರಲ್ಲಿ ಏಕನಾಥ್ ಶಿಂದೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು ಬಂಡಾಯವೆದ್ದ ಕಾರಣ ಬಹುಮತ ಕಳೆದುಕೊಂಡು 2.5 ವರ್ಷ ಪೂರ್ಣವಾಗುವ ಮುನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.</p>.<h3>ಒಡಿಶಾ</h3><p>2005 ರಿಂದ 2026ರ ನಡುವೆ ಒಡಿಸ್ಸಾದ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p>.<h3>ಛತ್ತೀಸ್ಗಢ</h3><p>2005 ರಿಂದ 2026ರ ನಡುವೆ ಛತ್ತೀಸ್ಗಢನಲ್ಲಿ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p>.<h3>ಮಧ್ಯಪ್ರದೇಶ</h3><p>ಬಾಬುಲಾಲ್ ಗೌರ್ ಅವರು 2004ರಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದರೆ ಪಕ್ಷದೊಳಗಿನ ರಾಜಕೀಯ ತಿಕ್ಕಾಟ ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ 2005ರಲ್ಲಿ ರಾಜೀನಾಮೆ ನೀಡಿದ್ದರು. ನಂತರ ಶಿವರಾಜ್ ಸಿಂಗ್ ಚೌಹಾಣ್ ಅಧಿಕಾರ ವಹಿಸಿಕೊಂಡರು.</p><p>ಕಮಲ್ ನಾಥ್ ಅವರು 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾದರು. ಆದರೆ 2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಬೆಂಬಲಿಗ 22 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಆಗ ಬಹುಮತ ಕಳೆದುಕೊಂಡ ಕಮಲ್ನಾಥ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.</p><h3>ಗುಜಾರಾತ್</h3><p>2001 ರಿಂದ 2014 ರವರೆಗೆ ಗುಜರಾತ್ನಲ್ಲಿ ನರೇಂದ್ರ ಮೋದಿ ಅವರು ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದರು. ಆದರೆ 2014 ರಲ್ಲಿ ಅವರು ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಕಾರಣ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p><p>ಆನಂದಿಬೆನ್ ಪಟೇಲ್ ಅವರು 2014ರಲ್ಲಿ ಗುಜರಾತ್ನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ ಪಕ್ಷದ ಆಂತರಿಕ ನಿರ್ಧಾರಗಳಿಂದಾಗಿ 2016ರಲ್ಲಿ ರಾಜೀನಾಮೆ ನೀಡಿದರು.</p><p>2017ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ವಿಜಯ್ ರೂಪಾನಿ ಅವರು ಪಕ್ಷದ ಹಿರಿಯರ ಸೂಚನೆ ಮತ್ತು ರಾಜಕೀಯ ಸಮೀಕರಣಗಳ ಬದಲಾವಣೆಯಿಂದಾಗಿ 2021ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.</p><h3>ರಾಜಸ್ಥಾನ</h3><p>2005 ರಿಂದ 2026ರ ನಡುವೆ ರಾಜಸ್ಥಾನ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p><h3>ಉತ್ತರ ಪ್ರದೇಶ</h3><p>ಮುಲಾಯಂ ಸಿಂಗ್ ಯಾದವ್ ಅವರು 2003ರಲ್ಲಿ ಸಮಾಜವಾದಿ ಪಕ್ಷದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದರೆ 2007 ರಲ್ಲಿ ಪಕ್ಷದ ಬಹುಮತ ಕಳೆದುಕೊಂಡು ಅಧಿಕಾರವಧಿ ಮುಗಿಯುವ ಕೆಲವೇ ತಿಂಗಳ ಹಿಂದೆ ರಾಜೀನಾಮೆ ನೀಡದರು.</p><h3> ಬಿಹಾರ</h3><p>ನಿತೀಶ್ ಕುಮಾರ್ ಅವರು 2010ರಲ್ಲಿ ಭಾರೀ ಬಹುಮತದೊಂದಿಗೆ ಮುಖ್ಯಮಂತ್ರಿಯಾದರು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಜೆಡಿಯು ಪಕ್ಷ ಹಿನ್ನಡೆ ಸಾಧಿಸಿತು. ಈ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ನಂತರ 2017, 2022, 2024 ಮತ್ತು 2026ರಲ್ಲಿ ರಾಜೀನಾಮೆ ನೀಡಿದ್ದಾರೆ.</p><p>ಜಿತನ್ ರಾಮ್ ಮಾಂಝಿ ಅವರು 2014ರಲ್ಲಿ ಮುಖ್ಯಮಂತ್ರಿಯಾದರು. ಬಳಿಕ 2015ರಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತು ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. </p>.<p><strong>ಜಾರ್ಖಂಡ್</strong> </p><p>ಶಿಬು ಸೊರೇನ್ ಅವರು 2005ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರಾದರೂ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಕೇವಲ 10 ದಿನಗಳಲ್ಲಿ ರಾಜೀನಾಮೆ ನೀಡಿದರು.</p><p>2008ರಲ್ಲಿ ಶಿಬು ಸೊರೇನ್ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಉಪಚುನಾವಣೆಯಲ್ಲಿ ಸೋಲನುಭವಿಸಿದ ಕಾರಣ 2009ರಲ್ಲಿ ರಾಜೀನಾಮೆ ನೀಡಬೇಕಾಯಿತು. </p><p>ಅರ್ಜುನ್ ಮುಂಡಾ ಅವರು 2005 ಮುಖ್ಯಮಂತ್ರಿಯಾದರು. ಆದರೆ ಮೈತ್ರಿಕೂಟದ ಬೆಂಬಲದ ಕೊರತೆಯಿಂದಾಗಿ 2006ರಲ್ಲಿ ರಾಜೀನಾಮೆ ನೀಡಿದರು. ಮತ್ತೊಮ್ಮೆ 2010ರಲ್ಲಿ ಜಿಎಂಎಂ ಪಕ್ಷದ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಆದರೆ 2013 ರಲ್ಲಿ ಜೆಎಂಎಂ ಪಕ್ಷವು ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಹೀಗಾಗಿ ರಾಜೀನಾಮೆ ನೀಡಬೇಕಾಯಿತು.</p><p>ಮಧು ಕೋಡಾ ಅವರು 2006ರಲ್ಲಿ ಮುಖ್ಯಮಂತ್ರಿಯಾದರು. ಮೈತ್ರಿ ಪಕ್ಷಗಳ ಒತ್ತಡ, ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ 2008 ರಲ್ಲಿ ರಾಜೀನಾಮೆ ನೀಡಿದರು.</p><p>ಹೇಮಂತ್ ಸೊರೇನ್ ಅವರು 2019 ರಲ್ಲಿ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಜಾರಿ ನಿರ್ದೇಶನಾಲಯದ (ED) ತನಿಖೆ ಮತ್ತು ಬಂಧನದ ಭೀತಿಯಿಂದಾಗಿ 2024ರಲ್ಲಿ ರಾಜೀನಾಮೆ ನೀಡಿದರು.</p><p>ಚಂಪೈ ಸೊರೇನ್ ಅವರು 2024 ರಂದು ಮುಖ್ಯಮಂತ್ರಿಯಾದರು. ಆದರೆ ಹೇಮಂತ್ ಸೊರೇನ್ ಅವರು ಜೈಲಿನಿಂದ ಹೊರಬಂದ ತಕ್ಷಣ ಇವರು 2024 ರಂದು ರಾಜೀನಾಮೆ ನೀಡಿದರು.