<p>ಪ್ರಸ್ತುತ ದಿನಗಳಲ್ಲಿ ಬಹುತೇಕರು ಆಂಡ್ರಾಯ್ಡ್ ಮೊಬೈಲ್ಗಳನ್ನು ಬಳಸುತ್ತಾರೆ. ವಿಶೇಷವಾಗಿ ಹಣಕಾಸಿನ ವರ್ಗಾವಣೆಗಾಗಿ ಫೋನ್ ಪೇ, ಗೂಗಲ್ ಪೇ ಸೇರಿದಂತೆ ಇತರೆ ಡಿಜಿಟಲ್ ಬ್ಯಾಂಕಿಂಗ್ ಪಾವತಿ ವ್ಯವಸ್ಥೆ (ಯುಪಿಐ) ಬಳಸುತ್ತೇವೆ. ಇವು ಹಣಕಾಸಿನ ವಹಿವಾಟಿನ ಸ್ವರೂಪವನ್ನು ಗಮನಾರ್ಹವಾಗಿ ಬದಲಾಯಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬ್ಯಾಂಕ್ಗಳು ಪಾವತಿ ಸೌಲಭ್ಯಗಳು ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸುತ್ತಲೇ ಇದ್ದರೂ, ಹೆಚ್ಚುತ್ತಿರುವ ಸೈಬರ್ ವಂಚನೆಯಿಂದ ಗ್ರಾಹಕರಿಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.</p><p>ಆನ್ಲೈನ್ ಮೂಲಕ ನಡೆಯುವ ಸೈಬರ್ ವಂಚನೆಯನ್ನು ತಡೆಗಟ್ಟಲು ಯುಪಿಐ ಬಳಕೆದಾರರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಇಲ್ಲಿವೆ.</p><p><strong>ಬ್ಯಾಂಕ್ಗಳು ಅಥವಾ ಆರ್ಬಿಐ ಎಂದಿಗೂ ಗೌಪ್ಯ ಮಾಹಿತಿ ಕೇಳುವುದಿಲ್ಲ</strong></p><p>ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಇತರೆ ಬ್ಯಾಂಕ್ ಆಗಲಿ ಎಂದಿಗೂ ಪಾಸ್ವರ್ಡ್, ಒಟಿಪಿ, ಮೊಬೈಲ್ ಪಿನ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ನ ಸಿವಿವಿ ಸಂಖ್ಯೆಗಳು ಸೇರಿದಂತೆ ಗ್ರಾಹಕರ ಗೌಪ್ಯ ಮಾಹಿತಿಯನ್ನು ಪಡೆಯುವುದಿಲ್ಲ ಎಂಬುದನ್ನು ಗ್ರಾಹಕರು ಮನದಟ್ಟು ಮಾಡಿಕೊಳ್ಳಬೇಕು. ಇಂತಹ ಯಾವುದೇ ಕರೆಗಳು ಸಂದೇಶಗಳು ಬಂದರೆ ಅವುಗಳನ್ನು ಕಡೆಗಣಿಸುವುದು ಉತ್ತಮ.</p><p><strong>ಯುಪಿಐ ವಂಚನೆಗಳನ್ನು ಅರ್ಥಮಾಡಿಕೊಳ್ಳುವುದು</strong></p><p>ನಿಮ್ಮ ಮೊಬೈಲ್ಗೆ ಬರುವ ಬಹುಮಾನ ಗೆಲ್ಲಿ, ಸಾಲ ಸೌಲಭ್ಯ ನೀಡುತ್ತೇವೆ ಎಂಬ ಯಾವುದೇ ಬ್ಯಾಂಕ್ ಆಥವಾ ವರ್ತಕರ ಹೆಸರಿನಲ್ಲಿ ಬರುವ ಮನವಿಗಳಿಗೆ ಮೊಬೈಲ್ಗೆ ಬರುವ ಒಟಿಪಿಯನ್ನು ಹೇಳಬೇಡಿ. ಸಾಧ್ಯವಾಷ್ಟು ಕಠಿಣವಾದ ಯುಪಿಐ ಪಾರ್ಸ್ವರ್ಡ್ ಇಡುವುದು ಉತ್ತಮವಾಗಿದೆ.</p><p><strong>ನಕಲಿ ಕೆವೈಸಿ ನವೀಕರಣ </strong></p><p>ಕೆವೈಸಿ ಮಾಡಿಸುವಂತೆ ಮೊಬೈಲ್ಗೆ ನಕಲಿ ಸಂದೇಶಗಳನ್ನು ವಂಚನೆ ಉದ್ದೇಶದಿಂದ ಕಳುಹಿಸಲಾಗುತ್ತದೆ. ಆರ್ಬಿಐಯ ನಿಯಮದ ಪ್ರಕಾರ, ಕೆವೈಸಿ ನವೀಕರಣಗಳನ್ನು ಅಧಿಕೃತ ಬ್ಯಾಂಕ್ ಶಾಖೆಗಳು, ಸುರಕ್ಷಿತ ಅಂತರ್ಜಾಲ ತಾಣಗಳು ಅಥವಾ ದೃಢೀಕೃತ ಮೊಬೈಲ್ ಅಪ್ಲಿಕೇಷನ್ (ಆ್ಯಪ್)ಗಳ ಮೂಲಕವೇ ನಡೆಸಲಾಗುತ್ತದೆ. ಹೀಗಾಗಿ ಯಾವುದೇ ಅನುಮಾನಾಸ್ಪದ ಲಿಂಕ್ಗಳು, ಎಸ್ಎಂಎಸ್, ವಾಟ್ಸಾಪ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಸೂಚಿಸಲಾದ ಅಪ್ಲಿಕೇಷನ್ಗಳನ್ನು ಡೌನ್ಲೋಡ್ ಮಾಡಬಾರದು. ಬ್ಯಾಂಕಿಂಗ್ ಮತ್ತು ಯುಪಿಐ ಅಪ್ಲಿಕೇಷನ್ಗಳನ್ನು ಪ್ಲೇ–ಸ್ಟೋರ್ಗಳಿಂದ ಮಾತ್ರ ಡೌನ್ಲೋಡ್ ಮಾಡಿಕೊಳ್ಳಬೇಕು.</p><p><strong>ಮಾಹಿತಿ ಗೌಪ್ಯವಾಗಿರಲಿ</strong></p><p>ಸಾರ್ವಜನಿಕ ವೈ-ಫೈಗಳು ಅಥವಾ ಒಬ್ಬರಿಗಿಂತ ಹೆಚ್ಚು ಜನರು ಬಳಸುವ ಕಂಪ್ಯೂಟರ್ಗಳಲ್ಲಿ ನಿಮ್ಮ ಬ್ಯಾಂಕ್ ಮಾಹಿತಿಯನ್ನು ಇಡಬೇಡಿ.</p><p><strong>ಮೋಸದ ಉಡುಗೊರೆಗಳು</strong></p><p>ಕೆಲವು ಸಂದರ್ಭದಲ್ಲಿ ನಿಮ್ಮ ನಂಬರ್ಗೆ ಉಡುಗೊರೆ ಬಂದಿದೆ ಎಂಬ ಸುಳ್ಳು ಕರೆಗಳು ಬರುವ ಸಾಧ್ಯತೆ ಇರುತ್ತದೆ. ಯಾವುದೇ ಬ್ಯಾಂಕ್ಗಳು ನಿಮಗೆ ಉಡುಗೊರೆಗಳನ್ನು ನೀಡುವುದಿಲ್ಲ. ಹೀಗಾಗಿ ವಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಿರಿ. </p><p>ವಂಚನೆ ಮಾಡುತ್ತಿರುವು ಗಮನಕ್ಕೆ ಬಂದರೆ, ತಕ್ಷಣ ಬ್ಯಾಂಕ್ಗೆ ಮಾಹಿತಿ ನೀಡಬೇಕು. ಜೊತೆಗೆ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲು ಮನವಿ ಮಾಡಿಕೊಳ್ಳಬಹುದು. cybercrime.gov.in ಜಾಲತಾಣದಲ್ಲಿ ವಂಚನೆಯನ್ನು ವರದಿ ಮಾಡಬೇಕು ಅಥವಾ ಸೈಬರ್ ಅಪರಾಧ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಬೇಕು.</p>.