<p>ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...</p>.<p>ತಮ್ಮ ಮಿಲಿಟರಿ ಸೋಲು ಅನುಭವಿಸಿದೆ ಎಂದು ಒಪ್ಪಿಕೊಳ್ಳದಿದ್ದರೆ ಇರಾನ್ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಿ, ನರಕ ತೋರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧರಾಗಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೆರೋಲಿನ್ ಲೀವಿಟ್ ಕಠಿಣ ಎಚ್ಚರಿಕೆ ನೀಡಿದ್ದಾರೆ.</p>.ಸೋಲೊಪ್ಪಿಕೊಳ್ಳದಿದ್ದರೆ ಇರಾನ್ಗೆ ನರಕ ತೋರಿಸಲಿದ್ದಾರೆ ಟ್ರಂಪ್: ಶ್ವೇತಭವನ.<p>ಖಾಸಗಿ ಬಸ್ವೊಂದು ಜಲ್ಲಿ ತುಂಬಿದ್ದ ಟಿಪ್ಪರ್ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ, ಅದರಲ್ಲಿದ್ದ ಕನಿಷ್ಠ 8 ಮಂದಿ ಸಜೀವ ದಹನವಾಗಿ, 18 ಜನರು ಗಾಯಗೊಂಡಿರುವ ದುರ್ಘಟನೆ ಆಂಧ್ರಪ್ರದೇಶ ಮಾರ್ಕಪುರಂ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.</p>.ಆಂಧ್ರದಲ್ಲಿ ಅಪಘಾತವಾಗಿ ಹೊತ್ತಿ ಉರಿದ ಟಿಪ್ಪರ್, ಬಸ್: 14 ಮಂದಿ ಸಜೀವ ದಹನ.<p>‘ರಾಜ್ಯವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿಲ್ಲ. ಇತರ ಪ್ರಗತಿಶೀಲ ರಾಜ್ಯಗಳು ಮತ್ತು ಕೇಂದ್ರಕ್ಕಿಂತ ಉತ್ತಮ ಸ್ಥಿತಿಯಲ್ಲಿ ಇರುವುದರಿಂದಲೇ ರಾಜ್ಯದ ಬೆಳವಣಿಗೆ ದರ ಶೇ 9.4ರಷ್ಟಿದೆ. ನಾಡಿನ ಆರ್ಥಿಕತೆಯನ್ನು ದೇಶದಲ್ಲಿಯೇ ನಂಬರ್ 1 ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.</p>.ನಾಡಿನ ಆರ್ಥಿಕತೆಯನ್ನು ದೇಶದಲ್ಲಿಯೇ ನಂಬರ್ 1 ಮಾಡುವತ್ತ ದಾಪುಗಾಲು: ಸಿದ್ದರಾಮಯ್ಯ .<p>‘ಈ ಬಾರಿ ರಾಹುಕಾಲಕ್ಕೂ ಮೊದಲೇ ಬಜೆಟ್ ಮಂಡಿಸಿದ್ದೇನೆ. ನಿಮ್ಮಂತಹವರ ಮಾತು ಕೇಳಬೇಕಲ್ಲವಾ? ಮನೆಯವರು, ಅಧಿಕಾರಿಗಳ ಮಾತೂ ಕೇಳಬೇಕಲ್ಲವಾ? ಪ್ರಜಾತಂತ್ರದಲ್ಲಿ ಎಲ್ಲರ ಮಾತಿಗೂ ಮನ್ನಣೆ ನೀಡಬೇಕಲ್ಲವಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ರಾಹುಕಾಲದ ವಿಚಾರ ಪ್ರಸ್ತಾಪಿಸಿದರು.</p>.ರಾಹುಕಾಲ ನೋಡಿ ಬಜೆಟ್ ಮಂಡಿಸಿದ್ದು ನಿಜ: ಮುಖ್ಯಮಂತ್ರಿ ಸಿದ್ದರಾಮಯ್ಯ.<p>ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ 19 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದೆ. ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೀಡಾಗಿ, ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ತಾಯಿ ರತ್ನ ದೇಬನಾಥ್ ಅವರಿಗೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ.</p>.West Bengal Poll: ಆರ್.ಜಿ.