</p><h3>ಪಶ್ಚಿಮ ಬಂಗಾಳ</h3><p>2005 ರಿಂದ 2026ರ ನಡುವೆ ಪಶ್ಚಿಮ ಬಂಗಾಳ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p><h3>ಸಿಕ್ಕಿಂ</h3><p>2005 ರಿಂದ 2026ರ ನಡುವೆ ಸಿಕ್ಕಿಂ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p><h3>ಮೇಘಾಲಯ</h3><p>ಡಿ. ಡಿ. ಲಪಾಂಗ್ ಅವರು 2003 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ 2006 ರಲ್ಲಿ ಅವಧಿಗೆ ಮುನ್ನವೇ ರಾಜೀನಾಮೆ ನೀಡಿದರು. ನಂತರ 2009ರಲ್ಲಿ ಮುಖ್ಯಮಂತ್ರಿಯಾದ ಅವರು ಪಕ್ಷದೊಳಗಿನ ನಾಯಕತ್ವ ಬದಲಾವಣೆಯ ಒತ್ತಡದಿಂದಾಗಿ ಕೇವಲ 11 ತಿಂಗಳುಗಳಿಗೆ 2010ರಲ್ಲಿ ರಾಜೀನಾಮೆ ನೀಡಬೇಕಾಯಿತು.</p><p>ಜೆ. ಡ್ರಿಂಗ್ಬೆಲ್ ರಿಂಬೈ ಅವರು 2006ರಲ್ಲಿ ಕಾಂಗ್ರೆಸ್ನಿಂದ ಮುಖ್ಯಮಂತ್ರಿಯಾದರು. ಆದರೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಮುಂದುವರಿದ ಕಾರಣ 2007ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. </p><p>ಡೊಂಕುಪರ್ ರಾಯ್ ಅವರು 2008 ರಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ನೇತೃತ್ವದ ಮೈತ್ರಿಕೂಟದಿಂದ ಮುಖ್ಯಮಂತ್ರಿಯಾದರು. ಬಳಿಕ ಮೈತ್ರಿಕೂಟ ಬಹುಮತ ಕಳೆದುಕೊಂಡು 2009ರಲ್ಲಿ ರಾಜೀನಾಮೆ ನೀಡಿದರು.</p><h3>ಮಿಜೋರಾಂ</h3><p>2005 ರಿಂದ 2026ರ ನಡುವೆ ಮಿಜೋರಾಂ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p><h3>ಮಣಿಪುರ</h3><p>2005 ರಿಂದ 2026ರ ನಡುವೆ ಮಿಜೋರಾಂ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p><h3><strong>ಜಮ್ಮು ಮತ್ತು ಕಾಶ್ಮೀರ</strong></h3><p>‘ಅಮರನಾಥ ಭೂಮಿ ವಿವಾದ’ ಉಂಟಾಗಿದ್ದರಿಂದ ಗುಲಾಮ್ ನಬಿ ಆಜಾದ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ತನ್ನ ಬೆಂಬಲವನ್ನು ಹಿಂಪಡೆದಿದ್ದರಿಂದ, ಅವರು 2008ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.</p><p>ಪಿಡಿಪಿ ಪಕ್ಷದ ಮೆಹಬೂಬ ಮುಫ್ತಿ ಅವರಿಗೆ ಬಿಜೆಪಿ ನೀಡಿದ್ದ ಬೆಂಬಲ ವಾಪಾಸ್ ಪಡೆದಿದ್ದರಿಂದ ಪಿಡಿಪಿ ಪಕ್ಷವು ಬಹುಮತ ಕಳೆದುಕೊಳ್ಳುತ್ತದೆ. ಹಾಗಾಗಿ, ಅಲ್ಲಿ ಸಿಎಂ ಆಗಿದ್ದ ಮುಫ್ತಿ 2018ರಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಬಳಿಕ, ಜಮ್ಮು ಮತ್ತು ಕಾಶ್ಮೀರದಲ್ಲಿ 2019 ರಿಂದ 2024 ರವರೆಗೆ ಯಾವುದೇ ಮುಖ್ಯಮಂತ್ರಿ ಇರಲಿಲ್ಲ. ಆ ಅವಧಿಯಲ್ಲಿ ರಾಜ್ಯಪಾಲರ ಆಡಳಿತ ಜಾರಿಯಲ್ಲಿತ್ತು.</p><h3><strong>ಪಂಜಾಬ್</strong></h3><p>2005ರಿಂದ 2025ರ ಅವಧಿಯಲ್ಲಿ ಅಧಿಕಾರಾವಧಿ ಮುಗಿಯುವ ಮುನ್ನವೇ ಪಕ್ಷದ ಆಂತರಿಕ ಭಿನ್ನಮತದ ಕಾರಣದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಏಕೈಕ ಮುಖ್ಯಮಂತ್ರಿ ಅಂದರೆ, ಅದು ಕ್ಯಾಪ್ಟನ್ ಅಮರಿಂದರ್ ಸಿಂಗ್. ಅವರು ತಮ್ಮ ಎರಡನೇ ಅವಧಿಯಲ್ಲಿ (2017 ರಿಂದ 2021) ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಮತ್ತು ನಾಯಕತ್ವದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2021ರ ಸೆಪ್ಟೆಂಬರ್ 18ರಂದು ರಾಜೀನಾಮೆ ನೀಡಿದ್ದರು.</p>.<p><strong>ಹರಿಯಾಣ</strong></p><p>ಇಲ್ಲಿ 2005 ರಿಂದ 2025 ರ ನಡುವೆ ಒಬ್ಬರು ಮಾತ್ರ ತಮ್ಮ ಅಧಿಕಾರಾವಧಿಯ ನಡುವೆ ರಾಜಕೀಯ ಬದಲಾವಣೆಗಳ ಕಾರಣದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮನೋಹರ್ ಲಾಲ್ ಖಟ್ಟರ್, 2014 ರಿಂದ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು. ಆದರೆ 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಬಿಜೆಪಿಯು ಜನನಾಯಕ್ ಜನತಾ ಪಾರ್ಟಿ (JJP) ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಿದ ಹಿನ್ನೆಲೆ 2024ರ ಮಾರ್ಚ್ 12 ರಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p><h3><strong>ದೆಹಲಿ</strong></h3><p>2005 ರಿಂದ 2025 ರ ಅವಧಿಯಲ್ಲಿ ತಮ್ಮ ಅಧಿಕಾರಾವಧಿಯ ನಡುವೆ ರಾಜಕೀಯ ಬಿಕ್ಕಟ್ಟು ಮತ್ತು ಇತರೆ ಕಾರಣಗಳಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಏಕೈಕ ಮುಖ್ಯಮಂತ್ರಿ ಅಂದರೆ ಅದು, ಅರವಿಂದ್ ಕೇಜ್ರಿವಾಲ್. ಇವರು 2005ರಿಂದ 20026ರ ಅವಧಿಯಲ್ಲಿ ಎರಡು ಬಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.</p><p>2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಇವರು, ತಮ್ಮ ಸರ್ಕಾರ ಮಂಡಿಸಲು ಉದ್ದೇಶಿಸಿದ್ದ 'ಜನಲೋಕಪಾಲ ವಿಧೇಯಕ'ಕ್ಕೆ ವಿಧಾನಸಭೆಯಲ್ಲಿ ಇತರ ಪಕ್ಷಗಳಿಂದ ಬೆಂಬಲ ಸಿಗದಿದ್ದರಿಂದ, ಕೇವಲ 49 ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.</p><p>2024ರ ಮೂರನೇ ಅವಧಿಯಲ್ಲಿ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದ ನಂತರ, ಸಾರ್ವಜನಿಕರು ತಮಗೆ 'ಪ್ರಾಮಾಣಿಕತೆಯ ಪ್ರಮಾಣಪತ್ರ' ನೀಡುವವರೆಗೆ ತಾವೂ ಈ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಘೋಷಿಸಿ 2024ರ ಸೆಪ್ಟೆಂಬರ್ 17ರಂದು ರಾಜೀನಾಮೆ ನೀಡಿದ್ದರು.</p><h3><strong>ಉತ್ತರಾಖಂಡ</strong></h3><p>2005 ರಿಂದ 2025 ರ ನಡುವೆ ಅನೇಕ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. 2007ರಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದ ಭುವನ್ ಚಂದ್ರ ಖಂಡೂರಿ ಅವರು, 2009 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ರಾಜ್ಯದ ಎಲ್ಲಾ 5 ಸ್ಥಾನಗಳಲ್ಲಿ ಸೋತ ಬಳಿಕ ಪಕ್ಷದ ಆಂತರಿಕ ಒತ್ತಡಕ್ಕೆ ಮಣಿದು 2009 ಜೂನ್ 26ರಂದು ರಾಜೀನಾಮೆ ನೀಡಿದರು.