<p><strong>ಚೆನ್ನೈ</strong>: ನಗರದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಫ್ಲೈಒವರ್ಗಳ ಮೇಲೆ ನೂರಾರು ಕಾರುಗಳ ನಿಲುಗಡೆ, ಮೊಣಕಾಲು ವರೆಗೆ ನಿಂತಿದ್ದ ನೀರಿನಲ್ಲಿ ಸಾಗಿ ಸುರಕ್ಷಿತ ತಾಣ ಅರಸುತ್ತಿದ್ದ ಜನರು, ಆಸ್ಪತ್ರೆಗಳಿಗೂ ನೀರು ನುಗ್ಗಿ ಪರದಾಡಿದ ವೈದ್ಯರು ಹಾಗೂ ರೋಗಿಗಳು....</p>.<p>ತಮಿಳುನಾಡು ಕರಾವಳಿಗೆ ಫೆಂಗಲ್ ಚಂಡಮಾರುತ ಶನಿವಾರ ಅಪ್ಪಳಿಸಿದ್ದರಿಂದ ನಗರವೂ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದರಿಂದ ಕಂಡುಬಂದ ದೃಶ್ಯಗಳಿವು</p>.<p>ನಗರದ ಹಲವೆಡೆ ನೆಲಮಹಡಿಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆ ನುಗ್ಗಿದ್ದರಿಂದ ಸಂತ್ರಸ್ತರಾದ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.</p>.<p>ಶುಕ್ರವಾರ ಸಂಜೆಯಿಂದಲೇ ಬೀಳಲು ಆರಂಭಿಸಿದ್ದ ಮಳೆ, ಶನಿವಾರ ಚಂಡಮಾರುತ ಅಪ್ಪಳಿಸಿದ ನಂತರ ಬಿರುಸು ಪಡೆಯಿತು.</p>.<p>ಜನವಸತಿ ಅಧಿಕವಿರುವ ಪ್ರದೇಶಗಳಾದ ಮಾಂಬಳಮ್, ಕೋಡಂಬಾಕಂ, ಮಾದಿಪಕ್ಕಂ, ಕೀಳಕಟ್ಟಳೈ, ಅಶೋಕನಗರ, ನುಂಗಂಬಾಕಂ, ಆಳ್ವಾರ್ಪೇಟ್, ಪೆರಂಬೂರು ಹಾಗೂ ಪುರಸಾಯಿವಲ್ಕಮ್ಗಳಲ್ಲಿ ರಸ್ತೆ, ಮನೆಗಳಲ್ಲಿ ನೀರು ನಿಂತು ಹೆಚ್ಚು ತೊಂದರೆಯಾಗಿದೆ. ಜನರು ಮನೆಯಿಂದ ಹೊರಬರಲಾರದೇ ಸಂಕಷ್ಟ ಎದುರಿಸಿದರು ಎಂದು ಮೂಲಗಳು ಹೇಳಿವೆ.</p>.<p>ಉತ್ತರ ಚೆನ್ನೈನ ವೇಲಾಚೆರಿ, ಪಳ್ಳಿಕರಣೈ, ಮೇದವಕ್ಕಂ ಹಾಗೂ ಮಿಂಟ್ ಜಂಕ್ಷನ್ನ ಫ್ಲೈಒವರ್ಗಳನ್ನು ಜನರು, ಕಾರು ಪಾರ್ಕಿಂಗ್ ಪ್ರದೇಶಗಳಾಗಿ ಪರಿವರ್ತಿಸಿದ್ದಾರೆ. ನಗರದ ಹೊರವಲಯದ ಅನೇಕ ಪ್ರದೇಶಗಳಲ್ಲಿಯೂ ಮಳೆಯಿಂದ ಅನಾಹುತಗಳು ಸಂಭವಿಸಿವೆ.</p>.<p>‘ಭಾರಿ ಮಳೆಯಿಂದಾಗಿ ಹಾನಿಯಾಗುವುದನ್ನು ತಪ್ಪಿಸಲು ಕಾರುಗಳನ್ನು ಫ್ಳೈಒವರ್ಗಳಲ್ಲಿ ನಿಲುಗಡೆ ಮಾಡಲಾಗಿದೆ’ ಎಂದು ಹೇಳುವ ಜನರು, ‘ಚಂಡಮಾರುತ ಪರಿಣಾಮ ಎದುರಿಸಲು ಸರ್ಕಾರ ಯಾಕೆ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ಪ್ರಶ್ನಿಸುತ್ತಿದ್ದಾರೆ.</p>.<p>‘ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಗುಂಡಿಗಳು ಕಾಣುತ್ತಿಲ್ಲ. ಗುಂಡಿಗಳಿಂದಾಗಿ ಸಮಸ್ಯೆಯಾಗಬಹುದು ಎಂಬ ಆತಂಕ ಜನರಲ್ಲಿದೆ. ಹಲವು ವರ್ಷಗಳಿಂದ ಇಲ್ಲಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯೇ ಆಗಿಲ್ಲ’ ಎಂದು ಮಾದಿಪಕ್ಕಂ ನಿವಾಸಿ ಲಕ್ಷ್ಮಿ ಎಂಬುವವರು ಹೇಳಿದ್ಧಾರೆ.</p>.<p><strong>ಪ್ರಮುಖ ಅಂಶಗಳು</strong> </p><p>* ಗಂಟೆಗೆ 70–100 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಅಣ್ಣಾಸಾಲೈ ಸೇರಿದಂತೆ ಹಲವು ರಸ್ತೆಗಳಲ್ಲಿನ ಬ್ಯಾರಿಕೇಡ್ಗಳು ಹಾರಿಹೋಗಿದ್ದವು. ಶ್ರೀಪೆರಂಬದೂರಿನಲ್ಲಿ ಟ್ರಾಫಿಕ್ ಸಿಗ್ನಲ್ ದೀಪ ಬಿದ್ದಿತ್ತು</p><p> * ಸರ್ಕಾರದ ಎಚ್ಚರಿಕೆ ಹೊರತಾಗಿಯೂ ಸಮುದ್ರ ತೀರ ಮಾಮಲ್ಲಪುರಂನ ವಿಶ್ವ ಪಾರಂಪರಿತ ತಾಣಕ್ಕೆ ಜನರ ಭೇಟಿ </p><p>* ಚೆನ್ನೈನ ಕ್ರೋಮ್ಪೇಟೆಯಲ್ಲಿರುವ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ನೀರು ನಿಂತು ಸಮಸ್ಯೆ. ಮೊಣಕಾಲು ವರೆಗೆ ನೀರು ನಿಂತಿದ್ದರಿಂದ ವೈದ್ಯರು ಹಾಗೂ ರೋಗಿಗಳು ಪರದಾಡಿದರು</p><p> * ಮೆಟ್ರೊ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ನೀರು ನಿಂತು ತೊಂದರೆಯಾಗಿದೆ. ಪಂಪ್ಸೆಟ್ ಬಳಸಿ ನೀರು ಹೊರಹಾಕಲಾಗುತ್ತಿದೆ </p>.<p><strong>ಆಂಧ್ರ: ಕರಾವಳಿ ರಾಯಲಸೀಮಾದಲ್ಲಿ ಮಳೆ </strong></p><p><strong>ಹೈದರಾಬಾದ್:</strong> ‘ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ದಕ್ಷಿಣ ಕರಾವಳಿ ಹಾಗೂ ರಾಯಲಸೀಮಾ ಪ್ರದೇಶದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ’ ಎಂದು ಆಂಧ್ರಪ್ರದೇಶ ವಿಪತ್ತು ನಿರ್ವಹಣಾ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರೋಣಂಕಿ ಕೂರ್ಮನಾಥ ಹೇಳಿದ್ದಾರೆ.</p><p> ‘ನೆಲ್ಲೂರು ಮತ್ತು ಪ್ರಕಾಶಂ ಜಿಲ್ಲೆಗಳು ಸೇರಿದಂತೆ ಕರಾವಳಿಯಲ್ಲಿ ಗಂಟೆಗೆ 70–90 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದೂ ತಿಳಿಸಿದ್ಧಾರೆ.</p><p> ನೆಲ್ಲೂರಿನ ತಗ್ಗುಪ್ರದೇಶಗಳಲ್ಲಿ ನೀರು ನಿಂತು ಜನರು ಪರದಾಡಿದ್ದಾರೆ. ಆಂಧ್ರಪ್ರದೇಶದ ತಿರುಮಲದಲ್ಲಿ ದಟ್ಟ ಮಂಜು ಕವಿದಿದ್ದರಿಂದ ಉಷ್ಣಾಂಶ ಗಣನೀಯವಾಗಿ ಕಡಿಮೆಯಾಗಿತ್ತು. ವೆಂಕಟೇಶ್ವರ ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ತೊಂದರೆ ಅನುಭವಿಸಿದರು. </p><p>ತಾವು ತಂಗಬೇಕಿದ್ದ ಸ್ಥಳಗಳನ್ನು ತಲುಪಲು ದರ್ಶನ ನಂತರ ಲಡ್ಡು ಪ್ರಸಾದ ಪಡೆಯಲು ಭಕ್ತರಿಗೆ ಕಷ್ಟವಾಯಿತು. ವಿಪತ್ತು ನಿರ್ವಹಣಾ ಇಲಾಖೆ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸಭೆ ನಡೆಸಿ ಚಂಡಮಾರುತದಿಂದ ಉದ್ಭವಿಸಿದ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. </p>.