<p><strong>ಪಾಲಕ್ಕಾಡ್</strong>: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿನ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಕೇರಳದ ವಿದ್ಯಾರ್ಥಿನಿ ಶ್ರೀನಂದಾಳ (16) ಅಂತ್ಯಕ್ರಿಯೆ ಇಂದು ಹುಟ್ಟೂರಲ್ಲಿ ನೆರವೇರಿತು.</p><p>ಕೇರಳದ ಪಾಲಕ್ಕಾಡ್ ಬಳಿಯ ಕಾಡಂಬಪುರಂ ಶ್ರೀನಂದಾ ಸ್ವಗ್ರಾಮ. ನೂರಾರು ಬಂಧುಗಳು, ಸ್ನೇಹಿತರು ಶ್ರೀನಂದಾಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.</p><p>10 ನೇ ತರಗತಿ ವಿದ್ಯಾರ್ಥಿಯಾಗಿದ್ದ ಶ್ರೀನಂದಾ, ಪ್ರತಿಭಾವಂತಳಾಗಿದ್ದಳು. ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಸದಾ ಮುಂದಿದ್ದಳು ಎಂದು ಸ್ಮರಿಸಿಕೊಂಡು ಸ್ನೇಹಿತೆಯರು ಕಣ್ಣೀರು ಹಾಕಿದ್ದಾರೆ.</p><p>ತಮ್ಮ ಕುಟುಂಬದ ಸದಸ್ಯರ ಜೊತೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದ ಶ್ರೀನಂದಾ ಕಳೆದ ಮಂಗಳವಾರ ಮಾಣಿಕ್ಯಧಾರಾ ಜಲಪಾತದ ಬಳಿ ಇದ್ದಕ್ಕಿದ್ದಂಗೆ ಕಾಣೆಯಾಗಿದ್ದರು.</p><p>ಅರಣ್ಯ ಇಲಾಖೆ, ಎಸ್ಡಿಆರ್ಎಫ್ ತಂಡ, ಪ್ರವಾಸಿ ಮಿತ್ರ ತಂಡದವರು ಸೇರಿ ಅನೇಕರು ಡ್ರೋನ್ ಸಹಾಯದಿಂದ ಹುಡುಕಿದಾಗ ಜಲಪಾತದ ಸನಿಹ ಶುಕ್ರವಾರ ಮಧ್ಯಾಹ್ನ ಶ್ರೀನಂದಾ ಶವ ಪತ್ತೆಯಾಗಿತ್ತು.</p><p>ಜಲಪಾತದ ಸಮೀಪದ ಪ್ರಪಾತದಲ್ಲಿ ಬಾಲಕಿಯ ದೇಹ ಇರುವುದು ಮೊದಲು ಡ್ರೋಣ್ ಕ್ಯಾಮರಾದಲ್ಲಿ ಪತ್ತೆಯಾಯಿತು. ಬಳಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದೇ ಬಾಲಕಿಯ ಮೃತದೇಹ ಎಂಬುದನ್ನು ಖಚಿತಪಡಿಸಿದರು.</p><p>ಕಾಲು ಜಾರಿ ಪ್ರಪಾತಕ್ಕೆ ಬಿದ್ದಿರಬಹುದು ಅಥವಾ ಆಕೆಯೇ ಜಿಗಿದಿರಬಹುದು ಎಂದು ಶಂಕಿಸಲಾಗಿದೆ. ಬೇರೆ ಕಾರಣಗಳಿದ್ದರೆ ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಟಿಕೆಟ್ ಬುಕ್ಕಿಂಗ್ಗೆ ಸೀಮಿತವಾದ ‘ಅರಣ್ಯ ವಿಹಾರ’ ಚಾರಣ: ಸುರಕ್ಷೆ ಅರಣ್ಯರೋದನ.ಚಿಕ್ಕಮಗಳೂರು: ನಾಪತ್ತೆಯಾಗಿದ್ದ ಕೇರಳದ ವಿದ್ಯಾರ್ಥಿನಿ ಶವವಾಗಿ ಪತ್ತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಲಕ್ಕಾಡ್</strong>: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿನ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಕೇರಳದ ವಿದ್ಯಾರ್ಥಿನಿ ಶ್ರೀನಂದಾಳ (16) ಅಂತ್ಯಕ್ರಿಯೆ ಇಂದು ಹುಟ್ಟೂರಲ್ಲಿ ನೆರವೇರಿತು.</p><p>ಕೇರಳದ ಪಾಲಕ್ಕಾಡ್ ಬಳಿಯ ಕಾಡಂಬಪುರಂ ಶ್ರೀನಂದಾ ಸ್ವಗ್ರಾಮ. ನೂರಾರು ಬಂಧುಗಳು, ಸ್ನೇಹಿತರು ಶ್ರೀನಂದಾಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.</p><p>10 ನೇ ತರಗತಿ ವಿದ್ಯಾರ್ಥಿಯಾಗಿದ್ದ ಶ್ರೀನಂದಾ, ಪ್ರತಿಭಾವಂತಳಾಗಿದ್ದಳು. ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಸದಾ ಮುಂದಿದ್ದಳು ಎಂದು ಸ್ಮರಿಸಿಕೊಂಡು ಸ್ನೇಹಿತೆಯರು ಕಣ್ಣೀರು ಹಾಕಿದ್ದಾರೆ.</p><p>ತಮ್ಮ ಕುಟುಂಬದ ಸದಸ್ಯರ ಜೊತೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದ ಶ್ರೀನಂದಾ ಕಳೆದ ಮಂಗಳವಾರ ಮಾಣಿಕ್ಯಧಾರಾ ಜಲಪಾತದ ಬಳಿ ಇದ್ದಕ್ಕಿದ್ದಂಗೆ ಕಾಣೆಯಾಗಿದ್ದರು.</p><p>ಅರಣ್ಯ ಇಲಾಖೆ, ಎಸ್ಡಿಆರ್ಎಫ್ ತಂಡ, ಪ್ರವಾಸಿ ಮಿತ್ರ ತಂಡದವರು ಸೇರಿ ಅನೇಕರು ಡ್ರೋನ್ ಸಹಾಯದಿಂದ ಹುಡುಕಿದಾಗ ಜಲಪಾತದ ಸನಿಹ ಶುಕ್ರವಾರ ಮಧ್ಯಾಹ್ನ ಶ್ರೀನಂದಾ ಶವ ಪತ್ತೆಯಾಗಿತ್ತು.</p><p>ಜಲಪಾತದ ಸಮೀಪದ ಪ್ರಪಾತದಲ್ಲಿ ಬಾಲಕಿಯ ದೇಹ ಇರುವುದು ಮೊದಲು ಡ್ರೋಣ್ ಕ್ಯಾಮರಾದಲ್ಲಿ ಪತ್ತೆಯಾಯಿತು. ಬಳಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದೇ ಬಾಲಕಿಯ ಮೃತದೇಹ ಎಂಬುದನ್ನು ಖಚಿತಪಡಿಸಿದರು.</p><p>ಕಾಲು ಜಾರಿ ಪ್ರಪಾತಕ್ಕೆ ಬಿದ್ದಿರಬಹುದು ಅಥವಾ ಆಕೆಯೇ ಜಿಗಿದಿರಬಹುದು ಎಂದು ಶಂಕಿಸಲಾಗಿದೆ. ಬೇರೆ ಕಾರಣಗಳಿದ್ದರೆ ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಟಿಕೆಟ್ ಬುಕ್ಕಿಂಗ್ಗೆ ಸೀಮಿತವಾದ ‘ಅರಣ್ಯ ವಿಹಾರ’ ಚಾರಣ: ಸುರಕ್ಷೆ ಅರಣ್ಯರೋದನ.ಚಿಕ್ಕಮಗಳೂರು: ನಾಪತ್ತೆಯಾಗಿದ್ದ ಕೇರಳದ ವಿದ್ಯಾರ್ಥಿನಿ ಶವವಾಗಿ ಪತ್ತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>