</p><p>ಕಾಂಗ್ರೆಸ್ನಿಂದ 2012 ರಲ್ಲಿ ಮುಖ್ಯಮಂತ್ರಿಯಾಗಿದ್ದ ವಿಜಯ್ ಬಹುಗುಣ ಆಯ್ಕೆಯಾಗುತ್ತಾರೆ. ಆದರೆ 2013 ರ ಕೇದರನಾಥ ಪ್ರವಾಹ ವಿಕೋಪದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಕಾರಣ, 2014 ಜನವರಿ 13ರಂದು ರಾಜೀನಾಮೆ ನೀಡಿದ್ದರು.</p><p>2016 ರಲ್ಲಿ ಕಾಂಗ್ರೆಸ್ ಪಕ್ಷದ 9 ಶಾಸಕರು ಬಂಡಾಯವೆದ್ದು ಬಿಜೆಪಿಯನ್ನು ಬೆಂಬಲಿಸಿದಾಗ, ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗುತ್ತದೆ, ಈ ಕಾರಣದಿಂದಾಗಿ ಹರೀಶ್ ರಾವತ್ ಅವರ ಸರ್ಕಾರವನ್ನು ವಜಾಗೊಳಿಸಿ ಕೆಲ ದಿನಗಳ ಕಾಲ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ನಂತರ ಇವರು ಬಹುಮತ ಸಾಬೀತುಪಡಿಸಿ ಮರಳಿ ಸಿಎಂ ಆದರು.</p><p>2017ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರಲ್ಲೇ ತೀವ್ರ ಅಸಮಾಧಾನ ಉಂಟಾಗುತ್ತದೆ. ಹೀಗಾಗಿ ತಮ್ಮ 4 ವರ್ಷಗಳ ಅವಧಿ ಮುಗಿಯಲು ಕೇವಲ 9 ದಿನ ಬಾಕಿ ಇರುವಾಗ, ಹೈಕಮಾಂಡ್ ತೀರ್ಮಾನದಂತೆ 2021ರ ಮಾರ್ಚ್ 9ರಂದು ರಾಜೀನಾಮೆ ನೀಡಿದರು.</p><p>ತ್ರಿವೇಂದ್ರ ಸಿಂಗ್ ಅವರ ನಂತರ ಮುಖ್ಯಮಂತ್ರಿಯಾದ ತೀರಥ್ ಸಿಂಗ್ ರಾವತ್ ಅವರು ಶಾಸಕರಾಗಿರಲಿಲ್ಲ. ಕೋವಿಡ್-19 ಕಾರಣದಿಂದಾಗಿ ನಿಗದಿತ 6 ತಿಂಗಳೊಳಗೆ ಉಪಚುನಾವಣೆ ನಡೆಸಿ ವಿಧಾನಸಭೆ ಸದಸ್ಯರಾಗಲು ಸಾಂವಿಧಾನಿಕ ತೊಂದರೆಗಳು ಎದುರಾದ ಹಿನ್ನೆಲೆಯಲ್ಲಿ, ಕೇವಲ 116 ದಿನಗಳ ಆಡಳಿತದ ನಂತರ 2021ರ ಜುಲೈ 4ರಂದು ರಾಜೀನಾಮೆ ನೀಡಿದರು.</p><h3><strong>ಹಿಮಾಚಲ ಪ್ರದೇಶ</strong></h3><p>ಇಲ್ಲಿ 2005 ರಿಂದ 2025ರ ನಡುವಿನ ಅವಧಿಯಲ್ಲಿ ರಾಜಕೀಯ ಬಿಕ್ಕಟ್ಟು, ಪಕ್ಷದ ಆಂತರಿಕ ಭಿನ್ನಮತ ಅಥವಾ ಹೈಕಮಾಂಡ್ ಒತ್ತಡಕ್ಕೆ ಮಣಿದು ಅಧಿಕಾರಾವಧಿಯ ಮಧ್ಯದಲ್ಲಿ ರಾಜೀನಾಮೆ ನೀಡಿದ ಯಾವುದೇ ಉದಾಹರಣೆಗಳಿಲ್ಲ.</p>.<h3><strong>ಅಸ್ಸಾಂ</strong></h3><p>ಇಲ್ಲಿಯೂ 2005 ರಿಂದ 2025 ರ ನಡುವಿನ ಅವಧಿಯಲ್ಲಿ ಯಾವುದೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ಉದಾಹರಣೆಗಳಿಲ್ಲ.</p><h3><strong>ಅರುಣಾಚಲ ಪ್ರದೇಶ</strong></h3><p>ಇಲ್ಲಿ 2005 ರಿಂದ 2025 ರ ನಡುವೆ, ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ಮತ್ತು ಆಂತರಿಕ ಭಿನ್ನಮತದ ಕಾರಣದಿಂದಾಗಿ ಅಧಿಕಾರಾವಧಿಯ ಮಧ್ಯದಲ್ಲೇ ಅನೇಕರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.</p><p>2003 ರಿಂದ ಮುಖ್ಯಮಂತ್ರಿಯಾಗಿದ್ದ ಗೆಗಾಂಗ್ ಅಪಾಂಗ್ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲೇ ತೀವ್ರ ಭಿನ್ನಮತ ಉಂಟಾದ ಕಾರಣ, ಹೈಕಮಾಂಡ್ ಸೂಚನೆಯಂತೆ 2007ರ ಏಪ್ರಿಲ್ 9ರಂದು ರಾಜೀನಾಮೆ ನೀಡಿದರು.</p><p>ದೋರ್ಜಿ ಖಂಡು ಅವರ ನಿಧನದ ನಂತರ ಸಿಎಂ ಆಗಿದ್ದ ಜರ್ಬೊಮ್ ಗ್ಯಾಮ್ಲಿನ್ ಅವರ ಆಡಳಿತದ ವಿರುದ್ಧ ಪಕ್ಷದೊಳಗೆ ಬಂಡಾಯ ಎದ್ದ ಹಿನ್ನೆಲೆಯಲ್ಲಿ, ಕೇವಲ 6 ತಿಂಗಳ ಅಧಿಕಾರದ ನಂತರ 2011ರ ಅಕ್ಟೋಬರ್ 31ರಂದು ರಾಜೀನಾಮೆ ನೀಡಿದರು.</p><p>ನಬಮ್ ಟುಕಿ ಇವರು ಎರಡು ಬಾರಿ ರಾಜೀನಾಮೆ ನೀಡಬೇಕಾಗಿ ಬಂದಿತು. ಒಮ್ಮೆ 2016ರಲ್ಲು ಸ್ವಪಕ್ಷದ ಶಾಸಕರೇ ಬಂಡಾಯವೆದ್ದಾಗ ಉಂಟಾದ ರಾಜಕೀಯ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ನಂತರ ಸುಪ್ರೀಂ ಕೋರ್ಟ್ ಆದೇಶದಂತೆ ಇವರು ಮರಳಿ ಸಿಎಂ ಆದರಾದರೂ, ಬಹುಮತ ಸಾಬೀತುಪಡಿಸುವ ಮುನ್ನವೇ ಪಕ್ಷದ ಆಂತರಿಕ ಒಮ್ಮತಕ್ಕಾಗಿ 2016ರ ಜುಲೈ 16ರಂದು ರಾಜೀನಾಮೆ ನೀಡಿದರು.</p><p>ಕಲಿಖೋ ಪುಲ್<strong> </strong>ಅವರು ಕಾಂಗ್ರೆಸ್ ಬಂಡಾಯ ಶಾಸಕರೊಂದಿಗೆ ಬಿಜೆಪಿ ಬೆಂಬಲದಿಂದ ಸಿಎಂ ಆಗಿದ್ದರು. ಇವರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದು ಘೋಷಿಸಿದ ಹಿನ್ನೆಲೆ, 2016ರ ಜುಲೈ 13 ರಂದು ಇವರು ಪದಚ್ಯುತರಾಗಬೇಕಾಯಿತು.</p><p>ದೋರ್ಜಿ ಖಂಡು ಇವರು ರಾಜೀನಾಮೆ ನೀಡಲಿಲ್ಲ, ಬದಲಿಗೆ 2011ರ ಏಪ್ರಿಲ್ 30ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಅಧಿಕಾರದಲ್ಲಿರುವಾಗಲೇ ಸಾವನ್ನಪ್ಪಿದರು.</p>.<h3><strong>ನಾಗಲ್ಯಾಂಡ್</strong></h3><p>2005 ರಿಂದ 2025ರ ನಡುವಿನ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಅನೇಕ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.</p><p>ನಾಗಲ್ಯಾಂಡ್ನಲ್ಲಿ ನೆಫಿಯು ರಿಯೋ 2008ರಿಂದ ಸತತವಾಗಿ ಮುಖ್ಯಮಂತ್ರಿಯಾಗಿದ್ದರು. ಇವರು, 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ (MP) ಆಯ್ಕೆಯಾದ ಹಿನ್ನೆಲೆಯಲ್ಲಿ 2014ರ ಮೇ 23ರಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಇವರು 2018ರಲ್ಲಿ ಮರಳಿ ಸಿಎಂ ಆದರು.</p><p>ಟಿ. ಆರ್. ಝೆಲಿಯಾಂಗ್ ಅವರು<strong> </strong>ರಾಜ್ಯದ ನಗರಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ನಾಗಲ್ಯಾಂಡ್ನಲ್ಲಿ ತೀವ್ರ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಯಿತು. ಈ ಒತ್ತಡಕ್ಕೆ ಮಣಿದ ಅವರು 2017ರ ಫೆಬ್ರುವರಿ 19<strong> </strong>ರಾಜೀನಾಮೆ ನೀಡಿದ್ದರು.</p><p>ಮತ್ತೊಮ್ಮೆ 2017ರಲ್ಲಿ ಶೂರಹೋಜೆಲಿ ಅವರ ರಾಜೀನಾಮೆಯ ನಂತರ ಎರಡನೇ ಬಾರಿ ಸಿಎಂ ಆಗಿದ್ದ ಇವರು, 2018ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಹೊಸ ಮೈತ್ರಿ ಸರ್ಕಾರ ರಚನೆಗೆ ಹಾದಿ ಮಾಡಿಕೊಡಲು 2018 ರಲ್ಲಿ ರಾಜೀನಾಮೆ ನೀಡಿದರು.