<p><strong>ಮಥುರಾ</strong>: ಯುಮುನಾ ನದಿ ಸ್ವಚ್ಛತೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ದೀಪಕ್ ಶರ್ಮಾ ಎಂಬುವವರು ಶುಕ್ರವಾರ ಇಲ್ಲಿನ ಮಹಾನಗರ ಪಾಲಿಕೆ ಕಚೇರಿಗೆ ಜಿರಳೆ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.</p><p>ಇಂದು(ಶನಿವಾರ) ಅದೇ ವೇಷದಲ್ಲಿ ಬೃಂದಾವನದ ಬಿಹಾರ್ ಘಾಟ್ ಬಳಿಯ ಚರಂಡಿಯೊಳಗೆ ಇಳಿದು, ಕಲುಷಿತ ನದಿಯ ದುಸ್ಥಿತಿಯ ಬಗ್ಗೆ ದನಿ ಎತ್ತಿದ್ದಾರೆ.</p><p>‘ನದಿಯು ಕಲುಷಿತಗೊಳ್ಳುತ್ತಿದೆ. ಸಂಸ್ಕರಣೆ ಮಾಡದೆ ಚರಂಡಿ ನೀರನ್ನು ಯಮುನಾ ನದಿಗೆ ಏಕೆ ಬಿಡಲಾಗುತ್ತಿದೆ? ನದಿ ಸ್ವಚ್ಛವಾಗುವವರೆಗೂ ಹೋರಾಡುತ್ತೇನೆ’ ಎಂದು ಹೇಳಿದ್ದಾರೆ.</p><p>‘ಯಮುನಾ ನದಿಯ ಮಾಲಿನ್ಯದ ಕುರಿತು ಕಣ್ಣು ಮುಚ್ಚಿ ಕುಳಿತಿರುವ ಅಸಮರ್ಥ ಅಧಿಕಾರಿಗಳ ಕಣ್ಣು ತೆರೆಸಲು ನಾನು ಜಿರಳೆ ವೇಷ ಧರಿಸಬೇಕಾಯಿತು’ ಎಂದು ಅವರು ತಿಳಿಸಿದ್ದಾರೆ.</p><p>‘ಮಹಾನಗರ ಪಾಲಿಕೆ ಕಚೇರಿಯಿಂದ ನನಗೆ ಬೆದರಿಕೆ ಕರೆಗಳು ಬಂದಿವೆ. ಆದರೆ ಈ ಉದ್ದೇಶಕ್ಕಾಗಿ ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧನಾಗಿದ್ದೇನೆ’ ಎಂದೂ ಹೇಳಿದ್ದಾರೆ.</p><p>ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಜಗ್ ಪ್ರವೇಶ್, ‘ಅವರನ್ನು(ದೀಪಕ್ ಶರ್ಮಾ) ಮಾತುಕತೆಗೆ ಆಹ್ವಾನಿಸಿದ್ದರೂ ಬರಲಿಲ್ಲ’ ಎಂದು ಹೇಳಿದ್ದಾರೆ.</p><p>‘ದೀಪಕ್ ಶರ್ಮಾ ಅವರಿಗೆ ನಿನ್ನೆ ಸಂಜೆ ಮತ್ತು ಇಂದು ಬೆಳಿಗ್ಗೆ ಕರೆ ಮಾಡಿ, ಮಾತುಕತೆಗೆ ಆಹ್ವಾನಿಸಿದ್ದೇವು. ಆದರೆ, ಅವರು ಬರಲಿಲ್ಲ. ಅವರು ತಮ್ಮ ಕಳವಳಗಳನ್ನು ನಮ್ಮ ಮುಂದೆ ಇಡಲು ಕನಿಷ್ಠ ನಮ್ಮನ್ನು ಭೇಟಿಯಾಗಬೇಕಿತ್ತು’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಥುರಾ</strong>: ಯುಮುನಾ ನದಿ ಸ್ವಚ್ಛತೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ದೀಪಕ್ ಶರ್ಮಾ ಎಂಬುವವರು ಶುಕ್ರವಾರ ಇಲ್ಲಿನ ಮಹಾನಗರ ಪಾಲಿಕೆ ಕಚೇರಿಗೆ ಜಿರಳೆ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.</p><p>ಇಂದು(ಶನಿವಾರ) ಅದೇ ವೇಷದಲ್ಲಿ ಬೃಂದಾವನದ ಬಿಹಾರ್ ಘಾಟ್ ಬಳಿಯ ಚರಂಡಿಯೊಳಗೆ ಇಳಿದು, ಕಲುಷಿತ ನದಿಯ ದುಸ್ಥಿತಿಯ ಬಗ್ಗೆ ದನಿ ಎತ್ತಿದ್ದಾರೆ.</p><p>‘ನದಿಯು ಕಲುಷಿತಗೊಳ್ಳುತ್ತಿದೆ. ಸಂಸ್ಕರಣೆ ಮಾಡದೆ ಚರಂಡಿ ನೀರನ್ನು ಯಮುನಾ ನದಿಗೆ ಏಕೆ ಬಿಡಲಾಗುತ್ತಿದೆ? ನದಿ ಸ್ವಚ್ಛವಾಗುವವರೆಗೂ ಹೋರಾಡುತ್ತೇನೆ’ ಎಂದು ಹೇಳಿದ್ದಾರೆ.</p><p>‘ಯಮುನಾ ನದಿಯ ಮಾಲಿನ್ಯದ ಕುರಿತು ಕಣ್ಣು ಮುಚ್ಚಿ ಕುಳಿತಿರುವ ಅಸಮರ್ಥ ಅಧಿಕಾರಿಗಳ ಕಣ್ಣು ತೆರೆಸಲು ನಾನು ಜಿರಳೆ ವೇಷ ಧರಿಸಬೇಕಾಯಿತು’ ಎಂದು ಅವರು ತಿಳಿಸಿದ್ದಾರೆ.</p><p>‘ಮಹಾನಗರ ಪಾಲಿಕೆ ಕಚೇರಿಯಿಂದ ನನಗೆ ಬೆದರಿಕೆ ಕರೆಗಳು ಬಂದಿವೆ. ಆದರೆ ಈ ಉದ್ದೇಶಕ್ಕಾಗಿ ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧನಾಗಿದ್ದೇನೆ’ ಎಂದೂ ಹೇಳಿದ್ದಾರೆ.</p><p>ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಜಗ್ ಪ್ರವೇಶ್, ‘ಅವರನ್ನು(ದೀಪಕ್ ಶರ್ಮಾ) ಮಾತುಕತೆಗೆ ಆಹ್ವಾನಿಸಿದ್ದರೂ ಬರಲಿಲ್ಲ’ ಎಂದು ಹೇಳಿದ್ದಾರೆ.</p><p>‘ದೀಪಕ್ ಶರ್ಮಾ ಅವರಿಗೆ ನಿನ್ನೆ ಸಂಜೆ ಮತ್ತು ಇಂದು ಬೆಳಿಗ್ಗೆ ಕರೆ ಮಾಡಿ, ಮಾತುಕತೆಗೆ ಆಹ್ವಾನಿಸಿದ್ದೇವು. ಆದರೆ, ಅವರು ಬರಲಿಲ್ಲ. ಅವರು ತಮ್ಮ ಕಳವಳಗಳನ್ನು ನಮ್ಮ ಮುಂದೆ ಇಡಲು ಕನಿಷ್ಠ ನಮ್ಮನ್ನು ಭೇಟಿಯಾಗಬೇಕಿತ್ತು’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>