ಕರ್ ಅತ್ಯಾಚಾರ ಸಂತ್ರಸ್ತೆ ತಾಯಿಗೆ ಬಿಜೆಪಿ ಟಿಕೆಟ್.<p>ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28ರಂದು ನಡೆಯಲಿರುವ ಐಪಿಎಲ್ ಟಿ–20 ಕ್ರಿಕೆಟ್ ಪಂದ್ಯದ ಟಿಕೆಟ್ ಇರುವವರು ‘ನಮ್ಮ ಮೆಟ್ರೊ’ದಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.</p>.RCB vs SRH ಪಂದ್ಯಕ್ಕೆ ಮಾ.28ರಂದು ಮೆಟ್ರೊ ಸಂಚಾರ ಅವಧಿ ವಿಸ್ತರಣೆ.<p>ಅಮೆರಿಕದ ಕದನ ವಿರಾಮ ಒಪ್ಪಂದದ ಪ್ರಸ್ತಾವ ವನ್ನು ತಿರಸ್ಕರಿಸಿರುವ ಇರಾನ್, ಇಸ್ರೇಲ್ ಮತ್ತು ಪಶ್ಚಿಮ ಏಷ್ಯಾ ದೇಶಗಳ ಮೇಲೆ ಬುಧವಾರ ಭಾರಿ ದಾಳಿ ನಡೆಸಿದೆ. ‘ಇರಾನ್ ತನ್ನ ಕ್ಷಿಪಣಿ ಯೋಜನೆಗಳ ಬಗ್ಗೆ ಚರ್ಚಿಸುವುದಿಲ್ಲ, ಹೊರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣದ ಬಗ್ಗೆ ಮಾತುಕತೆ ನಡೆಸಲು ಬಯಸುವುದಿಲ್ಲ’ ಎಂದು ಪ್ರೆಸ್ ಟಿವಿ ವರದಿ ಹೇಳಿದೆ.</p>.ಕದನ ವಿರಾಮ ಒಪ್ಪಂದ ಪ್ರಸ್ತಾವ ತಿರಸ್ಕರಿಸಿ, ಟ್ರಂಪ್ ಅವರನ್ನು ಗೇಲಿ ಮಾಡಿದ ಇರಾನ್.<p>ಇರಾನ್ನ ಪರಮಾಣು ಕಾರ್ಯಕ್ರಮವನ್ನು ನಾಶಮಾಡುವ ನಿಟ್ಟಿನಲ್ಲಿ ಯುದ್ಧ ಮುಂದುವರಿಸಿರುವುದಾಗಿ ಇಸ್ರೇಲ್ ವಾದಿಸುತ್ತಿದೆ. ಆದರೆ, ಸ್ವತಃ ಇಸ್ರೇಲ್ ತನ್ನ ಅಣ್ವಸ್ತ್ರ ಬಲವನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.</p> .ಅಣ್ವಸ್ತ್ರ ಬಲವನ್ನು ಎರಡು ಪಟ್ಟು ಹೆಚ್ಚಿಸಿಕೊಂಡ ಇಸ್ರೇಲ್.<p>‘ನಮ್ಮದು ಪಾಕಿಸ್ತಾನದಂತೆ ದಲ್ಲಾಳಿ ಕೆಲಸ ಮಾಡುವ ದೇಶವಲ್ಲ...’</p><p>– ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಶಮನ ಮಾಡುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳನ್ನು ಉದ್ದೇಶಿಸಿ ಕೇಂದ್ರ ಸರ್ಕಾರ ಬುಧವಾರ ನೀಡಿರುವ ಉತ್ತರ ಇದು.</p> .ಪಾಕಿಸ್ತಾನದಂತೆ ನಮ್ಮದು ದಲ್ಲಾಳಿ ದೇಶವಲ್ಲ: ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ.<p>ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಬಹುತೇಕ ಎಲ್ಲ ತಂಡಗಳ ನಾಯಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2023ರಿಂದ ಜಾರಿಯಾಗಿರುವ ಈ ನಿಯಮದ ಕುರಿತು ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ. ಆದರೂ 2024ರಲ್ಲಿ ಮತ್ತೆ ಅದನ್ನು ವಿಸ್ತರಿಸಲಾಯಿತು. ಈ ವರ್ಷದ ಟೂರ್ನಿಯಲ್ಲಿಯೂ ಇರಲಿದೆ. ಬುಧವಾರ ಮುಂಬೈನಲ್ಲಿ ನಡೆದ ಐಪಿಎಲ್ ನಾಯಕರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.</p>.IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ನಾಯಕರ ಅಸಮಾಧಾನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...