</p><p>ಟಿ.ಆರ್. ಝೆಲಿಯಾಂಗ್ ಅವರ ರಾಜೀನಾಮೆಯ ನಂತರ ಶೂರಹೋಜೆಲಿ ಲೀಜಿತ್ಸು ಅವರು ಫೆಬ್ರುವರಿ 2017ರಲ್ಲಿ ಮುಖ್ಯಮಂತ್ರಿಯಾಗಿದ್ದರು. ಆದರೆ ಕೆಲವೇ ತಿಂಗಳುಗಳಲ್ಲಿ ಇವರ ವಿರುದ್ಧ ಸ್ವಪಕ್ಷದ ಶಾಸಕರೇ ಬಂಡಾಯವೆದ್ದು ಝೆಲಿಯಾಂಗ್ ಅವರನ್ನು ಬೆಂಬಲಿಸಿದರು. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫಲರಾದ ಹಿನ್ನೆಲೆ, ಇವರು 2017ರ ಜುಲೈ 19ರಂದು ರಾಜೀನಾಮೆ ಸಲ್ಲಿಸಿದ್ದರು.</p>.<p><strong>ಮೂಲ:</strong> ದಿ.ಹಿಂದೂ. ಟೈಮ್ಸ್ ಆಫ್ ಇಂಡಿಯಾ, ರಾಜ್ಯ ಸರ್ಕಾರಗಳ ಜಾಲತಾಣಗಳು, ಇಂಡಿಯ ಟುಡೇ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಿದ್ದರಾಮಯ್ಯನವರು ದಿಢೀರನೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಹೈಕಮಾಂಡ್ ನಿರ್ದೇಶನದ ಮೇರೆಗೆ ಲೋಕಭವನಕ್ಕೆ ತೆರಳಿದ ಸಿದ್ದರಾಮಯ್ಯನವರು ರಾಜೀನಾಮೆ ಸಲ್ಲಿಸಿದ್ದಾರೆ.</p><p>2005ರಿಂದ 2026ರ ಅವಧಿಯಲ್ಲಿ ದೇಶದಲ್ಲಿ ಅನೇಕ ಮುಖ್ಯಮಂತ್ರಿಗಳು ಬೇರೆ ಬೇರೆ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದರಲ್ಲಿ, ಅತೀ ಹೆಚ್ಚು ಮುಖ್ಯಮಂತ್ರಿಗಳು ರಾಜೀನಾಮೆ ಸಲ್ಲಿಸಿರುವುದು ಕರ್ನಾಟಕದಲ್ಲೇ ಎಂಬುದು ವಿಶೇಷ.</p>.<p><strong>ಕರ್ನಾಟಕ</strong></p><p>2005 ರಿಂದ 2026ರ ಅವಧಿಯಲ್ಲಿ ಕರ್ನಾಟಕವು ಅನೇಕ ಮುಖ್ಯಮಂತ್ರಿಗಳನ್ನು ಕಂಡಿದೆ. ಅದರಲ್ಲಿ ಕಾಂಗ್ರೆಸ್ನ ಧರಂ ಸಿಂಗ್ (2004–2006) ಅವಧಿಯಲ್ಲಿ ಅಧಿಕಾರ ನಿಭಾಯಿಸಿದ್ದಾರೆ. ಅವರು ಜೆಡಿಎಸ್ ಬೆಂಬಲದೊಂದಿಗೆ ಸಿಎಂ ಆಗಿದ್ದರು. ಆದರೆ, ಜೆಡಿಎಸ್ ತನ್ನ ಬೆಂಬಲ ಹಿಂಪಡೆದು ಬಿಜೆಪಿ ಜೊತೆ ಕೈಜೋಡಿಸಿದ್ದರ ಪರಿಣಾಮ ಸಿಂಗ್ ಅವರ ಸರ್ಕಾರ ಪತನವಾಯಿತು.</p><p>ಎಚ್.ಡಿ. ಕುಮಾರಸ್ವಾಮಿ ಅವರು 2006 ರಿಂದ 2007ರ ಅವಧಿಯಲ್ಲಿ, ಕಾಂಗ್ರೆಸ್ ಮೈತ್ರಿ ಮುರಿದುಕೊಂಡು 20 ತಿಂಗಳ ಸೂತ್ರದ ಅನ್ವಯ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುತ್ತಾರೆ. ಆದರೆ, ಮೈತ್ರಿಯಲ್ಲಿ ಭಿನ್ನಮತ ಉಂಟಾಗಿ, ಬಿಜೆಪಿ ತನ್ನ ಬೆಂಬಲ ಹಿಂಪಡೆದಿದ್ದರಿಂದ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಳಿಕ ರಾಜ್ಯವು ರಾಷ್ಟ್ರಪತಿ ಆಡಳಿತಕ್ಕೆ ಒಳಗಾಯಿತು.</p><p>ಬಿ.ಎಸ್. ಯಡಿಯೂರಪ್ಪ<strong> </strong>ಅವರು 2007 ನವೆಂಬರ್ 12 ರಿಂದ ನವೆಂಬರ್ 19 ಅಲ್ಪ ಅವಧಿಗೆ ಮುಖ್ಯಮಂತ್ರಿಯಾಗುತ್ತಾರೆ. ಈ ಅವಧಿಯಲ್ಲಿ ಅವರಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರಿಂದ, ರಾಜ್ಯವು ರಾಷ್ಟ್ರಪತಿ ಆಳ್ವಿಕೆಗೆ ಒಳಗಾಯಿತು. ಬಳಿಕ, ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುತ್ತದೆ. ಆಗ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಯಡಿಯೂರಪ್ಪನವರು, 2008 ಮೇ 30ರಿಂದ 2011ರ ಆಗಸ್ಟ್ 4ರವರೆಗೆ ಸಿಎಂ ಆಗಿರುತ್ತಾರೆ.</p><p>ಭ್ರಷ್ಟಾಚಾರದ ಆರೋಪದಲ್ಲಿ ಯಡಿಯೂರಪ್ಪನವರು ಜೈಲು ಸೇರಿದಾಗ, ಡಿ.ವಿ. ಸದಾನಂದ ಗೌಡ ಅವರು ಆಗಸ್ಟ್ 2011ರಿಂದ 2012ರ ಅವಧಿಯಲ್ಲಿ 11 ತಿಂಗಳು ಸಿಎಂ ಸ್ಥಾನ ಅಲಂಕರಿಸುತ್ತಾರೆ.</p><p>ಕಾರಣಾಂತರಗಳಿಂದ 2013ರ ವಿಧಾನಸಭಾ ಚುನಾವಣೆಗೂ ಮುನ್ನ ನಾಯಕತ್ವ ಬದಲಿಸಲು ಮುಂದಾದ ಬಿಜೆಪಿ ಹೈಕಮಾಂಡ್ ಮುಂದಿನ 10 ತಿಂಗಳುಗಳ ಕಾಲ ಜಗದೀಶ್ ಶೆಟ್ಟರ್ ಅವರಿಗೆ ಸಿಎಂ ಪಟ್ಟು ಕಟ್ಟುತ್ತಾರೆ. </p><p>2018ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಇದ್ದಾಗ ಅತೀ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರ ಹಿಡಿಯುತ್ತದೆ. ಈ ವೇಳೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಬಹುಮತ ಸಾಬೀತುಪಡಿಸಲು ವಿಫಲವಾಗಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಅವರು<strong> </strong>2018ರ ಮೇ 17ರಿಂದ ಮೇ 23ರ ವರೆಗೆ ಸಿಎಂ ಆಗಿರುತ್ತಾರೆ.</p><p>ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೇರಿ ಮೈತ್ರಿ ಸರ್ಕಾರ ರಚಿಸುತ್ತಾರೆ. ಈ ಹಂತದಲ್ಲಿ, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಾರೆ. ಅವರು 2018ರ ಮೇ 23ರಿಂದ 2019ರ ಜುಲೈ 23 ಅವಧಿಯಲ್ಲಿ ಸಿಎಂ ಆಗಿದ್ದರು. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಕೆಲವು ಶಾಸಕರು ಬಿಜೆಪಿ ಜೊತೆ ಕೈಜೋಡಿಸಿದ್ದರ ಪರಿಣಾಮ ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು.</p><p>ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿ.ಎಸ್. ಯಡಿಯೂರಪ್ಪನವರು 2019ರ ಜುಲೈ 26ರಿಂದ 2021ರ ಜುಲೈ 26ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಾರೆ. ಈ ಅವಧಿಯಲ್ಲಿ, ಬಿಜೆಪಿ ಹೈಕಮಾಂಡ್ 2023ರ ಚುನಾವಣೆಯಲ್ಲಿ ಹೊಸ ನಾಯಕತ್ವದ ಜೊತೆ ಹೋಗಲು ನಿರ್ಧರಿಸಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುತ್ತಾರೆ.</p><p>2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುತ್ತಾರೆ. ಸದ್ಯ, ಅವರು ಈಗಾಗಲೇ 3 ವರ್ಷಗಳ ಅವಧಿ ಪೂರ್ಣಗೊಳಿಸಿದ್ದು, 2026ರ ಮೇ 28ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.