<p> <strong>‘ಜಲಕಾಯಗಳ ಸಂಖ್ಯೆ ಕುಸಿತದಿಂದ ಸಮಸ್ಯೆ’</strong></p><p><strong>‘</strong>ಚೆನ್ನೈನಲ್ಲಿ ಜಲಕಾಯಗಳ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿರುವುದು ಪ್ರವಾಹ ಸ್ಥಿತಿ ಉಂಟಾಗಲು ಪ್ರಮುಖ ಕಾರಣ’ ಎಂದು ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ‘ಪೂವುಳಗಿನ್ ನನ್ಬರ್ಗಲ್’ ನ ಜಿ.ಸುಂದರರಾಜನ್ ಹೇಳುತ್ತಾರೆ.</p><p> ‘2015ರಲ್ಲಿ 119 ಜಲಕಾಯಗಳಿದ್ದವು. 2020ರ ವೇಳೆಗೆ ಇವುಗಳ ಸಂಖ್ಯೆ 64ಕ್ಕೆ ಕುಸಿಯಿತು. ಈ ವರ್ಷ ಇವುಗಳ ಸಂಖ್ಯೆ 62 ಇದ್ದಿರಬಹುದು’ ಎಂದು ಹೇಳುತ್ತಾರೆ. ‘ಈ ಮೊದಲು ಈ ಜಲಕಾಯಗಳ ವಿಸ್ತೀರ್ಣ 101 ಚದರ ಕಿ.ಮೀ.ನಷ್ಟು ಇತ್ತು. ಈಗ 64 ಚದರ ಕಿ.ಮೀ.ಗೆ ಕುಸಿದಿದೆ’ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ನಗರದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಫ್ಲೈಒವರ್ಗಳ ಮೇಲೆ ನೂರಾರು ಕಾರುಗಳ ನಿಲುಗಡೆ, ಮೊಣಕಾಲು ವರೆಗೆ ನಿಂತಿದ್ದ ನೀರಿನಲ್ಲಿ ಸಾಗಿ ಸುರಕ್ಷಿತ ತಾಣ ಅರಸುತ್ತಿದ್ದ ಜನರು, ಆಸ್ಪತ್ರೆಗಳಿಗೂ ನೀರು ನುಗ್ಗಿ ಪರದಾಡಿದ ವೈದ್ಯರು ಹಾಗೂ ರೋಗಿಗಳು....</p>.<p>ತಮಿಳುನಾಡು ಕರಾವಳಿಗೆ ಫೆಂಗಲ್ ಚಂಡಮಾರುತ ಶನಿವಾರ ಅಪ್ಪಳಿಸಿದ್ದರಿಂದ ನಗರವೂ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದರಿಂದ ಕಂಡುಬಂದ ದೃಶ್ಯಗಳಿವು</p>.<p>ನಗರದ ಹಲವೆಡೆ ನೆಲಮಹಡಿಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆ ನುಗ್ಗಿದ್ದರಿಂದ ಸಂತ್ರಸ್ತರಾದ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.</p>.<p>ಶುಕ್ರವಾರ ಸಂಜೆಯಿಂದಲೇ ಬೀಳಲು ಆರಂಭಿಸಿದ್ದ ಮಳೆ, ಶನಿವಾರ ಚಂಡಮಾರುತ ಅಪ್ಪಳಿಸಿದ ನಂತರ ಬಿರುಸು ಪಡೆಯಿತು.</p>.<p>ಜನವಸತಿ ಅಧಿಕವಿರುವ ಪ್ರದೇಶಗಳಾದ ಮಾಂಬಳಮ್, ಕೋಡಂಬಾಕಂ, ಮಾದಿಪಕ್ಕಂ, ಕೀಳಕಟ್ಟಳೈ, ಅಶೋಕನಗರ, ನುಂಗಂಬಾಕಂ, ಆಳ್ವಾರ್ಪೇಟ್, ಪೆರಂಬೂರು ಹಾಗೂ ಪುರಸಾಯಿವಲ್ಕಮ್ಗಳಲ್ಲಿ ರಸ್ತೆ, ಮನೆಗಳಲ್ಲಿ ನೀರು ನಿಂತು ಹೆಚ್ಚು ತೊಂದರೆಯಾಗಿದೆ. ಜನರು ಮನೆಯಿಂದ ಹೊರಬರಲಾರದೇ ಸಂಕಷ್ಟ ಎದುರಿಸಿದರು ಎಂದು ಮೂಲಗಳು ಹೇಳಿವೆ.</p>.<p>ಉತ್ತರ ಚೆನ್ನೈನ ವೇಲಾಚೆರಿ, ಪಳ್ಳಿಕರಣೈ, ಮೇದವಕ್ಕಂ ಹಾಗೂ ಮಿಂಟ್ ಜಂಕ್ಷನ್ನ ಫ್ಲೈಒವರ್ಗಳನ್ನು ಜನರು, ಕಾರು ಪಾರ್ಕಿಂಗ್ ಪ್ರದೇಶಗಳಾಗಿ ಪರಿವರ್ತಿಸಿದ್ದಾರೆ. ನಗರದ ಹೊರವಲಯದ ಅನೇಕ ಪ್ರದೇಶಗಳಲ್ಲಿಯೂ ಮಳೆಯಿಂದ ಅನಾಹುತಗಳು ಸಂಭವಿಸಿವೆ.</p>.<p>‘ಭಾರಿ ಮಳೆಯಿಂದಾಗಿ ಹಾನಿಯಾಗುವುದನ್ನು ತಪ್ಪಿಸಲು ಕಾರುಗಳನ್ನು ಫ್ಳೈಒವರ್ಗಳಲ್ಲಿ ನಿಲುಗಡೆ ಮಾಡಲಾಗಿದೆ’ ಎಂದು ಹೇಳುವ ಜನರು, ‘ಚಂಡಮಾರುತ ಪರಿಣಾಮ ಎದುರಿಸಲು ಸರ್ಕಾರ ಯಾಕೆ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ಪ್ರಶ್ನಿಸುತ್ತಿದ್ದಾರೆ.</p>.<p>‘ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಗುಂಡಿಗಳು ಕಾಣುತ್ತಿಲ್ಲ. ಗುಂಡಿಗಳಿಂದಾಗಿ ಸಮಸ್ಯೆಯಾಗಬಹುದು ಎಂಬ ಆತಂಕ ಜನರಲ್ಲಿದೆ. ಹಲವು ವರ್ಷಗಳಿಂದ ಇಲ್ಲಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯೇ ಆಗಿಲ್ಲ’ ಎಂದು ಮಾದಿಪಕ್ಕಂ ನಿವಾಸಿ ಲಕ್ಷ್ಮಿ ಎಂಬುವವರು ಹೇಳಿದ್ಧಾರೆ.</p>.<p><strong>ಪ್ರಮುಖ ಅಂಶಗಳು</strong> </p><p>* ಗಂಟೆಗೆ 70–100 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಅಣ್ಣಾಸಾಲೈ ಸೇರಿದಂತೆ ಹಲವು ರಸ್ತೆಗಳಲ್ಲಿನ ಬ್ಯಾರಿಕೇಡ್ಗಳು ಹಾರಿಹೋಗಿದ್ದವು. ಶ್ರೀಪೆರಂಬದೂರಿನಲ್ಲಿ ಟ್ರಾಫಿಕ್ ಸಿಗ್ನಲ್ ದೀಪ ಬಿದ್ದಿತ್ತು</p><p> * ಸರ್ಕಾರದ ಎಚ್ಚರಿಕೆ ಹೊರತಾಗಿಯೂ ಸಮುದ್ರ ತೀರ ಮಾಮಲ್ಲಪುರಂನ ವಿಶ್ವ ಪಾರಂಪರಿತ ತಾಣಕ್ಕೆ ಜನರ ಭೇಟಿ </p><p>* ಚೆನ್ನೈನ ಕ್ರೋಮ್ಪೇಟೆಯಲ್ಲಿರುವ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ನೀರು ನಿಂತು ಸಮಸ್ಯೆ. ಮೊಣಕಾಲು ವರೆಗೆ ನೀರು ನಿಂತಿದ್ದರಿಂದ ವೈದ್ಯರು ಹಾಗೂ ರೋಗಿಗಳು ಪರದಾಡಿದರು</p><p> * ಮೆಟ್ರೊ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ನೀರು ನಿಂತು ತೊಂದರೆಯಾಗಿದೆ. ಪಂಪ್ಸೆಟ್ ಬಳಸಿ ನೀರು ಹೊರಹಾಕಲಾಗುತ್ತಿದೆ </p>.