<p><em><strong>(ಲೇಖಕರು: ರಾಜೇಂದರ್ ಕುಮಾರ್ ಬಬ್ಬರ್,ಬಂಧನ್ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ವಹಿವಾಟು ಅಧಿಕಾರಿ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಸ್ತುತ ದಿನಗಳಲ್ಲಿ ಬಹುತೇಕರು ಆಂಡ್ರಾಯ್ಡ್ ಮೊಬೈಲ್ಗಳನ್ನು ಬಳಸುತ್ತಾರೆ. ವಿಶೇಷವಾಗಿ ಹಣಕಾಸಿನ ವರ್ಗಾವಣೆಗಾಗಿ ಫೋನ್ ಪೇ, ಗೂಗಲ್ ಪೇ ಸೇರಿದಂತೆ ಇತರೆ ಡಿಜಿಟಲ್ ಬ್ಯಾಂಕಿಂಗ್ ಪಾವತಿ ವ್ಯವಸ್ಥೆ (ಯುಪಿಐ) ಬಳಸುತ್ತೇವೆ. ಇವು ಹಣಕಾಸಿನ ವಹಿವಾಟಿನ ಸ್ವರೂಪವನ್ನು ಗಮನಾರ್ಹವಾಗಿ ಬದಲಾಯಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬ್ಯಾಂಕ್ಗಳು ಪಾವತಿ ಸೌಲಭ್ಯಗಳು ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸುತ್ತಲೇ ಇದ್ದರೂ, ಹೆಚ್ಚುತ್ತಿರುವ ಸೈಬರ್ ವಂಚನೆಯಿಂದ ಗ್ರಾಹಕರಿಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.</p><p>ಆನ್ಲೈನ್ ಮೂಲಕ ನಡೆಯುವ ಸೈಬರ್ ವಂಚನೆಯನ್ನು ತಡೆಗಟ್ಟಲು ಯುಪಿಐ ಬಳಕೆದಾರರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಇಲ್ಲಿವೆ.</p><p><strong>ಬ್ಯಾಂಕ್ಗಳು ಅಥವಾ ಆರ್ಬಿಐ ಎಂದಿಗೂ ಗೌಪ್ಯ ಮಾಹಿತಿ ಕೇಳುವುದಿಲ್ಲ</strong></p><p>ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಇತರೆ ಬ್ಯಾಂಕ್ ಆಗಲಿ ಎಂದಿಗೂ ಪಾಸ್ವರ್ಡ್, ಒಟಿಪಿ, ಮೊಬೈಲ್ ಪಿನ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ನ ಸಿವಿವಿ ಸಂಖ್ಯೆಗಳು ಸೇರಿದಂತೆ ಗ್ರಾಹಕರ ಗೌಪ್ಯ ಮಾಹಿತಿಯನ್ನು ಪಡೆಯುವುದಿಲ್ಲ ಎಂಬುದನ್ನು ಗ್ರಾಹಕರು ಮನದಟ್ಟು ಮಾಡಿಕೊಳ್ಳಬೇಕು. ಇಂತಹ ಯಾವುದೇ ಕರೆಗಳು ಸಂದೇಶಗಳು ಬಂದರೆ ಅವುಗಳನ್ನು ಕಡೆಗಣಿಸುವುದು ಉತ್ತಮ.</p><p><strong>ಯುಪಿಐ ವಂಚನೆಗಳನ್ನು ಅರ್ಥಮಾಡಿಕೊಳ್ಳುವುದು</strong></p><p>ನಿಮ್ಮ ಮೊಬೈಲ್ಗೆ ಬರುವ ಬಹುಮಾನ ಗೆಲ್ಲಿ, ಸಾಲ ಸೌಲಭ್ಯ ನೀಡುತ್ತೇವೆ ಎಂಬ ಯಾವುದೇ ಬ್ಯಾಂಕ್ ಆಥವಾ ವರ್ತಕರ ಹೆಸರಿನಲ್ಲಿ ಬರುವ ಮನವಿಗಳಿಗೆ ಮೊಬೈಲ್ಗೆ ಬರುವ ಒಟಿಪಿಯನ್ನು ಹೇಳಬೇಡಿ. ಸಾಧ್ಯವಾಷ್ಟು ಕಠಿಣವಾದ ಯುಪಿಐ ಪಾರ್ಸ್ವರ್ಡ್ ಇಡುವುದು ಉತ್ತಮವಾಗಿದೆ.