</p><p>ಸಿದ್ದರಾಮಯ್ಯನವರು, ಇದಕ್ಕೂ ಮೊದಲು 2013ರಿಂದ 2018ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರು. ಅದರ ಜೊತೆ ಈಗಿನ 3 ವರ್ಷ ಸೇರಿ, ಕರ್ನಾಟಕದಲ್ಲಿ ಸುಧೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿರುವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು ಒಟ್ಟಾರೆ 8 ವರ್ಷಗಳ ಕಾಲ ಸಿಎಂ ಆಗಿದ್ದಾರೆ.</p>.<h3>ತಮಿಳುನಾಡು</h3><p>ಒ. ಪನ್ನೀರ್ಸೆಲ್ವಂ ಅವರು ಎರಡು ಬಾರಿ ಅವಧಿಗೂ ಮುನ್ನ ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ನೀಡಿದ್ದಾರೆ. 2014–2015ರಲ್ಲಿ ಅಂದಿನ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರು ನ್ಯಾಯಾಲಯದ ಪ್ರಕರಣವೊಂದರಲ್ಲಿ ದೋಷಿ ಎಂದು ಸಾಬೀತಾದಾಗ ಒ. ಪನ್ನೀರ್ಸೆಲ್ವಂ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ನಂತರ 2015ರಲ್ಲಿ ಜಯಲಲಿತಾ ಅವರು ಪ್ರಕರಣ ಖುಲಾಸೆಗೊಂಡಾಗ ಪನ್ನೀರ್ ಸೆಲ್ವಂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.</p><p>ಡಿಸೆಂಬರ್ 2016 ರಲ್ಲಿ ಜಯಲಲಿತಾ ಅವರ ನಿಧನದ ಬಳಿಕ ಒ. ಪನ್ನೀರ್ಸೆಲ್ವಂ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಆದರೆ ಪಕ್ಷದೊಳಗಿನ ರಾಜಕೀಯ ಬಿಕ್ಕಟ್ಟು ಹಾಗೂ ವಿ. ಕೆ. ಶಶಿಕಲಾ ಅವರ ಒತ್ತಡದಿಂದಾಗಿ 2017 ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p><p>ಜಯಲಲಿತಾ ಅವರು 2011ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ 2014ರ ಸೆಪ್ಟೆಂಬರ್ನಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರು ಆರೋಪದಲ್ಲಿ ಅವರು ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಆಗ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.</p>.<h3>ಆಂಧ್ರ ಪ್ರದೇಶ</h3><p>2009ರ ಮೇ ತಿಂಗಳಿನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ 2ನೇ ಅವಧಿಗೆ ವೈ. ಎಸ್. ರಾಜಶೇಖರ್ ರೆಡ್ಡಿ ಆಯ್ಕೆಯಾಗಿದ್ದರು. ಆದರೆ 2009ರ ಸೆಪ್ಟೆಂಬರ್ 2ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. </p><p>ವೈ.ಎಸ್.ಆರ್ ನಿಧನದ ಬಳಿಕ ಮಧ್ಯಂತರವಾಗಿ ಕೊನಿಜೇಟಿ ರೋಸಯ್ಯ ಮುಖ್ಯಮಂತ್ರಿಯಾದರು. ರಾಜಕೀಯ ಬಿಕ್ಕಟ್ಟು ಮತ್ತು ಆನಾರೋಗ್ಯದಿಂದಾಗಿ 2010ರ ನವೆಂಬರ್ 24 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p><p>2010ರ ನವೆಂಬರ್ 25 ರಂದು ನಲ್ಲಾರಿ ಕಿರಣ್ ಕುಮಾರ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ಫೀಕರಿಸಿದರು. ಆಂಧ್ರಪ್ರದೇಶ ವಿಭಜನೆ (ತೆಲಂಗಾಣ ರಚನೆ) ಪ್ರಕ್ರಿಯೆಯನ್ನು ವಿರೋಧಿಸಿ 2014ರ ಮಾರ್ಚ್ 1 ರಂದು ತಮ್ಮ ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ನೀಡಿದ್ದರು.</p>.<h3>ಕೇರಳ</h3><p>ಎ. ಕೆ. ಆಂಟನಿ ಅವರು 2001ರ ಮೇ 17 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2004 ರ ಲೋಕಸಭಾ ಚುನಾವಣೆಯಲ್ಲಿ ಅವರ ನೇತೃತ್ವದ ಕಾಂಗ್ರೆಸ್ ಮೈತ್ರಿಕೂಟವು ರಾಜ್ಯದಲ್ಲಿ ಭಾರಿ ಹಿನ್ನಡೆ ಅನುಭವಿಸಿತು. ಈ ಸೋಲಿನ ನೈತಿಕ ಹೊಣೆ ಹೊತ್ತು 2004ರ ಆಗಸ್ಟ್ 29ರಂದು ರಾಜೀನಾಮೆ ನೀಡಿದ್ದರು, ನಂತರ ಉಮ್ಮನ್ ಚಾಂಡಿ ಮುಖ್ಯಮಂತ್ರಿಯಾದರು.</p>.<h3>ಮಹಾರಾಷ್ಟ್ರ</h3><p>ವಿಲಾಸ್ರಾವ್ ದೇಶ್ಮುಖ್ ಅವರು 2004ರಲ್ಲಿ ಮುಖ್ಯಮಂತ್ರಿಯಾದರು. ಆದರೆ 2008 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಹೊಣಗಾರಿಕೆ ಹೊತ್ತು, 1 ವರ್ಷ ಬಾಕಿ ಇರುವಾಗಲೇ 2008 ಡಿಸೆಂಬರ್ನಲ್ಲಿ ರಾಜೀನಾಮೆ ನೀಡಿದ್ದರು.</p><p>ಅಶೋಕ್ ಚವ್ಹಾಣ್ ಅವರು 2008ರಲ್ಲಿ ಅಧಿಕಾರ ಸ್ವೀಕರಿಸಿದರು. 2009 ರಲ್ಲಿ ಪುನಃ ಅಧಿಕಾರಕ್ಕೆ ಬಂದ ಅವರು ‘ಆದರ್ಶ್ ಹೌಸಿಂಗ್ ಸೊಸೈಟಿ’ ಹಗರಣದಲ್ಲಿ ಭಾಗಿಯಾಗಿರುವ ಆರೋಪದಡಿ 2010ರ ನವೆಂಬರ್ನಲ್ಲಿ 2 ವರ್ಷಗಳಲ್ಲಿ ರಾಜೀನಾಮೆ ನೀಡಿದರು.</p><p>2010 ರಲ್ಲಿ ಪೃಥ್ವಿರಾಜ್ ಚವ್ಹಾಣ್ ಮುಖ್ಯಮಂತ್ರಿಯಾದರು. ಆದರೆ 2014 ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ಮುನ್ನ ಎನ್ಸಿಪಿ ಮೈತ್ರಿ ಪಕ್ಷ ಬಹುಮತ ಹಿಂಪಡೆದಿದ್ದರಿಂದ 4 ವರ್ಷಗಳ ಅವಧಿಯಲ್ಲಿಯೇ ರಾಜೀನಾಮೆ ನೀಡಬೇಕಾಯಿತು.</p><p>ದೇವೇಂದ್ರ ಫಡ್ನವಿಸ್ ಅವರು 2019ರಲ್ಲಿ ಅಜಿತ್ ಪವಾರ್ ಅವರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಆದರೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಕೇವಲ 3 ದಿನಗಳಲ್ಲಿ ರಾಜೀನಾಮೆ ನೀಡಿದ್ದರು.</p><p>ಉದ್ಧವ್ ಠಾಕ್ರೆ ಅವರು ಎಂವಿಎ ಪಕ್ಷದ ಮೈತ್ರಿಕೂಟದ ಬೆಂಬಲದೊಂದಿಗೆ 2019ರಲ್ಲಿ ಮುಖ್ಯಮಂತ್ರಿಯಾದರು. ಆದರೆ ಜೂನ್ 2022 ರಲ್ಲಿ ಏಕನಾಥ್ ಶಿಂದೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು ಬಂಡಾಯವೆದ್ದ ಕಾರಣ ಬಹುಮತ ಕಳೆದುಕೊಂಡು 2.5 ವರ್ಷ ಪೂರ್ಣವಾಗುವ ಮುನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.</p>.<h3>ಒಡಿಶಾ</h3><p>2005 ರಿಂದ 2026ರ ನಡುವೆ ಒಡಿಸ್ಸಾದ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p>.<h3>ಛತ್ತೀಸ್ಗಢ</h3><p>2005 ರಿಂದ 2026ರ ನಡುವೆ ಛತ್ತೀಸ್ಗಢನಲ್ಲಿ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p>.<h3>ಮಧ್ಯಪ್ರದೇಶ</h3><p>ಬಾಬುಲಾಲ್ ಗೌರ್ ಅವರು 2004ರಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದರೆ ಪಕ್ಷದೊಳಗಿನ ರಾಜಕೀಯ ತಿಕ್ಕಾಟ ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ 2005ರಲ್ಲಿ ರಾಜೀನಾಮೆ ನೀಡಿದ್ದರು. ನಂತರ ಶಿವರಾಜ್ ಸಿಂಗ್ ಚೌಹಾಣ್ ಅಧಿಕಾರ ವಹಿಸಿಕೊಂಡರು.