ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಜಾಹೀರಾತಿಗೆ ಬಳಸಿದ ₹97 ಕೋಟಿ ಮರುಪಾವತಿಗೆ ಲೆಫ್ಟಿನೆಂಟ್ ಗವರ್ನರ್ ಸೂಚನೆ

Last Updated 20 ಡಿಸೆಂಬರ್ 2022, 10:09 IST
ಅಕ್ಷರ ಗಾತ್ರ

ನವದೆಹಲಿ: ಆಮ್ ಆದ್ಮಿ ಪಕ್ಷವು(ಎಎಪಿ) ಸರ್ಕಾರಿ ಜಾಹೀರಾತುಗಳ ಸೋಗಿನಲ್ಲಿ ಪ್ರಕಟಿಸಿದ ರಾಜಕೀಯ ಜಾಹೀರಾತುಗಳಿಗಾಗಿ ಬಳಸಿದ ₹97 ಕೋಟಿಯನ್ನು ವಸೂಲಿ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

ದೆಹಲಿ ಸರ್ಕಾರದ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (ಡಿಐಪಿ) ₹ 97.14 ಕೋಟಿ (ರೂ. 97,14,69,137) ಹಣವನ್ನು ಅನುರೂಪವಲ್ಲದ ಜಾಹೀರಾತುಗಳ ಖಾತೆಯಲ್ಲಿ ಖರ್ಚು ಮಾಡಿದೆ ಎಂದು ಮೂಲಗಳು ಹೇಳಿವೆ.

‘ಇದರಲ್ಲಿ, ₹42.26 ಕೋಟಿಗಿಂತ ಹೆಚ್ಚಿನ ಮೊತ್ತದ ಪಾವತಿಗಳನ್ನು ಡಿಐಪಿ ಈಗಾಗಲೇ ಬಿಡುಗಡೆ ಮಾಡಿದ್ದರೆ, ಪ್ರಕಟಿಸಿದ ಜಾಹೀರಾತುಗಳಿಗಾಗಿ ₹54.87ಕೋಟಿ ಬಿಡುಗಡೆ ಬಾಕಿ ಇದೆ’ಎಂದು ಮೂಲವೊಂದು ತಿಳಿಸಿದೆ.

ಲೆಫ್ಟಿನೆಂಟ್ ಗವರ್ನರ್ ನಿರ್ದೇಶನದ ಮೇರೆಗೆ 2017ರಲ್ಲೇ ₹42.26 ಕೋಟಿಯನ್ನು ರಾಜ್ಯ ಖಜಾನೆ ಇಲಾಖೆಗೆ ಮರು ಪಾವತಿಸುವಂತೆ ಎಎಪಿಗೆ ದಿಐಪಿ ಸೂಚಿಸಿದೆ. ಜೊತೆಗೆ ಜಾಹೀರಾತು ಸಂಸ್ಥೆಗಳಿಗೆ ಬಾಕಿ ಇರುವ ₹54.87 ಕೋಟಿ ಹಣವನ್ನು ನೇರವಾಗಿ ಪಾವತಿಸುವಂತೆ ಸೂಚಿಸಲಾಗಿದೆ.

‘ಈ ನಿಯಮ ಉಲ್ಲಂಘನೆಯಾಗಿ 5 ವರ್ಷ 8 ತಿಂಗಳು ಕಳೆದಿದ್ದರೂ ಸಹ ಎಎಪಿಯು ಡಿಐಪಿ ಆದೇಶದ ಪಾಲನೆ ಮಾಡಿಲ್ಲ. ಇದು ಸಾರ್ವಜನಿಕರ ಹಣವಾಗಿದ್ದು, ನಿರ್ದಿಷ್ಟ ಆದೇಶದ ಬಳಿಕವೂ ಸರ್ಕಾರಿ ಖಜಾನೆಗೆ ಪಕ್ಷ ಹಣ ಮರು ಪಾವತಿ ಮಾಡದಿರುವುದು ಗಂಭೀರ ವಿಷಯವಾಗಿದೆ. ಒಂದು ರಾಜಕೀಯ ಪಕ್ಷವು ಈ ರೀತಿ ಮಾಡುವುದು ಕಾನೂನಿನ ಉಲ್ಲಂಘನೆಯಷ್ಟೇ ಅಲ್ಲದೆ, ಉತ್ತಮ ಆಡಳಿತದ ದೃಷ್ಟಿಯಿಂದ ಸೂಕ್ತವಲ್ಲ’ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT