<p>TN CM Vijay visits Periyar Thidal, meets DK chief Veeramani</p><p>ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ಸಿ ವಿಜಯ್ ಭಾನುವಾರ ಪೆರಿಯಾರ್ ತಿಡಲ್ಗೆ ಭೇಟಿ ನೀಡಿ ದ್ರಾವಿಡ ಕಳಗಂ ಅಧ್ಯಕ್ಷ ಕೆ. ವೀರಮಣಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಸೌಜನ್ಯಯುತ ಭೇಟಿ ಎಂದು ವಿವರಿಸಲಾಗಿದೆ.</p><p>‘ಪೆರಿಯಾರ್’ ಎಂದೇ ಜನಪ್ರಿಯರಾಗಿರುವ ಇ. ವಿ. ರಾಮಸಾಮಿ ಅವರ ಸ್ಮಾರಕಕ್ಕೆ ವಿಜಯಗ ಪುಷ್ಪ ನಮನ ಸಲ್ಲಿಸಿದರು.</p><p>ನಂತರ, ವೀರಮಣಿ ಅವರೊಂದಿಗೆ ರಾಜ್ಯದ ಪ್ರಸ್ತುತ ಸಾಮಾಜಿಕ ರಾಜಕೀಯ ಪರಿಸ್ಥಿತಿಯ ಕುರಿತು ಸಂಕ್ಷಿಪ್ತ ಚರ್ಚೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಪೆರಿಯಾರ್ ತಿಡಲ್, ತಮಿಳುನಾಡಿನಲ್ಲಿ ಬೇರೂರಿರುವ ದ್ರಾವಿಡ ಸೈದ್ಧಾಂತಿಕ ಚಳವಳಿಯ ‘ದ್ರಾವಿಡ ಕಳಗಂ’ಸಂಘಟನೆಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ.</p><p>ಈ ಸಂಕೀರ್ಣವು ಪೆರಿಯಾರ್ ವಸ್ತುಸಂಗ್ರಹಾಲಯ ಮತ್ತು ಅವರ ಸ್ಮಾರಕವನ್ನು ಸಹ ಹೊಂದಿದೆ. ತಮ್ಮ ದ್ರಾವಿಡ ಸೈದ್ಧಾಂತಿಕ ನಿಲುವನ್ನು ಪುನರುಚ್ಚರಿಸಲು ಬಯಸುವ ರಾಜಕೀಯ ನಾಯಕರಿಗೆ ಸಾಂಕೇತಿಕ ತೀರ್ಥ ಕ್ಷೇತ್ರದಂತಿದೆ ಎಂದು ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>TN CM Vijay visits Periyar Thidal, meets DK chief Veeramani</p><p>ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ಸಿ ವಿಜಯ್ ಭಾನುವಾರ ಪೆರಿಯಾರ್ ತಿಡಲ್ಗೆ ಭೇಟಿ ನೀಡಿ ದ್ರಾವಿಡ ಕಳಗಂ ಅಧ್ಯಕ್ಷ ಕೆ. ವೀರಮಣಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಸೌಜನ್ಯಯುತ ಭೇಟಿ ಎಂದು ವಿವರಿಸಲಾಗಿದೆ.</p><p>‘ಪೆರಿಯಾರ್’ ಎಂದೇ ಜನಪ್ರಿಯರಾಗಿರುವ ಇ. ವಿ. ರಾಮಸಾಮಿ ಅವರ ಸ್ಮಾರಕಕ್ಕೆ ವಿಜಯಗ ಪುಷ್ಪ ನಮನ ಸಲ್ಲಿಸಿದರು.</p><p>ನಂತರ, ವೀರಮಣಿ ಅವರೊಂದಿಗೆ ರಾಜ್ಯದ ಪ್ರಸ್ತುತ ಸಾಮಾಜಿಕ ರಾಜಕೀಯ ಪರಿಸ್ಥಿತಿಯ ಕುರಿತು ಸಂಕ್ಷಿಪ್ತ ಚರ್ಚೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಪೆರಿಯಾರ್ ತಿಡಲ್, ತಮಿಳುನಾಡಿನಲ್ಲಿ ಬೇರೂರಿರುವ ದ್ರಾವಿಡ ಸೈದ್ಧಾಂತಿಕ ಚಳವಳಿಯ ‘ದ್ರಾವಿಡ ಕಳಗಂ’ಸಂಘಟನೆಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ.</p><p>ಈ ಸಂಕೀರ್ಣವು ಪೆರಿಯಾರ್ ವಸ್ತುಸಂಗ್ರಹಾಲಯ ಮತ್ತು ಅವರ ಸ್ಮಾರಕವನ್ನು ಸಹ ಹೊಂದಿದೆ. ತಮ್ಮ ದ್ರಾವಿಡ ಸೈದ್ಧಾಂತಿಕ ನಿಲುವನ್ನು ಪುನರುಚ್ಚರಿಸಲು ಬಯಸುವ ರಾಜಕೀಯ ನಾಯಕರಿಗೆ ಸಾಂಕೇತಿಕ ತೀರ್ಥ ಕ್ಷೇತ್ರದಂತಿದೆ ಎಂದು ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>