</p><p>ಕಮಲ್ ನಾಥ್ ಅವರು 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾದರು. ಆದರೆ 2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಬೆಂಬಲಿಗ 22 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಆಗ ಬಹುಮತ ಕಳೆದುಕೊಂಡ ಕಮಲ್ನಾಥ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.</p><h3>ಗುಜಾರಾತ್</h3><p>2001 ರಿಂದ 2014 ರವರೆಗೆ ಗುಜರಾತ್ನಲ್ಲಿ ನರೇಂದ್ರ ಮೋದಿ ಅವರು ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದರು. ಆದರೆ 2014 ರಲ್ಲಿ ಅವರು ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಕಾರಣ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p><p>ಆನಂದಿಬೆನ್ ಪಟೇಲ್ ಅವರು 2014ರಲ್ಲಿ ಗುಜರಾತ್ನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ ಪಕ್ಷದ ಆಂತರಿಕ ನಿರ್ಧಾರಗಳಿಂದಾಗಿ 2016ರಲ್ಲಿ ರಾಜೀನಾಮೆ ನೀಡಿದರು.</p><p>2017ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ವಿಜಯ್ ರೂಪಾನಿ ಅವರು ಪಕ್ಷದ ಹಿರಿಯರ ಸೂಚನೆ ಮತ್ತು ರಾಜಕೀಯ ಸಮೀಕರಣಗಳ ಬದಲಾವಣೆಯಿಂದಾಗಿ 2021ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.</p><h3>ರಾಜಸ್ಥಾನ</h3><p>2005 ರಿಂದ 2026ರ ನಡುವೆ ರಾಜಸ್ಥಾನ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p><h3>ಉತ್ತರ ಪ್ರದೇಶ</h3><p>ಮುಲಾಯಂ ಸಿಂಗ್ ಯಾದವ್ ಅವರು 2003ರಲ್ಲಿ ಸಮಾಜವಾದಿ ಪಕ್ಷದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದರೆ 2007 ರಲ್ಲಿ ಪಕ್ಷದ ಬಹುಮತ ಕಳೆದುಕೊಂಡು ಅಧಿಕಾರವಧಿ ಮುಗಿಯುವ ಕೆಲವೇ ತಿಂಗಳ ಹಿಂದೆ ರಾಜೀನಾಮೆ ನೀಡದರು.</p><h3> ಬಿಹಾರ</h3><p>ನಿತೀಶ್ ಕುಮಾರ್ ಅವರು 2010ರಲ್ಲಿ ಭಾರೀ ಬಹುಮತದೊಂದಿಗೆ ಮುಖ್ಯಮಂತ್ರಿಯಾದರು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಜೆಡಿಯು ಪಕ್ಷ ಹಿನ್ನಡೆ ಸಾಧಿಸಿತು. ಈ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ನಂತರ 2017, 2022, 2024 ಮತ್ತು 2026ರಲ್ಲಿ ರಾಜೀನಾಮೆ ನೀಡಿದ್ದಾರೆ.</p><p>ಜಿತನ್ ರಾಮ್ ಮಾಂಝಿ ಅವರು 2014ರಲ್ಲಿ ಮುಖ್ಯಮಂತ್ರಿಯಾದರು. ಬಳಿಕ 2015ರಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತು ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. </p>.<p><strong>ಜಾರ್ಖಂಡ್</strong> </p><p>ಶಿಬು ಸೊರೇನ್ ಅವರು 2005ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರಾದರೂ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಕೇವಲ 10 ದಿನಗಳಲ್ಲಿ ರಾಜೀನಾಮೆ ನೀಡಿದರು.</p><p>2008ರಲ್ಲಿ ಶಿಬು ಸೊರೇನ್ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಉಪಚುನಾವಣೆಯಲ್ಲಿ ಸೋಲನುಭವಿಸಿದ ಕಾರಣ 2009ರಲ್ಲಿ ರಾಜೀನಾಮೆ ನೀಡಬೇಕಾಯಿತು. </p><p>ಅರ್ಜುನ್ ಮುಂಡಾ ಅವರು 2005 ಮುಖ್ಯಮಂತ್ರಿಯಾದರು. ಆದರೆ ಮೈತ್ರಿಕೂಟದ ಬೆಂಬಲದ ಕೊರತೆಯಿಂದಾಗಿ 2006ರಲ್ಲಿ ರಾಜೀನಾಮೆ ನೀಡಿದರು. ಮತ್ತೊಮ್ಮೆ 2010ರಲ್ಲಿ ಜಿಎಂಎಂ ಪಕ್ಷದ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಆದರೆ 2013 ರಲ್ಲಿ ಜೆಎಂಎಂ ಪಕ್ಷವು ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಹೀಗಾಗಿ ರಾಜೀನಾಮೆ ನೀಡಬೇಕಾಯಿತು.</p><p>ಮಧು ಕೋಡಾ ಅವರು 2006ರಲ್ಲಿ ಮುಖ್ಯಮಂತ್ರಿಯಾದರು. ಮೈತ್ರಿ ಪಕ್ಷಗಳ ಒತ್ತಡ, ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ 2008 ರಲ್ಲಿ ರಾಜೀನಾಮೆ ನೀಡಿದರು.</p><p>ಹೇಮಂತ್ ಸೊರೇನ್ ಅವರು 2019 ರಲ್ಲಿ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಜಾರಿ ನಿರ್ದೇಶನಾಲಯದ (ED) ತನಿಖೆ ಮತ್ತು ಬಂಧನದ ಭೀತಿಯಿಂದಾಗಿ 2024ರಲ್ಲಿ ರಾಜೀನಾಮೆ ನೀಡಿದರು.</p><p>ಚಂಪೈ ಸೊರೇನ್ ಅವರು 2024 ರಂದು ಮುಖ್ಯಮಂತ್ರಿಯಾದರು. ಆದರೆ ಹೇಮಂತ್ ಸೊರೇನ್ ಅವರು ಜೈಲಿನಿಂದ ಹೊರಬಂದ ತಕ್ಷಣ ಇವರು 2024 ರಂದು ರಾಜೀನಾಮೆ ನೀಡಿದರು.</p><h3>ಪಶ್ಚಿಮ ಬಂಗಾಳ</h3><p>2005 ರಿಂದ 2026ರ ನಡುವೆ ಪಶ್ಚಿಮ ಬಂಗಾಳ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p><h3>ಸಿಕ್ಕಿಂ</h3><p>2005 ರಿಂದ 2026ರ ನಡುವೆ ಸಿಕ್ಕಿಂ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p><h3>ಮೇಘಾಲಯ</h3><p>ಡಿ. ಡಿ. ಲಪಾಂಗ್ ಅವರು 2003 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ 2006 ರಲ್ಲಿ ಅವಧಿಗೆ ಮುನ್ನವೇ ರಾಜೀನಾಮೆ ನೀಡಿದರು. ನಂತರ 2009ರಲ್ಲಿ ಮುಖ್ಯಮಂತ್ರಿಯಾದ ಅವರು ಪಕ್ಷದೊಳಗಿನ ನಾಯಕತ್ವ ಬದಲಾವಣೆಯ ಒತ್ತಡದಿಂದಾಗಿ ಕೇವಲ 11 ತಿಂಗಳುಗಳಿಗೆ 2010ರಲ್ಲಿ ರಾಜೀನಾಮೆ ನೀಡಬೇಕಾಯಿತು.