<p><strong>ಆಂಧ್ರ: ಕರಾವಳಿ ರಾಯಲಸೀಮಾದಲ್ಲಿ ಮಳೆ </strong></p><p><strong>ಹೈದರಾಬಾದ್:</strong> ‘ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ದಕ್ಷಿಣ ಕರಾವಳಿ ಹಾಗೂ ರಾಯಲಸೀಮಾ ಪ್ರದೇಶದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ’ ಎಂದು ಆಂಧ್ರಪ್ರದೇಶ ವಿಪತ್ತು ನಿರ್ವಹಣಾ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರೋಣಂಕಿ ಕೂರ್ಮನಾಥ ಹೇಳಿದ್ದಾರೆ.</p><p> ‘ನೆಲ್ಲೂರು ಮತ್ತು ಪ್ರಕಾಶಂ ಜಿಲ್ಲೆಗಳು ಸೇರಿದಂತೆ ಕರಾವಳಿಯಲ್ಲಿ ಗಂಟೆಗೆ 70–90 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದೂ ತಿಳಿಸಿದ್ಧಾರೆ.</p><p> ನೆಲ್ಲೂರಿನ ತಗ್ಗುಪ್ರದೇಶಗಳಲ್ಲಿ ನೀರು ನಿಂತು ಜನರು ಪರದಾಡಿದ್ದಾರೆ. ಆಂಧ್ರಪ್ರದೇಶದ ತಿರುಮಲದಲ್ಲಿ ದಟ್ಟ ಮಂಜು ಕವಿದಿದ್ದರಿಂದ ಉಷ್ಣಾಂಶ ಗಣನೀಯವಾಗಿ ಕಡಿಮೆಯಾಗಿತ್ತು. ವೆಂಕಟೇಶ್ವರ ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ತೊಂದರೆ ಅನುಭವಿಸಿದರು. </p><p>ತಾವು ತಂಗಬೇಕಿದ್ದ ಸ್ಥಳಗಳನ್ನು ತಲುಪಲು ದರ್ಶನ ನಂತರ ಲಡ್ಡು ಪ್ರಸಾದ ಪಡೆಯಲು ಭಕ್ತರಿಗೆ ಕಷ್ಟವಾಯಿತು. ವಿಪತ್ತು ನಿರ್ವಹಣಾ ಇಲಾಖೆ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸಭೆ ನಡೆಸಿ ಚಂಡಮಾರುತದಿಂದ ಉದ್ಭವಿಸಿದ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. </p>.<p> <strong>‘ಜಲಕಾಯಗಳ ಸಂಖ್ಯೆ ಕುಸಿತದಿಂದ ಸಮಸ್ಯೆ’</strong></p><p><strong>‘</strong>ಚೆನ್ನೈನಲ್ಲಿ ಜಲಕಾಯಗಳ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿರುವುದು ಪ್ರವಾಹ ಸ್ಥಿತಿ ಉಂಟಾಗಲು ಪ್ರಮುಖ ಕಾರಣ’ ಎಂದು ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ‘ಪೂವುಳಗಿನ್ ನನ್ಬರ್ಗಲ್’ ನ ಜಿ.ಸುಂದರರಾಜನ್ ಹೇಳುತ್ತಾರೆ.</p><p> ‘2015ರಲ್ಲಿ 119 ಜಲಕಾಯಗಳಿದ್ದವು. 2020ರ ವೇಳೆಗೆ ಇವುಗಳ ಸಂಖ್ಯೆ 64ಕ್ಕೆ ಕುಸಿಯಿತು. ಈ ವರ್ಷ ಇವುಗಳ ಸಂಖ್ಯೆ 62 ಇದ್ದಿರಬಹುದು’ ಎಂದು ಹೇಳುತ್ತಾರೆ. ‘ಈ ಮೊದಲು ಈ ಜಲಕಾಯಗಳ ವಿಸ್ತೀರ್ಣ 101 ಚದರ ಕಿ.ಮೀ.ನಷ್ಟು ಇತ್ತು. ಈಗ 64 ಚದರ ಕಿ.ಮೀ.ಗೆ ಕುಸಿದಿದೆ’ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>