</p><p><strong>ನಕಲಿ ಕೆವೈಸಿ ನವೀಕರಣ </strong></p><p>ಕೆವೈಸಿ ಮಾಡಿಸುವಂತೆ ಮೊಬೈಲ್ಗೆ ನಕಲಿ ಸಂದೇಶಗಳನ್ನು ವಂಚನೆ ಉದ್ದೇಶದಿಂದ ಕಳುಹಿಸಲಾಗುತ್ತದೆ. ಆರ್ಬಿಐಯ ನಿಯಮದ ಪ್ರಕಾರ, ಕೆವೈಸಿ ನವೀಕರಣಗಳನ್ನು ಅಧಿಕೃತ ಬ್ಯಾಂಕ್ ಶಾಖೆಗಳು, ಸುರಕ್ಷಿತ ಅಂತರ್ಜಾಲ ತಾಣಗಳು ಅಥವಾ ದೃಢೀಕೃತ ಮೊಬೈಲ್ ಅಪ್ಲಿಕೇಷನ್ (ಆ್ಯಪ್)ಗಳ ಮೂಲಕವೇ ನಡೆಸಲಾಗುತ್ತದೆ. ಹೀಗಾಗಿ ಯಾವುದೇ ಅನುಮಾನಾಸ್ಪದ ಲಿಂಕ್ಗಳು, ಎಸ್ಎಂಎಸ್, ವಾಟ್ಸಾಪ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಸೂಚಿಸಲಾದ ಅಪ್ಲಿಕೇಷನ್ಗಳನ್ನು ಡೌನ್ಲೋಡ್ ಮಾಡಬಾರದು. ಬ್ಯಾಂಕಿಂಗ್ ಮತ್ತು ಯುಪಿಐ ಅಪ್ಲಿಕೇಷನ್ಗಳನ್ನು ಪ್ಲೇ–ಸ್ಟೋರ್ಗಳಿಂದ ಮಾತ್ರ ಡೌನ್ಲೋಡ್ ಮಾಡಿಕೊಳ್ಳಬೇಕು.</p><p><strong>ಮಾಹಿತಿ ಗೌಪ್ಯವಾಗಿರಲಿ</strong></p><p>ಸಾರ್ವಜನಿಕ ವೈ-ಫೈಗಳು ಅಥವಾ ಒಬ್ಬರಿಗಿಂತ ಹೆಚ್ಚು ಜನರು ಬಳಸುವ ಕಂಪ್ಯೂಟರ್ಗಳಲ್ಲಿ ನಿಮ್ಮ ಬ್ಯಾಂಕ್ ಮಾಹಿತಿಯನ್ನು ಇಡಬೇಡಿ.</p><p><strong>ಮೋಸದ ಉಡುಗೊರೆಗಳು</strong></p><p>ಕೆಲವು ಸಂದರ್ಭದಲ್ಲಿ ನಿಮ್ಮ ನಂಬರ್ಗೆ ಉಡುಗೊರೆ ಬಂದಿದೆ ಎಂಬ ಸುಳ್ಳು ಕರೆಗಳು ಬರುವ ಸಾಧ್ಯತೆ ಇರುತ್ತದೆ. ಯಾವುದೇ ಬ್ಯಾಂಕ್ಗಳು ನಿಮಗೆ ಉಡುಗೊರೆಗಳನ್ನು ನೀಡುವುದಿಲ್ಲ. ಹೀಗಾಗಿ ವಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಿರಿ. </p><p>ವಂಚನೆ ಮಾಡುತ್ತಿರುವು ಗಮನಕ್ಕೆ ಬಂದರೆ, ತಕ್ಷಣ ಬ್ಯಾಂಕ್ಗೆ ಮಾಹಿತಿ ನೀಡಬೇಕು. ಜೊತೆಗೆ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲು ಮನವಿ ಮಾಡಿಕೊಳ್ಳಬಹುದು. cybercrime.gov.in ಜಾಲತಾಣದಲ್ಲಿ ವಂಚನೆಯನ್ನು ವರದಿ ಮಾಡಬೇಕು ಅಥವಾ ಸೈಬರ್ ಅಪರಾಧ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಬೇಕು.</p>.<p><em><strong>(ಲೇಖಕರು: ರಾಜೇಂದರ್ ಕುಮಾರ್ ಬಬ್ಬರ್,ಬಂಧನ್ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ವಹಿವಾಟು ಅಧಿಕಾರಿ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>