</p>.<p>ತಮ್ಮ ಮಿಲಿಟರಿ ಸೋಲು ಅನುಭವಿಸಿದೆ ಎಂದು ಒಪ್ಪಿಕೊಳ್ಳದಿದ್ದರೆ ಇರಾನ್ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಿ, ನರಕ ತೋರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧರಾಗಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೆರೋಲಿನ್ ಲೀವಿಟ್ ಕಠಿಣ ಎಚ್ಚರಿಕೆ ನೀಡಿದ್ದಾರೆ.</p>.ಸೋಲೊಪ್ಪಿಕೊಳ್ಳದಿದ್ದರೆ ಇರಾನ್ಗೆ ನರಕ ತೋರಿಸಲಿದ್ದಾರೆ ಟ್ರಂಪ್: ಶ್ವೇತಭವನ.<p>ಖಾಸಗಿ ಬಸ್ವೊಂದು ಜಲ್ಲಿ ತುಂಬಿದ್ದ ಟಿಪ್ಪರ್ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ, ಅದರಲ್ಲಿದ್ದ ಕನಿಷ್ಠ 8 ಮಂದಿ ಸಜೀವ ದಹನವಾಗಿ, 18 ಜನರು ಗಾಯಗೊಂಡಿರುವ ದುರ್ಘಟನೆ ಆಂಧ್ರಪ್ರದೇಶ ಮಾರ್ಕಪುರಂ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.</p>.ಆಂಧ್ರದಲ್ಲಿ ಅಪಘಾತವಾಗಿ ಹೊತ್ತಿ ಉರಿದ ಟಿಪ್ಪರ್, ಬಸ್: 14 ಮಂದಿ ಸಜೀವ ದಹನ.<p>‘ರಾಜ್ಯವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿಲ್ಲ. ಇತರ ಪ್ರಗತಿಶೀಲ ರಾಜ್ಯಗಳು ಮತ್ತು ಕೇಂದ್ರಕ್ಕಿಂತ ಉತ್ತಮ ಸ್ಥಿತಿಯಲ್ಲಿ ಇರುವುದರಿಂದಲೇ ರಾಜ್ಯದ ಬೆಳವಣಿಗೆ ದರ ಶೇ 9.4ರಷ್ಟಿದೆ. ನಾಡಿನ ಆರ್ಥಿಕತೆಯನ್ನು ದೇಶದಲ್ಲಿಯೇ ನಂಬರ್ 1 ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.</p>.ನಾಡಿನ ಆರ್ಥಿಕತೆಯನ್ನು ದೇಶದಲ್ಲಿಯೇ ನಂಬರ್ 1 ಮಾಡುವತ್ತ ದಾಪುಗಾಲು: ಸಿದ್ದರಾಮಯ್ಯ .<p>‘ಈ ಬಾರಿ ರಾಹುಕಾಲಕ್ಕೂ ಮೊದಲೇ ಬಜೆಟ್ ಮಂಡಿಸಿದ್ದೇನೆ. ನಿಮ್ಮಂತಹವರ ಮಾತು ಕೇಳಬೇಕಲ್ಲವಾ? ಮನೆಯವರು, ಅಧಿಕಾರಿಗಳ ಮಾತೂ ಕೇಳಬೇಕಲ್ಲವಾ? ಪ್ರಜಾತಂತ್ರದಲ್ಲಿ ಎಲ್ಲರ ಮಾತಿಗೂ ಮನ್ನಣೆ ನೀಡಬೇಕಲ್ಲವಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ರಾಹುಕಾಲದ ವಿಚಾರ ಪ್ರಸ್ತಾಪಿಸಿದರು.</p>.ರಾಹುಕಾಲ ನೋಡಿ ಬಜೆಟ್ ಮಂಡಿಸಿದ್ದು ನಿಜ: ಮುಖ್ಯಮಂತ್ರಿ ಸಿದ್ದರಾಮಯ್ಯ.<p>ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ 19 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದೆ. ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೀಡಾಗಿ, ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ತಾಯಿ ರತ್ನ ದೇಬನಾಥ್ ಅವರಿಗೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ.</p>.West Bengal Poll: ಆರ್.ಜಿ.ಕರ್ ಅತ್ಯಾಚಾರ ಸಂತ್ರಸ್ತೆ ತಾಯಿಗೆ ಬಿಜೆಪಿ ಟಿಕೆಟ್.