</p><p>ಜೆ. ಡ್ರಿಂಗ್ಬೆಲ್ ರಿಂಬೈ ಅವರು 2006ರಲ್ಲಿ ಕಾಂಗ್ರೆಸ್ನಿಂದ ಮುಖ್ಯಮಂತ್ರಿಯಾದರು. ಆದರೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಮುಂದುವರಿದ ಕಾರಣ 2007ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. </p><p>ಡೊಂಕುಪರ್ ರಾಯ್ ಅವರು 2008 ರಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ನೇತೃತ್ವದ ಮೈತ್ರಿಕೂಟದಿಂದ ಮುಖ್ಯಮಂತ್ರಿಯಾದರು. ಬಳಿಕ ಮೈತ್ರಿಕೂಟ ಬಹುಮತ ಕಳೆದುಕೊಂಡು 2009ರಲ್ಲಿ ರಾಜೀನಾಮೆ ನೀಡಿದರು.</p><h3>ಮಿಜೋರಾಂ</h3><p>2005 ರಿಂದ 2026ರ ನಡುವೆ ಮಿಜೋರಾಂ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p><h3>ಮಣಿಪುರ</h3><p>2005 ರಿಂದ 2026ರ ನಡುವೆ ಮಿಜೋರಾಂ ಯಾವೊಬ್ಬ ಮುಖ್ಯಮಂತ್ರಿ ಕೂಡ 5 ವರ್ಷ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿಲ್ಲ.</p><h3><strong>ಜಮ್ಮು ಮತ್ತು ಕಾಶ್ಮೀರ</strong></h3><p>‘ಅಮರನಾಥ ಭೂಮಿ ವಿವಾದ’ ಉಂಟಾಗಿದ್ದರಿಂದ ಗುಲಾಮ್ ನಬಿ ಆಜಾದ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ತನ್ನ ಬೆಂಬಲವನ್ನು ಹಿಂಪಡೆದಿದ್ದರಿಂದ, ಅವರು 2008ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.</p><p>ಪಿಡಿಪಿ ಪಕ್ಷದ ಮೆಹಬೂಬ ಮುಫ್ತಿ ಅವರಿಗೆ ಬಿಜೆಪಿ ನೀಡಿದ್ದ ಬೆಂಬಲ ವಾಪಾಸ್ ಪಡೆದಿದ್ದರಿಂದ ಪಿಡಿಪಿ ಪಕ್ಷವು ಬಹುಮತ ಕಳೆದುಕೊಳ್ಳುತ್ತದೆ. ಹಾಗಾಗಿ, ಅಲ್ಲಿ ಸಿಎಂ ಆಗಿದ್ದ ಮುಫ್ತಿ 2018ರಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಬಳಿಕ, ಜಮ್ಮು ಮತ್ತು ಕಾಶ್ಮೀರದಲ್ಲಿ 2019 ರಿಂದ 2024 ರವರೆಗೆ ಯಾವುದೇ ಮುಖ್ಯಮಂತ್ರಿ ಇರಲಿಲ್ಲ. ಆ ಅವಧಿಯಲ್ಲಿ ರಾಜ್ಯಪಾಲರ ಆಡಳಿತ ಜಾರಿಯಲ್ಲಿತ್ತು.</p><h3><strong>ಪಂಜಾಬ್</strong></h3><p>2005ರಿಂದ 2025ರ ಅವಧಿಯಲ್ಲಿ ಅಧಿಕಾರಾವಧಿ ಮುಗಿಯುವ ಮುನ್ನವೇ ಪಕ್ಷದ ಆಂತರಿಕ ಭಿನ್ನಮತದ ಕಾರಣದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಏಕೈಕ ಮುಖ್ಯಮಂತ್ರಿ ಅಂದರೆ, ಅದು ಕ್ಯಾಪ್ಟನ್ ಅಮರಿಂದರ್ ಸಿಂಗ್. ಅವರು ತಮ್ಮ ಎರಡನೇ ಅವಧಿಯಲ್ಲಿ (2017 ರಿಂದ 2021) ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಮತ್ತು ನಾಯಕತ್ವದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2021ರ ಸೆಪ್ಟೆಂಬರ್ 18ರಂದು ರಾಜೀನಾಮೆ ನೀಡಿದ್ದರು.</p>.<p><strong>ಹರಿಯಾಣ</strong></p><p>ಇಲ್ಲಿ 2005 ರಿಂದ 2025 ರ ನಡುವೆ ಒಬ್ಬರು ಮಾತ್ರ ತಮ್ಮ ಅಧಿಕಾರಾವಧಿಯ ನಡುವೆ ರಾಜಕೀಯ ಬದಲಾವಣೆಗಳ ಕಾರಣದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮನೋಹರ್ ಲಾಲ್ ಖಟ್ಟರ್, 2014 ರಿಂದ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು. ಆದರೆ 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಬಿಜೆಪಿಯು ಜನನಾಯಕ್ ಜನತಾ ಪಾರ್ಟಿ (JJP) ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಿದ ಹಿನ್ನೆಲೆ 2024ರ ಮಾರ್ಚ್ 12 ರಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p><h3><strong>ದೆಹಲಿ</strong></h3><p>2005 ರಿಂದ 2025 ರ ಅವಧಿಯಲ್ಲಿ ತಮ್ಮ ಅಧಿಕಾರಾವಧಿಯ ನಡುವೆ ರಾಜಕೀಯ ಬಿಕ್ಕಟ್ಟು ಮತ್ತು ಇತರೆ ಕಾರಣಗಳಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಏಕೈಕ ಮುಖ್ಯಮಂತ್ರಿ ಅಂದರೆ ಅದು, ಅರವಿಂದ್ ಕೇಜ್ರಿವಾಲ್. ಇವರು 2005ರಿಂದ 20026ರ ಅವಧಿಯಲ್ಲಿ ಎರಡು ಬಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.</p><p>2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಇವರು, ತಮ್ಮ ಸರ್ಕಾರ ಮಂಡಿಸಲು ಉದ್ದೇಶಿಸಿದ್ದ 'ಜನಲೋಕಪಾಲ ವಿಧೇಯಕ'ಕ್ಕೆ ವಿಧಾನಸಭೆಯಲ್ಲಿ ಇತರ ಪಕ್ಷಗಳಿಂದ ಬೆಂಬಲ ಸಿಗದಿದ್ದರಿಂದ, ಕೇವಲ 49 ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.</p><p>2024ರ ಮೂರನೇ ಅವಧಿಯಲ್ಲಿ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದ ನಂತರ, ಸಾರ್ವಜನಿಕರು ತಮಗೆ 'ಪ್ರಾಮಾಣಿಕತೆಯ ಪ್ರಮಾಣಪತ್ರ' ನೀಡುವವರೆಗೆ ತಾವೂ ಈ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಘೋಷಿಸಿ 2024ರ ಸೆಪ್ಟೆಂಬರ್ 17ರಂದು ರಾಜೀನಾಮೆ ನೀಡಿದ್ದರು.</p><h3><strong>ಉತ್ತರಾಖಂಡ</strong></h3><p>2005 ರಿಂದ 2025 ರ ನಡುವೆ ಅನೇಕ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. 2007ರಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದ ಭುವನ್ ಚಂದ್ರ ಖಂಡೂರಿ ಅವರು, 2009 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ರಾಜ್ಯದ ಎಲ್ಲಾ 5 ಸ್ಥಾನಗಳಲ್ಲಿ ಸೋತ ಬಳಿಕ ಪಕ್ಷದ ಆಂತರಿಕ ಒತ್ತಡಕ್ಕೆ ಮಣಿದು 2009 ಜೂನ್ 26ರಂದು ರಾಜೀನಾಮೆ ನೀಡಿದರು.</p><p>ಕಾಂಗ್ರೆಸ್ನಿಂದ 2012 ರಲ್ಲಿ ಮುಖ್ಯಮಂತ್ರಿಯಾಗಿದ್ದ ವಿಜಯ್ ಬಹುಗುಣ ಆಯ್ಕೆಯಾಗುತ್ತಾರೆ. ಆದರೆ 2013 ರ ಕೇದರನಾಥ ಪ್ರವಾಹ ವಿಕೋಪದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಕಾರಣ, 2014 ಜನವರಿ 13ರಂದು ರಾಜೀನಾಮೆ ನೀಡಿದ್ದರು.</p><p>2016 ರಲ್ಲಿ ಕಾಂಗ್ರೆಸ್ ಪಕ್ಷದ 9 ಶಾಸಕರು ಬಂಡಾಯವೆದ್ದು ಬಿಜೆಪಿಯನ್ನು ಬೆಂಬಲಿಸಿದಾಗ, ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗುತ್ತದೆ, ಈ ಕಾರಣದಿಂದಾಗಿ ಹರೀಶ್ ರಾವತ್ ಅವರ ಸರ್ಕಾರವನ್ನು ವಜಾಗೊಳಿಸಿ ಕೆಲ ದಿನಗಳ ಕಾಲ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ನಂತರ ಇವರು ಬಹುಮತ ಸಾಬೀತುಪಡಿಸಿ ಮರಳಿ ಸಿಎಂ ಆದರು.