ಆದರೆ ನಿತೀಶ್ ಕುಮಾರ್ ಅವರನ್ನು ವಿಪಕ್ಷ ಒಕ್ಕೂಟದ ನೇತಾರ ಎಂದು ಬಿಂಬಿಸುವುದಕ್ಕೆ ಕೆಲವು ಪಕ್ಷಗಳಿಂದ ಆಕ್ಷೇಪಣೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿಪಕ್ಷಗಳ ಒಗ್ಗಟ್ಟಿನ ಸಭೆಗೆ ನಿತೀಶ್ ಕುಮಾರ್ ಮುಂದಾಳತ್ವ ವಹಿಸುವುದು ಹಾಗೂ ಅವರನ್ನು ವಿಪಕ್ಷ ಒಕ್ಕೂಟದ ಸಂಚಾಲಕ ಎಂದು ಬಿಂಬಿಸುವುದಕ್ಕೂ ಕೆಲವು ಪಕ್ಷಗಳ ವಿರೋಧ ಇದೆ.
ವಿಪಕ್ಷಗಳ ಒಗ್ಗಟ್ಟು ವಿಳಂಬವಾಗಬಾರದು ಎನ್ನುವ ಕಾರಣಕ್ಕೆ, ಸಭೆ ಎಲ್ಲಿ ನಡೆಯಬೇಕು ಎನ್ನುವುದರ ಬಗ್ಗೆ ಕಾಂಗ್ರೆಸ್ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಆದರೆ ಕಾಂಗ್ರೆಸ್ ಪರ ಇರುವ ಕೆಲ ಪಕ್ಷಗಳು, ಈ ಸಭೆ ದೆಹಲಿಯಲ್ಲಿ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ.