<p>ಜೈಪುರ (ಪಿಟಿಐ): ‘ನ್ಯಾಯಾಂಗ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಸಾರ್ವಜನಿಕ ನಂಬಿಕೆ ಹೊಂದಿದ್ದು, ಇದನ್ನು ಬಲಪಡಿಸುವುದು ಅವು ಗಳ ಜವಾಬ್ದಾರಿಯಾಗಿದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಶನಿವಾರ ಇಲ್ಲಿ ಹೇಳಿದರು.</p>.<p>ನಿವೃತ್ತ ನ್ಯಾಯಾಧೀಶರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘ಸವಾಲಿನ ಸಮಯದಲ್ಲಿ ನಿವೃತ್ತರು ವ್ಯವಸ್ಥೆಗೆ ಮಾರ್ಗದರ್ಶನ ನೀಡುವ ಅರಿವಿನ ಜಲಾಶಯವಿದ್ದಂತೆ’ ಎಂದು ಬಣ್ಣಿಸಿದರು.</p>.<p>‘ಕಷ್ಟದ ಸಂದರ್ಭದಲ್ಲಿ ಯಾವುದು ಸರಿ– ತಪ್ಪು ಎಂಬುದರ ಕುರಿತಂತೆ ಮಾರ್ಗದರ್ಶನಕ್ಕಾಗಿ ನಾವು ಈ ಅನುಭವಿ ನಿವೃತ್ತ ನ್ಯಾಯಮೂರ್ತಿಗಳತ್ತ ನೋಡುತ್ತೇವೆ’ ಎಂದರು.</p>.<p>‘ನಿವೃತ್ತ ನ್ಯಾಯಾಧೀಶರು ಮಧ್ಯವರ್ತಿಗಳು ಹಾಗೂ ಮಧ್ಯಸ್ಥಗಾರರಾಗಿವಿಶೇಷವಾಗಿ ವಾಣಿಜ್ಯ, ಕೌಟುಂಬಿಕ ವಿಷಯಗಳಲ್ಲಿ ಸಲಹೆಗಾರರ ಪಾತ್ರ ವನ್ನು ನಿರ್ವಹಿಸುವ ಮೂಲಕ ನಾಗರಿಕರಿಗೆ ಹಕ್ಕುಗಳನ್ನು ತಿಳಿಸಬೇಕು’ ಎಂದರು.</p>.<p>‘ನಿವೃತ್ತ ನ್ಯಾಯಮೂರ್ತಿಗಳ ಅನುಭವವನ್ನು ಪರ್ಯಾಯ ವಿವಾದ ಪರಿಹಾರ (ಎಡಿಆರ್) ಕಾರ್ಯವಿಧಾನದಲ್ಲಿ ಬಳಸಿಕೊಳ್ಳಲು ರಚನಾತ್ಮಕ ರಾಷ್ಟ್ರೀಯ ಚೌಕಟ್ಟು ರಚಿಸುವಂತೆಯೂ’ ಸಿಜೆಐ ಸಲಹೆ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260426-51-1644288973</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೈಪುರ (ಪಿಟಿಐ): ‘ನ್ಯಾಯಾಂಗ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಸಾರ್ವಜನಿಕ ನಂಬಿಕೆ ಹೊಂದಿದ್ದು, ಇದನ್ನು ಬಲಪಡಿಸುವುದು ಅವು ಗಳ ಜವಾಬ್ದಾರಿಯಾಗಿದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಶನಿವಾರ ಇಲ್ಲಿ ಹೇಳಿದರು.</p>.<p>ನಿವೃತ್ತ ನ್ಯಾಯಾಧೀಶರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘ಸವಾಲಿನ ಸಮಯದಲ್ಲಿ ನಿವೃತ್ತರು ವ್ಯವಸ್ಥೆಗೆ ಮಾರ್ಗದರ್ಶನ ನೀಡುವ ಅರಿವಿನ ಜಲಾಶಯವಿದ್ದಂತೆ’ ಎಂದು ಬಣ್ಣಿಸಿದರು.</p>.<p>‘ಕಷ್ಟದ ಸಂದರ್ಭದಲ್ಲಿ ಯಾವುದು ಸರಿ– ತಪ್ಪು ಎಂಬುದರ ಕುರಿತಂತೆ ಮಾರ್ಗದರ್ಶನಕ್ಕಾಗಿ ನಾವು ಈ ಅನುಭವಿ ನಿವೃತ್ತ ನ್ಯಾಯಮೂರ್ತಿಗಳತ್ತ ನೋಡುತ್ತೇವೆ’ ಎಂದರು.</p>.<p>‘ನಿವೃತ್ತ ನ್ಯಾಯಾಧೀಶರು ಮಧ್ಯವರ್ತಿಗಳು ಹಾಗೂ ಮಧ್ಯಸ್ಥಗಾರರಾಗಿವಿಶೇಷವಾಗಿ ವಾಣಿಜ್ಯ, ಕೌಟುಂಬಿಕ ವಿಷಯಗಳಲ್ಲಿ ಸಲಹೆಗಾರರ ಪಾತ್ರ ವನ್ನು ನಿರ್ವಹಿಸುವ ಮೂಲಕ ನಾಗರಿಕರಿಗೆ ಹಕ್ಕುಗಳನ್ನು ತಿಳಿಸಬೇಕು’ ಎಂದರು.</p>.<p>‘ನಿವೃತ್ತ ನ್ಯಾಯಮೂರ್ತಿಗಳ ಅನುಭವವನ್ನು ಪರ್ಯಾಯ ವಿವಾದ ಪರಿಹಾರ (ಎಡಿಆರ್) ಕಾರ್ಯವಿಧಾನದಲ್ಲಿ ಬಳಸಿಕೊಳ್ಳಲು ರಚನಾತ್ಮಕ ರಾಷ್ಟ್ರೀಯ ಚೌಕಟ್ಟು ರಚಿಸುವಂತೆಯೂ’ ಸಿಜೆಐ ಸಲಹೆ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260426-51-1644288973</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>