<p><strong>ಚಂಡೀಗಢ:</strong> ಭೂ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಪಂಜಾಬ್ ಮತ್ತು ಚಂಡೀಗಢದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.</p><p>ಪಂಜಾಬ್ ಮುಖ್ಯಮಂತ್ರಿಗಳ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿಯೊಬ್ಬರ ಆಪ್ತ ಗೋಹಲ್ ನಿವಾಸದ ಮೇಲೂ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ಟಿಎಂಸಿ ಅಭ್ಯರ್ಥಿ ನಿವಾಸ ಸೇರಿ ಕೋಲ್ಕತ್ತದ ವಿವಿಧೆಡೆ ಐಟಿ ದಾಳಿ.ಶ್ವೇತ ಭವನದಲ್ಲಿ ಗುಂಡಿನ ದಾಳಿ: ಶಾಟ್ಗನ್, ಹ್ಯಾಂಡ್ಗನ್ ಹೊಂದಿದ್ದ ಶಂಕಿತ.<p>ಮೊಹಾಲಿ ಮತ್ತು ಚಂಡೀಗಢ ಸೇರಿದಂತೆ 12 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಸನ್ಟೆಕ್ ಸಿಟಿ ಯೋಜನೆ, ಅಜಯ್ ಸೆಹಗಲ್ ಕಂಪನಿ, ಎಬಿಎಸ್ ಟೌನ್ಶಿಪ್ ಸೇರಿದಂತೆ ಇತರೆ ಕಂಪನಿಗಳ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಕಾಗದ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.</p><p>ಮೊಹಾಲಿಯ 'ವೆಸ್ಟರ್ನ್ ಟವರ್ಸ್' ಅಪಾರ್ಟ್ಮೆಂಟ್ನ 9ನೇ ಮಹಡಿಯಿಂದ ₹ 500 ರೂಪಾಯಿ ನೋಟುಗಳಿದ್ದ ಎರಡು ಚೀಲಗಳನ್ನು ಕೆಳಕ್ಕೆ ಎಸೆಯಲಾಗಿದೆ. ಕೆಳಕ್ಕೆ ಬಿದ್ದ ಚೀಲಗಳಿಂದ ನೋಟಿನ ಕಂತೆಗಳು ನೆಲದ ಮೇಲೆ ಹರಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.</p><p>ಅಕಾಲಿದಳದ ನಾಯಕ ವಿಕ್ರಮ್ ಸಿಂಗ್ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಗಾಳಿಯಲ್ಲಿ ₹ 500 ನೋಟುಗಳು ಹಾರುತ್ತಿವೆ. ಈ ಹಣ ಸಿಎಂ ಮಾನ್ ಆಪ್ತನಿಗೆ ಸೇರಿದ್ದು ಎಂದು ಹೇಳಿದ್ದಾರೆ. ವಂಚಕರು ಈಗ ಇಡಿ ಬಲೆಗೆ ಬಿದ್ದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.</p><p>2027ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್ನಲ್ಲಿ ರಾಜಕೀಯ ನಾಯಕರ ವಿರುದ್ಧ ಇಡಿ ದಾಳಿ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.</p>.2025 ಹಿಂದಣ ಹೆಜ್ಜೆ: ಚಾಮರಾಜನಗರದಲ್ಲಿ ನಡೆದ ಈ ವರ್ಷದ ಸಿಹಿ–ಕಹಿ ಘಟನೆಗಳಿವು.ಪ. ಬಂಗಾಳದ ಒಟ್ಟು ಮತದಾರರ ಸಂಖ್ಯೆ 6.82 ಕೋಟಿಗೆ ಏರಿಕೆ: 7 ಲಕ್ಷ ಮತದಾರರ ಸೇರ್ಪಡೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ:</strong> ಭೂ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಪಂಜಾಬ್ ಮತ್ತು ಚಂಡೀಗಢದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.</p><p>ಪಂಜಾಬ್ ಮುಖ್ಯಮಂತ್ರಿಗಳ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿಯೊಬ್ಬರ ಆಪ್ತ ಗೋಹಲ್ ನಿವಾಸದ ಮೇಲೂ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ಟಿಎಂಸಿ ಅಭ್ಯರ್ಥಿ ನಿವಾಸ ಸೇರಿ ಕೋಲ್ಕತ್ತದ ವಿವಿಧೆಡೆ ಐಟಿ ದಾಳಿ.ಶ್ವೇತ ಭವನದಲ್ಲಿ ಗುಂಡಿನ ದಾಳಿ: ಶಾಟ್ಗನ್, ಹ್ಯಾಂಡ್ಗನ್ ಹೊಂದಿದ್ದ ಶಂಕಿತ.<p>ಮೊಹಾಲಿ ಮತ್ತು ಚಂಡೀಗಢ ಸೇರಿದಂತೆ 12 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಸನ್ಟೆಕ್ ಸಿಟಿ ಯೋಜನೆ, ಅಜಯ್ ಸೆಹಗಲ್ ಕಂಪನಿ, ಎಬಿಎಸ್ ಟೌನ್ಶಿಪ್ ಸೇರಿದಂತೆ ಇತರೆ ಕಂಪನಿಗಳ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಕಾಗದ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.</p><p>ಮೊಹಾಲಿಯ 'ವೆಸ್ಟರ್ನ್ ಟವರ್ಸ್' ಅಪಾರ್ಟ್ಮೆಂಟ್ನ 9ನೇ ಮಹಡಿಯಿಂದ ₹ 500 ರೂಪಾಯಿ ನೋಟುಗಳಿದ್ದ ಎರಡು ಚೀಲಗಳನ್ನು ಕೆಳಕ್ಕೆ ಎಸೆಯಲಾಗಿದೆ. ಕೆಳಕ್ಕೆ ಬಿದ್ದ ಚೀಲಗಳಿಂದ ನೋಟಿನ ಕಂತೆಗಳು ನೆಲದ ಮೇಲೆ ಹರಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.</p><p>ಅಕಾಲಿದಳದ ನಾಯಕ ವಿಕ್ರಮ್ ಸಿಂಗ್ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಗಾಳಿಯಲ್ಲಿ ₹ 500 ನೋಟುಗಳು ಹಾರುತ್ತಿವೆ. ಈ ಹಣ ಸಿಎಂ ಮಾನ್ ಆಪ್ತನಿಗೆ ಸೇರಿದ್ದು ಎಂದು ಹೇಳಿದ್ದಾರೆ. ವಂಚಕರು ಈಗ ಇಡಿ ಬಲೆಗೆ ಬಿದ್ದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.</p><p>2027ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್ನಲ್ಲಿ ರಾಜಕೀಯ ನಾಯಕರ ವಿರುದ್ಧ ಇಡಿ ದಾಳಿ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.</p>.2025 ಹಿಂದಣ ಹೆಜ್ಜೆ: ಚಾಮರಾಜನಗರದಲ್ಲಿ ನಡೆದ ಈ ವರ್ಷದ ಸಿಹಿ–ಕಹಿ ಘಟನೆಗಳಿವು.ಪ. ಬಂಗಾಳದ ಒಟ್ಟು ಮತದಾರರ ಸಂಖ್ಯೆ 6.82 ಕೋಟಿಗೆ ಏರಿಕೆ: 7 ಲಕ್ಷ ಮತದಾರರ ಸೇರ್ಪಡೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>