<p><strong>ಛತ್ರಪತಿ ಸಂಭಾಜಿನಗರ: ‘</strong>ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಾಮಾಜಿಕ ಮಾಧ್ಯಮ ಖಾತೆಯ ಖ್ಯಾತಿಯು ಅದರ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.</p>.<p>‘ಸಾಮಾಜಿಕ ಮಾಧ್ಯಮದಲ್ಲಿ ಸಿಜೆಪಿ ಖ್ಯಾತಿ ಗಳಿಸುತ್ತಿದ್ದಂತೆಯೇ ಎರಡು ದಿನಗಳಿಂದ ನಮಗೆ ನಿದ್ದೆಯೇ ಇಲ್ಲವಾಗಿದೆ’ ಎಂದು ಅಭಿಜಿತ್ ಅವರ ತಂದೆ ಭಗವಾನ್ ದೀಪ್ಕೆ, ತಾಯಿ ಅನಿತಾ ದೀಪ್ಕೆ ಮರಾಠಿ ಚಾನೆಲ್ವೊಂದಕ್ಕೆ ತಿಳಿಸಿದ್ದಾರೆ.</p>.<p>‘ಈಚೆಗಿನ ದಿನಗಳಲ್ಲಿನ ರಾಜಕೀಯ ನೋಡಿದರೆ, ಆತ ಎಷ್ಟೇ ಬೆಂಬಲಿಗರನ್ನು ಹೊಂದಿದ್ದರೂ ಸಹ ಭಯ ಸಹಜ. ಭಾರತಕ್ಕೆ ಮರಳಿದಾಗ ಬಂಧನಕ್ಕೆ ಒಳಗಾಗುವ ಭೀತಿಯನ್ನು ಆತನೇ ವ್ಯಕ್ತಪಡಿಸಿದ್ದಾನೆ. ಅಂತಹ ಘಟನೆಗಳನ್ನು ನಾವು ಪತ್ರಿಕೆಗಳಲ್ಲಿ ಓದುತ್ತೇವೆ’ ಎಂದು ಭಗವಾನ್ ದೀಪ್ಕೆ ಹೇಳಿದ್ದಾರೆ.</p>.<p>‘ಸಿಜೆಪಿಯ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ. ಇದೇ ನನಗೆ ಚಿಂತೆ ಆಗಿದೆ. ಅಭಿಜಿತ್ ಈಗ ಪ್ರಸಿದ್ಧ ಆಗಿರಬಹುದು. ಆದರೆ, ಅಂತಹವರನ್ನು ಬಂಧಿಸಲಾಗಿದೆ. ಏನಾಗಬಹುದು ಎಂಬ ಆತಂಕ ಕಾಡುತ್ತಿದೆ. ನಾನು ರಾಜಕೀಯವನ್ನು ದ್ವೇಷಿಸುತ್ತೇನೆ. ಆಸಕ್ತಿಯನ್ನೇ ಹೊಂದಿಲ್ಲ’ ಎಂದಿದ್ದಾರೆ.</p>.<p>‘ತಮ್ಮ ಮಗ ಅಭಿಜಿತ್ ರಾಜಕೀಯದಿಂದ ದೂರ ಉಳಿದು, ಉದ್ಯೋಗ ಪಡೆಯುವತ್ತ ಗಮನ ಹರಿಸಬೇಕು. ರಾಜಕೀಯ ಅವನ ನಿರ್ಧಾರ. ಆದರೆ ಅದರಲ್ಲಿ ಅವನು ಮುಂದುವರಿಯುವುದನ್ನು ನಾನು ಬಯಸಲ್ಲ. ನನ್ನ ಮಾತು ಕೇಳುತ್ತಾನೋ, ಇಲ್ಲವೋ ಗೊತ್ತಿಲ್ಲ. ಆದರೆ, ಈ ವಿಷಯದಲ್ಲಿ ನಾನು ಅವನಿಗೆ ಬೆಂಬಲ ನೀಡುವುದಿಲ್ಲ’ ಎಂದು ಅನಿತಾ ದೀಪ್ಕೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಛತ್ರಪತಿ ಸಂಭಾಜಿನಗರ: ‘</strong>ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಾಮಾಜಿಕ ಮಾಧ್ಯಮ ಖಾತೆಯ ಖ್ಯಾತಿಯು ಅದರ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.</p>.<p>‘ಸಾಮಾಜಿಕ ಮಾಧ್ಯಮದಲ್ಲಿ ಸಿಜೆಪಿ ಖ್ಯಾತಿ ಗಳಿಸುತ್ತಿದ್ದಂತೆಯೇ ಎರಡು ದಿನಗಳಿಂದ ನಮಗೆ ನಿದ್ದೆಯೇ ಇಲ್ಲವಾಗಿದೆ’ ಎಂದು ಅಭಿಜಿತ್ ಅವರ ತಂದೆ ಭಗವಾನ್ ದೀಪ್ಕೆ, ತಾಯಿ ಅನಿತಾ ದೀಪ್ಕೆ ಮರಾಠಿ ಚಾನೆಲ್ವೊಂದಕ್ಕೆ ತಿಳಿಸಿದ್ದಾರೆ.</p>.<p>‘ಈಚೆಗಿನ ದಿನಗಳಲ್ಲಿನ ರಾಜಕೀಯ ನೋಡಿದರೆ, ಆತ ಎಷ್ಟೇ ಬೆಂಬಲಿಗರನ್ನು ಹೊಂದಿದ್ದರೂ ಸಹ ಭಯ ಸಹಜ. ಭಾರತಕ್ಕೆ ಮರಳಿದಾಗ ಬಂಧನಕ್ಕೆ ಒಳಗಾಗುವ ಭೀತಿಯನ್ನು ಆತನೇ ವ್ಯಕ್ತಪಡಿಸಿದ್ದಾನೆ. ಅಂತಹ ಘಟನೆಗಳನ್ನು ನಾವು ಪತ್ರಿಕೆಗಳಲ್ಲಿ ಓದುತ್ತೇವೆ’ ಎಂದು ಭಗವಾನ್ ದೀಪ್ಕೆ ಹೇಳಿದ್ದಾರೆ.</p>.<p>‘ಸಿಜೆಪಿಯ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ. ಇದೇ ನನಗೆ ಚಿಂತೆ ಆಗಿದೆ. ಅಭಿಜಿತ್ ಈಗ ಪ್ರಸಿದ್ಧ ಆಗಿರಬಹುದು. ಆದರೆ, ಅಂತಹವರನ್ನು ಬಂಧಿಸಲಾಗಿದೆ. ಏನಾಗಬಹುದು ಎಂಬ ಆತಂಕ ಕಾಡುತ್ತಿದೆ. ನಾನು ರಾಜಕೀಯವನ್ನು ದ್ವೇಷಿಸುತ್ತೇನೆ. ಆಸಕ್ತಿಯನ್ನೇ ಹೊಂದಿಲ್ಲ’ ಎಂದಿದ್ದಾರೆ.</p>.<p>‘ತಮ್ಮ ಮಗ ಅಭಿಜಿತ್ ರಾಜಕೀಯದಿಂದ ದೂರ ಉಳಿದು, ಉದ್ಯೋಗ ಪಡೆಯುವತ್ತ ಗಮನ ಹರಿಸಬೇಕು. ರಾಜಕೀಯ ಅವನ ನಿರ್ಧಾರ. ಆದರೆ ಅದರಲ್ಲಿ ಅವನು ಮುಂದುವರಿಯುವುದನ್ನು ನಾನು ಬಯಸಲ್ಲ. ನನ್ನ ಮಾತು ಕೇಳುತ್ತಾನೋ, ಇಲ್ಲವೋ ಗೊತ್ತಿಲ್ಲ. ಆದರೆ, ಈ ವಿಷಯದಲ್ಲಿ ನಾನು ಅವನಿಗೆ ಬೆಂಬಲ ನೀಡುವುದಿಲ್ಲ’ ಎಂದು ಅನಿತಾ ದೀಪ್ಕೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>