<p>ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28ರಂದು ನಡೆಯಲಿರುವ ಐಪಿಎಲ್ ಟಿ–20 ಕ್ರಿಕೆಟ್ ಪಂದ್ಯದ ಟಿಕೆಟ್ ಇರುವವರು ‘ನಮ್ಮ ಮೆಟ್ರೊ’ದಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.</p>.RCB vs SRH ಪಂದ್ಯಕ್ಕೆ ಮಾ.28ರಂದು ಮೆಟ್ರೊ ಸಂಚಾರ ಅವಧಿ ವಿಸ್ತರಣೆ.<p>ಅಮೆರಿಕದ ಕದನ ವಿರಾಮ ಒಪ್ಪಂದದ ಪ್ರಸ್ತಾವ ವನ್ನು ತಿರಸ್ಕರಿಸಿರುವ ಇರಾನ್, ಇಸ್ರೇಲ್ ಮತ್ತು ಪಶ್ಚಿಮ ಏಷ್ಯಾ ದೇಶಗಳ ಮೇಲೆ ಬುಧವಾರ ಭಾರಿ ದಾಳಿ ನಡೆಸಿದೆ. ‘ಇರಾನ್ ತನ್ನ ಕ್ಷಿಪಣಿ ಯೋಜನೆಗಳ ಬಗ್ಗೆ ಚರ್ಚಿಸುವುದಿಲ್ಲ, ಹೊರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣದ ಬಗ್ಗೆ ಮಾತುಕತೆ ನಡೆಸಲು ಬಯಸುವುದಿಲ್ಲ’ ಎಂದು ಪ್ರೆಸ್ ಟಿವಿ ವರದಿ ಹೇಳಿದೆ.</p>.ಕದನ ವಿರಾಮ ಒಪ್ಪಂದ ಪ್ರಸ್ತಾವ ತಿರಸ್ಕರಿಸಿ, ಟ್ರಂಪ್ ಅವರನ್ನು ಗೇಲಿ ಮಾಡಿದ ಇರಾನ್.<p>ಇರಾನ್ನ ಪರಮಾಣು ಕಾರ್ಯಕ್ರಮವನ್ನು ನಾಶಮಾಡುವ ನಿಟ್ಟಿನಲ್ಲಿ ಯುದ್ಧ ಮುಂದುವರಿಸಿರುವುದಾಗಿ ಇಸ್ರೇಲ್ ವಾದಿಸುತ್ತಿದೆ. ಆದರೆ, ಸ್ವತಃ ಇಸ್ರೇಲ್ ತನ್ನ ಅಣ್ವಸ್ತ್ರ ಬಲವನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.</p> .ಅಣ್ವಸ್ತ್ರ ಬಲವನ್ನು ಎರಡು ಪಟ್ಟು ಹೆಚ್ಚಿಸಿಕೊಂಡ ಇಸ್ರೇಲ್.<p>‘ನಮ್ಮದು ಪಾಕಿಸ್ತಾನದಂತೆ ದಲ್ಲಾಳಿ ಕೆಲಸ ಮಾಡುವ ದೇಶವಲ್ಲ...’</p><p>– ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಶಮನ ಮಾಡುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳನ್ನು ಉದ್ದೇಶಿಸಿ ಕೇಂದ್ರ ಸರ್ಕಾರ ಬುಧವಾರ ನೀಡಿರುವ ಉತ್ತರ ಇದು.</p> .ಪಾಕಿಸ್ತಾನದಂತೆ ನಮ್ಮದು ದಲ್ಲಾಳಿ ದೇಶವಲ್ಲ: ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ.<p>ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಬಹುತೇಕ ಎಲ್ಲ ತಂಡಗಳ ನಾಯಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2023ರಿಂದ ಜಾರಿಯಾಗಿರುವ ಈ ನಿಯಮದ ಕುರಿತು ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ. ಆದರೂ 2024ರಲ್ಲಿ ಮತ್ತೆ ಅದನ್ನು ವಿಸ್ತರಿಸಲಾಯಿತು. ಈ ವರ್ಷದ ಟೂರ್ನಿಯಲ್ಲಿಯೂ ಇರಲಿದೆ. ಬುಧವಾರ ಮುಂಬೈನಲ್ಲಿ ನಡೆದ ಐಪಿಎಲ್ ನಾಯಕರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.</p>.IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ನಾಯಕರ ಅಸಮಾಧಾನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>