</p><p>2017ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರಲ್ಲೇ ತೀವ್ರ ಅಸಮಾಧಾನ ಉಂಟಾಗುತ್ತದೆ. ಹೀಗಾಗಿ ತಮ್ಮ 4 ವರ್ಷಗಳ ಅವಧಿ ಮುಗಿಯಲು ಕೇವಲ 9 ದಿನ ಬಾಕಿ ಇರುವಾಗ, ಹೈಕಮಾಂಡ್ ತೀರ್ಮಾನದಂತೆ 2021ರ ಮಾರ್ಚ್ 9ರಂದು ರಾಜೀನಾಮೆ ನೀಡಿದರು.</p><p>ತ್ರಿವೇಂದ್ರ ಸಿಂಗ್ ಅವರ ನಂತರ ಮುಖ್ಯಮಂತ್ರಿಯಾದ ತೀರಥ್ ಸಿಂಗ್ ರಾವತ್ ಅವರು ಶಾಸಕರಾಗಿರಲಿಲ್ಲ. ಕೋವಿಡ್-19 ಕಾರಣದಿಂದಾಗಿ ನಿಗದಿತ 6 ತಿಂಗಳೊಳಗೆ ಉಪಚುನಾವಣೆ ನಡೆಸಿ ವಿಧಾನಸಭೆ ಸದಸ್ಯರಾಗಲು ಸಾಂವಿಧಾನಿಕ ತೊಂದರೆಗಳು ಎದುರಾದ ಹಿನ್ನೆಲೆಯಲ್ಲಿ, ಕೇವಲ 116 ದಿನಗಳ ಆಡಳಿತದ ನಂತರ 2021ರ ಜುಲೈ 4ರಂದು ರಾಜೀನಾಮೆ ನೀಡಿದರು.</p><h3><strong>ಹಿಮಾಚಲ ಪ್ರದೇಶ</strong></h3><p>ಇಲ್ಲಿ 2005 ರಿಂದ 2025ರ ನಡುವಿನ ಅವಧಿಯಲ್ಲಿ ರಾಜಕೀಯ ಬಿಕ್ಕಟ್ಟು, ಪಕ್ಷದ ಆಂತರಿಕ ಭಿನ್ನಮತ ಅಥವಾ ಹೈಕಮಾಂಡ್ ಒತ್ತಡಕ್ಕೆ ಮಣಿದು ಅಧಿಕಾರಾವಧಿಯ ಮಧ್ಯದಲ್ಲಿ ರಾಜೀನಾಮೆ ನೀಡಿದ ಯಾವುದೇ ಉದಾಹರಣೆಗಳಿಲ್ಲ.</p>.<h3><strong>ಅಸ್ಸಾಂ</strong></h3><p>ಇಲ್ಲಿಯೂ 2005 ರಿಂದ 2025 ರ ನಡುವಿನ ಅವಧಿಯಲ್ಲಿ ಯಾವುದೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ಉದಾಹರಣೆಗಳಿಲ್ಲ.</p><h3><strong>ಅರುಣಾಚಲ ಪ್ರದೇಶ</strong></h3><p>ಇಲ್ಲಿ 2005 ರಿಂದ 2025 ರ ನಡುವೆ, ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ಮತ್ತು ಆಂತರಿಕ ಭಿನ್ನಮತದ ಕಾರಣದಿಂದಾಗಿ ಅಧಿಕಾರಾವಧಿಯ ಮಧ್ಯದಲ್ಲೇ ಅನೇಕರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.</p><p>2003 ರಿಂದ ಮುಖ್ಯಮಂತ್ರಿಯಾಗಿದ್ದ ಗೆಗಾಂಗ್ ಅಪಾಂಗ್ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲೇ ತೀವ್ರ ಭಿನ್ನಮತ ಉಂಟಾದ ಕಾರಣ, ಹೈಕಮಾಂಡ್ ಸೂಚನೆಯಂತೆ 2007ರ ಏಪ್ರಿಲ್ 9ರಂದು ರಾಜೀನಾಮೆ ನೀಡಿದರು.</p><p>ದೋರ್ಜಿ ಖಂಡು ಅವರ ನಿಧನದ ನಂತರ ಸಿಎಂ ಆಗಿದ್ದ ಜರ್ಬೊಮ್ ಗ್ಯಾಮ್ಲಿನ್ ಅವರ ಆಡಳಿತದ ವಿರುದ್ಧ ಪಕ್ಷದೊಳಗೆ ಬಂಡಾಯ ಎದ್ದ ಹಿನ್ನೆಲೆಯಲ್ಲಿ, ಕೇವಲ 6 ತಿಂಗಳ ಅಧಿಕಾರದ ನಂತರ 2011ರ ಅಕ್ಟೋಬರ್ 31ರಂದು ರಾಜೀನಾಮೆ ನೀಡಿದರು.</p><p>ನಬಮ್ ಟುಕಿ ಇವರು ಎರಡು ಬಾರಿ ರಾಜೀನಾಮೆ ನೀಡಬೇಕಾಗಿ ಬಂದಿತು. ಒಮ್ಮೆ 2016ರಲ್ಲು ಸ್ವಪಕ್ಷದ ಶಾಸಕರೇ ಬಂಡಾಯವೆದ್ದಾಗ ಉಂಟಾದ ರಾಜಕೀಯ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ನಂತರ ಸುಪ್ರೀಂ ಕೋರ್ಟ್ ಆದೇಶದಂತೆ ಇವರು ಮರಳಿ ಸಿಎಂ ಆದರಾದರೂ, ಬಹುಮತ ಸಾಬೀತುಪಡಿಸುವ ಮುನ್ನವೇ ಪಕ್ಷದ ಆಂತರಿಕ ಒಮ್ಮತಕ್ಕಾಗಿ 2016ರ ಜುಲೈ 16ರಂದು ರಾಜೀನಾಮೆ ನೀಡಿದರು.</p><p>ಕಲಿಖೋ ಪುಲ್<strong> </strong>ಅವರು ಕಾಂಗ್ರೆಸ್ ಬಂಡಾಯ ಶಾಸಕರೊಂದಿಗೆ ಬಿಜೆಪಿ ಬೆಂಬಲದಿಂದ ಸಿಎಂ ಆಗಿದ್ದರು. ಇವರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದು ಘೋಷಿಸಿದ ಹಿನ್ನೆಲೆ, 2016ರ ಜುಲೈ 13 ರಂದು ಇವರು ಪದಚ್ಯುತರಾಗಬೇಕಾಯಿತು.</p><p>ದೋರ್ಜಿ ಖಂಡು ಇವರು ರಾಜೀನಾಮೆ ನೀಡಲಿಲ್ಲ, ಬದಲಿಗೆ 2011ರ ಏಪ್ರಿಲ್ 30ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಅಧಿಕಾರದಲ್ಲಿರುವಾಗಲೇ ಸಾವನ್ನಪ್ಪಿದರು.</p>.<h3><strong>ನಾಗಲ್ಯಾಂಡ್</strong></h3><p>2005 ರಿಂದ 2025ರ ನಡುವಿನ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಅನೇಕ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.</p><p>ನಾಗಲ್ಯಾಂಡ್ನಲ್ಲಿ ನೆಫಿಯು ರಿಯೋ 2008ರಿಂದ ಸತತವಾಗಿ ಮುಖ್ಯಮಂತ್ರಿಯಾಗಿದ್ದರು. ಇವರು, 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ (MP) ಆಯ್ಕೆಯಾದ ಹಿನ್ನೆಲೆಯಲ್ಲಿ 2014ರ ಮೇ 23ರಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಇವರು 2018ರಲ್ಲಿ ಮರಳಿ ಸಿಎಂ ಆದರು.</p><p>ಟಿ. ಆರ್. ಝೆಲಿಯಾಂಗ್ ಅವರು<strong> </strong>ರಾಜ್ಯದ ನಗರಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ನಾಗಲ್ಯಾಂಡ್ನಲ್ಲಿ ತೀವ್ರ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಯಿತು. ಈ ಒತ್ತಡಕ್ಕೆ ಮಣಿದ ಅವರು 2017ರ ಫೆಬ್ರುವರಿ 19<strong> </strong>ರಾಜೀನಾಮೆ ನೀಡಿದ್ದರು.</p><p>ಮತ್ತೊಮ್ಮೆ 2017ರಲ್ಲಿ ಶೂರಹೋಜೆಲಿ ಅವರ ರಾಜೀನಾಮೆಯ ನಂತರ ಎರಡನೇ ಬಾರಿ ಸಿಎಂ ಆಗಿದ್ದ ಇವರು, 2018ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಹೊಸ ಮೈತ್ರಿ ಸರ್ಕಾರ ರಚನೆಗೆ ಹಾದಿ ಮಾಡಿಕೊಡಲು 2018 ರಲ್ಲಿ ರಾಜೀನಾಮೆ ನೀಡಿದರು.</p><p>ಟಿ.ಆರ್. ಝೆಲಿಯಾಂಗ್ ಅವರ ರಾಜೀನಾಮೆಯ ನಂತರ ಶೂರಹೋಜೆಲಿ ಲೀಜಿತ್ಸು ಅವರು ಫೆಬ್ರುವರಿ 2017ರಲ್ಲಿ ಮುಖ್ಯಮಂತ್ರಿಯಾಗಿದ್ದರು. ಆದರೆ ಕೆಲವೇ ತಿಂಗಳುಗಳಲ್ಲಿ ಇವರ ವಿರುದ್ಧ ಸ್ವಪಕ್ಷದ ಶಾಸಕರೇ ಬಂಡಾಯವೆದ್ದು ಝೆಲಿಯಾಂಗ್ ಅವರನ್ನು ಬೆಂಬಲಿಸಿದರು. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫಲರಾದ ಹಿನ್ನೆಲೆ, ಇವರು 2017ರ ಜುಲೈ 19ರಂದು ರಾಜೀನಾಮೆ ಸಲ್ಲಿಸಿದ್ದರು.</p>.<p><strong>ಮೂಲ:</strong> ದಿ.ಹಿಂದೂ. ಟೈಮ್ಸ್ ಆಫ್ ಇಂಡಿಯಾ, ರಾಜ್ಯ ಸರ್ಕಾರಗಳ ಜಾಲತಾಣಗಳು, ಇಂಡಿಯ ಟುಡೇ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>